ನನ್ನ ಬಗ್ಗೆ ಗೊತ್ತಿರುವವರು ಕೈ ಮೇಲೆತ್ತಿ ಅಂತ ಮೊಹಮ್ಮದ್ ನಲಪಾಡ್ ಹೇಳಿದರೆ ಒಬ್ಬೇಒಬ್ಬ ಕಾರ್ಯಕರ್ತ ಕೈ ಎತ್ತಲಿಲ್ಲ!
ಚಿತ್ರದುರ್ಗದಲ್ಲಿ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಪಕ್ಷದ ಕಾರ್ಯಕರ್ತರ ನಡುವೆ ನಗೆಪಾಟೀಲಿಗೀಡಾದ ಪ್ರಸಂಗವನ್ನು ಇದು ವಿವರಿಸುತ್ತದೆ,
ಚಿತ್ರದುರ್ಗ: ಮೊಹಮ್ಮದ್ ನಲಪಾಡ್ ರನ್ನು (Mohammad Nalapad) ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರನ್ನಾಗಿ ಮಾಡಿರುವ ರಾಜ್ಯದ ಹಿರಿಯ ನಾಯಕರು ಮತ್ತು ಕೆಪಿಸಿಸಿ (KPCC) ಪದಾಧಿಕಾರಿಗಳು ನೋಡಲೇಬೇಕಿರುವ ವಿಡಿಯೋ ಇದು! ಚಿತ್ರದುರ್ಗದಲ್ಲಿ ನಲಪಾಡ್ ಕಾಂಗ್ರೆಸ್ ಕಾರ್ಯಕರ್ತರ (Congress workers) ನಡುವೆ ನಗೆಪಾಟೀಲಿಗೀಡಾದ ಪ್ರಸಂಗವನ್ನು ಇದು ವಿವರಿಸುತ್ತದೆ. ಖುದ್ದು ನಲಪಾಡ್ ನೆರೆದಿರುವ ಕಾರ್ಯಕರ್ತರನ್ನು ಉದ್ದೇಶಿಸಿ ನಿಮ್ಮಲ್ಲಿ ಎಷ್ಟು ಜನಕ್ಕೆ ನಾನು ಯಾರು ಅನ್ನೋದು ಗೊತ್ತಿದೆ ಮತ್ತು ಗೊತ್ತಿರುವವರು ಕೈ ಮೇಲೆತ್ತಿ ಎಂಬಂತೆ ತನ್ನ ಕೈ ಮೇಲೆತ್ತಿ ಹೇಳುತ್ತಾರೆ. ಒಬ್ಬೇಒಬ್ಬ ಕಾರ್ಯಕರ್ತ ಕೈ ಎತ್ತುವುದಿಲ್ಲ. ಇದು ನಾವಲ್ಲ ಖುದ್ದು ಮೊಹಮ್ಮದ್ ನಲಪಾಡ್ ಹೇಳುತ್ತಾರೆ. ಇಂಥ ಯುವ ನಾಯಕರನ್ನು ಕಟ್ಟಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಮರಳುವ ಆಸೆ ಇಟ್ಟುಕೊಂಡಿದೆ!
Follow Us
Latest Videos
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ

