AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಮನೆಯನ್ನು ಸೂತಕದ ಮನೆಯನ್ನಾಗಿಸಿದ ಸಿಡಿಲು; ಸೆಕೆಂಡ್​ಗಳ ಅಂತರದಲ್ಲಿ 16 ಮಂದಿ ಸಾವು, ವರನಿಗೆ ಗಾಯ

Dhaka: ಇನ್ನೂ ಮದುವೆ ಕಾರ್ಯಕ್ರಮ ಶುರುವಾಗಿರಲಿಲ್ಲ. ಪಾರ್ಟಿ ನಡೆಯಲಿರುವ ಸ್ಥಳಕ್ಕೆ ವರ ಮತ್ತು ಅವನ ಕಡೆಯವರು ಒಂದಷ್ಟು ಜನ ಬೋಟ್​ನಲ್ಲಿ ಹೊರಟಿದ್ದರು. ಆಗ ಒಮ್ಮೆಲೇ ಗುಡುಗು ಶುರುವಾದ ಕಾರಣ ಶಿಬ್​ಗಂಜ್​ ಪಟ್ಟಣದ ಸಮೀಪ ಬೋಟ್​ನಿಂದ ಇಳಿದರು.

ಮದುವೆಮನೆಯನ್ನು ಸೂತಕದ ಮನೆಯನ್ನಾಗಿಸಿದ ಸಿಡಿಲು; ಸೆಕೆಂಡ್​ಗಳ ಅಂತರದಲ್ಲಿ 16 ಮಂದಿ ಸಾವು, ವರನಿಗೆ ಗಾಯ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Aug 04, 2021 | 5:03 PM

Share

ಸಂಭ್ರಮದಿಂದ ನಡೆಯುತ್ತಿದ್ದ ಮದುವೆಮನೆ, ಸಿಡಿಲು ಬಡಿದ (lightning Strike) ಪರಿಣಾಮ ಸೂತಕದ ಮನೆಯಂತಾಗಿದೆ. ದುರ್ಘಟನೆ ನಡೆದದ್ದು ಬಾಂಗ್ಲಾದೇಶ (Banglasesh)ದ ಢಾಕಾದಲ್ಲಿ. ಒಂದೇ ಸೆಕೆಂಡ್​ನಲ್ಲಿ ಮೂರ್ನಾಲ್ಕು ಬಾರಿ ಸಿಡಿಲು ಬಡಿದು, ಮದುವೆ ಮನೆಯಲ್ಲಿ ಇದ್ದ, 16 ಜನರು ಮೃತಪಟ್ಟಿದ್ದಾರೆ. ವರ ಗಂಭೀರವಾಗಿ ಗಾಯಗೊಂಡಿದ್ದು, ವಧು ಪಾರಾಗಿದ್ದಾಳೆ.

ಇನ್ನೂ ಮದುವೆ ಕಾರ್ಯಕ್ರಮ ಶುರುವಾಗಿರಲಿಲ್ಲ. ಪಾರ್ಟಿ ನಡೆಯಲಿರುವ ಸ್ಥಳಕ್ಕೆ ವರ ಮತ್ತು ಅವನ ಕಡೆಯವರು ಒಂದಷ್ಟು ಜನ ಬೋಟ್​ನಲ್ಲಿ ಹೊರಟಿದ್ದರು. ಆಗ ಒಮ್ಮೆಲೇ ಗುಡುಗು ಶುರುವಾದ ಕಾರಣ ಶಿಬ್​ಗಂಜ್​ ಪಟ್ಟಣದ ಸಮೀಪ, ಆಶ್ರಯ ಪಡೆಯಲು ಬೋಟ್​ನಿಂದ ಇಳಿದರು. ಆದರೆ ಅಷ್ಟರಲ್ಲಿ ಸಿಡಿಲು ಬಡಿದ 16 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆಡಳಿತ ಮಾಹಿತಿ ನೀಡಿದೆ. ಈ ವೇಳೆ ವಧು ಅಲ್ಲಿ ಇಲ್ಲದ ಕಾರಣ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮಾನ್ಸೂನ್​ ಮಾರುತಗಳ ಆರ್ಭಟಕ್ಕೆ ಬಾಂಗ್ಲಾದೇಶ ತತ್ತರಿಸುತ್ತಿದೆ. ಆಗ್ನೇಯ ಜಿಲ್ಲೆಯಾದ ಕಾಕ್ಸ್ ಬಜಾರ್​​ನಲ್ಲಿ ಒಂದು ವಾರದಿಂದಲೂ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ತತ್ಪರಿಣಾಮ ಸುಮಾರು 20 ಜನರ ಜೀವ ಹೋಗಿದೆ. ಅದರಲ್ಲಿ ಆರು ಮಂದಿ ರೊಹಿಂಗ್ಯಾ ನಿರಾಶ್ರಿತರು ಎಂದೂ ಹೇಳಲಾಗಿದೆ.

ಇದನ್ನೂ ಓದಿ: ಬಿ.ವೈ.ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲವೆಂದು ಕೈ ಕೊಯ್ದುಕೊಂಡ ಅಭಿಮಾನಿ..

ಅಟ್ಲೀ-ಶಾರುಖ್​ ಖಾನ್​ ಸಿನಿಮಾದ ಬಗ್ಗೆ ಹೊಸ​ ಅಪ್​ಡೇಟ್​; ಆಗಸ್ಟ್ 15ಕ್ಕೆ ಅಭಿಮಾನಿಗಳಿಗೆ ಸಿಗುತ್ತಿದೆ ಸರ್​ಪ್ರೈಸ್

Published On - 4:51 pm, Wed, 4 August 21

Follow Us
Web contact
Web contact

TV9 Kannada

Read More
ಬೆಂಗಳೂರು ಅಂತಾರಾಷ್ಟ್ರೀಯ ಸ್ಟೇಡಿಯಂ ಗುದ್ದಲಿ ಪೂಜೆಗೆ ಕ್ರಿಕೆಟ್ ದಿಗ್ಗಜರು
ಬೆಂಗಳೂರು ಅಂತಾರಾಷ್ಟ್ರೀಯ ಸ್ಟೇಡಿಯಂ ಗುದ್ದಲಿ ಪೂಜೆಗೆ ಕ್ರಿಕೆಟ್ ದಿಗ್ಗಜರು
ಹೈದರಾಬಾದ್​ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ಹೈದರಾಬಾದ್​ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ಬೀದರ್​ನಲ್ಲಿ ಬಿರುಗಾಳಿ ಮಳೆ ಆರ್ಭಟಕ್ಕೆ ಒಂದು ಎಕರೆ ಪಪ್ಪಾಯಿ ಬೆಳೆ ನಾಶ
ಬೀದರ್​ನಲ್ಲಿ ಬಿರುಗಾಳಿ ಮಳೆ ಆರ್ಭಟಕ್ಕೆ ಒಂದು ಎಕರೆ ಪಪ್ಪಾಯಿ ಬೆಳೆ ನಾಶ