AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬೆಳಗ್ಗೆ ವಿಮಾನಗಳು ಬರುತ್ತವೆ, ಯಾವುದಕ್ಕೂ ಎಚ್ಚರದಿಂದಿರಿ’; ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇನ್ಸ್‌ಪೆಕ್ಟರ್​ಗೆ ಬಂತು ಎಚ್ಚರಿಕೆಯ ಸಂದೇಶ

Bengaluru Airport: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇನ್ಸ್​ಪೆಕ್ಟರ್ ಅವರ ಅಧಿಕೃತ ಸರ್ಕಾರಿ ಮೊಬೈಲ್ ನಂಬರ್​ಗೆ ಬಂದಿರುವ ಈ ಸಂದೇಶವೇ ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ಈಶಾನ್ಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಗಂಭೀರ ತನಿಖೆ ಕೈಗೊಂಡಿದ್ದಾರೆ.

‘ಬೆಳಗ್ಗೆ ವಿಮಾನಗಳು ಬರುತ್ತವೆ, ಯಾವುದಕ್ಕೂ ಎಚ್ಚರದಿಂದಿರಿ’; ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇನ್ಸ್‌ಪೆಕ್ಟರ್​ಗೆ ಬಂತು ಎಚ್ಚರಿಕೆಯ ಸಂದೇಶ
ಕೆಂಪೇಗೌಡ ವಿಮಾನ ನಿಲ್ದಾಣ
TV9 Web
| Updated By: guruganesh bhat|

Updated on:Jun 23, 2021 | 5:09 PM

Share

ಬೆಂಗಳೂರು: ‘ಬೆಳಗ್ಗೆ ವಿಮಾನಗಳು ಬರುತ್ತವೆ, ಯಾವುದಕ್ಕೂ ಎಚ್ಚರವಿರಿ’ ಎಂಬ ಸಂದೇಶವೊಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇನ್ಸ್‌ಪೆಕ್ಟರ್‌ ಅವರ ವಾಟ್ಸ್​ಆ್ಯಪ್​ಗೆ ಬಂದಿದ್ದು ಆತಂಕಕ್ಕೆ ಕಾರಣವಾಗಿದೆ. ಜೂನ್ 20ರ ರಾತ್ರಿ ಈ ಸಂದೇಶವನ್ನು ಕಳುಹಿಸಲಾಗಿದ್ದು, ಸಂದೇಶದಲ್ಲಿ ಎಚ್ಚರಿಕೆಯಿಂದ ಇರುವಂತೆ ಎಚ್ಚರಿಕೆ ನೀಡಲಾಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇನ್ಸ್​ಪೆಕ್ಟರ್ ಅವರ ಅಧಿಕೃತ ಸರ್ಕಾರಿ ಮೊಬೈಲ್ ನಂಬರ್​ಗೆ ಬಂದಿರುವ ಈ ಸಂದೇಶವೇ ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ಈಶಾನ್ಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಗಂಭೀರ ತನಿಖೆ ಕೈಗೊಂಡಿದ್ದಾರೆ.

ಕಳೆದ ವಾರ ಬೆಂಗಳೂರು ದಕ್ಷಿಣದಲ್ಲಿ ನೀರು ಬಿಡಲಿಲ್ಲ ಜಲಮಂಡಳಿ; ಈ ಬಾರಿ ಪಶ್ಚಿಮ ವಲಯದಲ್ಲಿ 2 ದಿನ ನೀರು ಬರಲ್ಲ! 900 ಮಿ.ಮೀ ವ್ಯಾಸದ ನೀರಿನ ಪೈಪ್ ಲೈನ್ನಲ್ಲಿ ಸೋರುವಿಕೆ ಕಂಡು ಬಂದಿದ್ದು ಬಿಡಬ್ಲ್ಯೂಎಸ್ಎಸ್ಬಿ ಸರಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಬೆಂಗಳೂರು ಪಶ್ಚಿಮ ವಲಯದಲ್ಲಿ ನೀರು ಸರಬರಾಜು ನಿಲ್ಲಿಸಲಾಗುತ್ತಿದೆ. ಜೂನ್ 23 ಬುಧವಾರ ಬೆಳಗ್ಗೆ 6 ಗಂಟೆಯಿಂದ ಜೂನ್ 24ರ ಗುರುವಾರ ರಾತ್ರಿ 10 ಗಂಟೆಯವರೆಗೂ Local Shut Down ಹಾಗೂ ಅಗತ್ಯತೆಗೆ ಅನುಗುಣವಾಗಿ ಕಾವೇರಿ 4ನೇ ಹಂತ 1ನೇ ಘಟ್ಟದ 1 ಅಥವಾ 2 ಪಂಪ್ಗಳು ನಿಲ್ಲಿಸಲು ಅನುಮೋದಿಸಲಾಗಿದೆ.

ಇನ್ನು ಈ ಬಗ್ಗೆ ಬಿಡಬ್ಲ್ಯೂಎಸ್ಎಸ್ಬಿ ಪ್ರಕಟಣೆ ಹೊರಡಿಸಿದೆ. ನಾಗ್ಪುರ, ಮಹಾಲಕ್ಷ್ಮಿಪುರಂ, ಮಂಜುನಾಥ ನಗರ, ಶಿವನಗರ, ಮಹಾಗನಪತಿ ನಗರ, ತಿಮ್ಮಯ್ಯ ರಸ್ತೆ, ಬಸವೇಶ್ವರ ನಗರ. ಹೆಚ್ಬಿಸಿಎಸ್, ಶಕ್ತಿ ಗಣಪತಿ ನಗರ, ಶಂಕರ ಮಠ, ಕಮಲಾ ನಗರ, ಕಾಮಾಕ್ಷಿ ಪಾಳ್ಯ, ಶಾರದ ಕಾಲೋನಿ, ಬಿಇಎಮ್ಎಲ್ ಕಾಲೋನಿ, ಮೀನಾಕ್ಷಿ ನಗರ, ಬಾಲಾಜಿ ಲೇಔಟ್, ಮಲ್ಲತ್ ಹಳ್ಳಿ, ರೈಲ್ವೇ ಲೇಔಟ್ 2 ಸ್ಟೇಜ್, ಬಿಟಿಎಸ್ ಲೇಔಟ್, ಅಂಜನಾ ನಗರ, ಕೆಇಬಿ ರೋಡ್, ಬಡರಹಳ್ಳಿ,

ರಾಜೀವ್ ಗಾಂಧಿ ನಗರ, ಅಗ್ರಹಾರ ದಾಸರಭಾಲಿ, ಕೆಎಚ್‌ಬಿ 2 ನೇ ಹಂತ, ಪಾಪಯ್ಯ ಗಾರ್ಡನ್, ಮಹಾಲಕ್ಷ್ಮಿ ಲೇಔಟ್, ಸರಸ್ವತಿಪುರ, ಜೆಸಿ ನಗರ, ಕುರುಬರಹಳ್ಳಿ, ಸುಬ್ರಮಣ್ಯನಗರ ಎ, ಇ, ಡಿ ಬ್ಲಾಕ್, ಪ್ರಕಾಶ್ ನಗರ, ರಾಜಾಜಿನಗರ 1,2,3,4,5, 6ನೇ ಹಂತ ಮತ್ತು 1ಎನ್ ಬ್ಲಾಕ್, ಜೈ ಮಾರುತಿ ನಗರ, ಕಂಠೀರವ ನಗರ ಲೇಔಟ್, ನಂಜುಂಡೀಶ್ವರ ನಗರ, ಶ್ರೀ ಕಂಠೇಶ್ವರ ನಗರ, ಶಂಕರನಗರ, ಕೃಷ್ಣಾನಂದ ನಗರ, ಕೆಎಚ್‌ಬಿ ಕಾಲೋನಿ, ಜಾಸ್ಮಿನ್ ಗಾರ್ಡನ್, ವಿದ್ಯಾರಣ್ಯನಗರ, ಎನ್ಆರ್ ಗಾರ್ಡನ್, ಚೆಲುವಪ್ಪ ಗಾರ್ಡನ್, ಗಂಗಪ್ಪ ಗಾರ್ಡನ್, ಮಾಗಡಿ ರೋಡ್, ಕೆಪಿ ಅಗ್ರಹಾರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ. ಇನ್ನು ಇದೇ ರೀತಿ ಕಳೆದ ವಾರ ಎರಡು ದಿನ ಬೆಂಗಳೂರು ದಕ್ಷಿಣದಲ್ಲಿ ನೀರು ಸ್ಥಗಿತಗೊಳಿಸಲಾಗಿತ್ತು.

ಇದನ್ನೂ ಓದಿ: SSLC Exam 2021: ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಸಂಬಂಧಿಸಿದ ಮಹತ್ವದ ಮಾರ್ಗಸೂಚಿ ಬಿಡುಗಡೆ: ವಿವರ ಇಲ್ಲಿದೆ

ಪೌರಾಡಳಿತ ಇಲಾಖೆ ಸಚಿವ ಎಂಟಿಬಿ ನಾಗರಾಜ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯಾಗಿ ನೇಮಕ

(Kempegowda International Airport inspector received threat message says Flights come in the morning beware of anything)

Published On - 5:04 pm, Wed, 23 June 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ