ಇದು ನನ್ನ ಜಾಗ; ಕಾಡಿನ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ಎತ್ತಲು ಯತ್ನಿಸಿದ ಆನೆ

Updated on: Feb 06, 2026 | 10:16 PM

ಕಾಡಾನೆಯೊಂದು ಅರಣ್ಯದ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಬಳಿ ಹೋಗಿ ಆಕ್ರೋಶದಿಂದ ವರ್ತಿಸಿದೆ. ಒಡಿಶಾದ ಧೆಂಕನಲ್‌ನಲ್ಲಿ ಅರಣ್ಯದ ರಸ್ತೆಯಲ್ಲಿ ಕಾಡಾನೆಯೊಂದು ವಾಹನವನ್ನು ಎತ್ತಲು ಪ್ರಯತ್ನಿಸಿದೆ. ಈ ವೇಳೆ ಆಚೀಚೆ ರಸ್ತೆಗಳಲ್ಲಿ ಇದ್ದವರು ಜೋರಾಗಿ ಕಿರುಚಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆನೆ ಆ ಕಾರನ್ನು ಬಿಟ್ಟು ಜನರತ್ತ ಧಾವಿಸಿದೆ. ಅರಣ್ಯ ಕಾರಿಡಾರ್‌ಗಳ ಬಳಿ ಸಂಚಾರ ಹೆಚ್ಚುತ್ತಿರುವುದರಿಂದ ಮಾನವ-ವನ್ಯಜೀವಿ ಸಂಘರ್ಷ ಯಾವ ಮಟ್ಟಿಗೆ ಆತಂಕಕಾರಿಯಾಗಿ ಮಾರ್ಪಟ್ಟಿದೆ ಎಂಬುದಕ್ಕೆ ಇದೊಂದು ನಿದರ್ಶನವಷ್ಟೇ.

ಭುವನೇಶ್ವರ, ಫೆಬ್ರವರಿ 6: ಕಾಂಕ್ರೀಟ್ ಕಾಡು ಹೆಚ್ಚಾಗುತ್ತಿದ್ದಂತೆ ಅರಣ್ಯ ನಾಶವಾಗುತ್ತಿದೆ. ಇದರಿಂದ ವನ್ಯಜೀವಿಗಳು ಆಹಾರಕ್ಕಾಗಿ ಊರಿನೊಳಗೆ ಬರುವಂತಾಗಿದೆ. ಕಾಡಾನೆಯೊಂದು (Elephant) ಅರಣ್ಯದ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಬಳಿ ಹೋಗಿ ಆಕ್ರೋಶದಿಂದ ವರ್ತಿಸಿದೆ. ಒಡಿಶಾದ ಧೆಂಕನಲ್‌ನಲ್ಲಿ ಅರಣ್ಯದ ರಸ್ತೆಯಲ್ಲಿ ಕಾಡಾನೆಯೊಂದು ವಾಹನವನ್ನು ಎತ್ತಲು ಪ್ರಯತ್ನಿಸಿದೆ. ಈ ವೇಳೆ ಆಚೀಚೆ ರಸ್ತೆಗಳಲ್ಲಿ ಇದ್ದವರು ಜೋರಾಗಿ ಕಿರುಚಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆನೆ ಆ ಕಾರನ್ನು ಬಿಟ್ಟು ಜನರತ್ತ ಧಾವಿಸಿದೆ. ಅರಣ್ಯ ಕಾರಿಡಾರ್‌ಗಳ ಬಳಿ ಸಂಚಾರ ಹೆಚ್ಚುತ್ತಿರುವುದರಿಂದ ಮಾನವ-ವನ್ಯಜೀವಿ ಸಂಘರ್ಷ ಯಾವ ಮಟ್ಟಿಗೆ ಆತಂಕಕಾರಿಯಾಗಿ ಮಾರ್ಪಟ್ಟಿದೆ ಎಂಬುದಕ್ಕೆ ಇದೊಂದು ನಿದರ್ಶನವಷ್ಟೇ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ