AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮುದ್ರ ದಡಕ್ಕೆ ಬಂದು ಬಿದ್ದ ರಾಶಿ ರಾಶಿ ತಿಮಿಂಗಿಲಗಳು! ಆಮೇಲೇನಾಯ್ತು?

ಜಗತ್ತಿನ ಅತಿ ದೊಡ್ಡ ಜೀವಿ ತಿಮಿಂಗಿಲ. ಇದು ಸಮುದ್ರದಲ್ಲೇ ಇದ್ದು, ಜನರ ಕಣ್ಣಿಗೆ ಅಷ್ಟಾಗಿ ಬೀಳುವುದಿಲ್ಲ. ಆದರೆ ಆಸ್ಟ್ರೇಲಿಯಾದ ತಾಸ್ಮೇನಿಯಾ ದ್ವೀಪದ ಸಮುದ್ರ ದಂಡೆಯಲ್ಲಿ ಬಂದು ಬಿದ್ದಿದ್ದ ಸುಮಾರು 270 ತಿಮಿಂಗಿಲಗಳನ್ನು ಸಾಗರ ಜೈವಿಕ ತಜ್ಞರು ರಕ್ಷಿಸಲು ಹರಸಾಹಸ ಪಟ್ಟಿರುವ ರೋಚಕ ಪ್ರಕರಣ ನಡೆದಿದೆ. ಆ 270 ತಿಮಿಂಗಿಲಗಳ ಪೈಕಿ ಪೈಲಟ್ ತಿಮಿಂಗಿಲಗಳು ಎಂದು ಕರೆಯಲ್ಪಡುವ 25 ತಿಮಿಂಗಿಲಗಳು ಮೃತಪಟ್ಟಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಒಟ್ಟು 90 ತಿಮಿಂಗಿಲಗಳು ಸತ್ತಿವೆ. ಪೈಲಟ್ ತಿಮಿಂಗಿಲಗಳು ಡಾಲ್ಫಿನ್ ಪ್ರಭೇದಕ್ಕೆ ಸೇರಿವೆ. […]

ಸಮುದ್ರ ದಡಕ್ಕೆ ಬಂದು ಬಿದ್ದ ರಾಶಿ ರಾಶಿ ತಿಮಿಂಗಿಲಗಳು! ಆಮೇಲೇನಾಯ್ತು?
ಆಯೇಷಾ ಬಾನು
| Edited By: |

Updated on: Sep 22, 2020 | 3:38 PM

Share

ಜಗತ್ತಿನ ಅತಿ ದೊಡ್ಡ ಜೀವಿ ತಿಮಿಂಗಿಲ. ಇದು ಸಮುದ್ರದಲ್ಲೇ ಇದ್ದು, ಜನರ ಕಣ್ಣಿಗೆ ಅಷ್ಟಾಗಿ ಬೀಳುವುದಿಲ್ಲ. ಆದರೆ ಆಸ್ಟ್ರೇಲಿಯಾದ ತಾಸ್ಮೇನಿಯಾ ದ್ವೀಪದ ಸಮುದ್ರ ದಂಡೆಯಲ್ಲಿ ಬಂದು ಬಿದ್ದಿದ್ದ ಸುಮಾರು 270 ತಿಮಿಂಗಿಲಗಳನ್ನು ಸಾಗರ ಜೈವಿಕ ತಜ್ಞರು ರಕ್ಷಿಸಲು ಹರಸಾಹಸ ಪಟ್ಟಿರುವ ರೋಚಕ ಪ್ರಕರಣ ನಡೆದಿದೆ.

ಆ 270 ತಿಮಿಂಗಿಲಗಳ ಪೈಕಿ ಪೈಲಟ್ ತಿಮಿಂಗಿಲಗಳು ಎಂದು ಕರೆಯಲ್ಪಡುವ 25 ತಿಮಿಂಗಿಲಗಳು ಮೃತಪಟ್ಟಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಒಟ್ಟು 90 ತಿಮಿಂಗಿಲಗಳು ಸತ್ತಿವೆ. ಪೈಲಟ್ ತಿಮಿಂಗಿಲಗಳು ಡಾಲ್ಫಿನ್ ಪ್ರಭೇದಕ್ಕೆ ಸೇರಿವೆ. ಅದು 7 ಮೀಟರ್ (23 ಅಡಿ) ಉದ್ದ ಮತ್ತು 3 ಟನ್ ತೂಕ ಹೊಂದಿರುತ್ತವೆ. ರಾಜ್ಯ ರಾಜಧಾನಿ ಹೊಬಾರ್ಟ್‌ನ ವಾಯವ್ಯ ದಿಕ್ಕಿನಲ್ಲಿ ಸುಮಾರು 200 ಕಿ.ಮೀ (120 ಮೈಲಿ) ದೂರದಲ್ಲಿರುವ ಮ್ಯಾಕ್ವಾರಿ ಹೆಡ್ಸ್‌ನಲ್ಲಿ ತಿಮಿಂಗಿಲಗಳು ಮೂರು ಗುಂಪುಗಳಲ್ಲಿ ಆಳವಿಲ್ಲದ ನೀರಿನಲ್ಲಿ ಸಿಲುಕಿಕೊಂಡಿವೆ ಎಂದು ತಾಸ್ಮೇನಿಯಾದ ಪ್ರಾಥಮಿಕ ಕೈಗಾರಿಕೆ, ಉದ್ಯಾನಗಳು, ನೀರು ಮತ್ತು ಪರಿಸರ ಇಲಾಖೆ ತಿಳಿಸಿದೆ.

ಪರಿಸ್ಥಿತಿಯನ್ನು ನಿಭಾಯಿಸಲು ವಿಶೇಷ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ತಿಮಿಂಗಿಲಗಳನ್ನು ರಕ್ಷಿಸುವ ಕಾರ್ಯದಲ್ಲಿ ಭಾಗಿಯಾಗಿತ್ತು. ಆದರೆ ಈ ಕಾರ್ಯಾಚರಣೆ ಭಾರಿ ರೋಚಕವಾಗಿದೆ. ಇನ್ನು ಸಾಮಾನ್ಯವಾಗಿ ಡಾಲ್ಫಿನ್ ಮತ್ತು ವೇಲ್​ಗಳು ತಾಸ್ಮೇನಿಯಾ ದಡದಲ್ಲಿ ಪ್ರತಿ 2-3ವಾರಗಳಿಗೊಮ್ಮೆ ಬಂದು ಬೀಳುತ್ತವೆ ಎಂದು ತಿಳಿದುಬಂದಿದೆ.

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?