AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಟಿನ್​ರ ಯುದ್ಧೋತ್ಸಾಹಕ್ಕೆ ಕಡಿವಾಣ ಬೀಳದಿದ್ದರೆ ಜಗತ್ತಿನಲ್ಲಿ ಸುರಕ್ಷಿತ ಸ್ಥಳವೇ ಇರುವುದಿಲ್ಲ: ವಿಶ್ವಕ್ಕೆ ಉಕ್ರೇನ್ ಅಧ್ಯಕ್ಷರ ಪತ್ನಿಯ ಎಚ್ಚರಿಕೆ

ಮುಂದಿನ ದಿನಗಳಲ್ಲಿ ರಷ್ಯಾ ನಿಮ್ಮದೇ ನಾಗರಿಕರನ್ನು ರಕ್ಷಿಸುವ ಮುಸುಕು ಹಾಕಿಕೊಂಡು ನಿಮ್ಮ ನಗರಗಳ ಮೇಲೆ ದಾಳಿ ಮಾಡಬಹುದು. ನಾವು ಅದನ್ನು ತಡೆದು ನಿಲ್ಲಿಸಿದ್ದೇವೆ. ನಮಗೆ ಸಹಾಯ ಮಾಡಿ’ ಎಂದು ಅವರು ವಿನಂತಿಸಿದ್ದಾರೆ.

ಪುಟಿನ್​ರ ಯುದ್ಧೋತ್ಸಾಹಕ್ಕೆ ಕಡಿವಾಣ ಬೀಳದಿದ್ದರೆ ಜಗತ್ತಿನಲ್ಲಿ ಸುರಕ್ಷಿತ ಸ್ಥಳವೇ ಇರುವುದಿಲ್ಲ: ವಿಶ್ವಕ್ಕೆ ಉಕ್ರೇನ್ ಅಧ್ಯಕ್ಷರ ಪತ್ನಿಯ ಎಚ್ಚರಿಕೆ
ಉಕ್ರೇನ್​ ಅಧ್ಯಕ್ಷರ ಪತ್ನಿ ಒಲೆನಾ ಝೆಲೆನ್​ಸ್ಕಿ
TV9 Web
| Edited By: |

Updated on: Mar 09, 2022 | 12:19 PM

Share

ಕೀವ್: ರಷ್ಯಾ ಆಕ್ರಮಣದಿಂದ ಉಕ್ರೇನ್ ಕಂಗಾಲಾಗಿದೆ. ಅಪರೂಪದ ಬೆಳವಣಿಗೆಯೊಂದರಲ್ಲಿ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ (Volodymyr Zelenskyy Wife Olena Zelenska)  ಅವರ ಪತ್ನಿ ಒಲೆನಾ ಝೆಲೆನ್​ಸ್ಕಿ ಜಾಗತಿಕ ಮಾಧ್ಯಮ ಸಂಸ್ಥೆಗಳಿಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ‘ಉಕ್ರೇನ್ ಮೇಲೆ ದಾಳಿ ಮಾಡಿರುವ ರಷ್ಯಾ ನಾಗರಿಕರ ಸಾಮೂಹಿಕ ಹತ್ಯೆ ಮಾಡಿದೆ. ಇದನ್ನು ವಿಶೇಷ ಕಾರ್ಯಾಚರಣೆ ಎಂದು ಅಲ್ಲಿನ ಮಾಧ್ಯಮಗಳು ಸುಳ್ಳು ಮಾಹಿತಿ ಹರಡುತ್ತಿವೆ. ಇಂದಿಗೂ ನಮ್ಮ ವಿನಂತಿ ಇಷ್ಟೇ. ಆಗಸದಲ್ಲಿ ರಷ್ಯಾ ವಿಮಾನ ಮತ್ತು ಕ್ಷಿಪಣಿಗಳನ್ನು ನಿರ್ಬಂಧಿಸಿ. ಭೂಮಿಯ ಮೇಲಿನ ಯುದ್ಧವನ್ನು ನಾವು ನೋಡಿಕೊಳ್ಳುತ್ತೇವೆ’ ಎಂದು ಅವರು ನ್ಯಾಟೊ ಸೇರಿದಂತೆ ವಿಶ್ವ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಉಕ್ರೇನ್​ನಲ್ಲಿ (Russia Ukraine Conflict) ನಡೆಯುತ್ತಿರುವ ಯುದ್ಧ ಎಲ್ಲಿಯೋ ನಡೆಯುತ್ತಿರುವ ಯುದ್ಧವಲ್ಲ. ಇದು ಯೂರೋಪ್​ನಲ್ಲಿ ನಡೆಯುತ್ತಿರುವ ಯುದ್ಧ, ಐರೋಪ್ಯ ಒಕ್ಕೂಟದ ಗಡಿಯಲ್ಲಿ ನಡೆಯುತ್ತಿರುವ ಯುದ್ಧ. ಮುಂದಿನ ದಿನಗಳಲ್ಲಿ ರಷ್ಯಾ ನಿಮ್ಮದೇ ನಾಗರಿಕರನ್ನು ರಕ್ಷಿಸುವ ಮುಸುಕು ಹಾಕಿಕೊಂಡು ನಿಮ್ಮ ನಗರಗಳ ಮೇಲೆ ದಾಳಿ ಮಾಡಬಹುದು. ನಾವು ಅದನ್ನು ತಡೆದು ನಿಲ್ಲಿಸಿದ್ದೇವೆ. ನಮಗೆ ಸಹಾಯ ಮಾಡಿ’ ಎಂದು ಅವರು ವಿನಂತಿಸಿದ್ದಾರೆ.

ಉಕ್ರೇನ್​ನ ನಾಗರಿಕರು ಅನುಭವಿಸುತ್ತಿರುವ ಸಂಕಷ್ಟ ಪರಿಸ್ಥಿತಿಯನ್ನು ವಿವರಿಸಿರುವ ಅವರು, ಬಾಂಬ್​ನಿಂದ ರಕ್ಷಣೆ ಪಡೆಯಲು ಮಹಿಳೆಯರು ಮತ್ತು ಮಕ್ಕಳು ಭೂಗತ ಬಂಕರ್​ಗಳಲ್ಲಿ ದಿನದೂಡುತ್ತಿದ್ದಾರೆ. ಇದು ಯುದ್ಧದ ಭೀಕರ ಸನ್ನಿವೇಶ. ನಡುಗುವ ಭೂಮಿಯಲ್ಲಿ ಸಕ್ಕರೆ ಕಾಯಿಲೆ ಇರುವವರಿಗೆ ಭೂಗತ ಬಂಕರ್​ಗಳಲ್ಲಿ ಇನ್​ಸುಲಿನ್ ಕೊಡುವುದು, ಸತತ ಬಾಂಬ್​ಗಳು ಭೋರ್ಗರೆಯುತ್ತಿದ್ದಾಗ ಅಸ್ತಮಾ ರೋಗಿಗಳಿಗೆ ಔಷಧಿ ಕೊಡುವುದು ಎಷ್ಟು ಕಷ್ಟ ಎನ್ನುವುದು ಅನುಭವಿಸಿದವರಿಗೇ ಗೊತ್ತು. ಕ್ಯಾನ್ಸರ್ ಪೀಡಿತರ ಕಿಮೊಥೆರಪಿ, ರೇಡಿಯೇಶನ್ ಚಿಕಿತ್ಸೆಗೆ ಅವಕಾಶವೇ ಆಗುತ್ತಿಲ್ಲ. ಅವರ ಚಿಕಿತ್ಸೆ ಎಂದಿನಿಂದ ಆರಂಭವಾಗಬಹುದು ಎನ್ನುವ ಬಗ್ಗೆ ಏನನ್ನೂ ಹೇಳಲು ಆಗುವುದಿಲ್ಲ ಎನ್ನುತ್ತಾರೆ.

ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿ 14 ದಿನಗಳಾಗಿವೆ. ಎರಡೂ ದೇಶಗಳ ನಡುವೆ ಮೂರು ಬಾರಿ ಮಾತುಕತೆ ನಡೆದಿದ್ದರೂ ಈವರೆಗೆ ಯಾವುದೇ ಪ್ರಯೋಜನ ಸಿಕ್ಕಿಲ್ಲ. ಕೀವ್ ಮತ್ತು ಇತರ ಪ್ರಮುಖ ನಗರಗಳಿಂದ ಜನರನ್ನು ಸ್ಥಳಾಂತರಕ್ಕಾಗಿ ಅವಕಾಶ ಕಲ್ಪಿಸಲು ಕದನ ವಿರಾಮ ಘೋಷಿಸಿದೆ. ಯುದ್ಧದಿಂದಾಗಿ ನಾಗರಿಕರ ಸಂಚಾರಕ್ಕೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ನಾಗರಿಕರ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

‘ಎರಡು ವಾರಗಳ ಹಿಂದಷ್ಟೇ ನಮ್ಮ ದೇಶದಲ್ಲಿ ಶಾಂತಿಯಿತ್ತು. ನಮ್ಮ ನಗರಗಳು, ಪಟ್ಟಣಗಳು, ಹಳ್ಳಿಗಳಲ್ಲಿ ಜನಸಮುದಾಯ ಜೀವಂತವಾಗಿ ನಳನಳಿಸುತ್ತಿತ್ತು. ಕಳೆದ ಫೆಬ್ರುವರಿ 24ರಂದು ರಷ್ಯಾ ಆಕ್ರಮಣದ ಸುದ್ದಿಯೊಂದಿಗೆ ನಾವೆಲ್ಲರೂ ಮೇಲೆದ್ದೆವು. ರಷ್ಯಾದ ಟ್ಯಾಂಕ್​ಗಳು ಉಕ್ರೇನ್ ಗಡಿಯೊಳಗೆ ನುಗ್ಗಿ ಬಂದವು. ಅವರ ಯುದ್ಧವಿಮಾನಗಳು ನಮ್ಮ ವಾಯುಗಡಿಯೊಳಗೆ ಪ್ರವೇಶಿಸಿ ಬಾಂಬುಗಳನ್ನು ಸುರಿಸಿದವು. ಅಷ್ಟೇ ಅಲ್ಲ, ಕ್ಷಿಪಣಿಗಳು ಅಪ್ಪಳಿಸಿದವು’ ಎಂದು ಒಲೆನಾ ಬೇಸರ ವ್ಯಕ್ತಪಡಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ರ ಆಕ್ರಮಣಕಾರಿ ನಿಲುವುಗಳ ವಿರುದ್ಧ ಇಡೀ ಜಗತ್ತು ಒಂದಾಗಿ ನಿಲ್ಲಬೇಕಿದೆ. ಅಣುಯುದ್ಧದ ಬೆದರಿಕೆ ಹಾಕುತ್ತಿರುವ ಪುಟಿನ್​ರ ದುಸ್ಸಾಹಸಗಳನ್ನು ತಡೆದು ನಿಲ್ಲಿಸದಿದ್ದರೆ ವಿಶ್ವದಲ್ಲಿ ಎಲ್ಲಿಯೂ ನಮಗೆ ಸುರಕ್ಷಿತ ಸ್ಥಳ ಎನ್ನುವುದು ಇರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ರಷ್ಯಾದ ಸೇನೆಯ ಬಲಕುಗ್ಗಿಸುವ ಉದ್ದೇಶದಿಂದ ಅಮೆರಿಕ ಸೇರಿದಂತೆ ಹಲವು ದೇಶಗಳು ರಷ್ಯಾ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸಿದೆ. ‘ಪುಟಿನ್​ರ ಯುದ್ಧದಾಹಿ ಮನಸ್ಥಿತಿಗೆ ನಾವು ಅಂತ್ಯ ಕಾಣಿಸುತ್ತೇವೆ’ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಉಕ್ರೇನ್​ನ ಪ್ರಮುಖ ನಗರಗಳ ಮೇಲೆ ರಷ್ಯಾ ದಾಳಿ ತೀವ್ರಗೊಂಡ ಹಿನ್ನೆಲೆಯಲ್ಲಿ ಮತ್ತಷ್ಟು ಶಸ್ತ್ರಾಸ್ತ್ರ ಒದಗಿಸಬೇಕು ಎಂದು ಉಕ್ರೇನ್​ ಆಡಳಿತ ವಿಶ್ವದ ಪ್ರಮುಖ ದೇಶಗಳನ್ನು ವಿನಂತಿಸಿದೆ.

ಇದನ್ನೂ ಓದಿ: ಭಾರತದ ಆರ್ಥಿಕತೆಗೆ ರಷ್ಯಾ, ಉಕ್ರೇನ್ ಎರಡೂ ಬೇಕು: ಯಾರನ್ನು ದೂರ ತಳ್ಳಲು ಆಗದ ಸ್ಥಿತಿಯಲ್ಲಿ ಭಾರತ

ಇದನ್ನೂ ಓದಿ: ರಷ್ಯಾ ವಿರುದ್ಧದ ಉಕ್ರೇನ್ ಹೋರಾಟ ಬೆಂಬಲಿಸಿ ಶಸ್ತ್ರ ಹಿಡಿಯಲು ಸಿದ್ಧರಾದ ಕೆಲ ಭಾರತೀಯರು

Follow Us
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ