ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan Thoogudeepa) ಈಗ ಜೈಲಿನಲ್ಲಿದ್ದಾರೆ. ದರ್ಶನ್ ಹೊರಬರಲು ಇನ್ನು ಸಾಕಷ್ಟು ಸಮಯವಾಗುತ್ತದೆ ಎನ್ನಲಾಗುತ್ತಿದೆ. ಇಂಥಹಾ ಪ್ರಕರಣದಲ್ಲಿ ಜಾಮೀನು ಸಿಗುವುದು ಸುಲಭವಲ್ಲ ಎನ್ನಲಾಗುತ್ತಿದೆ. ಹೊರಗಡೆ ದರ್ಶನ್ ಮೇಲೆ ಬಂಡವಾಳ ಹೂಡಿರುವ ನಿರ್ಮಾಪಕರು ಆತಂಕದಲ್ಲಿದ್ದಾರೆ. ನಟ ದರ್ಶನ್ ಸಿನಿಮಾವನ್ನು ನಿರ್ದೇಶಿಸುವುದಾಗಿ ಪ್ರೇಮ್ ಸಹ ಘೋಷಣೆ ಮಾಡಿದ್ದರು. ಕೆವಿಎನ್ ಪ್ರೊಡಕ್ಷನ್ ಈ ಸಿನಿಮಾ ನಿರ್ಮಿಸಬೇಕಿತ್ತು. ಆದರೆ ಈಗ ದರ್ಶನ್ ಜೈಲು ಪಾಲಾಗಿರುವ ಕಾರಣ ಆ ಸಿನಿಮಾ ನಿಂತು ಹೋಗುತ್ತಾ ಎಂಬ ಅನುಮಾನಗಳೆದ್ದಿದೆ. ಈ ಬಗ್ಗೆ ದಶಾವರ ಚಂದ್ರು ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:10 pm, Fri, 21 June 24