Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ರಣಹದ್ದುಗಳಿಗೆ ಹೆಣ, ಹಂದಿಗಳಿಗೆ ಹೊಲಸು, ಮಹಾಕುಂಭ ಮೇಳದಲ್ಲಿ ಯಾರ್ಯಾರಿಗೆ ಏನೇನು ಸಿಕ್ತು, ವಿವರಿಸಿದ ಯೋಗಿ

Video: ರಣಹದ್ದುಗಳಿಗೆ ಹೆಣ, ಹಂದಿಗಳಿಗೆ ಹೊಲಸು, ಮಹಾಕುಂಭ ಮೇಳದಲ್ಲಿ ಯಾರ್ಯಾರಿಗೆ ಏನೇನು ಸಿಕ್ತು, ವಿವರಿಸಿದ ಯೋಗಿ

ನಯನಾ ರಾಜೀವ್
|

Updated on:Feb 26, 2025 | 7:45 AM

‘‘ರಣಹದ್ದುಗಳಿಗೆ ಹೆಣ, ಹಂದಿಗಳಿಗೆ ಹೊಲಸು, ಸೂಕ್ಷ್ಮ ಜನರಿಗೆ ಸಂಬಂಧಗಳ ಚಿತ್ರಣ, ಸಜ್ಜನರಿಗೆ ಸಜ್ಜನಿಕೆ, ವ್ಯಾಪಾರಿಗಳಿಗೆ ವ್ಯಾಪಾರ, ಭಕ್ತರಿಗೆ ದೇವರು ಹೀಗೆ ಮಹಾಕುಂಭ ಮೇಳದಲ್ಲಿ ಯಾರು ಏನು ಹುಡುಕಿದರೋ ಅವರಿಗೆ ಅದು ಸಿಕ್ಕಿದೆ’’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಮಹಾಕುಂಭ ಮೇಳದಲ್ಲಿ ಸರ್ಕಾರದ ವ್ಯವಸ್ಥೆಗಳನ್ನು ಟೀಕಿಸಿದ್ದ ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು ಯೋಗಿ ಮಾತನಾಡಿದರು. ಈ ಹಿಂದೂ ಉತ್ಸವದಲ್ಲಿ ಜನರು ಏನನ್ನು ಹುಡುಕುತ್ತಾರೋ ಅದು ಅವರಿಗೆ ತಲುಪಿತು ಎಂದು ಹೇಳಿದರು.

ಪ್ರಯಾಗ್​ರಾಜ್​, ಫೆಬ್ರವರಿ 26:  ‘‘ರಣಹದ್ದುಗಳಿಗೆ ಹೆಣ, ಹಂದಿಗಳಿಗೆ ಹೊಲಸು, ಸೂಕ್ಷ್ಮ ಜನರಿಗೆ ಸಂಬಂಧಗಳ ಚಿತ್ರಣ, ಸಜ್ಜನರಿಗೆ ಸಜ್ಜನಿಕೆ, ವ್ಯಾಪಾರಿಗಳಿಗೆ ವ್ಯಾಪಾರ, ಭಕ್ತರಿಗೆ ದೇವರು ಹೀಗೆ ಮಹಾಕುಂಭ ಮೇಳದಲ್ಲಿ ಯಾರು ಏನು ಹುಡುಕಿದರೋ ಅವರಿಗೆ ಅದು ಸಿಕ್ಕಿದೆ’’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಮಹಾಕುಂಭ ಮೇಳದಲ್ಲಿ ಸರ್ಕಾರದ ವ್ಯವಸ್ಥೆಗಳನ್ನು ಟೀಕಿಸಿದ್ದ ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು ಯೋಗಿ ಮಾತನಾಡಿದರು. ಈ ಹಿಂದೂ ಉತ್ಸವದಲ್ಲಿ ಜನರು ಏನನ್ನು ಹುಡುಕುತ್ತಾರೋ ಅದು ಅವರಿಗೆ ತಲುಪಿತು ಎಂದು ಹೇಳಿದರು.

ನಂಬಿಕೆಯುಳ್ಳ ಜನರಿಗೆ ತೃಪ್ತಿಯ ಭಾವನೆ ಸಿಕ್ಕಿದೆ, ಬಡವರಿಗೆ ಉದ್ಯೋಗ ಸಿಕ್ಕಿದೆ, ಶ್ರೀಮಂತರಿಗೆ ವ್ಯಾಪಾರ ಸಿಕ್ಕಿದೆ, ಸಜ್ಜನರಿಗೆ ಸಜ್ಜನಿಕೆ ಸಿಕ್ಕಿದೆ, ಭಕ್ತರಿಗೆ ದೇವರು ಸಿಕ್ಕಿದ್ದಾನೆ. ಇದರರ್ಥ ಪ್ರತಿಯೊಬ್ಬರೂ ತಮ್ಮ ಸ್ವಭಾವ ಮತ್ತು ಪಾತ್ರಕ್ಕೆ ಅನುಗುಣವಾಗಿ ವಿಷಯಗಳನ್ನು ನೋಡಿದ್ದಾರೆ ಮತ್ತು ಅವರಿಗೆ ಅದೇ ಸಿಕ್ಕಿದೆ ಎಂದರು.

ಎಲ್ಲಾ ಜನರು ಜಾತಿ ಎಲ್ಲವನ್ನೂ ಬಿಟ್ಟು ಒಂದೇ ಘಾಟ್​ನಲ್ಲಿ ಸ್ನಾನ ಮಾಡುತ್ತಾರೆ, ಇದಕ್ಕಿಂತ ದೊಡ್ಡ ಏಕತೆಯ ಸಂಕೇತ ಬೇರೆ ಏನಿದೆ ಇದು ನಿಜವಾದ ಸನಾತನ ಧರ್ಮ ಎಂದು ಯೋಗಿ ಬಣ್ಣಿಸಿದ್ದಾರೆ. 2013 ರ ಕುಂಭಮೇಳದಲ್ಲಿ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸನಾತನಿಯಲ್ಲದವರನ್ನು ಮೇಳದ ಉಸ್ತುವಾರಿಯನ್ನಾಗಿ ನೇಮಿಸಿದರು ಎಂದು ಅವರು ಹೇಳಿದರು.

2013 ರಲ್ಲಿ ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಮೊಹಮ್ಮದ್ ಅಜಂ ಖಾನ್ ಅವರನ್ನು ಧಾರ್ಮಿಕ ಸಭೆಯ ಉಸ್ತುವಾರಿಯನ್ನಾಗಿ ಮಾಡಿದಾಗ ಆಯೋಜಿಸಲಾದ ಕುಂಭ ಮೇಳವನ್ನು ಅವರು ಉಲ್ಲೇಖಿಸುತ್ತಿದ್ದರು.
ನಾವು ನಿಮ್ಮಂತೆ ನಂಬಿಕೆಯೊಂದಿಗೆ ಆಟವಾಡಿಲ್ಲ.

ನಿಮ್ಮ ಕಾಲದಲ್ಲಿ, ಮುಖ್ಯಮಂತ್ರಿಗಳಿಗೆ ಕಾರ್ಯಕ್ರಮವನ್ನು ನೋಡಲು ಮತ್ತು ಪರಿಶೀಲಿಸಲು ಸಮಯವಿರಲಿಲ್ಲ ಮತ್ತು ಆದ್ದರಿಂದ ಅವರು ಸನಾತನಿಯಲ್ಲದವರನ್ನು ಕುಂಭ ಮೇಲುಸ್ತುವಾರಿಯಾಗಿ ನೇಮಿಸಿದರು ಎಂದು ಅವರು ಹೇಳಿದರು.
2013 ರ ಕುಂಭ ಮೇಳವು ಅವ್ಯವಸ್ಥೆ, ಭ್ರಷ್ಟಾಚಾರ ಮತ್ತು ಮಾಲಿನ್ಯದಿಂದ ತುಂಬಿತ್ತು ಎಂದು ಅವರು ಹೇಳಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿಯ ತ್ರಿವೇಣಿಯಲ್ಲಿ ಸ್ನಾನ ಮಾಡಲು ಯೋಗ್ಯವಾದ ನೀರು ಇರಲಿಲ್ಲ. ಸ್ನಾನ ಮಾಡಲು ನಿರಾಕರಿಸಿದ ಮಾರಿಷಸ್ ಪ್ರಧಾನಿಯೇ ಇದಕ್ಕೆ ಉದಾಹರಣೆ ಎಂದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Feb 26, 2025 07:45 AM