ಸಂಧಾನಕ್ಕಿಳಿದ ಆಫ್ಘಾನಿಸ್ತಾನ ಸರ್ಕಾರ; ಯುದ್ಧ ನಿಲ್ಲಿಸಿದರೆ ತಾಲಿಬಾನ್​ನೊಂದಿಗೆ ಅಧಿಕಾರ ಹಂಚಿಕೊಳ್ಳುವ ಪ್ರಸ್ತಾಪ

ಮಾಧ್ಯಮದವರಿಗೆ ಕಳಿಸಿರುವ ಸಂದೇಶವೊಂದರಲ್ಲಿ ಸರ್ಕಾರದ ಬಾತ್ಮೀದಾರ ಮಿರ್ವಾಯಿಜ್ ಸ್ತಾನಿಕ್ಜಾಯಿ ಅವರು, ‘ಶತ್ರು ನಿಯಂತ್ರಣ ಸಾಧಿಸಿದ್ದಾನೆ,’ ಎಂದು ಹೇಳಿದ್ದಾರೆ.

ಸಂಧಾನಕ್ಕಿಳಿದ ಆಫ್ಘಾನಿಸ್ತಾನ ಸರ್ಕಾರ; ಯುದ್ಧ ನಿಲ್ಲಿಸಿದರೆ ತಾಲಿಬಾನ್​ನೊಂದಿಗೆ ಅಧಿಕಾರ ಹಂಚಿಕೊಳ್ಳುವ ಪ್ರಸ್ತಾಪ
ತಾಲಿಬಾನ್ ಉಗ್ರರು (ಪ್ರಾತಿನಿಧಿಕ ಚಿತ್ರ)
Follow us
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 12, 2021 | 10:15 PM

ದೋಹಾ: ಅಫ್ಘಾನಿಸ್ತಾನದಲ್ಲಿ ಪ್ರಸ್ತುತವಾಗಿ ಜಾರಿಯಲ್ಲಿರುವ ಹಿಂಸೆ ಮತ್ತು ಯುದ್ಧವನ್ನು ನಿಲ್ಲಿಸಿದರೆ ಅಧಿಕಾರವನ್ನು ಹಂಚಿಕೊಳ್ಳುವ ಅವಕಾಶ ನೀಡುವುದಾಗಿ ಸರ್ಕಾರದ ಪರ ಸಂಧಾನದ ಮಾತುಕತೆ ನಡೆಸಲು ಕತಾರ್ಗೆ ಆಗಮಿಸಿದ್ದ ಪ್ರತಿನಿಧಿಗಳು ಹೇಳಿದ್ದಾರೆ ಎಂದು ಸರ್ಕಾರದ ಮೂಲಗಳನ್ನು ಆಧರಿಸಿ ಆಂಗ್ಲ ಸುದ್ದಿ ಸಂಸ್ಥೆಯೊಂದು ಗುರುವಾರ ವರದಿ ಮಾಡಿದೆ.

‘ಹೌದು, ಅಫ್ಘಾನಿಸ್ತಾನದ ಸರ್ಕಾರವು ಕತಾರ್ಗೆ ಮಧ್ಯವರ್ತಿಯ ಮೂಲಕ ಒಂದು ಪ್ರಸ್ತಾಪವನ್ನು ಕಳಿಸಿದೆ. ತಾಲಿಬಾನ್ ದೇಶದಲ್ಲಿ ಹಿಂಸೆ ಮತ್ತು ಸಂಘರ್ಷವನ್ನು ನಿಲ್ಲಿಸಿದರೆ ಅಧಿಕಾರದಲ್ಲಿ ಅವರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳುವ ಪ್ರಸ್ತಾವನೆ ಮಾಡಲಾಗಿದೆ,’ ಎಂದು ಮೂಲಗಳು ತಿಳಿಸಿವೆ.

ಗುರುವಾರದಂದು ತಾಲಿಬಾನ್ ಅಫ್ಘಾನಿಸ್ತಾನದ ವ್ಯೂಹಾತ್ಮಕ ನಗರ ಘಜನಿಯನ್ನು ವಶಪಡಿಸಿಕೊಂಡಿದೆ. ಸದರಿ ನಗರವು ರಾಜಧಾನಿ ಕಾಬೂಲ್ನಿಂದ ಕೇವಲ 150 ಕಿಮೀ ದೂರದಲ್ಲಿದೆ. ಕಳೆದೊಂದು ವಾರದ ಅವಧಿಯಲ್ಲಿ ತಾಲಿಬಾನ್ ಹತ್ತು ಪ್ರಾಂತೀಯ ರಾಜಧಾನಿಗಳನ್ನು ವಶಪಡಿಸಿಕೊಂಡಿದೆಯಾದರೂ ಘಜನಿ ಪಟ್ಟಣವನ್ನು ಆಕ್ರಮಿಸಿಕೊಂಡಿರುವುದಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಆಫ್ಘನ್ ಸರ್ಕಾರದ ಆಂತರಿಕ ಸಚಿವಾಲಯವು ಘಜನಿ ತಾಲಿಬಾನಿಗಳ ವಶವಾಗಿರುವುದನ್ನು ಖಚಿತಪಡಿಸಿದೆ. ಈ ನಗರವು ಕಾಬೂಲ್-ಕಂದಾಹಾರ್ ನಡುವಿನ ಹೆದ್ದಾರಿಯಲ್ಲಿ ಸ್ಥಿತಗೊಂಡಿದೆ ಮತ್ತು ರಾಜಧಾನಿ ಹಾಗೂ ದಕ್ಷಿಣದ ಪ್ರಾಂತ್ಯಗಳ ನಡುವೆ ಪ್ರವೇಶದ್ವಾರದಂತಿದೆ.

ಮಾಧ್ಯಮದವರಿಗೆ ಕಳಿಸಿರುವ ಸಂದೇಶವೊಂದರಲ್ಲಿ ಸರ್ಕಾರದ ಬಾತ್ಮೀದಾರ ಮಿರ್ವಾಯಿಜ್ ಸ್ತಾನಿಕ್ಜಾಯಿ ಅವರು, ‘ಶತ್ರು ನಿಯಂತ್ರಣ ಸಾಧಿಸಿದ್ದಾನೆ,’ ಎಂದು ಹೇಳಿದ್ದಾರೆ. ಶತ್ರುಗಳನ್ನು ತಡೆಯುವ ಮತ್ತು ಹೋರಾಟ ಜಾರಿಯಲ್ಲಿದೆ ಅಂತಲೂ ಆವರು ಹೇಳಿದ್ದಾರೆ.

ಆಫ್ಘನ್ ಸರ್ಕಾರವು ಈಗ ಉತ್ತರ ಮತ್ತು ಪಶ್ಚಿಮ ಅಫ್ಘಾನಿಸ್ತಾನದ ಬಹುಭಾಗವನ್ನು ಪರಿಣಾಮಕಾರಿಯಾಗಿ ಕಳೆದುಕೊಂಡಿದೆ ಮತ್ತು ವಿವಾದಿತ ನಗರಗಳ ಚದುರಿದ ದ್ವೀಪಸಮೂಹವೂ ತಾಲಿಬಾನ್‌ ಪಾಲಾಗುವ ಅಪಾಯವನ್ನು ಎದುರಿಸುತ್ತಿದೆ.

ಎರಡು ದಶಕಗಳ ನಂತರ ಅಮೇರಿಕ ನೇತೃತ್ವದ ಸೇನೆಗಳ ಕೊನೆಯ ತುಕುಡಿ ಅಫ್ಘಾನಿಸ್ತಾನವನ್ನು ಮೇ ತಿಂಗಳಲ್ಲಿ ತೆರವುಗೊಳಿಸಿದ ನಂತರ ಅಫ್ಘಾನಿಸ್ತಾನ ಮತ್ತು ತಾಲಿಬಾನಿಗಳ ಉಗ್ರ ಹೋರಾಟ ನಡೆಯುತ್ತಿದೆ.

ತಾಲಿಬಾನಿಗಳು ಘಜಿನಿಯನ್ನು ಆಕ್ರಮಿಸಿಕೊಂಡಿರುವುದು ಈಗಾಗಲೇ ಅವಿರತವಾಗಿ ಯುದ್ಧದಲ್ಲಿ ತೊಡಗಿಸಿಕೊಂಡಿರುವ ಅಫ್ಘಾನಿಸ್ತಾನದ ವಾಯುದಳದ ಮೇಲೆ ಹೆಚ್ಚಿನ ಹೇರಲಿದೆ. ತಾಲಿಬಾನಿಗಳು ಸಂಪರ್ಕ ರಸ್ತೆಗಳನ್ನು ನಾಶಮಾಡಿರುವುದರಿಂದ ವಾಯುದಳದ ವಿಮಾನಗಳೇ ಮಿಲಿಟರಿಯವರನ್ನು ಒಂದು ಪ್ರದೇಶದಿಂದ ಮತ್ತೊಂದಕ್ಕೆ ಹೊತ್ತೊಯ್ಯುತ್ತಿವೆ.

ತಾಲಿಬಾನ್ ಪರವಿರುವ ಸಾಮಾಜಿಕ ಜಾಲತಾಣಗಳಲ್ಲೂ ಅಫ್ಘಾನಿಸ್ತಾನದ ಸೇನೆ ಸೋತು ಸುಣ್ಣವಾಗುತ್ತಿರುವ ಪೋಟೋಗಳು ರಾರಾಜಿಸುತ್ತಿವೆ. ಆಫ್ಘನ್ ಪ್ರಾಂತ್ಯಗಳ ಮಿಲಿಟರಿ ನೆಲೆಗಳಲ್ಲಿ ತಾಲಿಬಾನಿಗಳು ಶಸ್ತ್ರಸಜ್ಜಿತರಾಗಿ ರಣಕೇಕೆ ಹಾಕುತ್ತಿರುವ ವಿಡಿಯೋಗಳನ್ನು ಸಹ ಪೋಸ್ಟ್ ಮಾಡಲಾಗುತ್ತಿದೆ.

ಇದನ್ನೂ ಓದಿ:  ಅಪ್ಘಾನಿಸ್ತಾನದಲ್ಲಿ ಯುದ್ಧ ಸನ್ನಿವೇಶ: ಸೈನ್ಯ ಹಿಂಪಡೆಯುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದ ಜೋ ಬೈಡನ್​

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ