AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಗಾನಿಸ್ತಾನ ರಕ್ಷಣಾ ಸಚಿವರ ನಿವಾಸದ ಸಮೀಪ ಸರಣಿ ಬಾಂಬ್ ಸ್ಫೋಟ: ಭಾರೀ ಅನಾಹುತದ ಸಾಧ್ಯತೆ

ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್ ಹೊರವಲಯದಲ್ಲಿರುವ ರಕ್ಷಣಾ ಸಚಿವರ ನಿವಾಸದ ಸಮೀಪವೇ ಮಂಗಳವಾರ ರಾತ್ರಿ ಪ್ರಬಲ ಸರಣಿ ಬಾಂಬ್​ಗಳು ಸ್ಫೋಟಿಸಿದ್ದು ವ್ಯಾಪಕ ಅನಾಹುತವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಅಫ್ಗಾನಿಸ್ತಾನ ರಕ್ಷಣಾ ಸಚಿವರ ನಿವಾಸದ ಸಮೀಪ ಸರಣಿ ಬಾಂಬ್ ಸ್ಫೋಟ: ಭಾರೀ ಅನಾಹುತದ ಸಾಧ್ಯತೆ
ಕಾಬೂಲ್​ನಲ್ಲಿ ಬಾಂಬ್ ಸ್ಫೋಟ (ಸಂಗ್ರಹ ಚಿತ್ರ)
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Aug 03, 2021 | 11:27 PM

Share

ಕಾಬೂಲ್: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್ ಹೊರವಲಯದಲ್ಲಿರುವ ರಕ್ಷಣಾ ಸಚಿವರ ನಿವಾಸದ ಸಮೀಪವೇ ಮಂಗಳವಾರ ರಾತ್ರಿ ಪ್ರಬಲ ಸರಣಿ ಬಾಂಬ್​ಗಳು ಸ್ಫೋಟಿಸಿದ್ದು ವ್ಯಾಪಕ ಅನಾಹುತವಾಗಿರಬಹುದು ಎಂದು ಅಂದಾಜಿಸಲಾಗಿದೆ. ಸಾವುನೋವಿನ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಅಫ್ಗನ್ ಸರ್ಕಾರದ ಹಲವು ಹಿರಿಯ ಅಧಿಕಾರಿಗಳ ಮನೆಗಳೂ ಇದೇ ಪ್ರದೇಶದಲ್ಲಿವೆ.

ದಾಳಿಯಲ್ಲಿ ಮೃತಪಟ್ಟವರ ನಿಖರ ವಿವರಗಳು ಲಭ್ಯವಾಗಿಲ್ಲ. ಆದರೆ ಪ್ರಬಲ ಸ್ಫೋಟದ ನಂತರ ಸಣ್ಣ ಮಟ್ಟದ ಹಲವು ಸ್ಫೋಟಗಳು ಮತ್ತು ಗುಂಡಿನ ಹಾರಾಟದ ಸದ್ದು ಬಹುದೂರದವರೆಗೂ ಕೇಳಿಸುತ್ತಿತ್ತು. ಆಂತರಿಕ ಇಲಾಖೆಯ ಪ್ರಕಟಣೆಯ ಪ್ರಕಾರ ಪ್ರತಿಷ್ಠಿತ ಶೆರ್​ಪುರ್​ ಸಮೀಪ ಈ ಸ್ಫೋಟ ಸಂಭವಿಸಿದೆ. ರಾಜಧಾನಿಯ ಹಸಿರು ವಲಯ ಎನ್ನಲಾಗುವ ಈ ಪ್ರದೇಶದಲ್ಲಿ ಭದ್ರತೆ ಸದಾ ಇರುತ್ತದೆ. ಕಳೆದ ಕೆಲ ದಿನಗಳಿಂದ ರಾಜಧಾನಿಯಲ್ಲಿ ಸ್ಫೋಟದ ಸದ್ದು ಕೇಳಿಸಿರಲಿಲ್ಲ.

ಸ್ಫೋಟದ ಹೊಣೆಯನ್ನು ಸದ್ಯದ ಮಟ್ಟಿಗೆ ಯಾರೂ ಹೊತ್ತಿಲ್ಲ. ಆದರೆ ಅಫ್ಗಾನಿಸ್ತಾನದಲ್ಲಿ ತಾಲೀಬಾನಿಗಳ ಪ್ರಭಾವ ಮತ್ತು ಮೇಲುಗೈ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಲ್ಲಿನ ಸರ್ಕಾರದ ಮೇಲೆ ಒತ್ತಡ ಬೀಳುತ್ತಿದೆ. ದೇಶದ ದಕ್ಷಿಣ ಮತ್ತು ಪಶ್ಚಿಮ ಭಾಗದ ಹಲವು ಪ್ರಾಂತೀಯ ರಾಜಧಾನಿಗಳಿಗೆ ತಾಲೀಬಾನ್ ಮುತ್ತಿಗೆ ಹಾಕಿದೆ. ಈ ಸ್ಫೋಟದ ಮೂಲಕ ರಾಜಧಾನಿಯಲ್ಲಿಯೂ ದಾಳಿ ನಡೆಸುವ ಸಾಮರ್ಥ್ಯ ತನಗಿದೆ ಎಂದು ಬಿಂಬಿಸಿಕೊಳ್ಳಲು ತಾಲೀಬಾನ್ ಯತ್ನಿಸುತ್ತಿರಬಹುದು ಎಂದು ವಿಶ್ಲೇಷಿಸಲಾಗಿದೆ.

ತಾಲೀಬಾನ್​ ಜೊತೆಗೆ ಇತರ ಕೆಲ ಉಗ್ರಗಾಮಿ ಸಂಘಟನೆಗಳೂ ಅಫ್ಗಾನಿಸ್ತಾನದಲ್ಲಿ ಸಕ್ರಿಯವಾಗಿವೆ. ಕಾಬೂಲ್​ನಲ್ಲಿ ಈಚೆಗೆ ಆಗಿದ್ದ ಕೆಲ ಸ್ಫೋಟಗಳ ಹೊಣೆಗಾರಿಕೆಯನ್ನು ಇಸ್ಲಾಮಿಕ್ ಸ್ಟೇಟ್​ ಸಂಘಟನೆ ಹೊತ್ತುಕೊಂಡಿತ್ತು. ಆದರೆ ಸರ್ಕಾರ ಈ ಸ್ಫೋಟಗಳಿಗೆ ತಾಲೀಬಾನ್ ಕಾರಣ ಎಂದು ದೂರಿತ್ತು. ಪಾಕಿಸ್ತಾನದ ಕುಮ್ಮಕ್ಕಿನಿಂದ ತಾಲೀಬಾನ್ ಪ್ರಬಲವಾಗಿದ್ದು, ವ್ಯಾಪಕವಾಗಿ ದಾಳಿಗಳನ್ನು ಸಂಘಟಿಸುತ್ತಿದೆ ಎಂದು ಅಂತರರಾಷ್ಟ್ರೀಯ ವಿದ್ಯಮಾನಗಳ ಹಲವು ವಿಶ್ಲೇಷಕರು ಹೇಳಿದ್ದಾರೆ.

(Afghanistan Bomb Blast Kabul in witnessed many bomb blasts in posh Sherpur)

ಇದನ್ನೂ ಓದಿ: Tv9 Exclusive: ಅಫ್ಗಾನಿಸ್ತಾನದಿಂದ ಟಿವಿ9 ಗ್ರೌಂಡ್​ ರಿಪೋರ್ಟ್​: ಶಾಂಕ್ ವಾಯುನೆಲೆ ಸಮೀಪ ಅಫ್ಗನ್-ತಾಲೀಬಾನ್ ಸಂಘರ್ಷ

ಇದನ್ನೂ ಓದಿ: ತಾಲೀಬಾನ್​ ಜೊತೆಗೆ ಮಾತುಕತೆ ಮುರಿದುಬಿದ್ದರೆ ಭಾರತದ ಸೇನಾ ಸಹಾಯ ಕೋರುತ್ತೇವೆ: ಅಫ್ಗನ್ ಸರ್ಕಾರ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ