AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಲಿಬಾನ್​ ಉಗ್ರರಿಂದ ರಾಕೆಟ್​ ದಾಳಿ ನಡೆದ ಬೆನ್ನಲ್ಲೇ ಅಫ್ಘಾನಿಸ್ತಾನ ಭದ್ರತಾ ಪಡೆಯಿಂದ ವಾಯುದಾಳಿ; 254 ಉಗ್ರರ ಹತ್ಯೆ

ಶನಿವಾರ ರಾತ್ರಿ ದಕ್ಷಿಣ ಅಫ್ಘಾನ್​ನ ಕಂದಹಾರ್ ಏರ್​ಪೋರ್ಟ್ ಗುರಿಯಾಗಿಸಿ ಮೂರು ರಾಕೆಟ್​ ದಾಳಿ ನಡೆದಿತ್ತು. ಅದರಲ್ಲಿ ಎರಡು ರನ್ ವೇ ಮೇಲೆ ಅಪ್ಪಳಿಸಿತ್ತು.

ತಾಲಿಬಾನ್​ ಉಗ್ರರಿಂದ ರಾಕೆಟ್​ ದಾಳಿ ನಡೆದ ಬೆನ್ನಲ್ಲೇ ಅಫ್ಘಾನಿಸ್ತಾನ ಭದ್ರತಾ ಪಡೆಯಿಂದ ವಾಯುದಾಳಿ; 254 ಉಗ್ರರ ಹತ್ಯೆ
ಕಂದಹಾರ್ ಏರ್​ಪೋರ್ಟ್​
TV9 Web
| Edited By: |

Updated on: Aug 01, 2021 | 12:18 PM

Share

ಕಂದಹಾರ್​: ನಿನ್ನೆ ರಾತ್ರಿ ಅಫ್ಘಾನಿಸ್ತಾನದ ಕಂದಹಾರ್​​ ಏರ್​ಪೋರ್ಟ್ (Kandahar Airport)​ ಮೇಲೆ ತಾಲಿಬಾನ್​ ಉಗ್ರರು (Taliban Fighters) ಮೂರು ರಾಕೆಟ್ ದಾಳಿ (Rocket Struck) ನಡೆಸಿದ ಬೆನ್ನಲ್ಲೇ ಇಂದು ಅಫ್ಘಾನಿಸ್ತಾನ ರಕ್ಷಣಾ ಪಡೆಗಳು ತಾಲಿಬಾನ್​ ಉಗ್ರರ ನೆಲೆಗಳ ಮೇಲೆ ವಾಯುದಾಳಿ ನಡೆಸಿದ್ದಾಗಿ ವರದಿಯಾಗಿದೆ. ತಾಲಿಬಾನ್​ ಉಗ್ರರ ಒಟ್ಟು 13 ವಿವಿಧ ನೆಲೆಗಳ ಮೇಲೆ ಏರ್​ಸ್ಟ್ರೈಕ್​ ನಡೆದಿದ್ದು, 254 ತಾಲಿಬಾನ್​ ಉಗ್ರರು ಹತರಾಗಿದ್ದಾರೆ ಮತ್ತು 97 ಉಗ್ರರು ಗಾಯಗೊಂಡಿದ್ದಾರೆ ಎಂದೂ ಹೇಳಲಾಗಿದೆ.

ಶನಿವಾರ ರಾತ್ರಿ ದಕ್ಷಿಣ ಅಫ್ಘಾನ್​ನ ಕಂದಹಾರ್ ಏರ್​ಪೋರ್ಟ್ ಗುರಿಯಾಗಿಸಿ ಮೂರು ರಾಕೆಟ್​ ದಾಳಿ ನಡೆದಿತ್ತು. ಅದರಲ್ಲಿ ಎರಡು ರನ್ ವೇ ಮೇಲೆ ಅಪ್ಪಳಿಸಿತ್ತು. ಹೀಗಾಗಿ ಈ ಏರ್​ಪೋರ್ಟ್​ಗೆ ಹೋಗುವ ಮತ್ತು ಬರುವ ಎಲ್ಲ ವಿಮಾನಗಳನ್ನೂ ರದ್ದು ಮಾಡಿದ್ದಾಗಿ ಕಂದಹಾರ್ ಏರ್​ಪೋರ್ಟ್ ಮುಖ್ಯಸ್ಥ ಮಸೂದ್​ ಪಶ್ತೂನ್​ ತಿಳಿಸಿದ್ದಾರೆ. ಇನ್ನು ಕಂದಹಾರ್​ ಮೇಲೆ ನಡೆದ ರಾಕೆಟ್​ ದಾಳಿಯಿಂದ ಯಾವುದೇ ಸಾವು ನೋವು ಆಗಿರಲಿಲ್ಲ.

ಅಫ್ಘಾನಿಸ್ತಾನದಿಂದ ಯುಎಸ್​ ಸೇನೆಯ ಬಹುತೇಕ ಸೈನಿಕರು ಹಿಂದೆ ಸರಿದಿದ್ದಾರೆ. ಈ ಮಧ್ಯೆ ತಾಲಿಬಾನ್​ ಉಗ್ರರು ಮತ್ತು ಅಫ್ಘಾನಿಸ್ತಾನ ಭದ್ರತಾ ಪಡೆಗಳ ನಡುವಿನ ಹಿಂಸಾಚಾರವೂ ಜಾಸ್ತಿಯಾಗಿದೆ. ಕಳೆದ ತಿಂಗಳು ಅಧ್ಯಕ್ಷರ ಭವನದ ಎದುರು ಈದ್​ ಪ್ರಾರ್ಥನೆ ನಡೆಯುತ್ತಿರುವಾ ಆ ಪ್ರದೇಶದ ಮೇಲೆಯೂ ಮೂರು ರಾಕೆಟ್​ಗಳು ಬಂದು ಲ್ಯಾಂಡ್ ಆಗಿದ್ದವು.

ಇದನ್ನೂ ಓದಿ: ಇನ್ನೂ ಮುಗಿಯದ ಸಂಪುಟ ರಚನೆ ಕಸರತ್ತು, ಬಿ.ಎಸ್. ಯಡಿಯೂರಪ್ಪ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಚರ್ಚೆ

Follow Us
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ