AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬೈನಲ್ಲಿ ರೂ. 6 ಕೋಟಿ ಹಣವಿದ್ದ ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದುಕೊಟ್ಟ ಭಾರತೀಯ ಅಲ್ಲಿನ ಪೊಲೀಸರಿಂದ ಭೇಷ್ ಅನಿಸಿಕೊಂಡರು!

ನಯೀಫ್ ಪೊಲೀಸ್ ಠಾಣೆಯ ನಿರ್ದೇಶಕರಾಗಿರುವ ಮೇಜರ್ ಜನರಲ್ ತಾರಿಖ್ ತಹ್ಲಕ್ ಅವರು ನೀಡಿರುವ ಹೇಳಿಕೆಯೊಂದರ ಪ್ರಕಾರ, ಏಷ್ಯಾ ಮೂಲದ ಇಬ್ಬರು ವ್ಯಕ್ತಿಗಳು ನಯೀಫ್ ಪ್ರದೇಶದಲ್ಲಿ ಬೇರೆ ಬೇರೆ ದೇಶಗಳ ಕರೆನ್ಸಿಯ ಸುಮಾರು 4,250,000 ಡಿರ್ಹಾಮ್ ಮೊತ್ತದಷ್ಟು ಹಣವನ್ನು ಎರಡು ಬ್ಯಾಗ್​ಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದಾಗ ಕಳ್ಳತನದ ಪ್ರಕರಣ ನಡೆದಿತ್ತು.

ದುಬೈನಲ್ಲಿ ರೂ. 6 ಕೋಟಿ ಹಣವಿದ್ದ ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದುಕೊಟ್ಟ ಭಾರತೀಯ ಅಲ್ಲಿನ ಪೊಲೀಸರಿಂದ ಭೇಷ್ ಅನಿಸಿಕೊಂಡರು!
ದುಬೈ ಪೊಲೀಸರಿಂದ ಚವಾಡಗೆ ಸತ್ಕಾರImage Credit source: Times Now
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Nov 26, 2022 | 2:22 PM

Share

ದುಬೈ: ಭಾರತೀಯರು ಯಾವ ದೇಶದಲ್ಲಿದ್ದರೂ ಧೈರ್ಯಶಾಲಿಗಳೇ ಅನ್ನೋದರಲ್ಲಿ ಎರಡು ಮಾತಿಲ್ಲ. ಇದನ್ನು ಯಾಕೆ ಪುನರುಚ್ಛರಿಸಬೇಕಾಗಿದೆಯೆಂದರೆ, ಕಳ್ಳನೊಬ್ಬ 2.7 ಮಿಲಿಯನ್ ದಿರ್ಹಮ್ (ಸುಮಾರು 6 ಕೋಟಿ ರೂ.) ಹಣದೊಂದಿಗೆ ಪರಾರಿಯಾಗುವ ಪ್ರಯತ್ನವನ್ನು ವಿಫಲಗೊಳಿಸಿ ಅವನನ್ನು ಪೊಲೀಸರಿಗೆ ಹಿಡಿದುಕೊಟ್ಟ, ದುಬೈನಲ್ಲಿ ವಾಸವಾಗಿರುವ ಭಾರತೀಯರೊಬ್ಬರಿಗೆ ದುಬೈ ಪೊಲೀಸ್ (Dubai police) ಪ್ರಶಂಸಾ ಪತ್ರ (letter of appreciation) ನೀಡಿ ಗೌರವಿಸಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ 32-ವರ್ಷ-ವಯಸ್ಸಿನ ಕೆಶುರ್ ಕರ ಚವಾಡ ಕರು ಘೇಲಾ (Keshur Kara Chavada Karu Ghela) ದುಬೈನ ನಯೀಫ್ ಜಿಲ್ಲೆಯಲ್ಲಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಪ್ರಸಕ್ತ ವಾರದ ಆರಂಭದಲ್ಲಿ ದುಬೈ ಪೊಲೀಸ್ ಚವಾಡ ಅವರನ್ನು ಹುಡುಕಿಕೊಂಡು ಅವರು ಕೆಲಸ ಮಾಡುವ ಅಂಗಡಿಗೆ ಹೋದಾಗ ಅವರಿಗೆ ಆಶ್ಚರ್ಯವಾಗಿತ್ತು, ಎಂದು ಅಲ್ಲಿನ ಪೊಲೀಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ನಯೀಫ್ ಪೊಲೀಸ್ ಠಾಣೆಯ ನಿರ್ದೇಶಕರಾಗಿರುವ ಮೇಜರ್ ಜನರಲ್ ತಾರಿಖ್ ತಹ್ಲಕ್ ಅವರು ನೀಡಿರುವ ಹೇಳಿಕೆಯೊಂದರ ಪ್ರಕಾರ, ಏಷ್ಯಾ ಮೂಲದ ಇಬ್ಬರು ವ್ಯಕ್ತಿಗಳು ನಯೀಫ್ ಪ್ರದೇಶದಲ್ಲಿ ಬೇರೆ ಬೇರೆ ದೇಶಗಳ ಕರೆನ್ಸಿಯ ಸುಮಾರು 4,250,000 ಡಿರ್ಹಾಮ್ ಮೊತ್ತದಷ್ಟು ಹಣವನ್ನು ಎರಡು ಬ್ಯಾಗ್​ಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದಾಗ ಕಳ್ಳತನದ ಪ್ರಕರಣ ನಡೆದಿತ್ತು.

‘ಕಳ್ಳ ಆ ಇಬ್ಬರು ಏಷ್ಯನ್ ವ್ಯಕ್ತಿಗಳನ್ನು ಅಡ್ಡಗಟ್ಟಿ ಎರಡು ಬ್ಯಾಗ್ಗಳ ಪೈಕಿ ಎಇಡಿ 2,757,158 ರಷ್ಟು ಹಣವಿದ್ದ ಒಂದು ಬ್ಯಾಗ್ ಕಸಿದುಕೊಂಡಿ ಪರಾರಿಯಾಗುವ ಪ್ರಯತ್ನದಲ್ಲಿದ್ದ,’ ಎಂದು ಅವರು ಹೇಳಿದ್ದಾರೆ.

‘ಆಗ ಇಬ್ಬರು ಏಷ್ಯನ್ನರು ಸಹಾಯಕ್ಕಾಗಿ ಕೂಗಿದಾಗ, ಕಳ್ಳ ಬ್ಯಾಗ್ ತನ್ನತ್ತ ಓಡಿಬರುತ್ತಿರುವುದನ್ನು ಚವಾಡ ಗಮನಿಸಿದರು. ಅವರು ಹೆದರದೆ ಅವನನ್ನು ಅಡ್ಡಗಟ್ಟಿ ನಿಲ್ಲಿಸಿ ಅವನೊಂದಿಗೆ ಕುಸ್ತಿಗೆ ಬಿದ್ದರು. ಕಳ್ಳನನ್ನು ನೆಲಕ್ಕೆ ಕೆಡವಿ ಅವನ ಮೇಲೆ ಕುಳಿತ ಚವಾಡ ಪೊಲೀಸರು ಸ್ಥಳಕ್ಕೆ ಬರುವವರೆಗೆ ಅವನನ್ನು ಮಿಸುಕಾಡಲು ಬಿಡಲಿಲ್ಲ. ಅವರ ನೆರವಿಲ್ಲದೆ ಹೋಗಿದ್ದರೆ ಕಳ್ಳನನ್ನು ಸೆರೆಹಿಡಿಯುವುದು ಕಷ್ಟವಾಗುತ್ತಿತ್ತು,’ ಎಂದು ತಹ್ಲಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಚವಾಡ ಆ ಅಂಗಡಿಯಲ್ಲಿ ಕಳೆದ 12 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

‘ಕಳ್ಳನತ್ತ ಓಡಿ ಅವನನ್ನು ಹಿಡಿದುಕೊಂಡೆ. ಆಕಾರದಲ್ಲಿ ಅವನು ನನ್ನಷ್ಟೇ ಗಾತ್ರದವನಾಗಿದ್ದರಿಂದ ಹಿಡಿದು ನೆಲಕ್ಕೆ ಕೆಡುವುದು ಕಷ್ಟವಾಗಲಿಲ್ಲ. ಅವನ ಎದೆಗೆ ಗುದ್ದಿ ನೆಲಕ್ಕೆ ಬೀಳಿಸಿದೆ. ಬೇರೆಯವರು ನನ್ನ ಸಹಾಯಕ್ಕೆ ಬರೋವರೆಗೆ ಅವನನ್ನು ಬಿಡಲಿಲ್ಲ’ ಎಂದು ಚವಾಡ ದಿ ನ್ಯಾಶನಲ್ ಪತ್ರಿಕೆ ವರದಿಗಾರನೊಂದಿಗೆ ಮಾತಾಡುವಾಗ ಹೇಳಿದ್ದಾರೆ.

ಕಳ್ಳನಿಂದ ಬ್ಯಾಗ್ ಕಸಿದ ಚವಾಡ ಅದರ ಮಾಲೀಕರಿಗೆ ಒಪ್ಪಿಸಿದ್ದಾರೆ.

ಕ್ರಿಮಿನಲ್ ತನಿಖಾ ವ್ಯವಹಾರಗಳ ಸಹಾಯಕ ಕಮಾಂಡೆಂಟ್-ಇನ್-ಚೀಫ್ ಮೇಜರ್ ಜನರಲ್ ಖಲೀಲ್ ಇಬ್ರಾಹಿಂ ಅಲ್ ಮನ್ಸೂರಿ, ಚವಾಡ ಮಾಡಿದ ಕೆಲಸ ಸಮುದಾಯದೆಡೆ ನಿಜವಾದ ಬದ್ಧತೆ ಮತ್ತು ತುರ್ತು ಸ್ಥಿತಿಯನ್ನು ಎದುರಿಸುವಲ್ಲಿ ಪ್ರದರ್ಶಿಸಬಹುದಾದ ಬುದ್ಧಿವಂತಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

‘ಚವಾಡ ಅವರನ್ನು ಅವರ ಕೆಲಸದ ಸ್ಥಳದಲ್ಲಿ, ಅವರ ಸಹೋದ್ಯೋಗಿಗಳು ಮತ್ತು ನೆರೆಹೊರೆಯವರ ಸಮ್ಮುಖದಲ್ಲಿ ಗೌರವಿಸುವುದು ಸಮುದಾಯದ ಸಹಭಾಗಿತ್ವದ ಪರಿಕಲ್ಪನೆಯನ್ನು ಬಲಪಡಿಸಲು ಮತ್ತು ಜನರಲ್ಲಿ ಜವಾಬ್ದಾರಿಯ ಪ್ರಜ್ಞೆಯನ್ನು ಉತ್ತೇಜಿಸಲು ದುಬೈ ಪೊಲೀಸರಲ್ಲಿರುವ ಬದ್ಧತೆಯ ಪ್ರತೀಕವಾಗಿದೆ’ ಎಂದು ಅವರು ಹೇಳಿದರು.

ಇನ್ನಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ