AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಲಿಬಾನ್​ ಉಗ್ರರಿಂದ ರಾಕೆಟ್​ ದಾಳಿ ನಡೆದ ಬೆನ್ನಲ್ಲೇ ಅಫ್ಘಾನಿಸ್ತಾನ ಭದ್ರತಾ ಪಡೆಯಿಂದ ವಾಯುದಾಳಿ; 254 ಉಗ್ರರ ಹತ್ಯೆ

ಶನಿವಾರ ರಾತ್ರಿ ದಕ್ಷಿಣ ಅಫ್ಘಾನ್​ನ ಕಂದಹಾರ್ ಏರ್​ಪೋರ್ಟ್ ಗುರಿಯಾಗಿಸಿ ಮೂರು ರಾಕೆಟ್​ ದಾಳಿ ನಡೆದಿತ್ತು. ಅದರಲ್ಲಿ ಎರಡು ರನ್ ವೇ ಮೇಲೆ ಅಪ್ಪಳಿಸಿತ್ತು.

ತಾಲಿಬಾನ್​ ಉಗ್ರರಿಂದ ರಾಕೆಟ್​ ದಾಳಿ ನಡೆದ ಬೆನ್ನಲ್ಲೇ ಅಫ್ಘಾನಿಸ್ತಾನ ಭದ್ರತಾ ಪಡೆಯಿಂದ ವಾಯುದಾಳಿ; 254 ಉಗ್ರರ ಹತ್ಯೆ
ಕಂದಹಾರ್ ಏರ್​ಪೋರ್ಟ್​
TV9 Web
| Edited By: |

Updated on: Aug 01, 2021 | 12:18 PM

Share

ಕಂದಹಾರ್​: ನಿನ್ನೆ ರಾತ್ರಿ ಅಫ್ಘಾನಿಸ್ತಾನದ ಕಂದಹಾರ್​​ ಏರ್​ಪೋರ್ಟ್ (Kandahar Airport)​ ಮೇಲೆ ತಾಲಿಬಾನ್​ ಉಗ್ರರು (Taliban Fighters) ಮೂರು ರಾಕೆಟ್ ದಾಳಿ (Rocket Struck) ನಡೆಸಿದ ಬೆನ್ನಲ್ಲೇ ಇಂದು ಅಫ್ಘಾನಿಸ್ತಾನ ರಕ್ಷಣಾ ಪಡೆಗಳು ತಾಲಿಬಾನ್​ ಉಗ್ರರ ನೆಲೆಗಳ ಮೇಲೆ ವಾಯುದಾಳಿ ನಡೆಸಿದ್ದಾಗಿ ವರದಿಯಾಗಿದೆ. ತಾಲಿಬಾನ್​ ಉಗ್ರರ ಒಟ್ಟು 13 ವಿವಿಧ ನೆಲೆಗಳ ಮೇಲೆ ಏರ್​ಸ್ಟ್ರೈಕ್​ ನಡೆದಿದ್ದು, 254 ತಾಲಿಬಾನ್​ ಉಗ್ರರು ಹತರಾಗಿದ್ದಾರೆ ಮತ್ತು 97 ಉಗ್ರರು ಗಾಯಗೊಂಡಿದ್ದಾರೆ ಎಂದೂ ಹೇಳಲಾಗಿದೆ.

ಶನಿವಾರ ರಾತ್ರಿ ದಕ್ಷಿಣ ಅಫ್ಘಾನ್​ನ ಕಂದಹಾರ್ ಏರ್​ಪೋರ್ಟ್ ಗುರಿಯಾಗಿಸಿ ಮೂರು ರಾಕೆಟ್​ ದಾಳಿ ನಡೆದಿತ್ತು. ಅದರಲ್ಲಿ ಎರಡು ರನ್ ವೇ ಮೇಲೆ ಅಪ್ಪಳಿಸಿತ್ತು. ಹೀಗಾಗಿ ಈ ಏರ್​ಪೋರ್ಟ್​ಗೆ ಹೋಗುವ ಮತ್ತು ಬರುವ ಎಲ್ಲ ವಿಮಾನಗಳನ್ನೂ ರದ್ದು ಮಾಡಿದ್ದಾಗಿ ಕಂದಹಾರ್ ಏರ್​ಪೋರ್ಟ್ ಮುಖ್ಯಸ್ಥ ಮಸೂದ್​ ಪಶ್ತೂನ್​ ತಿಳಿಸಿದ್ದಾರೆ. ಇನ್ನು ಕಂದಹಾರ್​ ಮೇಲೆ ನಡೆದ ರಾಕೆಟ್​ ದಾಳಿಯಿಂದ ಯಾವುದೇ ಸಾವು ನೋವು ಆಗಿರಲಿಲ್ಲ.

ಅಫ್ಘಾನಿಸ್ತಾನದಿಂದ ಯುಎಸ್​ ಸೇನೆಯ ಬಹುತೇಕ ಸೈನಿಕರು ಹಿಂದೆ ಸರಿದಿದ್ದಾರೆ. ಈ ಮಧ್ಯೆ ತಾಲಿಬಾನ್​ ಉಗ್ರರು ಮತ್ತು ಅಫ್ಘಾನಿಸ್ತಾನ ಭದ್ರತಾ ಪಡೆಗಳ ನಡುವಿನ ಹಿಂಸಾಚಾರವೂ ಜಾಸ್ತಿಯಾಗಿದೆ. ಕಳೆದ ತಿಂಗಳು ಅಧ್ಯಕ್ಷರ ಭವನದ ಎದುರು ಈದ್​ ಪ್ರಾರ್ಥನೆ ನಡೆಯುತ್ತಿರುವಾ ಆ ಪ್ರದೇಶದ ಮೇಲೆಯೂ ಮೂರು ರಾಕೆಟ್​ಗಳು ಬಂದು ಲ್ಯಾಂಡ್ ಆಗಿದ್ದವು.

ಇದನ್ನೂ ಓದಿ: ಇನ್ನೂ ಮುಗಿಯದ ಸಂಪುಟ ರಚನೆ ಕಸರತ್ತು, ಬಿ.ಎಸ್. ಯಡಿಯೂರಪ್ಪ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಚರ್ಚೆ

Follow Us
Web contact
Web contact

TV9 Kannada

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ