AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಉತ್ತಮ ಸ್ನೇಹಿತ ಬಸನಗೌಡ ಯತ್ನಾಳ್ ಮಾತಾಡುವಾಗ ಹದ್ದು ಮೀರುತ್ತಿದ್ದಾರೆ: ಡಾ ಎಂಸಿ ಸುಧಾಕರ್

ನನ್ನ ಉತ್ತಮ ಸ್ನೇಹಿತ ಬಸನಗೌಡ ಯತ್ನಾಳ್ ಮಾತಾಡುವಾಗ ಹದ್ದು ಮೀರುತ್ತಿದ್ದಾರೆ: ಡಾ ಎಂಸಿ ಸುಧಾಕರ್

ಅರುಣ್​ ಕುಮಾರ್​ ಬೆಳ್ಳಿ
|

Updated on: May 02, 2025 | 10:42 PM

ಶಿವಾನಂದ ಪಾಟೀಲ್ ಮತ್ತು ವಿಜಯಾನಂದ್ ಕಾಶಪ್ಪನವರ್ ವಿರುದ್ಧ ಬಸನಗೌಡ ಯತ್ನಾಳ್ ಬಹಳ ಕೀಳಾಗಿ ಮಾತಾಡಿದ್ದಾರೆ. ಶಿವಾನಂದ ಪಾಟೀಲ್ ರಾಜೀನಾಮೆ ನೀಡಿರುವ ವಿಷಯ ಮಾಧ್ಯಮಗಳ ಮೂಲಕ ಗೊತ್ತಾಯಿತು, ಅವರು ಷರತ್ತುಗಳನ್ನೊಳಗೊಂಡ ರಾಜೀನಾಮೆ ಪತ್ರ ಸಲ್ಲಿಸಿದ್ದರೆ ಅದು ಅಂಗೀಕಾರ ಆಗಲ್ಲ ಎಂದು ಸಚಿವ ಡಾ ಸುಧಾಕರ್ ಹೇಳಿದರು.

ಚಿಕ್ಕಬಳ್ಳಾಪುರ, ಮೇ 2: ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂಸಿ ಸುಧಾಕರ್ (Dr MC Sudhakar) ಮಾಧ್ಯಮದವರೊಂದಿಗೆ ಮಾತಾಡುವಾಗ ತಮ್ಮ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಸ್ನೇಹವನ್ನು ನೆನೆದರು. ಅದರೆ ಅವರು ಇತ್ತೀಚಿಗೆ ತಮ್ಮ ಮಾತಿನ ಮೇಲೆ ಹಿಡಿತ ಸಾಧಿಸುತ್ತಿಲ್ಲ, ಓವರ್ ಬೋರ್ಡ್ ಹೋಗುತ್ತಿದ್ದಾರೆ, ಯಾರಿಗೇ ಅಗಲಿ ಅಧಿಕಾರ ಶಾಶ್ವತವಲ್ಲ, ಹಾಗಾಗಿ ಮಾತು ಬಹಳ ಗಂಭೀರವಾಗಿರಬೇಕು, ಯತ್ನಾಳ್ ರನ್ನು ಪಕ್ಷದಿಂದ ಹೊರಹಾಕಿದ್ದಾರೆ, ಹಾಗಾಗಿ ಅವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಸುಧಾಕ್ ಹೇಳಿದರು.

ಇದನ್ನೂ ಓದಿ:  ಶಾಸಕ ಬಸನಗೌಡ ಯತ್ನಾಳ್ ಸವಾಲನ್ನು ಶಿವಾನಂದ ಪಾಟೀಲ್ ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡಿದ್ದಾರೆ: ಸ್ಪೀಕರ್

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ