AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ತಾಲಿಬಾನ್​ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ ಮಾಜಿ ಅಧ್ಯಕ್ಷ ಅಶ್ರಫ್​ ಘನಿ ಸೋದರ

ಅಫ್ಘಾನಿಸ್ತಾನವನ್ನು ಭಾನುವಾರ ತಾಲಿಬಾನ್​ ಸಂಪೂರ್ಣವಾಗಿ ವಶಪಡಿಸಿಕೊಂಡಿದೆ. ಅದಾದ ಮೇಲೆ ಅಶ್ರಫ್​ ಘನಿ ಒಂದು ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಿ ನಂತರ ತಮ್ಮ ಕುಟುಂಬದೊಟ್ಟಿಗೆ ಯುಎಇಗೆ ಹೋಗಿ ಸೇರಿದ್ದಾರೆ.

Video: ತಾಲಿಬಾನ್​ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ ಮಾಜಿ ಅಧ್ಯಕ್ಷ ಅಶ್ರಫ್​ ಘನಿ ಸೋದರ
ತಾಲಿಬಾನ್​ ಉಗ್ರರಿಗೆ ಬೆಂಬಲ ಘೋಷಿಸಿದ ಅಶ್ರಫ್​ ಘನಿ ಸೋದರ
TV9 Web
| Edited By: |

Updated on: Aug 21, 2021 | 12:07 PM

Share

ಅಫ್ಘಾನಿಸ್ತಾನ (Afghanistan) ತಾಲಿಬಾನ್ ಉಗ್ರ (Taliban Terrorists)ರ ವಶವಾಗುತ್ತಿದ್ದಂತೆ ಯುಎಇಗೆ ಪರಾರಿಯಾಗಿರುವ ಮಾಜಿ ಅಧ್ಯಕ್ಷ ಅಶ್ರಫ್​ ಘನಿ (Ashraf Ghani) ಸಹೋದರ ಹಷ್ಮತ್​ ಘನಿ ಇದೀಗ ಸುದ್ದಿಯಲ್ಲಿದ್ದಾರೆ. ತಾವು ತಾಲಿಬಾನ್​ ಉಗ್ರರಿಗೆ ಬೆಂಬಲ ನೀಡುವುದಾಗಿ ಹಷ್ಮತ್ ಘನಿ ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೂಚಿಗಳ ಮಹಾಮಂಡಳಿ ಮುಖ್ಯಸ್ಥನಾಗಿರುವ ಹಷ್ಮತ್​ ಘನಿ ಅಹ್ಮದ್​ಜೈ, ತಾವು ತಾಲಿಬಾನ್​ ಆಡಳಿತಕ್ಕೆ ಸಂಪೂರ್ಣ ಬೆಂಬಲ, ಸಹಕಾರ ನೀಡುತ್ತೇವೆ ಎಂದು ತಾಲಿಬಾನ್​ ನಾಯಕ ಖಲೀಲ್​ ಉರ್​ ರೆಹ್ಮಾನ್ ಮತ್ತು ಧಾರ್ಮಿಕ ವಿದ್ವಾಂಸ ಮುಫ್ತಿ ಮಹಮೂದ್ ಜಾಕಿರ್​ ಸಮ್ಮುಖದಲ್ಲಿ ಘೋಷಿಸಿದ್ದಾರೆ ಎಂದು ಹೇಳಲಾಗಿದೆ. ಹೀಗೊಂದು ವಿಡಿಯೋವನ್ನು ಇಸ್ಲಮಾಬಾದ್​ನ ಪತ್ರಕರ್ತರೊಬ್ಬರು ಶೇರ್​ ಮಾಡಿಕೊಂಡಿದ್ದಾರೆ. (ಕೂಚಿಗಳು -Kuchis-ಎಂದರೆ ಘಿಲ್ಜಿ ಪಶ್ತೂನ್ಸ್​ ಅಲೆಮಾರಿ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಇದು ಪಶುಪಾಲನಾ ಜನಾಂಗವಾಗಿದೆ).

ಅಫ್ಘಾನಿಸ್ತಾನವನ್ನು ಭಾನುವಾರ ತಾಲಿಬಾನ್​ ಸಂಪೂರ್ಣವಾಗಿ ವಶಪಡಿಸಿಕೊಂಡಿದೆ. ಅದಾದ ಮೇಲೆ ಅಶ್ರಫ್​ ಘನಿ ಒಂದು ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಿ ನಂತರ ತಮ್ಮ ಕುಟುಂಬದೊಟ್ಟಿಗೆ ಯುಎಇಗೆ ಹೋಗಿ ಸೇರಿದ್ದಾರೆ. ಅದಾದ ಬಳಿಕ ಫೇಸ್​ಬುಕ್​ ವಿಡಿಯೋ ಮಾಡಿ ಹರಿಬಿಟ್ಟ ಅವರು, ನಾನು ಅಫ್ಘಾನಿಸ್ತಾನದಲ್ಲಿ ರಕ್ತಪಾತ ತಪ್ಪಿಸುವ ಸಲುವಾಗಿ ಅಲ್ಲಿಂದ ಹೊರಡುವ ನಿರ್ಧಾರ ಮಾಡಿದೆ. ನನ್ನನ್ನು ಹೊರಹಾಕಲಾಗಿದೆಯೇ ಹೊರತು, ನಾನು ಪರಾರಿಯಾಗಿದ್ದಲ್ಲ ಎಂದು ಹೇಳಿಕೊಂಡಿದ್ದರು.

ಅಶ್ರಫ್​ ಘನಿ ಅಫ್ಘಾನಿಸ್ತಾನದಿಂದ ಹೊರಡುವಾಗ ಅಪಾರ ಪ್ರಮಾಣದ ಹಣ ತೆಗೆದುಕೊಂಡುಹೋಗಿದ್ದಾರೆ ಎಂಬ ಆರೋಪವನ್ನು ಅಲ್ಲಗಳೆದಿದ್ದ ಅವರು, ನಾನು ಯಾವುದೇ ಹಣವನ್ನೂ ಹೊತ್ತು ತರಲಿಲ್ಲ. ಅಂಥ ಸುದ್ದಿಗಳಿಗೆ ಆಧಾರವಿಲ್ಲ. ನಾನು ಯುಎಇಗೆ ಬಂದಿದ್ದೇನೆ. ಇಲ್ಲಿನ ಕಸ್ಟಮ್ಸ್​ ಅಧಿಕಾರಿಗಳ ಬಳಿ ಯಾರೇ ಬೇಕಾದರೂ ಕೇಳಬಹುದು. ಬರುವಾಗ ನನ್ನ ಕೈಯಲ್ಲಿ ಬಟ್ಟೆಗಳ ಒಂದು ಸೂಟ್​ಕೇಸ್ ಮಾತ್ರ ಇತ್ತು ಎಂದೂ ಹೇಳಿಕೊಂಡಿದ್ದಾರೆ.

ಸದ್ಯಕ್ಕಂತೂ ತಾಲಿಬಾನ್​​ ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದೆ. ಹಾಗಂತ ಅವರಿನ್ನೂ ಸರ್ಕಾರ ರಚನೆ ಮಾಡಿಲ್ಲ. ಅಮೆರಿಕದೊಂದಿಗೆ ಇರುವ ಒಪ್ಪಂದದ ಅನ್ವಯ, ತಾಲಿಬಾನಿಗಳು ಆಗಸ್ಟ್​ 31ರವರೆಗೂ ಹೊಸ ಸರ್ಕಾರ ರಚನೆ ಮಾಡುವಂತಿಲ್ಲ ಎಂದು ಹೇಳಲಾಗಿದೆ. ಅಷ್ಟಕ್ಕೂ ತಾಲಿಬಾನ್​ ಹೇಗೆ ಸರ್ಕಾರ ರಚನೆ ಮಾಡಲಿದೆ. ಈಗಿನ ಸನ್ನಿವೇಶದಲ್ಲಿ ಅದಕ್ಕೆ ಯಾವುದೇ ದೇಶಗಳೂ ಹಣದ ಸಹಾಯ ಮಾಡಲು ಒಪ್ಪುತ್ತಿಲ್ಲ. ಚೀನಾ, ರಷ್ಯಾ, ಪಾಕಿಸ್ತಾನ, ಟರ್ಕಿ ಹೊರತು ಪಡಿಸಿ ಇನ್ಯಾವುದೇ ದೇಶಗಳೂ ತಾಲಿಬಾನ್​ನ್ನು ಒಪ್ಪಿಕೊಂಡಿಲ್ಲ. ಅಂತಾರಾಷ್ಟ್ರೀಯ ಸಮುದಾಯ ಕೂಡ ಅರ್ಥಿಕ ನೆರವು ನೀಡಲು ನಕಾರ ಎತ್ತಿದೆ. ಅಷ್ಟೆಲ್ಲ ಆದರೂ ಅಲ್ಲೊಬ್ಬರು..ಇಲ್ಲೊಬ್ಬರು ತಾಲಿಬಾನ್​​ನ್ನು ಹೊಗಳುತ್ತಿದ್ದಾರೆ. ಭಾರತದಲ್ಲಿ ತಾಲಿಬಾನ್​ ಉಗ್ರರರನ್ನು ಶ್ಲಾಘಿಸಿದ ಸಂಸದನೊಬ್ಬನ ವಿರುದ್ಧ ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇನ್ನೊಬ್ಬಾತನ ವಿರುದ್ಧ ಸ್ವಧರ್ಮೀಯರೇ ತಿರುಗಿಬಿದ್ದಿದ್ದಾರೆ.

ಅಶ್ರಫ್​ ಘನಿ ಸೋದರ ತಾಲಿಬಾನಿಗಳಿಗೆ ಬೆಂಬಲ ಘೋಷಿಸಿದ ವಿಡಿಯೋ ಇಲ್ಲಿದೆ..

ಇದನ್ನೂ ಓದಿ: 5 ವರ್ಷಗಳಿಂದ ಪೊಲೀಸರಿಗೆ ತಲೆನೋವಾಗಿದ್ದ ಸರಗಳ್ಳರನ್ನು ಅರೆಸ್ಟ್​ ಮಾಡಿದ ಸಿಸಿಬಿ ಪೊಲೀಸರು

Video: ಮದುವೆಗಾಗಿ ದೇವಸ್ಥಾನಕ್ಕೆ ಬಂದ 2 ಕುಟುಂಬಗಳ ಮಧ್ಯೆ ಹೊಡೆದಾಟ; ವಧುವನ್ನು ತಪ್ಪಿಸಲು ಹೋಗಿ ವರನಿಗೆ ಗಾಯ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು