AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರ್ ಇಂಡಿಯಾ ವಿಮಾನದಲ್ಲಿ ಏಕಾಂಗಿ ಪ್ರಯಾಣ; ಮಹಾರಾಜನಂತೆ ಅನಿಸಿತು ಎಂದು ಅನುಭವ ಹಂಚಿಕೊಂಡ ವ್ಯಕ್ತಿ!

ಇದೊಂದು ಜೀವನದಲ್ಲೇ ಮೊದಲ ಮತ್ತು ಬಹುಶಃ ಕೊನೆಯ ಅನುಭವ. ಲೈಫ್ ಟೈಮ್ ಎಕ್ಸ್​ಪೀರಿಯನ್ಸ್ ಎಂದು ಹೇಳಬಹುದು ಎಂದು ಹೇಳಿದ್ದಾರೆ. ಬಳಿಕ, ನಿಮಗೆ ಇಂತದ್ದೇ ಅವಕಾಶ ಇನ್ನೊಮ್ಮೆ ಸಿಕ್ಕಿದರೆ ನೀವು ಏಕಾಂಗಿಯಾಗಿ ವಿಮಾನಯಾನ ಮಾಡುತ್ತೀರಾ ಎಂದು ಕೇಳಿದಾಗ, ಇಲ್ಲ ಎಂದು ಉತ್ತರಿಸಿದ್ದಾರೆ.

ಏರ್ ಇಂಡಿಯಾ ವಿಮಾನದಲ್ಲಿ ಏಕಾಂಗಿ ಪ್ರಯಾಣ; ಮಹಾರಾಜನಂತೆ ಅನಿಸಿತು ಎಂದು ಅನುಭವ ಹಂಚಿಕೊಂಡ ವ್ಯಕ್ತಿ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on: Jun 25, 2021 | 10:00 PM

ನಾವೆಲ್ಲರೂ ವಿಶೇಷ ಆತಿಥ್ಯವನ್ನು ಖಂಡಿತಾ ಇಷ್ಟಪಡುತ್ತೇವೆ. ನಮ್ಮನ್ನು ವಿಜೃಂಭಣೆಯಿಂದ ಸತ್ಕರಿಸಿದರೆ ನಾವು ಬೇಡ ಅನ್ನುತ್ತೇವೆಯೇ? ನಮಗೆ ಖುಷಿ ಆಗಿಯೇ ಆಗುತ್ತದೆ. ಅಂತಾದ್ದರಲ್ಲಿ, ಒಂದು ಇಡೀ ವಿಮಾನದಲ್ಲಿ ನೀವೊಬ್ಬರೇ ಇದ್ದೀರಿ ಅಂತಾದರೆ ಹೇಗಾಗಬಹದು! ನಿಮಗೊಬ್ಬರಿಗೇ ವಿಮಾನ. ನೀವು ಏಕೈಕ ಪ್ರಯಾಣಿಕರು. ನಿಮ್ಮನ್ನು ಹೊತ್ತು ವಿಮಾನ ಹಾರುತ್ತದೆ. ಹೌದು. ಯುಎಇ ಮೂಲದ ಬ್ಯುಸಿನೆಸ್​ಮ್ಯಾನ್​ ಒಬ್ಬರಿಗೆ ಇದೇ ಪರಿಸ್ಥಿತಿ ಎದುರಾಗಿದೆ. ಅಮೃತಸರದಿಂದ ದುಬೈಗೆ ಅವರು ಏರ್ ಇಂಡಿಯಾ ಅಂತಾರಾಷ್ಟ್ರೀಯ ವಿಮಾನದಲ್ಲಿ ಒಬ್ಬರೇ ಪ್ರಯಾಣಿಸಿದ್ದಾರೆ.

ಬ್ಯುಸಿನೆಸ್​ಮ್ಯಾನ್ ಹಾಗೂ ಫಿಲಾಂತ್ರಫಿಸ್ಟ್ ಆಗಿರುವ ಎಸ್​.ಪಿ ಸಿಂಗ್ ಒಬೆರಾಯ್ ಎಂಬವರು ಬುಧವಾರ ಅಮೃತಸರದಿಂದ ದುಬೈಗೆ ಪ್ರಯಾಣಿಸಿದ್ದಾರೆ. ಆ ವಿಮಾನದಲ್ಲಿ ತಾವೊಬ್ಬರೇ ಪ್ರಯಾಣಿಕ ಎಂದು ಅವರು ಟಿಕೆಟ್ ಬುಕ್ ಮಾಡಿ, ವಿಮಾನಯಾನಕ್ಕೆ ಸಿದ್ಧರಾದಮೇಲೆಯೇ ಅವರಿಗೆ ತಿಳಿದುಬಂದಿದೆ. ಈ ವಿಶೇಷ ಅನುಭವವನ್ನು ಎಸ್.ಪಿ. ಸಿಂಗ್ ಹಂಚಿಕೊಂಡಿದ್ದಾರೆ.

ವಿಮಾನದಲ್ಲಿ ಒಬ್ಬನೇ ಪ್ರಯಾಣಿಸಿದ ಬಗ್ಗೆ ಹೇಳಿರುವ ಅವರು, ಮಹಾರಾಜನಂತೆ ಅನುಭವ ಆಯ್ತು. ಮೂರು ಗಂಟೆಗಳ ವಿಮಾನಯಾನವನ್ನು ಬಹಳಷ್ಟು ಎಂಜಾಯ್ ಮಾಡಿದೆ. ಏರ್ ಇಂಡಿಯಾ, ಎಐ-929 ವಿಮಾನದಲ್ಲಿ ಜೂನ್ 23ರಂದು ಬೆಳಗ್ಗೆ ಸುಮಾರು 4 ಗಂಟೆಗೆ ವಿಮಾನಯಾನ ಮಾಡಿದೆ. ಇಡೀ ವಿಮಾನದಲ್ಲಿ ನಾನೊಬ್ಬನೇ ಇದ್ದೆ. ನನಗೆ ಅತ್ಯುತ್ತಮ ಸೇವೆ ಲಭ್ಯವಾಗಿದೆ. ವಿಮಾನದ ಸಿಬ್ಬಂದಿ ಹಾಗೂ ಪೈಲಟ್​ಗಳ ಜೊತೆಗೆ ಫೋಟೊ ತೆಗೆಸಿಕೊಂಡೆ ಎಂದು ಎಎನ್​ಐ ಜೊತೆ ತಮ್ಮ ಅನುಭವ ವಿವರಿಸಿದ್ದಾರೆ.

ಇದೊಂದು ಜೀವನದಲ್ಲೇ ಮೊದಲ ಮತ್ತು ಬಹುಶಃ ಕೊನೆಯ ಅನುಭವ. ಲೈಫ್ ಟೈಮ್ ಎಕ್ಸ್​ಪೀರಿಯನ್ಸ್ ಎಂದು ಹೇಳಬಹುದು ಎಂದು ಹೇಳಿದ್ದಾರೆ. ಬಳಿಕ, ನಿಮಗೆ ಇಂತದ್ದೇ ಅವಕಾಶ ಇನ್ನೊಮ್ಮೆ ಸಿಕ್ಕಿದರೆ ನೀವು ಏಕಾಂಗಿಯಾಗಿ ವಿಮಾನಯಾನ ಮಾಡುತ್ತೀರಾ ಎಂದು ಕೇಳಿದಾಗ, ಇಲ್ಲ ಎಂದು ಉತ್ತರಿಸಿದ್ದಾರೆ.

ಏಕಾಂಗಿಯಾಗಿ ಪ್ರಯಾಣಿಸುವ ವೇಳೆ, ವಿಮಾನದಲ್ಲಿ ಎಷ್ಟು ಸೀಟ್​ಗಳಿವೆ, ಎಷ್ಟು ಕಿಟಕಿಗಳಿವೆ ಎಂದೂ ಲೆಕ್ಕ ಹಾಕಿದ್ದಿದೆ. ಸಮಯ ಕಳೆಯಲು ಹಾಗೆಲ್ಲಾ ಮಾಡಿದ್ದೇನೆ. ಮುಂದಿನ ಬಾರಿ ಒಬ್ಬಂಟಿಯಾಗಿ ಪ್ರಯಾಣಿಸುವ ಅವಕಾಶ ಸಿಕ್ಕರೆ ಬೇಡ ಅನ್ನುತ್ತೇನೆ. ಏಕೆಂದರೆ ಇದು ತುಂಬಾ ಬೋರಿಂಗ್ ಆಗಿರುತ್ತದೆ. ಜೀವನದಲ್ಲಿ ಒಮ್ಮೆ ಈ ಅನುಭವ ಪಡೆಯಬಹುದಷ್ಟೇ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಏಳು ಪೌಂಡ್ ತೂಕ ಇಳಿಸಿಕೊಂಡ್ರೆ ಚೆನ್ನಾಗಿರುತ್ತೆ ಎಂದವನಿಗೆ ಖಡಕ್ ಉತ್ತರ ಕೊಟ್ಟ ಯುವತಿ!

‘ಬೆಳಗ್ಗೆ ವಿಮಾನಗಳು ಬರುತ್ತವೆ, ಯಾವುದಕ್ಕೂ ಎಚ್ಚರದಿಂದಿರಿ’; ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇನ್ಸ್‌ಪೆಕ್ಟರ್​ಗೆ ಬಂತು ಎಚ್ಚರಿಕೆಯ ಸಂದೇಶ

ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?