AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಮನೆಯನ್ನು ಸೂತಕದ ಮನೆಯನ್ನಾಗಿಸಿದ ಸಿಡಿಲು; ಸೆಕೆಂಡ್​ಗಳ ಅಂತರದಲ್ಲಿ 16 ಮಂದಿ ಸಾವು, ವರನಿಗೆ ಗಾಯ

Dhaka: ಇನ್ನೂ ಮದುವೆ ಕಾರ್ಯಕ್ರಮ ಶುರುವಾಗಿರಲಿಲ್ಲ. ಪಾರ್ಟಿ ನಡೆಯಲಿರುವ ಸ್ಥಳಕ್ಕೆ ವರ ಮತ್ತು ಅವನ ಕಡೆಯವರು ಒಂದಷ್ಟು ಜನ ಬೋಟ್​ನಲ್ಲಿ ಹೊರಟಿದ್ದರು. ಆಗ ಒಮ್ಮೆಲೇ ಗುಡುಗು ಶುರುವಾದ ಕಾರಣ ಶಿಬ್​ಗಂಜ್​ ಪಟ್ಟಣದ ಸಮೀಪ ಬೋಟ್​ನಿಂದ ಇಳಿದರು.

ಮದುವೆಮನೆಯನ್ನು ಸೂತಕದ ಮನೆಯನ್ನಾಗಿಸಿದ ಸಿಡಿಲು; ಸೆಕೆಂಡ್​ಗಳ ಅಂತರದಲ್ಲಿ 16 ಮಂದಿ ಸಾವು, ವರನಿಗೆ ಗಾಯ
ಪ್ರಾತಿನಿಧಿಕ ಚಿತ್ರ
TV9 Web
| Updated By: Lakshmi Hegde|

Updated on:Aug 04, 2021 | 5:03 PM

Share

ಸಂಭ್ರಮದಿಂದ ನಡೆಯುತ್ತಿದ್ದ ಮದುವೆಮನೆ, ಸಿಡಿಲು ಬಡಿದ (lightning Strike) ಪರಿಣಾಮ ಸೂತಕದ ಮನೆಯಂತಾಗಿದೆ. ದುರ್ಘಟನೆ ನಡೆದದ್ದು ಬಾಂಗ್ಲಾದೇಶ (Banglasesh)ದ ಢಾಕಾದಲ್ಲಿ. ಒಂದೇ ಸೆಕೆಂಡ್​ನಲ್ಲಿ ಮೂರ್ನಾಲ್ಕು ಬಾರಿ ಸಿಡಿಲು ಬಡಿದು, ಮದುವೆ ಮನೆಯಲ್ಲಿ ಇದ್ದ, 16 ಜನರು ಮೃತಪಟ್ಟಿದ್ದಾರೆ. ವರ ಗಂಭೀರವಾಗಿ ಗಾಯಗೊಂಡಿದ್ದು, ವಧು ಪಾರಾಗಿದ್ದಾಳೆ.

ಇನ್ನೂ ಮದುವೆ ಕಾರ್ಯಕ್ರಮ ಶುರುವಾಗಿರಲಿಲ್ಲ. ಪಾರ್ಟಿ ನಡೆಯಲಿರುವ ಸ್ಥಳಕ್ಕೆ ವರ ಮತ್ತು ಅವನ ಕಡೆಯವರು ಒಂದಷ್ಟು ಜನ ಬೋಟ್​ನಲ್ಲಿ ಹೊರಟಿದ್ದರು. ಆಗ ಒಮ್ಮೆಲೇ ಗುಡುಗು ಶುರುವಾದ ಕಾರಣ ಶಿಬ್​ಗಂಜ್​ ಪಟ್ಟಣದ ಸಮೀಪ, ಆಶ್ರಯ ಪಡೆಯಲು ಬೋಟ್​ನಿಂದ ಇಳಿದರು. ಆದರೆ ಅಷ್ಟರಲ್ಲಿ ಸಿಡಿಲು ಬಡಿದ 16 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆಡಳಿತ ಮಾಹಿತಿ ನೀಡಿದೆ. ಈ ವೇಳೆ ವಧು ಅಲ್ಲಿ ಇಲ್ಲದ ಕಾರಣ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮಾನ್ಸೂನ್​ ಮಾರುತಗಳ ಆರ್ಭಟಕ್ಕೆ ಬಾಂಗ್ಲಾದೇಶ ತತ್ತರಿಸುತ್ತಿದೆ. ಆಗ್ನೇಯ ಜಿಲ್ಲೆಯಾದ ಕಾಕ್ಸ್ ಬಜಾರ್​​ನಲ್ಲಿ ಒಂದು ವಾರದಿಂದಲೂ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ತತ್ಪರಿಣಾಮ ಸುಮಾರು 20 ಜನರ ಜೀವ ಹೋಗಿದೆ. ಅದರಲ್ಲಿ ಆರು ಮಂದಿ ರೊಹಿಂಗ್ಯಾ ನಿರಾಶ್ರಿತರು ಎಂದೂ ಹೇಳಲಾಗಿದೆ.

ಇದನ್ನೂ ಓದಿ: ಬಿ.ವೈ.ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲವೆಂದು ಕೈ ಕೊಯ್ದುಕೊಂಡ ಅಭಿಮಾನಿ..

ಅಟ್ಲೀ-ಶಾರುಖ್​ ಖಾನ್​ ಸಿನಿಮಾದ ಬಗ್ಗೆ ಹೊಸ​ ಅಪ್​ಡೇಟ್​; ಆಗಸ್ಟ್ 15ಕ್ಕೆ ಅಭಿಮಾನಿಗಳಿಗೆ ಸಿಗುತ್ತಿದೆ ಸರ್​ಪ್ರೈಸ್

Published On - 4:51 pm, Wed, 4 August 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ