AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಂಟಿ ಹೇಳಿಕೆ, ಔತಣಕೂಟ, ಮಾತುಕತೆ ಎಲ್ಲವೂ ರದ್ದು, ವೈಟ್​ಹೌಸ್​ನಿಂದ ಝಲೆನ್ಸ್ಕಿಯನ್ನು ಹೊರದಬ್ಬಿದ ಟ್ರಂಪ್

ಶಾಂತಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ಬಿಸಿ ಚರ್ಚೆ ನಡೆಯಿತು. ನೀವು ಶಾಂತಿ ಬಯಸಿದರೆ ಮಾತ್ರ ಅಮೆರಿಕಕ್ಕೆ ಬನ್ನಿ ಎಂದು ಖಡಕ್ ಎಚ್ಚರಿಕೆ ಕೊಟ್ಟು ಉಕ್ರೇನ್ ಅಧ್ಯಕ್ಷರನ್ನು ಡೊನಾಲ್ಡ್​ ಟ್ರಂಪ್ ಶ್ವೇತಭವನದಿಂದ ಹೊರಗಟ್ಟಿದ್ದಾರೆ. ಝೆಲೆನ್ಸ್ಕಿ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತಿಲ್ಲ ಎಂದು ಆರೋಪಿಸಿರುವ ಡೊನಾಲ್ಡ್​ ಟ್ರಂಪ್, ಝೆಲೆನ್ಸ್ಕಿ ಶಾಂತಿಯತ್ತ ಸಾಗುವ ಬದಲು ಅಮೆರಿಕದ ಭಾಗವಹಿಸುವಿಕೆಯನ್ನು ಕೇವಲ ಒಂದು ಒಪ್ಪಂದವೆಂದು ನೋಡುತ್ತಾರೆ.

ಜಂಟಿ ಹೇಳಿಕೆ, ಔತಣಕೂಟ, ಮಾತುಕತೆ ಎಲ್ಲವೂ ರದ್ದು, ವೈಟ್​ಹೌಸ್​ನಿಂದ ಝಲೆನ್ಸ್ಕಿಯನ್ನು ಹೊರದಬ್ಬಿದ ಟ್ರಂಪ್
ಡೊನಾಲ್ಡ್​ ಟ್ರಂಪ್Image Credit source: The Conversation
ನಯನಾ ರಾಜೀವ್
|

Updated on:Mar 01, 2025 | 8:51 AM

Share

ವಾಷಿಂಗ್ಟನ್, ಮಾರ್ಚ್​ 1: ಶಾಂತಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ಬಿಸಿ ಚರ್ಚೆ ನಡೆಯಿತು. ನೀವು ಶಾಂತಿ ಬಯಸಿದರೆ ಮಾತ್ರ ಅಮೆರಿಕಕ್ಕೆ ಬನ್ನಿ ಎಂದು ಖಡಕ್ ಎಚ್ಚರಿಕೆ ಕೊಟ್ಟು ಉಕ್ರೇನ್ ಅಧ್ಯಕ್ಷರನ್ನು ಡೊನಾಲ್ಡ್​ ಟ್ರಂಪ್ ಶ್ವೇತಭವನದಿಂದ ಹೊರಗಟ್ಟಿದ್ದಾರೆ.

ಝೆಲೆನ್ಸ್ಕಿ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತಿಲ್ಲ ಎಂದು ಆರೋಪಿಸಿರುವ ಡೊನಾಲ್ಡ್​ ಟ್ರಂಪ್, ಝೆಲೆನ್ಸ್ಕಿ ಶಾಂತಿಯತ್ತ ಸಾಗುವ ಬದಲು ಅಮೆರಿಕದ ಭಾಗವಹಿಸುವಿಕೆಯನ್ನು ಕೇವಲ ಒಂದು ಒಪ್ಪಂದವೆಂದು ನೋಡುತ್ತಾರೆ. ಅಮೆರಿಕದ ಮೂಲಕ ಶಾಂತಿ ಒಪ್ಪಂದಕ್ಕೆ ಹೋಗಲು ಝೆಲೆನ್ಸ್ಕಿ ಸಿದ್ಧರಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಜಂಟಿ ಹೇಳಿಕೆ, ಔತಣಕೂಟ, ಮಾತುಕತೆ ಎಲ್ಲವನ್ನೂ ಬಿಟ್ಟು ಝೆಲೆನ್ಸ್ಕಿ ತಮ್ಮ ದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಪುಟಿನ್ (ರಷ್ಯಾದ ಅಧ್ಯಕ್ಷರು) ಈ ಹಿಂದೆ 25 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಅಮೆರಿಕ ರಷ್ಯಾದೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳಬಾರದು ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಅಮೆರಿಕದೊಂದಿಗೆ ಪ್ರಮುಖ ಆರ್ಥಿಕ ಒಪ್ಪಂದ ಮಾಡಿಕೊಳ್ಳಲು ಝೆಲೆನ್ಸ್ಕಿ ಶುಕ್ರವಾರ ಶ್ವೇತಭವನಕ್ಕೆ ಹೋಗಿದ್ದರು. ಲಕ್ಷಾಂತರ ಜನರ ಜೀವದ ಜೊತೆ ಆಟವಾಡಿದ್ದಕ್ಕಾಗಿ ಅವರು ಝೆಲೆನ್ಸ್ಕಿಯನ್ನು ಟೀಕಿಸಿದರು.

ಉಕ್ರೇನಿಯನ್ ಅಧ್ಯಕ್ಷರ ಕ್ರಮಗಳು ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದು ಎಂದು ಟ್ರಂಪ್ ಹೇಳಿದ್ದಾರೆ. ಝೆಲೆನ್ಸ್ಕಿ ಅಮೆರಿಕದೊಂದಿಗೆ ಪ್ರಮುಖ ಖನಿಜ ಒಪ್ಪಂದಕ್ಕೆ ಸಹಿ ಹಾಕದೆ ಇದ್ದಕ್ಕಿದ್ದಂತೆ ಶ್ವೇತಭವನವನ್ನು ತೊರೆದರು.

ಮತ್ತಷ್ಟು ಓದಿ: Trump-Zelensky Meet: ಝೆಲೆನ್ಸ್ಕಿ ಶಾಂತಿ ಬಯಸುತ್ತಿಲ್ಲ ಎಂದು ಕಿಡಿಕಾರಿದ ಟ್ರಂಪ್

ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಝೆಲೆನ್ಸ್ಕಿ ಸುಮಾರು 45 ನಿಮಿಷಗಳ ಕಾಲ ಮಾತನಾಡಿದರು, ಇದರಲ್ಲಿ ಕೊನೆಯ 10 ನಿಮಿಷಗಳಲ್ಲಿ ಮೂವರ ನಡುವೆ ತುಂಬಾ ಬಿಸಿ ಬಿಸಿ ಚರ್ಚೆ ನಡೆಯಿತು. ತಮ್ಮ ಪರ ವಾದ ಮಂಡಿಸಿದ ಝೆಲೆನ್ಸ್ಕಿ, ರಷ್ಯಾದ ರಾಜತಾಂತ್ರಿಕ ಬದ್ಧತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ನಡುವಿನ ಸಭೆ ಸೌಹಾರ್ದಯುತವಾಗಿ ಪ್ರಾರಂಭವಾಯಿತು. ಈ ಸಭೆಯಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವೆ ಪರಸ್ಪರ ಸಹಕಾರವನ್ನು ಹೆಚ್ಚಿಸಲು ಹಲವು ಒಪ್ಪಂದಗಳ ಕುರಿತು ಚರ್ಚಿಸಬೇಕಿತ್ತು.

ಏತನ್ಮಧ್ಯೆ, ರಷ್ಯಾ-ಉಕ್ರೇನ್ ಕದನ ವಿರಾಮದ ವಿಷಯ ಬಂದಾಗ, ಇಬ್ಬರು ನಾಯಕರು ವಿರುದ್ಧ ಅಭಿಪ್ರಾಯಗಳನ್ನು ಹೊಂದಿದ್ದರು. ಏತನ್ಮಧ್ಯೆ, ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಝೆಲೆನ್ಸ್ಕಿಯನ್ನು ಕೆಣಕಿದರು. ಅವರು ಝೆಲೆನ್ಸ್ಕಿ ಅಗೌರವದಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು ಮತ್ತು ನಿಮ್ಮ ರಾಜತಾಂತ್ರಿಕತೆಯು ನಿಮ್ಮ ದೇಶವನ್ನು ನಾಶಮಾಡಲಿದೆ ಎಂದು ಹೇಳಿದರು. ನಿಮ್ಮ ಸಂಘರ್ಷಗಳನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿರುವ ಅಧ್ಯಕ್ಷ ಟ್ರಂಪ್ ಅವರಿಗೆ ನೀವು ಧನ್ಯವಾದ ಹೇಳಬೇಕು ಎಂದೂ ಅವರು ಹೇಳಿದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:50 am, Sat, 1 March 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ