AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ಚಿತ್ರರಂಗ ಮತ್ತೊಂದು ಹಂತಕ್ಕೆ ಏರಲು ಹೀಗೆ ಮಾಡಬೇಕು: ಯಶ್ ತಾಯಿ ಪುಷ್ಪ ಪ್ಲ್ಯಾನ್

ಕನ್ನಡ ಚಿತ್ರರಂಗ ಮತ್ತೊಂದು ಹಂತಕ್ಕೆ ಏರಲು ಹೀಗೆ ಮಾಡಬೇಕು: ಯಶ್ ತಾಯಿ ಪುಷ್ಪ ಪ್ಲ್ಯಾನ್

ಮದನ್​ ಕುಮಾರ್​
|

Updated on: Aug 28, 2025 | 7:43 PM

Share

ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಅವರು ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರು ಈಗ ವಿತರಣೆಯಲ್ಲೂ ತೊಡಗಿಕೊಂಡಿದ್ದಾರೆ. ಅನುಷ್ಕಾ ಶೆಟ್ಟಿ ಅಭಿನಯದ ‘ಘಾಟಿ’ ಚಿತ್ರವನ್ನು ಅವರು ವಿತರಣೆ ಮಾಡಲು ಮುಂದಾಗಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಗಣೇಶ ಹಬ್ಬ ಆಚರಿಸಿದ ಬಳಿಕ ಪುಷ್ಪ ಅರುಣ್ ಕುಮಾರ್ ಮಾತನಾಡಿದರು.

ನಟ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ (Pushpa Arun Kumar) ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಈಗ ಅವರು ವಿತರಣೆಯಲ್ಲಿ ತೊಡಗಿಕೊಂಡಿದ್ದಾರೆ. ಅನುಷ್ಕಾ ಶೆಟ್ಟಿ ನಟನೆಯ ‘ಘಾಟಿ’ ಸಿನಿಮಾವನ್ನು ಅವರು ವಿತರಣೆ ಮಾಡಲು ಮುಂದಾಗಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಗಣೇಶ ಹಬ್ಬ ಆಚರಿಸಿದ ಬಳಿಕ ಪುಷ್ಪ ಅರುಣ್ ಕುಮಾರ್ ಅವರು ಮಾತನಾಡಿದರು. ‘ಕಥೆ ಕಡೆಗೆ ಗಮನ ನೀಡಿ ನಾವೆಲ್ಲ ಒಳ್ಳೊಳ್ಳೆಯ ಸಿನಿಮಾ ಮಾಡೋಣ. ಒಳ್ಳೆಯ ಕೆಲಸ ಮಾಡೋಣ. ಎಲ್ಲರೂ ಮಾಡಬೇಕು. ನಾವೊಬ್ಬರೇ ಅಲ್ಲ. ಎಲ್ಲರೂ ಎಲ್ಲ ಕೆಲಸದಲ್ಲೂ ಭಾಗಿಯಾದರೆ ಕನ್ನಡ ಚಿತ್ರರಂಗ (Kannada Film Industry) ಒಂದು ಹಂತಕ್ಕೆ ಹೋಗಬಹುದು’ ಎಂದು ಪುಷ್ಪಾ ಅರುಣ್ ಕುಮಾರ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.