AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Philippines Earthquake: ಫಿಲಿಪೈನ್ಸ್​​ನಲ್ಲಿ ಪ್ರಬಲ ಭೂಕಂಪ; 7.1 ತೀವ್ರತೆ ದಾಖಲು, ಏರ್​ಪೋರ್ಟ್​ ರನ್​ ವೇ ಬಳಿ ಸಣ್ಣ ಬಿರುಕು

ಭೂಕಂಪದ ತೀವ್ರತೆ ನೋಡಿ ಮೊದಲು ಇದು ಸುನಾಮಿಯ ಮುನ್ನೆಚ್ಚರಿಕೆ ಎಂದು ಹೇಳಲಾಗಿತ್ತು. ಆದರೆ ನಂತರ ಫಿಲಿಪೈನ್ಸ್​ನ ಭೂಕಂಪಶಾಸ್ತ್ರ ಅಧ್ಯಯನ ಕೇಂದ್ರ ಅದನ್ನು ತಳ್ಳಿಹಾಕಿದೆ.

Philippines Earthquake: ಫಿಲಿಪೈನ್ಸ್​​ನಲ್ಲಿ ಪ್ರಬಲ ಭೂಕಂಪ; 7.1 ತೀವ್ರತೆ ದಾಖಲು, ಏರ್​ಪೋರ್ಟ್​ ರನ್​ ವೇ ಬಳಿ ಸಣ್ಣ ಬಿರುಕು
ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on: Aug 12, 2021 | 12:45 PM

Share

ಫಿಲಿಪೈನ್ಸ್​​ನಲ್ಲಿ ಇಂದು ಪ್ರಬಲ ಭೂಕಂಪ (Philippines Earthquake) ಉಂಟಾಗಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.1ರಷ್ಟು ದಾಖಲಾಗಿದೆ ಎಂದು ಯುಎಸ್​ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ (U.S. Geological Survey (USGS) ತಿಳಿಸಿದೆ. ಈ ಭೂಕಂಪದಿಂದ ಅಂತ ದೊಡ್ಡಮಟ್ಟದ ಹಾನಿಯಾಗಲಿಲ್ಲ, ಯಾರ ಜೀವವೂ ಹೋದ ಬಗ್ಗೆ ವರದಿಯಾಗಿಲ್ಲ. ಭೂಮಿಯ 65.6 ಕಿಮೀ ಆಳದಲ್ಲಿ ಕಂಪನ ಆಗಿದ್ದು, ದಾವೋ ನಗರದ ಆಗ್ನೇಯದಲ್ಲಿರುವ ಫಿಲಿಪೈನ್ ಸಾಗರ ಭೂಕಂಪದ ಕೇಂದ್ರ (Epicentre) ವಾಗಿದೆ. ಭೂಕಂಪದ ತೀವ್ರತೆ ನೋಡಿದರೆ ಅಪಾರ ಹಾನಿಯಾಗಿದೆ ಎಂದು ಭಾವಿಸಲಾಗಿತ್ತು. ಆದರೆ ಅಂಥ ದೊಡ್ಡ ಮಟ್ಟದ ಹಾನಿಯೇನೂ ಆಗಿಲ್ಲ. ಯಾವುದೇ ಕಟ್ಟಡ, ಮನೆಗಳೂ ಕುಸಿದುಬಿದ್ದಿಲ್ಲ ಎಂದು ಸ್ಥಳೀಯ ಆಡಳಿತ ಅಧಿಕಾರಿ ರಿಚಾರ್ಡೋ ಜಲದ್​ ತಿಳಿಸಿದ್ದಾರೆ.

ಈ ಭೂಕಂಪ ಸ್ಥಳೀಯ ವಿಮಾನ ನಿಲ್ದಾಣಗಳು, ಸಾಗರದ ಬಂದರುಗಳು ಸೇರಿ ಮತ್ತಿತರ ಪ್ರಮುಖ ಸ್ಥಳಗಳ ಮೇಲೆ ಅಂಥ ದೊಡ್ಡಮಟ್ಟದ ಪ್ರಭಾವ ಬೀರಲಿಲ್ಲ. ಆದಾಗ್ಯೂ ದಕ್ಷಿಣದ ದಾವೊ ಓರಿಯಂಟಲ್ ಪ್ರಾಂತ್ಯದಲ್ಲಿ ಇರುವ ವಿಮಾನ ನಿಲ್ದಾಣದ ರನ್​ ವೇ ಬಳಿ ಸಣ್ಣಮಟ್ಟದ ಬಿರುಕು ಕಾಣಿಸಿಕೊಂಡಿದೆ. ಹಾಗಂತ ಯಾವುದೇ ಪ್ರಯಾಣಿಕರಿಗೂ ತೊಂದರೆ ಆಗಿಲ್ಲ ಎಂದೂ ತಿಳಿಸಿದ್ದಾರೆ.

ಭೂಕಂಪದ ತೀವ್ರತೆ ನೋಡಿ ಮೊದಲು ಇದು ಸುನಾಮಿಯ ಮುನ್ನೆಚ್ಚರಿಕೆ ಎಂದು ಹೇಳಲಾಗಿತ್ತು. ಆದರೆ ನಂತರ ಫಿಲಿಪೈನ್ಸ್​ನ ಭೂಕಂಪಶಾಸ್ತ್ರ ಅಧ್ಯಯನ ಕೇಂದ್ರ ಅದನ್ನು ತಳ್ಳಿಹಾಕಿದೆ. ಸುನಾಮಿ ಸಂಭವಿಸುವ ಅಪಾಯ ಇಲ್ಲ ಎಂದು ಹೇಳಿದೆ. ಫಿಲಿಪೈನ್ಸ್​ನ ಭೌಗೋಳಿಕೆ ರಚನೆ ಪ್ರಕಾರ, ಇಲ್ಲಿ ಆಗಾಗ ಭೂಕಂಪ ಸಂಭವಿಸುತ್ತಿರುತ್ತದೆ.

ಇದನ್ನೂ ಓದಿ: ಕುರಿ ಕಾಯುತ್ತಿದ್ದ ಸಿದ್ದರಾಮಯ್ಯನವರ ರಾಜಕೀಯ ಹಾದಿಯೇ ಅಚ್ಚರಿ; ಇಲ್ಲಿದೆ ರೋಚಕ ಸ್ಟೋರಿ

Crypto Currency: ಕಳುವು ಮಾಡಿದ್ದ ಕ್ರಿಪ್ಟೊಕರೆನ್ಸಿ ಹಿಂತಿರುಗಿಸಿದ ಹ್ಯಾಕರ್ಸ್; ಕದಿಯೋದು ಸುಲಭ ಕ್ಯಾಶ್ ಮಾಡಿಸೋದು ಕಷ್ಟ ಏಕೆ?

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು