AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದಿಬೀದಿ ಅಲೆಯುತ್ತಿದ್ದ ಹೆಣ್ಣು ದೆವ್ವಕ್ಕೆ ಗುಂಡು ಹೊಡೆದು ಕೊಂದ ವ್ಯಕ್ತಿ !; ತಲೆ ಕೆಡಿಸಿಕೊಂಡ ಪೊಲೀಸರು

ಈ ಘಟನೆ ನಡೆದದ್ದು ಅಕ್ಟೋಬರ್​ 15ರಂದು. ಆದರೆ ತಡವಾಗಿ ಬೆಳಕಿಗೆ ಬಂದಿದೆ. ಅಂದು ಕೂಡ ಯುವತಿ ಬಿಳಿಬಣ್ಣದ ನಿಲುವಂಗಿ ಧರಿಸಿ, ಭಯಾನಕವಾಗಿ ಮುಖಕ್ಕೆಲ್ಲ ಬಣ್ಣಬಳಿದುಕೊಂಡು ಕೂಗುತ್ತ ಓಡಾಡುತ್ತಿದ್ದಳು.

ಬೀದಿಬೀದಿ ಅಲೆಯುತ್ತಿದ್ದ ಹೆಣ್ಣು ದೆವ್ವಕ್ಕೆ ಗುಂಡು ಹೊಡೆದು ಕೊಂದ ವ್ಯಕ್ತಿ !; ತಲೆ ಕೆಡಿಸಿಕೊಂಡ ಪೊಲೀಸರು
ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on:Oct 23, 2021 | 1:04 PM

Share

ಜನರನ್ನು ಹೆದರಿಸಲು ದೆವ್ವದಂತೆ ವೇಷ ಹಾಕಿಕೊಂಡು, ಖಾಲಿ ರಸ್ತೆಯಲ್ಲಿ ತಿರುಗುತ್ತಿದ್ದ ಯುವತಿಯೊಬ್ಬಳು ವ್ಯಕ್ತಿಯ ಗುಂಡೇಟಿಗೆ ಬಲಿಯಾಗಿದ್ದಾಳೆ. ಈಕೆ 20-25ವರ್ಷದ ಯುವತಿಯಾಗಿದ್ದು, ಬಿಳಿಬಣ್ಣದ ಉಡುಪು ಧರಿಸಿ, ಭಯಾನಕವಾಗಿ ಮೇಕಪ್​ ಮಾಡಿಕೊಂಡು ಥೇಟ್​ ದೆವ್ವದಂತೆ ವೇಷ ಹಾಕಿಕೊಂಡು ಓಡಾಡುತ್ತಿದ್ದಳು. ಅನೇಕರು ಇವಳನ್ನು ನೋಡಿ ಭಯಬಿದ್ದಿದ್ದಾರೆ. ಆದರೆ ವ್ಯಕ್ತಿಯೊಬ್ಬರ ಗುಂಡು ಹಾರಿಸಿ ಅವಳನ್ನು ಹತ್ಯೆ ಮಾಡಿದ್ದಾನೆ.

ಮೆಕ್ಸಿಕೋದ ನೌಕ್‌ಚೋಟ್ ಡಿ ಜುವಾರೆಜ್‌ದಲ್ಲಿ ಘಟನೆ ನಡೆದಿದೆ. ಈ ಯುವತಿಯನ್ನು ಗುರುತಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಈಕೆ ಲ್ಯಾಟಿನ್​ ಅಮೆರಿಕಾದಲ್ಲಿ ಹೆಸರಾದ ದೆವ್ಚ ಲಾ ಲೊರೊನಾಳಂತೆ ಉಡುಪು ಧರಿಸುತ್ತಿದ್ದಳು.  (ಲಾ ಲೊರೊನಾ ಎಂದರೆ ಸತ್ತುಹೋದ ತನ್ನ ಮಕ್ಕಳನ್ನು ಅರಸುತ್ತ ಬೀದಿಯಲ್ಲಿ ಅಲೆದಾಡುವ ದೆವ್ವ ಎಂದು ಲ್ಯಾಟಿನ್​ ಅಮೆರಿಕ ಜನರ ನಂಬಿಕೆ). ಈ ಯುವತಿ ಕೂಟ ಅಕ್ಟೋಬರ್​ 15ರಂದು ಓ ನನ್ನ ಮಕ್ಕಳೇ ಎಂದು ಬೀದಿಯಲ್ಲಿ ತಿರುಗುತ್ತಿರುವುದನ್ನು ನೋಡಿದ್ದೇವೆ ಎಂದು ಸ್ಥಳೀಯರು ಹೇಳಿದ್ದಾರೆ.

ಈ ಘಟನೆ ನಡೆದದ್ದು ಅಕ್ಟೋಬರ್​ 15ರಂದು. ಆದರೆ ತಡವಾಗಿ ಬೆಳಕಿಗೆ ಬಂದಿದೆ. ಅಂದು ಕೂಡ ಯುವತಿ ಬಿಳಿಬಣ್ಣದ ನಿಲುವಂಗಿ ಧರಿಸಿ, ಭಯಾನಕವಾಗಿ ಮುಖಕ್ಕೆಲ್ಲ ಬಣ್ಣಬಳಿದುಕೊಂಡು ಕೂಗುತ್ತ ಓಡಾಡುತ್ತಿದ್ದಳು. ಅದನ್ನು ವ್ಯಕ್ತಿಯೊಬ್ಬ ಚಿತ್ರೀಕರಣ ಕೂಡ ಮಾಡಿದ್ದಾನೆ. ಆದರೆ ಅದಾದ ಕೆಲವೇ ಹೊತ್ತಲ್ಲಿ ಶೂಟರ್​ ಆಕೆಯನ್ನು ಗುಂಡುಹೊಡೆದು ಸಾಯಿಸಿದ್ದಾನೆ. ಕೃತ್ಯ ಎಸಗಿದ ಬಳಿಕ ಅವನು ಪರಾರಿಯಾಗಿದ್ದಾನೆ. ಸದ್ಯ ಆ ಯುವತಿ ಯಾರೆಂದೂ ಪೊಲೀಸರಿಗೆ ಗೊತ್ತಾಗುತ್ತಿಲ್ಲ ಮತ್ತು ಗುಂಡು ಹೊಡೆದವನು ಯಾರೆಂದೂ ತಿಳಿಯುತ್ತಿಲ್ಲ ಎನ್ನಲಾಗಿದ್ದು, ಯಾರನ್ನೂ ಇಲ್ಲಿಯವರೆಗೂ ಬಂಧಿಸಿಲ್ಲ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕುಖ್ಯಾತ ರೌಡಿ ಹೆಬ್ಬೆಟ್ ಮಂಜನ ಹೆಸರಿನಲ್ಲಿ ಬೆದರಿಕೆ! ಪೊಲೀಸರ ಬಲೆಗೆ ಬಿದ್ದ ಭಟ್ಕಳ ಮಹಿಳೆ

ಸಿದ್ದರಾಮಯ್ಯನ್ನ ತಾಲಿಬಾನ್ ಪ್ರದೇಶಕ್ಕೆ ಕಳಿಸಬೇಕು: ಕೇಂದ್ರಕ್ಕೆ ಮನವಿ ಮಾಡಿದ ಸಂಸದ ಶ್ರೀನಿವಾಸ್ ಪ್ರಸಾದ್

Published On - 1:02 pm, Sat, 23 October 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ