AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಧಾನಕ್ಕಿಳಿದ ಆಫ್ಘಾನಿಸ್ತಾನ ಸರ್ಕಾರ; ಯುದ್ಧ ನಿಲ್ಲಿಸಿದರೆ ತಾಲಿಬಾನ್​ನೊಂದಿಗೆ ಅಧಿಕಾರ ಹಂಚಿಕೊಳ್ಳುವ ಪ್ರಸ್ತಾಪ

ಮಾಧ್ಯಮದವರಿಗೆ ಕಳಿಸಿರುವ ಸಂದೇಶವೊಂದರಲ್ಲಿ ಸರ್ಕಾರದ ಬಾತ್ಮೀದಾರ ಮಿರ್ವಾಯಿಜ್ ಸ್ತಾನಿಕ್ಜಾಯಿ ಅವರು, ‘ಶತ್ರು ನಿಯಂತ್ರಣ ಸಾಧಿಸಿದ್ದಾನೆ,’ ಎಂದು ಹೇಳಿದ್ದಾರೆ.

ಸಂಧಾನಕ್ಕಿಳಿದ ಆಫ್ಘಾನಿಸ್ತಾನ ಸರ್ಕಾರ; ಯುದ್ಧ ನಿಲ್ಲಿಸಿದರೆ ತಾಲಿಬಾನ್​ನೊಂದಿಗೆ ಅಧಿಕಾರ ಹಂಚಿಕೊಳ್ಳುವ ಪ್ರಸ್ತಾಪ
ತಾಲಿಬಾನ್ ಉಗ್ರರು (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on: Aug 12, 2021 | 10:15 PM

Share

ದೋಹಾ: ಅಫ್ಘಾನಿಸ್ತಾನದಲ್ಲಿ ಪ್ರಸ್ತುತವಾಗಿ ಜಾರಿಯಲ್ಲಿರುವ ಹಿಂಸೆ ಮತ್ತು ಯುದ್ಧವನ್ನು ನಿಲ್ಲಿಸಿದರೆ ಅಧಿಕಾರವನ್ನು ಹಂಚಿಕೊಳ್ಳುವ ಅವಕಾಶ ನೀಡುವುದಾಗಿ ಸರ್ಕಾರದ ಪರ ಸಂಧಾನದ ಮಾತುಕತೆ ನಡೆಸಲು ಕತಾರ್ಗೆ ಆಗಮಿಸಿದ್ದ ಪ್ರತಿನಿಧಿಗಳು ಹೇಳಿದ್ದಾರೆ ಎಂದು ಸರ್ಕಾರದ ಮೂಲಗಳನ್ನು ಆಧರಿಸಿ ಆಂಗ್ಲ ಸುದ್ದಿ ಸಂಸ್ಥೆಯೊಂದು ಗುರುವಾರ ವರದಿ ಮಾಡಿದೆ.

‘ಹೌದು, ಅಫ್ಘಾನಿಸ್ತಾನದ ಸರ್ಕಾರವು ಕತಾರ್ಗೆ ಮಧ್ಯವರ್ತಿಯ ಮೂಲಕ ಒಂದು ಪ್ರಸ್ತಾಪವನ್ನು ಕಳಿಸಿದೆ. ತಾಲಿಬಾನ್ ದೇಶದಲ್ಲಿ ಹಿಂಸೆ ಮತ್ತು ಸಂಘರ್ಷವನ್ನು ನಿಲ್ಲಿಸಿದರೆ ಅಧಿಕಾರದಲ್ಲಿ ಅವರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳುವ ಪ್ರಸ್ತಾವನೆ ಮಾಡಲಾಗಿದೆ,’ ಎಂದು ಮೂಲಗಳು ತಿಳಿಸಿವೆ.

ಗುರುವಾರದಂದು ತಾಲಿಬಾನ್ ಅಫ್ಘಾನಿಸ್ತಾನದ ವ್ಯೂಹಾತ್ಮಕ ನಗರ ಘಜನಿಯನ್ನು ವಶಪಡಿಸಿಕೊಂಡಿದೆ. ಸದರಿ ನಗರವು ರಾಜಧಾನಿ ಕಾಬೂಲ್ನಿಂದ ಕೇವಲ 150 ಕಿಮೀ ದೂರದಲ್ಲಿದೆ. ಕಳೆದೊಂದು ವಾರದ ಅವಧಿಯಲ್ಲಿ ತಾಲಿಬಾನ್ ಹತ್ತು ಪ್ರಾಂತೀಯ ರಾಜಧಾನಿಗಳನ್ನು ವಶಪಡಿಸಿಕೊಂಡಿದೆಯಾದರೂ ಘಜನಿ ಪಟ್ಟಣವನ್ನು ಆಕ್ರಮಿಸಿಕೊಂಡಿರುವುದಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಆಫ್ಘನ್ ಸರ್ಕಾರದ ಆಂತರಿಕ ಸಚಿವಾಲಯವು ಘಜನಿ ತಾಲಿಬಾನಿಗಳ ವಶವಾಗಿರುವುದನ್ನು ಖಚಿತಪಡಿಸಿದೆ. ಈ ನಗರವು ಕಾಬೂಲ್-ಕಂದಾಹಾರ್ ನಡುವಿನ ಹೆದ್ದಾರಿಯಲ್ಲಿ ಸ್ಥಿತಗೊಂಡಿದೆ ಮತ್ತು ರಾಜಧಾನಿ ಹಾಗೂ ದಕ್ಷಿಣದ ಪ್ರಾಂತ್ಯಗಳ ನಡುವೆ ಪ್ರವೇಶದ್ವಾರದಂತಿದೆ.

ಮಾಧ್ಯಮದವರಿಗೆ ಕಳಿಸಿರುವ ಸಂದೇಶವೊಂದರಲ್ಲಿ ಸರ್ಕಾರದ ಬಾತ್ಮೀದಾರ ಮಿರ್ವಾಯಿಜ್ ಸ್ತಾನಿಕ್ಜಾಯಿ ಅವರು, ‘ಶತ್ರು ನಿಯಂತ್ರಣ ಸಾಧಿಸಿದ್ದಾನೆ,’ ಎಂದು ಹೇಳಿದ್ದಾರೆ. ಶತ್ರುಗಳನ್ನು ತಡೆಯುವ ಮತ್ತು ಹೋರಾಟ ಜಾರಿಯಲ್ಲಿದೆ ಅಂತಲೂ ಆವರು ಹೇಳಿದ್ದಾರೆ.

ಆಫ್ಘನ್ ಸರ್ಕಾರವು ಈಗ ಉತ್ತರ ಮತ್ತು ಪಶ್ಚಿಮ ಅಫ್ಘಾನಿಸ್ತಾನದ ಬಹುಭಾಗವನ್ನು ಪರಿಣಾಮಕಾರಿಯಾಗಿ ಕಳೆದುಕೊಂಡಿದೆ ಮತ್ತು ವಿವಾದಿತ ನಗರಗಳ ಚದುರಿದ ದ್ವೀಪಸಮೂಹವೂ ತಾಲಿಬಾನ್‌ ಪಾಲಾಗುವ ಅಪಾಯವನ್ನು ಎದುರಿಸುತ್ತಿದೆ.

ಎರಡು ದಶಕಗಳ ನಂತರ ಅಮೇರಿಕ ನೇತೃತ್ವದ ಸೇನೆಗಳ ಕೊನೆಯ ತುಕುಡಿ ಅಫ್ಘಾನಿಸ್ತಾನವನ್ನು ಮೇ ತಿಂಗಳಲ್ಲಿ ತೆರವುಗೊಳಿಸಿದ ನಂತರ ಅಫ್ಘಾನಿಸ್ತಾನ ಮತ್ತು ತಾಲಿಬಾನಿಗಳ ಉಗ್ರ ಹೋರಾಟ ನಡೆಯುತ್ತಿದೆ.

ತಾಲಿಬಾನಿಗಳು ಘಜಿನಿಯನ್ನು ಆಕ್ರಮಿಸಿಕೊಂಡಿರುವುದು ಈಗಾಗಲೇ ಅವಿರತವಾಗಿ ಯುದ್ಧದಲ್ಲಿ ತೊಡಗಿಸಿಕೊಂಡಿರುವ ಅಫ್ಘಾನಿಸ್ತಾನದ ವಾಯುದಳದ ಮೇಲೆ ಹೆಚ್ಚಿನ ಹೇರಲಿದೆ. ತಾಲಿಬಾನಿಗಳು ಸಂಪರ್ಕ ರಸ್ತೆಗಳನ್ನು ನಾಶಮಾಡಿರುವುದರಿಂದ ವಾಯುದಳದ ವಿಮಾನಗಳೇ ಮಿಲಿಟರಿಯವರನ್ನು ಒಂದು ಪ್ರದೇಶದಿಂದ ಮತ್ತೊಂದಕ್ಕೆ ಹೊತ್ತೊಯ್ಯುತ್ತಿವೆ.

ತಾಲಿಬಾನ್ ಪರವಿರುವ ಸಾಮಾಜಿಕ ಜಾಲತಾಣಗಳಲ್ಲೂ ಅಫ್ಘಾನಿಸ್ತಾನದ ಸೇನೆ ಸೋತು ಸುಣ್ಣವಾಗುತ್ತಿರುವ ಪೋಟೋಗಳು ರಾರಾಜಿಸುತ್ತಿವೆ. ಆಫ್ಘನ್ ಪ್ರಾಂತ್ಯಗಳ ಮಿಲಿಟರಿ ನೆಲೆಗಳಲ್ಲಿ ತಾಲಿಬಾನಿಗಳು ಶಸ್ತ್ರಸಜ್ಜಿತರಾಗಿ ರಣಕೇಕೆ ಹಾಕುತ್ತಿರುವ ವಿಡಿಯೋಗಳನ್ನು ಸಹ ಪೋಸ್ಟ್ ಮಾಡಲಾಗುತ್ತಿದೆ.

ಇದನ್ನೂ ಓದಿ:  ಅಪ್ಘಾನಿಸ್ತಾನದಲ್ಲಿ ಯುದ್ಧ ಸನ್ನಿವೇಶ: ಸೈನ್ಯ ಹಿಂಪಡೆಯುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದ ಜೋ ಬೈಡನ್​

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ