AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರಿದ ಪ್ಯಾಂಟ್​, 2 ರೂ. ಪೆನ್ ಬಳಸುತ್ತಿದ್ದ ಕೇಜ್ರಿವಾಲ್ ಸಿಎಂ ಆದಮೇಲೆ 100 ಕೋಟಿ ಬಂಗಲೆ ಕಟ್ಟಿದರು; ಸ್ವಾತಿ ಮಲಿವಾಲ್ ಟೀಕೆ

ಹರಿದ ಪ್ಯಾಂಟ್​, 2 ರೂ. ಪೆನ್ ಬಳಸುತ್ತಿದ್ದ ಕೇಜ್ರಿವಾಲ್ ಸಿಎಂ ಆದಮೇಲೆ 100 ಕೋಟಿ ಬಂಗಲೆ ಕಟ್ಟಿದರು; ಸ್ವಾತಿ ಮಲಿವಾಲ್ ಟೀಕೆ

ಸುಷ್ಮಾ ಚಕ್ರೆ
|

Updated on: Apr 25, 2026 | 9:24 PM

Share

ಮುಖ್ಯಮಂತ್ರಿಯಾಗುವ ಮೊದಲು ಹರಿದ ಪ್ಯಾಂಟ್ ಧರಿಸುತ್ತಿದ್ದರು, 2 ರೂ. ಪೆನ್ ಬಳಸುತ್ತಿದ್ದರು. ಆದರೆ, ಮುಖ್ಯಮಂತ್ರಿಯಾದ ಮೇಲೆ 100 ಕೋಟಿ ರೂ.ಗಳ ಮನೆ ಕಟ್ಟಿದರು ಎಂದು ಆಪ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ತೊರೆದು ಬಿಜೆಪಿ ಸೇರಿದ ಒಂದು ದಿನದ ನಂತರ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ದೆಹಲಿಯ ಮಾಜಿ ಮುಖ್ಯಮಂತ್ರಿಯನ್ನು ಟೀಕಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ.

ನವದೆಹಲಿ, ಏಪ್ರಿಲ್ 25: ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದ ಆಮ್ ಆದ್ಮಿ ಪಾರ್ಟಿ ತೊರೆದು ಬಿಜೆಪಿ ಸೇರಿದ ಒಂದು ದಿನದ ನಂತರ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ದೆಹಲಿಯ ಮಾಜಿ ಮುಖ್ಯಮಂತ್ರಿಯನ್ನು ಟೀಕಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ಹೊಗಳಿದ್ದಾರೆ. “ಅರವಿಂದ್ ಕೇಜ್ರಿವಾಲ್ ಮೊದಲೆಲ್ಲ ಹರಿದ ಪ್ಯಾಂಟ್ ಧರಿಸುತ್ತಿದ್ದರು, 2 ರೂ. ಪೆನ್ ಬಳಸುತ್ತಿದ್ದರು, ಸಿಕ್ಕ ಚಪ್ಪಲಿ ಹಾಕಿಕೊಂಡು ತೀರಾ ಸಾಮಾನ್ಯ ಜೀವನ ನಡೆಸುತ್ತಿದ್ದರು. ಅವರು ಆಮ್ ಆದ್ಮಿ ಪಕ್ಷ ಕಟ್ಟಿದಾಗ ನಮ್ಮ ದೇಶದ ರಾಜಕೀಯದಲ್ಲಿ ಏನಾದರೂ ಬದಲಾವಣೆಯಾಗಬಹುದು ಎಂಬ ನಿರೀಕ್ಷೆ ನಮಗಿತ್ತು. ಹೀಗಾಗಿಯೇ ಆ ಪಕ್ಷ ಸೇರಿದೆವು. ಆದರೆ, ಅವರು ದೆಹಲಿಯ ಸಿಎಂ ಆದನಂತರ 100 ಕೋಟಿ ರೂ. ಬೆಲೆಯ ಬಂಗಲೆ ಕಟ್ಟಿದರು, ಐಷಾರಾಮಿ ಜೀವನ ನಡೆಸತೊಡಗಿದರು” ಎಂದು ಸ್ವಾತಿ ಮಲಿವಾಲ್ ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us