Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬದುಕೊಂದು ದೊಡ್ಡ ಅವಕಾಶ, ಅದನ್ನು ದ್ವಾರಕೀಶ್ ಬಳಸಿಕೊಂಡ್ರು’: ಯಶ್

‘ಬದುಕೊಂದು ದೊಡ್ಡ ಅವಕಾಶ, ಅದನ್ನು ದ್ವಾರಕೀಶ್ ಬಳಸಿಕೊಂಡ್ರು’: ಯಶ್

ರಾಜೇಶ್ ದುಗ್ಗುಮನೆ
|

Updated on:Apr 17, 2024 | 12:11 PM

ನಟ ರಾಕಿಂಗ್ ಸ್ಟಾರ್ ಯಶ್ ಅವರು ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಕುಟುಂಬದವರಿಗೆ ಅವರು ಸಾಂತ್ವನ ಹೇಳಿದ್ದಾರೆ. ಆ ಬಳಿಕ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. ‘ಬದುಕನ್ನು ಸರಿಯಾದ ರೀತಿಯಲ್ಲಿ ದ್ವಾರಕೀಶ್ ಬಳಸಿಕೊಂಡಿದ್ದಾರೆ’ ಎಂಬ ಅಭಿಪ್ರಾಯವನ್ನು ಹೊರಹಾಕಿದ್ದಾರೆ ಯಶ್.

ನಟ ರಾಕಿಂಗ್ ಸ್ಟಾರ್ ಯಶ್ (Yash) ಅವರು ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಕುಟುಂಬದವರಿಗೆ ಅವರು ಸಾಂತ್ವನ ಹೇಳಿದ್ದಾರೆ. ಆ ಬಳಿಕ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. ‘ದ್ವಾರಕೀಶ್ ಮಹಾನ್ ವ್ಯಕ್ತಿ. ಪ್ರಪಂಚದಲ್ಲಿ ಸಾಕಷ್ಟು ಜನರು ಹುಟ್ಟುತ್ತಾರೆ, ಸಾಯುತ್ತಾರೆ. ಈ ಮಧ್ಯೆ ನೀವು ಎಷ್ಟು ಸಾಧಿಸುತ್ತೀರಾ ಅನ್ನೋದು ಮುಖ್ಯ. ಯಾವ ಮಟ್ಟಕ್ಕೆ ನಿಮ್ಮ ಬದುಕನ್ನು ಉಪಯೋಗಿಸಿಕೊಳ್ಳಬಹುದು ಎಂಬುದಕ್ಕೆ ದ್ವಾರಕೀಶ್ ಅವರು ಉತ್ತಮ ಉದಾಹರಣೆ. ಚಿತ್ರರಂಗದಲ್ಲಿ ಹಲವು ಕಲ್ಪನೆಗಳಿದ್ದವು. ಹೀರೋ ಹೀಗೆ ಇರಬೇಕು, ಹೀಗೆ ಆ್ಯಕ್ಟ್ ಮಾಡಬೇಕು ಎಂಬುದನ್ನೆಲ್ಲ ತೊಡೆದು ಹಾಕಿದವರು ದ್ವಾರಕೀಶ್. ಅವರು ಚಿತ್ರರಂಗಕ್ಕೆ ಕೊಟ್ಟ ದೊಡ್ಡ ಕೊಡುಗೆ. ಬದುಕೊಂದು ದೊಡ್ಡ ಅವಕಾಶ, ಅದನ್ನು ದ್ವಾರಕೀಶ್ ಬಳಸಿಕೊಂಡ್ರು. ಕುಟುಂಬಕ್ಕೆ ಇದನ್ನು ಸಹಿಸೋ ಶಕ್ತಿ ಕೊಡಲಿ’ ಎಂದು ಕೇಳಿದ್ದಾರೆ ಯಶ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published on: Apr 17, 2024 12:10 PM