AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಭೂಕುಸಿತ; ಅಕ್ರಮ ಚಿನ್ನದ ಗಣಿ ಕುಸಿದು 15 ಜನ ಸಾವು

ಭೂಕುಸಿತ ಸಂಭವಿಸಿದಾಗ ಗಣಿಯಲ್ಲಿ 25 ಜನರು ಚಿನ್ನವನ್ನು ಅಗೆಯುತ್ತಿದ್ದರು. ಈ ವೇಳೆ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಮೂರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂಡೋನೇಷ್ಯಾದಲ್ಲಿನ ಖನಿಜ ಸಂಪನ್ಮೂಲಗಳು ದೂರದ ಪ್ರದೇಶಗಳಲ್ಲಿ ನೆಲೆಗೊಂಡಿವೆ.

ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಭೂಕುಸಿತ; ಅಕ್ರಮ ಚಿನ್ನದ ಗಣಿ ಕುಸಿದು 15 ಜನ ಸಾವು
ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಭೂಕುಸಿತ
ಸುಷ್ಮಾ ಚಕ್ರೆ
|

Updated on: Sep 27, 2024 | 4:10 PM

Share

ಜಕಾರ್ತ: ಭಾರೀ ಮಳೆಯಿಂದ ಉಂಟಾದ ಭೂಕುಸಿತದ ನಂತರ ಇಂಡೋನೇಷ್ಯಾದ ಸುಮಾತ್ರಾ ಪ್ರಾಂತ್ಯದಲ್ಲಿ ಚಿನ್ನದ ಗಣಿ ಕುಸಿದು 15 ಜನರು ಸಾವನ್ನಪ್ಪಿದ್ದಾರೆ. ರಕ್ಷಣಾ ಅಧಿಕಾರಿಗಳು ಭೂಕುಸಿತದಲ್ಲಿ ಸಿಲುಕಿದವರನ್ನು ಪತ್ತೆಹಚ್ಚಲು ಹರಸಾಹಸ ಮಾಡುತ್ತಿದ್ದಾರೆ. ಶುಕ್ರವಾರದವರೆಗೆ ಇದುವರೆಗೂ 7 ಜನರು ಇನ್ನೂ ನಾಪತ್ತೆಯಾಗಿದ್ದಾರೆ.

ಭಾರೀ ಮಳೆಯಿಂದಾಗಿ ಗುರುವಾರ ಸಂಜೆ ಭೂಕುಸಿತದ ನಂತರ ಸೊಲೊಕ್ ಜಿಲ್ಲೆಯ ಅಕ್ರಮ ಚಿನ್ನದ ಗಣಿ ಕುಸಿದಿದೆ ಎಂದು ಪ್ರಾಂತೀಯ ವಿಪತ್ತು ಏಜೆನ್ಸಿಯ ಮುಖ್ಯಸ್ಥ ಇರ್ವಾನ್ ಎಫೆಂಡಿ ಹೇಳಿದ್ದಾರೆ. ರಸ್ತೆಯ ಮೂಲಕ ಪ್ರವೇಶಿಸಲಾಗದ ಸೈಟ್‌ಗೆ ಹೋಗಲು ರಕ್ಷಕರು 8 ಗಂಟೆಗಳ ಕಾಲ ಚಾರಣ ಮಾಡಬೇಕು ಎಂದು ಇರ್ವಾನ್ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಇರಾನ್​ನ ಕಲ್ಲಿದ್ದಲು ಗಣಿಯಲ್ಲಿ ಭಾರಿ ಸ್ಫೋಟ, 51 ಮಂದಿ ಸಾವು

ಈ ಘಟನೆಯ ಸಮಯದಲ್ಲಿ ಗಣಿಯಲ್ಲಿ ಸುಮಾರು 25 ಜನರಿದ್ದರು ಎಂದು ಅವರು ಅಂದಾಜಿಸಿದ್ದಾರೆ. ಅವರಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿದ್ದಾರೆ ಮತ್ತು 7 ಮಂದಿ ಕಾಣೆಯಾಗಿದ್ದಾರೆ. ಮೃತರನ್ನು ಸ್ಥಳಾಂತರಿಸುವ ಕ್ರಮಗಳ ಜೊತೆಗೆ ಕಾಣೆಯಾದವರಿಗಾಗಿ ಇಂದು ಮುಂಜಾನೆ ಪೊಲೀಸರು ಮತ್ತು ಮಿಲಿಟರಿ ಸಿಬ್ಬಂದಿ ಹುಡುಕಾಟವನ್ನು ಪ್ರಾರಂಭಿಸಿದರು.

ಸಣ್ಣ ಪ್ರಮಾಣದ ಮತ್ತು ಅಕ್ರಮ ಗಣಿಗಾರಿಕೆಯು ಇಂಡೋನೇಷ್ಯಾದಲ್ಲಿ ಅಪಘಾತಗಳನ್ನು ಉಂಟುಮಾಡುತ್ತದೆ. ಅಲ್ಲಿ ಖನಿಜ ಸಂಪನ್ಮೂಲಗಳು ದೂರದ ಪ್ರದೇಶಗಳಲ್ಲಿ ಅಧಿಕಾರಿಗಳು ನಿಯಂತ್ರಿಸಲು ಕಷ್ಟಕರವಾದ ಪರಿಸ್ಥಿತಿಗಳಲ್ಲಿ ನೆಲೆಗೊಂಡಿವೆ. ಗುರುವಾರ ಸುಮಾತ್ರಾ ದ್ವೀಪದಲ್ಲಿ ಭೂಕುಸಿತ ಸಂಭವಿಸಿದಾಗ ಗ್ರಾಮಸ್ಥರು ಚಿನ್ನದ ಅದಿರುಗಳನ್ನು ಅಗೆಯುತ್ತಿದ್ದರು. ಅವರು ಸಮಾಧಿಯಾಗಿದ್ದಾರೆ.

ಇದನ್ನೂ ಓದಿ: Japan earthquake: ದಕ್ಷಿಣ ಜಪಾನ್‌ನಲ್ಲಿ 7.1 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ

ಭೂಕುಸಿತಗಳು, ಪ್ರವಾಹಗಳು ಮತ್ತು ಸುರಂಗಗಳ ಕುಸಿತಗಳು ಗಣಿಗಾರರು ಎದುರಿಸುತ್ತಿರುವ ಕೆಲವು ಅಪಾಯಗಳಾಗಿವೆ. ಹೆಚ್ಚಿನ ಚಿನ್ನದ ಅದಿರು ಸಂಸ್ಕರಣೆಯು ಹೆಚ್ಚು ವಿಷಕಾರಿ ಪಾದರಸ ಮತ್ತು ಸೈನೈಡ್ ಅನ್ನು ಒಳಗೊಂಡಿರುತ್ತದೆ. ಇದೇ ರೀತಿ 2019ರ ಫೆಬ್ರವರಿಯಲ್ಲಿ ಉತ್ತರ ಸುಲವೆಸಿ ಪ್ರಾಂತ್ಯದ ಅಕ್ರಮ ಚಿನ್ನದ ಗಣಿಯಲ್ಲಿ ಮಣ್ಣು ಕುಸಿದಿತ್ತು. ಇದರಿಂದ 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ