AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾರ್ಜಿಯಾದ 55-ವರ್ಷ-ವಯಸ್ಸಿನ ವ್ಯಕ್ತಿ ತನ್ನ ವಯಸ್ಕ ತಾಯಿ ಮತ್ತು ಆಕೆಯ ಸಂಗಾತಿಯನ್ನು ಗುಂಡಿಟ್ಟು ಕೊಂದನೇ?

ವೇರ್ ಕೌಂಟಿ ಶರೀಫ್ ಕಚೇರಿ ನೀಡಿರುವ ಮಾಹಿತಿ ಪ್ರಕಾರ ವೇಕ್ರಾಸ್​ನ ಬರ್ನಾರ್ಡ್ ರಿಟ್ಟನ್​ಹೌಸ್ ವಿರುದ್ಧ ಇಬ್ಬರ ಹತ್ಯೆ ಮತ್ತು ಕಳ್ಳತನದ ಆರೋಪ ದಾಖಲಿಸಲಾಗಿದೆ. ಮಂಗಳವಾರದಂದು ರಿಟ್ಟನ್​ಹೌಸ್​ನನ್ನು ಅವನ ಮನೆಯಲ್ಲಿ ಬಂಧಿಸಿ ಅವನಿಂದ ಯಾವುದೇ ಪ್ರತಿರೋಧವಿಲ್ಲದೆ ವೇರ್ ಕೌಂಟಿ ಜೈಲಿಗೆ ಕರೆದೊಯ್ಯಲಾಯಿತು.

ಜಾರ್ಜಿಯಾದ 55-ವರ್ಷ-ವಯಸ್ಸಿನ ವ್ಯಕ್ತಿ ತನ್ನ ವಯಸ್ಕ ತಾಯಿ ಮತ್ತು ಆಕೆಯ ಸಂಗಾತಿಯನ್ನು ಗುಂಡಿಟ್ಟು ಕೊಂದನೇ?
ಕೊಲೆಯಾದ ದಂಪತಿಯೊಂದಿಗೆ ಆರೋಪಿ
TV9 Web
| Edited By: |

Updated on: Jul 15, 2022 | 8:11 AM

Share

ವಯಸ್ಕ ತಾಯಿ ಮತ್ತು ಆಕೆಯ ಸಂಗಾತಿಯನ್ನು ಹತ್ಯೆಗೈದ ಆರೋಪದಲ್ಲಿ ಜಾರ್ಜಿಯಾ ಪೊಲೀಸರು 55-ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಸೋಮಾವಾರ ಬೆಳಗ್ಗೆ ವರ್ಜಿನಿಯಾ ಡಿ ಥಾಮಸ್ (Virginia D Thomas) (73) ಮತ್ತು ಆಕೆಯ ಪಾರ್ಟನರ್ ಚಾರ್ಲ್ಸ್ ಬಾರ್ನೆಟ್ (Charles Barnett) (75) ಶವಗಳು ಅವರ ಬೆಡ್ ರೂಮಿನಲ್ಲಿ ಪತ್ತೆಯಾದವು ಎಂದು ಜಾರ್ಜಿಯಾ ಬ್ಯರೋ ಆಫ್ ಇನ್ವೆಸ್ಟಿಗೇಶನ್ (GIB) ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ತನ್ನ ಹೇಳಿಕೆಯೊಂದರಲ್ಲಿ ತಿಳಿಸಿದೆ.

ವೇರ್ ಕೌಂಟಿ ಶರೀಫ್ ಕಚೇರಿ ನೀಡಿರುವ ಮಾಹಿತಿ ಪ್ರಕಾರ ವೇಕ್ರಾಸ್​ನ ಬರ್ನಾರ್ಡ್ ರಿಟ್ಟನ್​ಹೌಸ್ ವಿರುದ್ಧ ಇಬ್ಬರ ಹತ್ಯೆ ಮತ್ತು ಕಳ್ಳತನದ ಆರೋಪ ದಾಖಲಿಸಲಾಗಿದೆ. ಮಂಗಳವಾರದಂದು ರಿಟ್ಟನ್​ಹೌಸ್​ನನ್ನು ಅವನ ಮನೆಯಲ್ಲಿ ಬಂಧಿಸಿ ಅವನಿಂದ ಯಾವುದೇ ಪ್ರತಿರೋಧವಿಲ್ಲದೆ ವೇರ್ ಕೌಂಟಿ ಜೈಲಿಗೆ ಕರೆದೊಯ್ಯಲಾಯಿತು.

ಒಂದು ದಿನ ಮೊದಲು ರಿಟ್ಟನ್​ಹೌಸ್ ಸಂಬಂಧಿಯೊಬ್ಬ ಬೆಳಗ್ಗೆ 8:49 ಗಂಟೆಗೆ 911 ಗೆ ಕರೆ ಮಾಡಿ ಬಾರ್ನೆಟ್ ಹಾಗೂ ಥಾಮಸ್ ಅವರು ವೇಕ್ರಾಸ್ನಲ್ಲಿರುವ ತಮ್ಮ ಮನೆಯಲ್ಲಿ ಸತ್ತುಬಿದ್ದಿರುವುದನ್ನು ಕಂಡಿರುವುದಾಗಿ ಹೇಳಿದ್ದಾನೆ. ಪೊಲೀಸರು ಅಲ್ಲಿಗೆ ಆಗಮಿಸಿದಾಗ ವಯಸ್ಕ ದಂಪತಿ ಗುಂಡಿನೇಟಿನಿಂದ ಸತ್ತು ಬಿದ್ದಿರುವುದನ್ನು ಕಂಡರು.

ವೇರ್ ಕೌಂಟಿಯ ಶರೀಫ್ ಕಾರ್ಲ್ ಜೇಮ್ಸ್ ಜಾರ್ಜಿಯಾ ಬ್ಯೂರೋ ಆಫ್ ಇನ್ವೆಸ್ಟಿಗೇಶನ್​ನ ಡಗ್ಲಾಸ್ ಪ್ರಾದೇಶಿಕ ಕಚೇರಿ ಹತ್ಯೆಗಳ ತನಿಖೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.

ತನಿಖೆ ಜಾರಿಯಲ್ಲಿದೆ ಮತ್ತು ಅದು ಕೊನೆಗೊಂಡ ಬಳಿಕ ಪ್ರಕರಣವನ್ನು ವಿಚಾರಣೆಗಾಗಿ ವೇಕ್ರಾಸ್ ಜ್ಯುಡಿಶಿಯಲ್ ಸರ್ಕ್ಯೂಟ್ ಡಿಸ್ಟ್ರಿಕ್ಟ್ ಅಟಾರ್ನಿ ಕಚೇರಿಗೆ ವರ್ಗಾಯಿಸಲಾಗುವುದೆಂದು ಶರೀಫ್ ಕಚೇರಿ ಹೇಳಿದೆ. ಹತ್ಯೆಗಳಿಗೆ ಸಂಬಂಧಿಸಿದಂತೆ ಯಾರಲ್ಲಾದರೂ ಮಾಹಿತಿ ಇದ್ದರೆ ಶರೀಫ್ ಕಚೇರಿ ಸಂಪರ್ಕಿಸುವಂತೆ ಸಾರ್ವಜನಿಕ ಪ್ರಕಟಣೆಯೊಂದರಲ್ಲಿ ತಿಳಿಸಲಾಗಿದೆ.

ಕೊಲೆಯ ಹಿಂದಿನ ಉದ್ದೇಶ ಏನಾಗಿತ್ತು ಅನ್ನೋದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.

‘ಮಿ ಬಾರ್ನೆಟ್ ಮತ್ತು ಮಿಸೆಸ್ ಥಾಮಸ್ ಮೇಲೆ ನಡೆದಿರುವ ಈ ಅಪರಾಧ ನಿಜಕ್ಕೂ ಅತ್ಯಂತ ದುಃಖಕರ ಮತ್ತು ಹೇಯಕರವಾಗಿದೆ, ಎಂದು ಜೇಮ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಜಿಬಿಐ ಏಜೆಂಟ್ ಮತ್ತು ನಮ್ಮ ಪತ್ತೇದಾರಿ ತಂಡಕ್ಕೆ ನಾನು ಧನ್ಯವಾಗಳನ್ನು ತಿಳಿಸುತ್ತೇನೆ. ಇವರೆಲ್ಲ ಪ್ರಕರಣವನ್ನು ಬೇಧಿಸಲು ಅವಿರತವಾಗಿ ಶ್ರಮಿಸಿದ್ದಾರೆ,’ ಎಂದು ಅವರು ಹೇಳಿದ್ದಾರೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ