AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Russia-Ukraine War: ನಿರ್ಬಂಧಗಳ ವಿರುದ್ಧ ಪ್ರತೀಕಾರಕ್ಕೆ ರಷ್ಯಾ ಸಿದ್ಧತೆ: 5 ಮಹತ್ವದ ಬೆಳವಣಿಗೆಗಳ ವಿವರ ಇಲ್ಲಿದೆ

ಉಕ್ರೇನ್​ನ ಪೂರ್ವ ನಗರವಾದ ಸೆವೆರೊಡೊನೆಸ್ಟ್ಕ್ ನಲ್ಲಿ ರಷ್ಯಾ ಮಂಗಳವಾರ ನಡೆಸಿದ ದಾಳಿಗೆ ಸುಮಾರು 10 ಮಂದಿ ಬಲಿಯಾಗಿದ್ದಾರೆ ಎಂದು ಲುಗಾನ್ಸ್ಕ್ ಪ್ರಾದೇಶಿಕ ಆಡಳಿತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Russia-Ukraine War: ನಿರ್ಬಂಧಗಳ ವಿರುದ್ಧ ಪ್ರತೀಕಾರಕ್ಕೆ ರಷ್ಯಾ ಸಿದ್ಧತೆ: 5 ಮಹತ್ವದ ಬೆಳವಣಿಗೆಗಳ ವಿವರ ಇಲ್ಲಿದೆ
ಯುದ್ಧ ಪರಿಸ್ಥಿತಿಯ ಚಿತ್ರಣ
TV9 Web
| Edited By: |

Updated on:Mar 09, 2022 | 3:06 PM

Share

ರಷ್ಯಾ -ಉಕ್ರೇನ್ ಯುದ್ಧ (Russia-Ukraine War) 14ನೇ ದಿನಕ್ಕೆ ಕಾಲಿಟ್ಟಿದೆ. ಫೆ.24ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ ಉಕ್ರೇನ್​ ಮೇಲೆ ಸೇನಾ ಕಾರ್ಯಾಚರಣೆ ಘೋಷಿಸಿದರು. ಅಂದಿನಿಂದಲೂ ರಷ್ಯಾ ಸೇನೆ ಉಕ್ರೇನ್​ ನೆಲದಲ್ಲಿ ನಿಂತು ಆಕ್ರಮಣ ಮಾಡುತ್ತಿದೆ. ಈಗಾಗಲೇ ಹಲವು ಪ್ರದೇಶಗಳಲ್ಲಿ ವಸತಿ ಕಟ್ಟಡಗಳು, ಸರ್ಕಾರಿ ಕಚೇರಿಗಳು, ಶಾಲೆ, ಆಸ್ಪತ್ರೆಗಳ ಮೇಲೆ ಕೂಡ ರಷ್ಯಾ ದಾಳಿ ಮಾಡಿದ್ದಾಗಿ ವರದಿಯಾಗಿದೆ. ಇನ್ನೊಂದೆಡೆ ಉಕ್ರೇನ್​, ತಾವು ರಷ್ಯಾದ 10 ಸಾವಿರಕ್ಕೂ ಅಧಿಕ ಸೈನಿಕರನ್ನು ಕೊಂದಿದ್ದಾಗಿಯೂ ಹೇಳಿಕೊಂಡಿದೆ. ಈ ಯುದ್ಧದ ಭೂಮಿಯಲ್ಲಿ ನಡೆದ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ.

  1. ಉಕ್ರೇನ್​ನ ಪೂರ್ವ ನಗರವಾದ ಸೆವೆರೊಡೊನೆಸ್ಟ್ಕ್ ನಲ್ಲಿ ರಷ್ಯಾ ಮಂಗಳವಾರ ನಡೆಸಿದ ದಾಳಿಗೆ ಸುಮಾರು 10 ಮಂದಿ ಬಲಿಯಾಗಿದ್ದಾರೆ ಎಂದು ಲುಗಾನ್ಸ್ಕ್ ಪ್ರಾದೇಶಿಕ ಆಡಳಿತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇಲ್ಲಿ ರಷ್ಯಾ ಸೈನ್ಯ ವಸತಿ ಕಟ್ಟಡಗಳು, ಜನರು ಇದ್ದ ಮನೆಗಳು ಮತ್ತು ಇತರ ಕಚೇರಿಗಳ ಮೇಲೆ ಗುಂಡಿನ ದಾಳಿ ನಡೆಸಿದೆ ಎಂದು ಮಾಹಿತಿ ನೀಡಿದ್ದಾರೆ.
  2. ಉಕ್ರೇನ್​ ಮೇಲೆ ಯುದ್ಧ ಸೇರಿರುವ ರಷ್ಯಾದ ಮೇಲೆ ಅಮೆರಿಕ ಸೇರಿ ಇನ್ನಿತರ ರಾಷ್ಟ್ರಗಳು ಇನ್ನಷ್ಟು ನಿರ್ಬಂಧ ಹೇರುತ್ತಿವೆ. ಅದರಲ್ಲೂ ರಷ್ಯಾದ ಆದಾಯದ ಪ್ರಮುಖ ಮೂಲಗಳಾದ ತೈಲ ಮತ್ತು ಅನಿಲ ಆಮದಿನ ಮೇಲೆ ಅಮೆರಿಕ ಮಂಗಳವಾರ ನಿರ್ಬಂಧ ಹೇರಿದ ಬೆನ್ನಲ್ಲೇ ರಷ್ಯಾ ಖಡಕ್​ ಎಚ್ಚರಿಕೆ ಕೊಟ್ಟಿದೆ. ನಮ್ಮ ಮೇಲೆ ಹೇರುವ ನಿರ್ಬಂಧಗಳಿಗೆ ನಾವು ಕೊಡುವ ಪ್ರತಿಕ್ರಿಯೆ ತುಂಬ ಕ್ಷಿಪ್ರವಾಗಿ ಇರಲಿದೆ. ಬಹುಸೂಕ್ಷ್ಮ ಕ್ಷೇತ್ರಗಳಲ್ಲಿ ನಾವು ತಿರುಗೇಟು ನೀಡುತ್ತೇವೆ ಎಂದು ಹೇಳಿದೆ.
  3. ರಷ್ಯಾ ಸೇನೆಯು ಮುತ್ತಿಗೆ ಹಾಕಿರುವ ಉಕ್ರೇನ್​ನ ದಕ್ಷಿಣ ಬಂದರು ನಗರ ಮರಿಯುಪೋಲ್​​ ಮತ್ತು ಇತರ ಪ್ರದೇಶಗಳಿಂದ, ಒಟ್ಟು 6 ಮಾನವೀಯ ಕಾರಿಡಾರ್​ಗಳ ಮೂಲಕ ನಾಗರಿಕರನ್ನು ಸ್ಥಳಾಂತರ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾಗಿ ಉಕ್ರೇನ್​ ಉಪಪ್ರಧಾನಮಂತ್ರಿ ಐರಿನಾ ವೆರೆಶ್ಚುಕ್ ಹೇಳಿದ್ದಾರೆ. ಹಾಗೇ, ಈ ಪ್ರದೇಶಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9ಗಂಟೆವರೆಗೆ (ಭಾರತೀಯ ಕಾಲಮಾನ) ಗುಂಡಿನ ದಾಳಿ ನಡೆಸಲು ಉಕ್ರೇನ್​ ಸಶಸ್ತ್ರಪಡೆಗಳು ಒಪ್ಪಿಗೆ ಸೂಚಿಸಿವೆ. ರಷ್ಯಾದ ಪಡೆಗಳೂ ಇದಕ್ಕೆ ಸಹಕರಿಸಬೇಕು. ಈಗಾಗಲೇ ಘೋಷಿಸಿರುವ ಕದನ ವಿರಾಮ ನಿಯಮಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕು ಎಂದೂ ಒತ್ತಾಯಿಸಿದ್ದಾರೆ.
  4. ಬ್ರಿಟನ್​ ರಷ್ಯಾ ವಿರುದ್ಧ ಹೊಸ ಮಾದರಿಯ ವಾಯುಯಾನ ನಿರ್ಬಂಧ ವಿಧಿಸಿದೆ. ಈ ನಿರ್ಬಂಧ ಇದ್ದಾಗ ರಷ್ಯಾದ ಯಾವುದೇ ವಿಮಾನ ಬ್ರಿಟನ್​ ವಾಯುಮಾರ್ಗದಲ್ಲಿ ಬಂದರೂ ಅದನ್ನು ಬ್ರಿಟನ್​ನ ಸಂಬಂಧಪಟ್ಟ ಆಡಳಿತ ವಶಕ್ಕೆ ಪಡೆಯಬಹುದು. ಅಷ್ಟೇ ಅಲ್ಲ ರಷ್ಯಾಕ್ಕೆ ವಾಯುಯಾನಕ್ಕೆ ಸಂಬಂಧಿಸಿದ, ಬಾಹ್ಯಾಕಾಶ ಸಂಬಂಧಿ ಸರಕುಗಳನ್ನು ರಫ್ತು ಮಾಡುವುದಕ್ಕೂ ಬ್ರಿಟನ್​ ನಿಷೇಧ ಹೇರಿದೆ. ರಷ್ಯಾದ ವಿಮಾನಗಳು ಯುಕೆಯ ವಾಯುಪ್ರದೇಶದಲ್ಲಿ ಹಾರಾಡುವುದು, ಯುಕೆ ನೆಲದಲ್ಲಿ ಲ್ಯಾಂಡ್ ಆಗುವುದು ಕ್ರಿಮಿನಲ್ ಎನ್ನಿಸಿಕೊಳ್ಳುತ್ತದೆ ಎಂದೂ ಹೇಳಿದೆ.
  5. ರಷ್ಯಾದ ಆಕ್ರಮಣಕ್ಕೆ ತುತ್ತಾಗಿ ಸಂಕಷ್ಟದಲ್ಲಿರುವ ಉಕ್ರೇನ್​ಗೆ 1.4 ಬಿಲಿಯನ್ ರೂಪಾಯಿಯನ್ನು ತುರ್ತು ನಿಧಿ ರೂಪದಲ್ಲಿ ಬಿಡುಗಡೆ ಮಾಡುವುದಕ್ಕೆ ಅನುಮೋದನೆ ನೀಡಲು ಅಂತಾರಾಷ್ಟ್ರೀಯ ಅಂತರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯಕಾರಿ ಮಂಡಳಿ ಸಿದ್ಧವಾಗಿದೆ ಎಂದು ಐಎಂಎಫ್​ನ ಎಂಡಿ ಕ್ರಿಸ್ಟಲಿನಾ ಜಾರ್ಜಿವಾ ತಿಳಿಸಿದ್ದಾರೆ.

ಇದನ್ನೂ ಓದಿ: ಉಕ್ರೇನ್‌ನಿಂದ ಬಾಂಗ್ಲಾದೇಶಿಯರನ್ನು ರಕ್ಷಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದ ಶೇಖ್ ಹಸೀನಾ

Published On - 3:05 pm, Wed, 9 March 22

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?