Tv9 Exclusive: ಅಫ್ಗಾನಿಸ್ತಾನದಿಂದ ಟಿವಿ9 ಗ್ರೌಂಡ್​ ರಿಪೋರ್ಟ್​: ಶಾಂಕ್ ವಾಯುನೆಲೆ ಸಮೀಪ ಅಫ್ಗನ್-ತಾಲೀಬಾನ್ ಸಂಘರ್ಷ

ತಾಲೀಬಾನ್ ಉಗ್ರರ ವಿರುದ್ಧ ಅಫ್ಗನ್ ಸೇನೆ ನಡೆಸುತ್ತಿರುವ ಕಾರ್ಯಾಚರಣೆ ಕುರಿತು ಟಿವಿ9 ಭಾರತ್​ವರ್ಷ್ ಸುದ್ದಿವಾಹಿನಿಯ​ ಪ್ರತಿನಿಧಿ ಸುಮಿತ್ ಚೌಧರಿ ವರದಿ ಮಾಡಿದ್ದಾರೆ. ಶಾಂಕ್ ವಾಯುನೆಲೆಯ ಸಮೀಪ ನಡೆಯುತ್ತಿರುವ ಕಾರ್ಯಾಚರಣೆಯ ಮಾಹಿತಿಯನ್ನು ಅವರು ನೀಡಿದ್ದಾರೆ.

Tv9 Exclusive: ಅಫ್ಗಾನಿಸ್ತಾನದಿಂದ ಟಿವಿ9 ಗ್ರೌಂಡ್​ ರಿಪೋರ್ಟ್​: ಶಾಂಕ್ ವಾಯುನೆಲೆ ಸಮೀಪ ಅಫ್ಗನ್-ತಾಲೀಬಾನ್ ಸಂಘರ್ಷ
ಅಫ್ಗಾನಿಸ್ತಾನದ ಗುಪ್ತ ಸೆರೆಮೆಯೊಂದರಲ್ಲಿ ತಾಲೀಬಾನ್ ಉಗ್ರರನ್ನು ಮಾತನಾಡಿಸುತ್ತಿರುವ ಟಿವಿ9 ಭಾರತ್​ವರ್ಷ್​ ವರದಿಗಾರ ಸುಮಿತ್ ಚೌಧರಿ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 02, 2021 | 10:41 PM

ದೆಹಲಿ: ಅಫ್ಗಾನಿಸ್ತಾನದ ಶಾಂಕ್ ವಾಯುನೆಲೆ ಸಮೀಪ ತಾಲೀಬಾನ್ ಮತ್ತು ಅಫ್ಗನ್ ಸೇನೆಯ ನಡುವೆ ಸಂಘರ್ಷ ತೀವ್ರಗೊಳ್ಳುತ್ತಿದೆ. ತಾಲೀಬಾನ್ ಉಗ್ರರ ವಿರುದ್ಧ ಅಫ್ಗನ್ ಸೇನೆ ನಡೆಸುತ್ತಿರುವ ಕಾರ್ಯಾಚರಣೆ ಕುರಿತು ಟಿವಿ9 ಭಾರತ್​ವರ್ಷ್ ಸುದ್ದಿವಾಹಿನಿಯ​ ಪ್ರತಿನಿಧಿ ಸುಮಿತ್ ಚೌಧರಿ ವರದಿ ಮಾಡಿದ್ದಾರೆ. ಶಾಂಕ್ ವಾಯುನೆಲೆಯ ಸಮೀಪ ನಡೆಯುತ್ತಿರುವ ಕಾರ್ಯಾಚರಣೆಯ ಮಾಹಿತಿಯನ್ನು ಅವರು ನೀಡಿದ್ದಾರೆ.

ಶಾಂಕ್ ವಾಯುನೆಲೆಯ ಸಮೀಪ ಅಫ್ಗನ್ ಸೇನೆ ಮತ್ತು ತಾಲೀಬಾನ್ ಉಗ್ರರ ನಡುವೆ ಯುದ್ಧ ನಡೆಯುತ್ತಿತ್ತು. ತಾಲೀಬಾನಿಗಳನ್ನು ಸೇನಾ ಸಿಬ್ಬಂದಿ ಬಂಧಿಸಿದರು. ಇವರು ತಾಲೀಬಾನ್ ಉಗ್ರರೋ ಅಥವಾ ಪಾಕಿಸ್ತಾನದ ಮಿಲಿಟರಿಗೆ ಸೇರಿದವರೋ ಎಂಬ ಬಗ್ಗೆ ವಿಚಾರಣೆ ನಡೆಸಲಾಯಿತು. ಬಂಧಿತರ ಕೈಕಟ್ಟಿ ಹಾಕಲಾಗಿದ್ದು, ಸೆರೆಮನೆಗೆ ಕರೆದೊಯ್ಯಲಾಯಿತು.

ಪಾಕಿಸ್ತಾನದ ಗಡಿಯಲ್ಲಿರುವ ಅಫ್ಗಾನಿಸ್ತಾನದ ಶಾಂಕ್ ವಾಯುನೆಲೆಯಲ್ಲಿ ಈ ಮೊದಲು ಅಮೆರಿಕ ಸೇನಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. 8000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಅಲ್ಲಿದ್ದರು. ಡ್ರೋಣ್ ಸೇರಿದಂತೆ ಹತ್ತಾರು ಬಗೆಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಈ ನೆಲೆಯಲ್ಲಿ ಶೇಖರಿಸಿಡಲಾಗಿತ್ತು. ಅಮೆರಿಕ ಸೇನಾಪಡೆಗಳು ಸ್ವದೇಶಕ್ಕೆ ಮರಳಿದ ನಂತರ ಈ ನೆಲೆಯಲ್ಲೀಗ ಅಫ್ಗನ್ ಸೇನಾಪಡೆಗಳು ನೆಲೆ ನಿಂತಿವೆ.

ಅಫ್ಗನ್ ಸೈನಿಕರಿಂದ ವಾಯುದಾಳಿ; 254 ಉಗ್ರರ ಹತ್ಯೆ ಅಫ್ಗಾನಿಸ್ತಾನದ ಕಂದಹಾರ್ ವಿಮಾನ ನಿಲ್ದಾಣದ ಮೇಲೆ ತಾಲಿಬಾನ್​ ಉಗ್ರರು ರಾಕೆಟ್ ದಾಳಿ ಬೆನ್ನಲ್ಲೇ ಅಫ್ಗನ್ ರಕ್ಷಣಾ ಪಡೆಗಳು ತಾಲೀಬಾನ್​ ಉಗ್ರರ ನೆಲೆಗಳ ಮೇಲೆ ವಾಯುದಾಳಿ ನಡೆಸಿವೆ. ಉಗ್ರರ ಒಟ್ಟು 13 ವಿವಿಧ ನೆಲೆಗಳ ಮೇಲೆ ನಡೆದ ವಾಯುದಾಳಿಯಲ್ಲಿ 254 ಉಗ್ರರು ಹತರಾಗಿದ್ದು, 97 ಮಂದಿ ಗಾಯಗೊಂಡಿದ್ದಾರೆ.

ಅಮೆರಿಕ ಸೈನಿಕರು ಅಫ್ಗಾನಿಸ್ತಾನದಿಂದ ಹಿಂದೆ ಸರಿದ ನಂತರ ತಾಲೀಬಾನ್​ ಉಗ್ರರು ಮತ್ತು ಅಫ್ಗನ್ ಭದ್ರತಾ ಪಡೆಗಳ ನಡುವಣ ಸಂಘರ್ಷ ಹೆಚ್ಚಾಗಿದೆ.

(Ground Report From Afghanistan Taliban Afghan Army Fight near Shank Air Base)

ಇದನ್ನೂ ಓದಿ: ಅಫ್ಗನ್ ಅಶಾಂತಿ: ತಾಲೀಬಾನ್ ವಶಕ್ಕೆ ಕಂದಹಾರ್ ಜಿಲ್ಲೆ, ತಜಕಿಸ್ತಾನಕ್ಕೆ ಓಡಿಹೋದ ಅಫ್ಗಾನಿಸ್ತಾನದ ಸೇನಾಪಡೆ

ಇದನ್ನೂ ಓದಿ: ತಾಲಿಬಾನ್ ಹೊಸ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಿದ್ದಂತೆ ರಾಜತಾಂತ್ರಿಕ, ಭದ್ರತಾ ಸಿಬ್ಬಂದಿಯನ್ನು ಕಂದಹಾರ್‌ನಿಂದ ಸ್ಥಳಾಂತರಿಸಿದ ಭಾರತ

Published On - 10:37 pm, Mon, 2 August 21

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ