AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

80 ಮಕ್ಕಳು ಕಿಡ್ನ್ಯಾಪ್​ ಆಗಿ ತಿಂಗಳಾಯಿತು..ನಿಲ್ಲುತ್ತಿಲ್ಲ ಪಾಲಕರ ರೋಧನೆ; ಹಣಕ್ಕಾಗಿ ದುಷ್ಕರ್ಮಿಗಳ ಬೇಡಿಕೆ

Nigeria: ಇದೀಗ ಅಪಹರಣಗೊಂಡಿರುವ ಮಕ್ಕಳು ಕಡುನಾ ಜಿಲ್ಲೆಯ ಬೆಥೆಲ್​ ಬಾಪ್ಟಿಸ್ಟ್​ ಹೈಸ್ಕೂಲ್​ನವರಾಗಿದ್ದಾರೆ. ಕಳೆದ ಡಿಸೆಂಬರ್​ನಿಂದ ಒಂದಲ್ಲ ಒಂದು ಶಾಲೆಯ ಮಕ್ಕಳನ್ನು ಅಪಹರಿಸಿ, ಹಣದೋಚಲಾಗುತ್ತಿದೆ.

80 ಮಕ್ಕಳು ಕಿಡ್ನ್ಯಾಪ್​ ಆಗಿ ತಿಂಗಳಾಯಿತು..ನಿಲ್ಲುತ್ತಿಲ್ಲ ಪಾಲಕರ ರೋಧನೆ; ಹಣಕ್ಕಾಗಿ ದುಷ್ಕರ್ಮಿಗಳ ಬೇಡಿಕೆ
ಅಪಹರಣಗೊಂಡ ಮಕ್ಕಳ ಪಾಲಕರ ದುಃಖ
TV9 Web
| Updated By: Lakshmi Hegde|

Updated on: Aug 05, 2021 | 3:11 PM

Share

ನೈಜೀರಿಯಾದ ಉತ್ತರದಲ್ಲಿರುವ ವಸತಿ ಶಾಲೆಯೊಂದರಿಂದ ದುಷ್ಕರ್ಮಿಗಳು 80 ಮಕ್ಕಳನ್ನು ಅಪಹರಣ ಮಾಡಿ ಒಂದು ತಿಂಗಳೇ ಕಳೆಯಿತು. ಪಾಲಕರ ರೋಧನೆ ನೋಡಲಾಗುತ್ತಿಲ್ಲ. ಆದರೆ ಅಪಹರಣಕಾರರು ಅವರನ್ನಿನ್ನೂ ಬಿಟ್ಟಿಲ್ಲ. ಈಗ ಅಪಹರಣಾಕಾರರು ಮಕ್ಕಳನ್ನು ಬಿಡಬೇಕು ಎಂದರೆ ಹಣ ಬೇಕು ಎನ್ನುತ್ತಿದ್ದಾರೆ. ಪ್ರತಿ ಮಗುವಿಗೆ 1 ಮಿಲಿಯನ್​ ನೈರಾ (1.50 ಲಕ್ಷ ರೂ.ಗೂ ಅಧಿಕ)ಗಳನ್ನು ವಿಮೋಚನಾ ಮೊತ್ತವನ್ನಾಗಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಮಕ್ಕಳ ಬಿಡುಗಡೆಗಾಗಿ ಪಾದ್ರಿಯೊಬ್ಬರು ಮಧ್ಯಸ್ಥಿಕೆ ವಹಿಸಿದ್ದಾರೆ. ಅವರ ಮೂಲಕವೇ ಅಪಹರಣಕಾರರು ತಮ್ಮ ಬೇಡಿಕೆ ಮುಂದಿಟ್ಟಿದ್ದಾರೆ ಎಂದು ವರದಿಯಾಗಿದೆ.

ಇದೀಗ ಅಪಹರಣಗೊಂಡಿರುವ ಮಕ್ಕಳು ಕಡುನಾ ಜಿಲ್ಲೆಯ ಬೆಥೆಲ್​ ಬಾಪ್ಟಿಸ್ಟ್​ ಹೈಸ್ಕೂಲ್​ನವರಾಗಿದ್ದಾರೆ. ಕಳೆದ ಡಿಸೆಂಬರ್​ನಿಂದ ಒಂದಲ್ಲ ಒಂದು ಶಾಲೆಯ ಮಕ್ಕಳನ್ನು ಅಪಹರಿಸಿ, ಹಣದೋಚಲಾಗುತ್ತಿದೆ. ಇದೀಗ ಮಕ್ಕಳ ಅಪಹರಣ ನಡೆದ 10ನೇ ಶಾಲೆ ಇದಾಗಿದೆ. ಒಟ್ಟು 80 ವಿದ್ಯಾರ್ಥಿಗಳು ಅಪಹರಣ ಆಗಿದ್ದಾರೆ. ಪ್ರತಿ ವಿದ್ಯಾರ್ಥಿಗೆ 1 ಮಿಲಿಯನ್​ ನೈರಾಗಳಷ್ಟು ಹಣ ಬೇಕು ಎಂದು ದುಷ್ಕರ್ಮಿಗಳು ಕೇಳುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಶಾಲೆಯಿಂದ ಒಟ್ಟು 108 ವಿದ್ಯಾರ್ಥಿಗಳನ್ನು ಅಪಹರಣ ಮಾಡಲಾಗಿತ್ತು. ಕಿಡ್ನ್ಯಾಪ್​ ಮಾಡಿದ ಎರಡೇ ದಿನಕ್ಕೆ 28 ವಿದ್ಯಾರ್ಥಿಗಳನ್ನು ಅವರು ಬಿಟ್ಟರು. ಆದರೆ ಉಳಿದ 80 ಮಂದಿ ಅವರ ಬಳಿಯೇ ಇದ್ದಾರೆ ಎಂದು ಶಿಕ್ಷಣ ಸಂಸ್ಥೆಯ ಧರ್ಮಗುರು ರೆವರೆಂಡ್ ಇಟೆ ಜೋಸೆಫ್ ಹಯಾಬ್ ತಿಳಿಸಿದ್ದಾರೆ ಎಂದು ರಾಯಿಟರ್ಸ್​ ವರದಿ ಮಾಡಿದೆ.

ಉತ್ತರ ನೈಜೀರಿಯಾದಲ್ಲಿ ಈತ್ತೀಚೆಗೆ ಮಕ್ಕಳನ್ನು ಅಪಹರಣ ಮಾಡುವ ಕೃತ್ಯ ತುಂಬ ಹೆಚ್ಚಾಗುತ್ತಿದೆ. ಶಸ್ತ್ರಧಾರಿಗಳ ಗುಂಪು ಹೀಗೆ ಶಾಲೆಗಳಿಂದ ಮಕ್ಕಳನ್ನು ಅಪಹರಿಸಿ, ಹಣಕ್ಕಾಗಿ ಬೇಡಿಕೆ ಇಡುತ್ತಿದೆ. ಇದನ್ನು ಮೊದಲು ಪ್ರಾರಂಭಿಸಿದ್ದು ನೈಜೀರಿಯಾದ ಜಿಹಾದಿಗಳ ಗುಂಪು ಬೋಕೋ ಹರಾಮ್​. ಈಗೀಗ ಹಣಕ್ಕಾಗಿ ಕಿಡ್ನ್ಯಾಪ್​ ಮಾಡುವ ದರೋಡೆಕೋರರ ಗುಂಪು ಹಲವಾರು ಹುಟ್ಟುಕೊಂಡಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Arvind Bellad: ನಾಳೆ ಧಾರವಾಡ ಬಂದ್ ಇಲ್ಲ; ಶಾಸಕ ಅರವಿಂದ ಬೆಲ್ಲದಗೆ ಸಚಿವ ಸ್ಥಾನ ದೊರೆಯದ್ದಕ್ಕೆ ಬಂದ್ ಎಂದು ವೈರಲ್ ಆದದ್ದು ಸುಳ್ಳುಸುದ್ದಿ

80 schoolchildren Kidnapped In Nigeria Kidnappers Demand Money to release

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ