ದರ್ಶನ್-ಪ್ರೇಮ್ ಸಿನಿಮಾ ಆರಂಭವಾಗುತ್ತ? ಅಥವಾ ನಿಲ್ಲುತ್ತಾ?

|

Updated on: Jun 21, 2024 | 7:11 PM

ರೇಣುಕಾ ಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್​ ಇನ್ನೂ ಹಲವು ದಿನ ಜೈಲಿನಲ್ಲಿರಬೇಕಾಗುತ್ತದೆ ಎನ್ನಲಾಗುತ್ತಿದೆ. ದರ್ಶನ್ ಜೊತೆಗೆ ಸಿನಿಮಾ ಮಾಡುವುದಾಗಿ ಪ್ರೇಮ್ ಘೋಷಿಸಿದ್ದರು. ಹಾಗಿದ್ದರೆ ಆ ಸಿನಿಮಾ ನಿಂತು ಹೋಗುತ್ತಾ?

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan Thoogudeepa) ಈಗ ಜೈಲಿನಲ್ಲಿದ್ದಾರೆ. ದರ್ಶನ್ ಹೊರಬರಲು ಇನ್ನು ಸಾಕಷ್ಟು ಸಮಯವಾಗುತ್ತದೆ ಎನ್ನಲಾಗುತ್ತಿದೆ. ಇಂಥಹಾ ಪ್ರಕರಣದಲ್ಲಿ ಜಾಮೀನು ಸಿಗುವುದು ಸುಲಭವಲ್ಲ ಎನ್ನಲಾಗುತ್ತಿದೆ. ಹೊರಗಡೆ ದರ್ಶನ್​ ಮೇಲೆ ಬಂಡವಾಳ ಹೂಡಿರುವ ನಿರ್ಮಾಪಕರು ಆತಂಕದಲ್ಲಿದ್ದಾರೆ. ನಟ ದರ್ಶನ್ ಸಿನಿಮಾವನ್ನು ನಿರ್ದೇಶಿಸುವುದಾಗಿ ಪ್ರೇಮ್ ಸಹ ಘೋಷಣೆ ಮಾಡಿದ್ದರು. ಕೆವಿಎನ್ ಪ್ರೊಡಕ್ಷನ್ ಈ ಸಿನಿಮಾ ನಿರ್ಮಿಸಬೇಕಿತ್ತು. ಆದರೆ ಈಗ ದರ್ಶನ್ ಜೈಲು ಪಾಲಾಗಿರುವ ಕಾರಣ ಆ ಸಿನಿಮಾ ನಿಂತು ಹೋಗುತ್ತಾ ಎಂಬ ಅನುಮಾನಗಳೆದ್ದಿದೆ. ಈ ಬಗ್ಗೆ ದಶಾವರ ಚಂದ್ರು ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:10 pm, Fri, 21 June 24

Follow us on