AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವುಹಾನ್​ನಿಂದ ಕೊರೊನಾ ಸ್ಥಿತಿಗತಿ ವರದಿ ಮಾಡಿದ್ದ ಚೀನಾ ಪತ್ರಕರ್ತೆಗೆ 4 ವರ್ಷ ಜೈಲು ಶಿಕ್ಷೆ

ಒಂದೊಮ್ಮೆ ನನಗೇನಾದರೂ ಜಾಸ್ತಿ ಪ್ರಮಾಣದಲ್ಲಿ ಜೈಲು ಶಿಕ್ಷೆ ವಿಧಿಸಿದರೆ ಮತ್ತೆ ಆಹಾರ ನಿರಾಕರಿಸುತ್ತೇನೆ.. ಉಪವಾಸವಿದ್ದು ಜೈಲಿನಲ್ಲಿಯೇ ಸಾಯುತ್ತೇನೆ ಎಂದು ಪತ್ರಕರ್ತೆ ಝಾಂಗ್​ ಹೇಳಿದ್ದಾಳೆ ಎಂದು ವಕೀಲ ಕ್ವಾನಿಯು ಹೇಳಿದ್ದಾರೆ.

ವುಹಾನ್​ನಿಂದ ಕೊರೊನಾ ಸ್ಥಿತಿಗತಿ ವರದಿ ಮಾಡಿದ್ದ ಚೀನಾ ಪತ್ರಕರ್ತೆಗೆ 4 ವರ್ಷ ಜೈಲು ಶಿಕ್ಷೆ
ಪತ್ರಕರ್ತೆ ಝಾಂಗ್​ ಜಾನ್​
Lakshmi Hegde
| Updated By: ಸಾಧು ಶ್ರೀನಾಥ್​|

Updated on: Dec 28, 2020 | 2:57 PM

Share

ಶಾಂಘೈ: ಕೊರೊನಾ ವೈರಸ್​ ಮೊದಲು ಹುಟ್ಟಿದ್ದು ಚೀನಾದ ವುಹಾನ್​ನಲ್ಲಿ. ಇಲ್ಲಿನ ವೆಟ್​ ಮಾರ್ಕೆಟ್​ನಲ್ಲಿ (Wet Market) ಸೋಂಕು ಹರಡುತ್ತಿರುವ ಸಂದರ್ಭದಲ್ಲಿ ಅಲ್ಲಿಂದ ನೇರ ವರದಿ ಮಾಡಿದ್ದ ಚೀನಾದ ಪತ್ರಕರ್ತೆಗೆ ಇದೀಗ 4 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ವೈರಸ್​ ಹುಟ್ಟಿ ಒಂದು ವರ್ಷದ ಮೇಲಾಯಿತು. ಈಗ ಪತ್ರಕರ್ತೆಗೆ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಈ ಮಧ್ಯೆ.. ಆಕೆಯ ಆರೋಗ್ಯ ಸರಿಯಿಲ್ಲ. ಈ ಬಗ್ಗೆ ಯಾರೂ ಯೋಚಿಸುತ್ತಿಲ್ಲ ಎಂದು ವರದಿಗಾರ್ತಿ ಪರ ನ್ಯಾಯಾಲಯದಲ್ಲಿ ವಾದ ಮಾಡಿದ್ದ ವಕೀಲರು ಆತಂಕ ವ್ಯಕ್ತಪಡಿಸಿದ್ದಾರೆ.

ಝಾಂಗ್ ಜಾನ್​ (37) ಜೈಲು ಪಾಲಾದ ಪತ್ರಕರ್ತೆ. ಇವರು ವುಹಾನ್​ನಿಂದ ಕೊರೊನಾ ಸ್ಥಿತಿಗತಿ, ಪರಿಸ್ಥಿತಿಯ ಬಗ್ಗೆ ನೇರವಾಗಿ ವರದಿ ಮಾಡಿದ್ದರು. ಅವರ ವರದಿ, ಪ್ರಬಂಧಗಳು ಫೆಬ್ರವರಿ ತಿಂಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಹಾಗೇ ಇವರೊಂದಿಗೆ ವರದಿ ಮಾಡಿದ್ದ ಇನ್ನೂ ಮೂವರು ಪತ್ರಕರ್ತರು ಸೇರಿ ನಾಲ್ವರನ್ನು ನಂತರ ಬಂಧಿಸಲಾಗಿತ್ತು.

ಅದರಲ್ಲಿ ಝಾಂಗ್ ಜಾನ್​ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಶಾಂಘೈ ಪುಡಾಂಗ್ ನ್ಯೂ ಡಿಸ್ಟ್ರಿಕ್ಟ್ಸ್​ ಪೀಪಲ್ಸ್ ಕೋರ್ಟ್​ ಇಂದು ಪತ್ರಕರ್ತೆಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕೊರೊನಾ ಆರಂಭಿಕ ಹಂತದಲ್ಲಿ ವರದಿ ಮಾಡುವ ಸಂದರ್ಭದಲ್ಲಿ ಹಲವು ಗಲಾಟೆಗೆ ಪ್ರಚೋದನೆ ನೀಡಿದ್ದಾರೆ. ಈ ಮೂಲಕ ಸಮಸ್ಯೆ ಸೃಷ್ಟಿಸಿದ್ದಾರೆ ಎಂದು ಕೋರ್ಟ್​ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಇನ್ನು ಝಾಂಗ್​ ಅವರು ಜೂನ್​ನಿಂದ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿದ್ದರು. ಹೀಗಾಗಿ ಆರೋಗ್ಯ ತುಂಬ ಹದಗೆಟ್ಟಿತ್ತು. ನಂತರ ನಳಿಕೆಯ ಮೂಲಕ ಬಲವಂತವಾಗಿ ಆಹಾರ ನೀಡಲಾಯಿತು. ಈಗ ನ್ಯಾಯಾಲಯ ಆಕೆಯ ಅನಾರೋಗ್ಯವನ್ನೂ ಗಮನದಲ್ಲಿ ಇಟ್ಟುಕೊಳ್ಳದೆ ತೀರ್ಪು ನೀಡಿದೆ ಎಂದು ವಕೀಲ ರೆನ್ ಕ್ವಾನಿಯು  ತಿಳಿಸಿದ್ದಾರೆ.

ಕಳೆದ ವಾರ ನಾನು ಆಕೆಯನ್ನು ಭೇಟಿಯಾಗಿದ್ದೆ.. ಆಗ ಹೇಳುತ್ತಿದ್ದಳು, ಒಂದೊಮ್ಮೆ ನನಗೇನಾದರೂ ಜಾಸ್ತಿ ಪ್ರಮಾಣದಲ್ಲಿ ಜೈಲು ಶಿಕ್ಷೆ ವಿಧಿಸಿದರೆ ಮತ್ತೆ ಆಹಾರ ನಿರಾಕರಿಸುತ್ತೇನೆ.. ಉಪವಾಸವಿದ್ದು ಜೈಲಿನಲ್ಲಿಯೇ ಸಾಯುತ್ತೇನೆ ಎಂದು ಝಾಂಗ್​ ಹೇಳಿದ್ದಾಳೆ ಎಂದು ಕ್ವಾನಿಯು ಹೇಳಿದ್ದಾರೆ.

ಕೊರೊನಾದಿಂದ ಕಂಗೆಟ್ಟಿದ್ದವನಿಗೆ ಹೊಡೆಯಿತು ಲಾಟರಿ! ದುಬೈನಲ್ಲಿ ಭಾರತೀಯನಿಗೆ ಒಲಿಯಿತು ₹ 7 ಕೋಟಿ ಜಾಕ್​ಪಾಟ್​

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!