ನಡುರೋಡಿನಲ್ಲಿ ಹೋರ್ಡಿಂಗ್ ಮೇಲೆ ಯುವಕನೊಬ್ಬ ಪವಡಿಸು ಪರಮಾತ್ಮ ಎಂದು ಮಲಗಿಬಿಟ್ಟ… ವಿಡಿಯೋ ವೈರಲ್

Nijamabad: ಕೆಳಗಿಳಿಸಿದ ಮೇಲೆ ಏನಪ್ಪಾ ರಾಜಾ ನಿನ್ನ ಸಮಸ್ಯೆ ಎಂದು ಕೇಳಲಾಗಿ... ವ್ಯಕ್ತಿಯೊಬ್ಬ ತನ್ನಿಂದ ಸಾವಿರಾರು ರೂಪಾಯಿ ಹಣ ಪಡೆದಿದ್ದಾನೆ. ಆದರೆ ಅದನ್ನು ವಾಪಸ್​​ ನೀಡುತ್ತಿಲ್ಲ. ಇದರಿಂದ ತನಗೆ ತೊಂದರೆ ಯಾಗುತ್ತಿದೆ ಎಂದು ಬಾಧಿತ ಯುವಕ ರವೀಂದರ್ ತಿಳಿಸಿದ್ದಾನೆ.

ನಡುರೋಡಿನಲ್ಲಿ ಹೋರ್ಡಿಂಗ್ ಮೇಲೆ ಯುವಕನೊಬ್ಬ ಪವಡಿಸು ಪರಮಾತ್ಮ ಎಂದು ಮಲಗಿಬಿಟ್ಟ... ವಿಡಿಯೋ ವೈರಲ್
|

Updated on: Nov 06, 2023 | 5:57 PM

ನಿಜಾಮಾಬಾದ್ ಜಿಲ್ಲಾ ಕೇಂದ್ರದ ನಿತೇಶ್ವರ್ ಚೌಕಾದಲ್ಲಿ ಯುವಕನೊಬ್ಬ ಜಾಹೀರಾತುಗಳ ಹೋರ್ಡಿಂಗ್ ಮೇಲೆ ಹತ್ತಿ, ಅಲ್ಲೇ ಪವಡಿಸು ಪರಮಾತ್ಮ ಎಂದು ಮಲಗಿಬಿಟ್ಟಿದ್ದಾನೆ! ಸ್ಥಳೀಯರು ವಿಚಾರಿಸಿದಾಗ ಆತನನ್ನು ರವೀಂದರ್ ಎಂದು ಗುರುತಿಸಿದ್ದಾರೆ. ಬಳಿಕ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ತ್ರಿ ಟೌನ್​​ ಎಸ್‌ಐ ನರಹರಿ ಅವರು ಕಾನ್‌ಸ್ಟೆಬಲ್‌ಗಳೊಂದಿಗೆ ಘಟನಾ ಸ್ಥಳಕ್ಕೆ ದೌಡಾಯಿಸಿ ಬಂದರು. ತ್ರಿ ಟೌನ್​​ ಠಾಣೆ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಯುವಕನ ಕೊನೆಗೂ ಕೆಳಗಿಳಿಸಿದರು.

ಕೆಳಗಿಳಿಸಿದ ಮೇಲೆ ಏನಪ್ಪಾ ರಾಜಾ ನಿನ್ನ ಸಮಸ್ಯೆ ಎಂದು ಕೇಳಲಾಗಿ… ವ್ಯಕ್ತಿಯೊಬ್ಬ ತನ್ನಿಂದ ಸಾವಿರಾರು ರೂಪಾಯಿ ಹಣ ಪಡೆದಿದ್ದಾನೆ. ಆದರೆ ಅದನ್ನು ವಾಪಸ್​​ ನೀಡುತ್ತಿಲ್ಲ. ಇದರಿಂದ ತನಗೆ ತೊಂದರೆ ಯಾಗುತ್ತಿದೆ ಎಂದು ಬಾಧಿತ ಯುವಕ ರವೀಂದರ್ ತಿಳಿಸಿದ್ದಾನೆ. ಈ ಯುವಕ ಪೇಂಟಿಂಗ್ ಮೂಲಕ ಜೀವನ ಸಾಗಿಸುತ್ತಿದ್ದಾನೆ ಎನ್ನುತ್ತಾರೆ ಸ್ಥಳೀಯರು. ಮದ್ಯದ ಅಮಲಿನಲ್ಲಿ, ಆತ ಹೋರ್ಡಿಂಗ್ ಮೇಲೆ ಹತ್ತಿ ಮಲಗಿದ್ದಾನೆ. ಇಂದು ಬೆಳಗ್ಗೆಯೂ ಹೋರ್ಡಿಂಗ್ ಹತ್ತಲು ಯತ್ನಿಸಿದಾಗ ತಡೆದಿರುವುದಾಗಿ ಸ್ಥಳೀಯರು ಹೇಳುತ್ತಾರೆ. ಈ ಹಿಂದೆಯೂ ಎರಡು ಸಲ ಈ ರೀತಿ ಮಾಡಿದ್ದಾನಂತೆ. ಇದಕ್ಕೆ ಸ್ಪಂದಿಸಿದ ಪೊಲೀಸರು ಯುವಕನನ್ನು ಕೌನ್ಸೆಲಿಂಗ್‌ಗೆ ಕಳುಹಿಸಿದ್ದಾರೆ. ವಿಡಿಯೋ ವೈರಲ್ ಆಗಿದೆ.

ಹೆಚ್ಚಿನ ವೈರಲ್ ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್