AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗಿಯಾದ ಜೀನ್ಸ್​ ಧರಿಸಿ ಬಂದ ಸಂಸದೆಯನ್ನು ಸಂಸತ್ತಿನಿಂದ ಹೊರಗೆ ಕಳಿಸಿದ ಸ್ಪೀಕರ್​; ಕ್ಷಮೆಗೆ ಆಗ್ರಹಿಸಿ ಪ್ರತಿಭಟನೆ  

ಕಂಡೆಸ್ಟೆರ್​ ಸಿಚ್ವಾಲೆ ಪ್ಯಾಂಟ್​-ಶರ್ಟ್​ ಹಾಕಿ ಬಂದಿದ್ದನ್ನು ನೋಡಿದ ಇನ್ನೊಬ್ಬ ಸಂಸದ ಹುಸೇನ್​ ಅಮರ್​ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಬಿಗಿಯಾದ ಜೀನ್ಸ್​ ಧರಿಸಿ ಬಂದ ಸಂಸದೆಯನ್ನು ಸಂಸತ್ತಿನಿಂದ ಹೊರಗೆ ಕಳಿಸಿದ ಸ್ಪೀಕರ್​; ಕ್ಷಮೆಗೆ ಆಗ್ರಹಿಸಿ ಪ್ರತಿಭಟನೆ  
ಸಂಸತ್ತಿನಿಂದ ಹೊರಹೋಗುತ್ತಿರುವ ಸಂಸದೆ
TV9 Web
| Edited By: |

Updated on:Jun 03, 2021 | 2:44 PM

Share

ಪೂರ್ವ ಆಫ್ರಿಕಾದ ಟಾಂಜಾನಿಯಾ ದೇಶದ ಸಂಸತ್ತಿಗೆ ಬಿಗಿಯಾದ ಪ್ಯಾಂಟ್​-ಶರ್ಟ್​ ಧರಿಸಿ ಬಂದ ಸಂಸದೆಯನ್ನು ಹೊರಗೆ ಕಳಿಸಿದ ಸ್ಪೀಕರ್​ ವಿರುದ್ಧ ಮಹಿಳಾ ಜನಪ್ರತಿನಿಧಿಗಳು ತಿರುಗಿಬಿದ್ದಿದ್ದಾರೆ. ಸ್ಪೀಕರ್​ ಕೂಡಲೇ ಸಂಸದೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಸದೆ ಕಂಡೆಸ್ಟೆರ್​ ಸಿಚ್ವಾಲೆ ಅವರು ಕಪ್ಪು ಬಣ್ಣದ ಜೀನ್ಸ್​ ಪ್ಯಾಂಟ್​ ಮತ್ತು ಹಳದಿ ಬಣ್ಣದ ಶಾರ್ಟ್​ ಟಾಪ್​ ಧರಿಸಿ ಸಂಸತ್ತಿಗೆ ಬಂದಿದ್ದರು. ಆದರೆ ಸ್ಪೀಕರ್​ ಅವರನ್ನು ಹೊರಗೆ ಕಳಿಸಿದ್ದು ಇದೀಗ ವಿವಾದ ಸೃಷ್ಟಿಸಿದೆ.

ಕಂಡೆಸ್ಟೆರ್​ ಸಿಚ್ವಾಲೆ ಪ್ಯಾಂಟ್​-ಶರ್ಟ್​ ಹಾಕಿ ಬಂದಿದ್ದನ್ನು ನೋಡಿದ ಇನ್ನೊಬ್ಬ ಸಂಸದ ಹುಸೇನ್​ ಅಮರ್​ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸಂಸತ್ತು ಈ ಸಮಾಜದ ಪ್ರತಿಬಿಂಬಕವಾಗಿದೆ. ಮಹಿಳಾ ಜನಪ್ರತಿನಿಧಿಗಳು ಬಿಗಿಯಾದ ಜೀನ್ಸ್​ ಧರಿಸಿ ಇಲ್ಲಿ ಬರುವುದನ್ನು ನಿಷೇಧಿಸಲಾಗಿದೆ. ಆ ನಿಯಮವನ್ನು ಕಂಡೆಸ್ಟೆರ್​ ಸಿಚ್ವಾಲೆ ಉಲ್ಲಂಘಿಸಿದ್ದಾರೆ ಎಂದು ಹುಸೇನ್​ ಅಮರ್​ ಹೇಳಿದ್ದರು. ಅದಾದ ಬಳಿಕ ಸ್ಪೀಕರ್​ ಜಾಬ್​ ಎನ್​ಡುಗೈ ಆ ಸಂಸದೆಯನ್ನು ಹೊರಕಳಿಸಿದ್ದಾರೆ. ‘ನೀವು ಮೊದಲು ಸಂಸತ್ತಿನಿಂದ ಹೊರ ಹೋಗಿ, ಬೇರೆ ಉಡುಪು ಧರಿಸಿ ಬನ್ನಿ’ ಎಂದು ಹೇಳಿ ಕಳಿಸಿದ್ದಾರೆ.

ಅಲ್ಲದೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಾಬ್​ ಎನ್​ಡುಗಾಯ್​, ಮಹಿಳಾ ಪ್ರತಿನಿಧಿಗಳ ಉಡುಪಿನ ಬಗ್ಗೆ ದೂರು ಕೇಳುತ್ತಿರುವುದು ಇದೇ ಮೊದಲಲ್ಲ. ಇನ್ನು ಮುಂದೆ ಇಂಥ ಉಡುಪು ಧರಿಸಿ ಬರುವವರನ್ನು ಒಳಗೆ ಬಿಡಬೇಡಿ ಎಂದು ಸಂಬಂಧಪಟ್ಟವರಿಗೆ ಸೂಚಿಸಿದ್ದೇನೆ ಎಂದಿದ್ದಾರೆ. ಆದರೆ ಮಹಿಳಾ ಜನಪ್ರತಿನಿಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಪೀಕರ್ ಕೂಡಲೇ ಸಂಸದೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

Published On - 2:35 pm, Thu, 3 June 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ