AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಹುಲ್​ ಚೋಕ್ಸಿಗೆ ಸಿಕ್ಕಿಲ್ಲ ಜಾಮೀನು; ಅವರನ್ನು ಆಂಟಿಗುವಾಕ್ಕೆ ಕಳಿಸಿ ಎಂದು ವಕೀಲರಿಂದ ವಾದ ಮಂಡನೆ

ಈ ಮಧ್ಯೆ ಮೆಹುಲ್ ಚೋಕ್ಸಿ ಆಂಟಿಗುವಾಕ್ಕೆ ಕರೆದುಕೊಂಡು ಹೋದ ಯುವತಿಯ ಬಗ್ಗೆ ಇದೀಗ ಅವರ ಪತ್ನಿ ಪ್ರೀತಿ ಚೋಕ್ಸಿ ಬಾಯ್ಬಿಟ್ಟಿದ್ದಾರೆ. ಆ ಮಹಿಳೆ ನನ್ನ ಪತಿ ಮತ್ತು ಅವರ ಸಹಚರರಿಗೆ ಗೊತ್ತಿರುವವಳೇ ಆಗಿದ್ದಾಳೆ ಎಂದು ಹೇಳಿದ್ದಾರೆ.

ಮೆಹುಲ್​ ಚೋಕ್ಸಿಗೆ ಸಿಕ್ಕಿಲ್ಲ ಜಾಮೀನು; ಅವರನ್ನು ಆಂಟಿಗುವಾಕ್ಕೆ ಕಳಿಸಿ ಎಂದು ವಕೀಲರಿಂದ ವಾದ ಮಂಡನೆ
ಕೋರ್ಟ್​​ಗೆ ವೀಲ್​ಚೇರ್​ನಲ್ಲೇ ಬಂದ ಮೆಹುಲ್​ ಚೋಕ್ಸಿ
TV9 Web
| Edited By: |

Updated on: Jun 03, 2021 | 9:44 AM

Share

ದೆಹಲಿ: ದೇಶಭ್ರಷ್ಟ ಉದ್ಯಮಿ ಮೆಹುಲ್​ ಚೋಕ್ಸಿಗೆ ಜಾಮೀನು ನೀಡಲು ಡೊಮಿನಿಕಾ ನ್ಯಾಯಾಲಯ ನಿರಾಕರಿಸಿದೆ. ಆಂಟಿಗುವಾದಿಂದ ಡೊಮಿನಿಕಾಕ್ಕೆ ಅಕ್ರಮವಾಗಿ ನುಸುಳಿರುವ ಬಗ್ಗೆ ಡೊಮಿನಿಕಾ ಕೋರ್ಟ್​​ನಲ್ಲಿ ಬುಧವಾರ ವಿಚಾರಣೆ ನಡೆದಿತ್ತು. ಸದ್ಯ ಅವರಿಗೆ ಜಾಮೀನು ನಿರಾಕರಿಸಿದ್ದು, ಇಂದು (ಗುರುವಾರ) ಮತ್ತೊಮ್ಮೆ ವಿಚಾರಣೆ ನಡೆಯಲಿದೆ. ಗಡೀಪಾರಿಗೆ ಸಂಬಂಧಪಟ್ಟ ವಿಚಾರಣೆಯನ್ನೂ ಕೋರ್ಟ್ ಇಂದು ಕೈಗೆತ್ತಿಕೊಳ್ಳಲಿದೆ.  ಚೋಕ್ಸಿ ನಿನ್ನೆ ಕಾರಿನಲ್ಲಿ ಬಂದು, ವೀಲ್​ಚೇರ್​ ನಲ್ಲೇ ಕೋರ್ಟ್​​ನೊಳಗೆ ಹೋಗಿದ್ದಾರೆ. ಇಂದೂ ಕೂಡ ತಮ್ಮ ತಪ್ಪನ್ನು ಚೋಕ್ಸಿ ಒಪ್ಪಿಕೊಳ್ಳದೆ ಹೋದರೆ ಪ್ರತ್ಯೇಕ ವಿಚಾರಣೆ ಶುರುವಾಗುವ ಸಾಧ್ಯತೆ ಇದೆ.

ಮೆಹುಲ್​ ಚೋಕ್ಸಿ ಹನಿಟ್ರ್ಯಾಪ್​​ಗೆ ಒಳಗಾಗಿದ್ದಾರೆ. ಅವರನ್ನು ಆಂಟಿಗುವಾದಿಂದ ಅಪಹರಿಸಿ ಡೊಮಿನಿಕಾಗೆ ಕರೆದುಕೊಂಡು ಬರಲಾಗಿದೆ ಎಂದು ಅವರ ಪರ ವಕೀಲರು ಕೋರ್ಟ್​​ಗೆ ತಿಳಿಸಿದ್ದಾರೆ. ಈ ಹೇಬಿಯಸ್​ ಕಾರ್ಪಸ್​ ಅರ್ಜಿ ವಿಚಾರಣೆ ಮೊದಲು ಮ್ಯಾಜಿಸ್ಟ್ರೇಟ್​ ಕೋರ್ಟ್​​ನಲ್ಲಿ ನಡೆಯಬೇಕು ಎಂದು ವರ್ಚ್ಯುವಲ್​ ಆಗಿ ವಿಚಾರಣೆ ನಡೆಸಿದ್ದ ಡೊಮಿನಿಕಾ ಹೈಕೋರ್ಟ್​ ನ್ಯಾಯಾಧೀಶ ಬರ್ನಿ ಸ್ಟೀಪನ್ಸನ್​ ಸೂಚನೆ ನೀಡಿದ್ದರು. ಮೆಹುಲ್ ಚೋಕ್ಸಿ ಆಂಟಿಗುವಾಕ್ಕೆ ಕಳಿಸಬೇಕು ಎಂದು ಮೆಹುಲ್ ಚೋಕ್ಸಿ ಪರ ವಕೀಲರು ವಾದಮಂಡನೆ ಮಾಡಿದ್ದಾರೆ. ಡೊಮಿನಿಕಾದ ಪೊಲೀಸ್​ ಕಸ್ಟಡಿಯಲ್ಲಿ ಮೆಹುಲ್​ ಚೋಕ್ಸಿ ಸುರಕ್ಷಿತವಾಗಿರುವುದಿಲ್ಲ. ಈಗಾಗಲೇ ಅವರಿಗೆ ಥಳಿಸಲಾಗಿದೆ. ಹೀಗಾಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು ಎಂದೂ ವಕೀಲರು ವಾದಮಂಡನೆ ಮಾಡಿದ್ದಾರೆ.

ಪತಿಯ ಗರ್ಲ್​ಫ್ರೆಂಡ್​ ಬಗ್ಗೆ ಬಾಯ್ಬಿಟ್ಟ ಪ್ರೀತಿ ಚೋಕ್ಸಿ ಈ ಮಧ್ಯೆ ಮೆಹುಲ್ ಚೋಕ್ಸಿ ಆಂಟಿಗುವಾಕ್ಕೆ ಕರೆದುಕೊಂಡು ಹೋದ ಯುವತಿಯ ಬಗ್ಗೆ ಇದೀಗ ಅವರ ಪತ್ನಿ ಪ್ರೀತಿ ಚೋಕ್ಸಿ ಬಾಯ್ಬಿಟ್ಟಿದ್ದಾರೆ. ಆ ಮಹಿಳೆ ನನ್ನ ಪತಿ ಮತ್ತು ಅವರ ಸಹಚರರಿಗೆ ಗೊತ್ತಿರುವವಳೇ ಆಗಿದ್ದಾಳೆ. ಆದರೆ ಇದೀಗ ಮಾಧ್ಯಮಗಳಲ್ಲಿ ಬಾರ್ಬರಾ ಎಂದು ತೋರಿಸುತ್ತಿರುವ ಯುವತಿ ಅವಳಲ್ಲ ಎಂದು ಪ್ರೀತಿ ಹೇಳಿದ್ದಾರೆ.

ಇದನ್ನೂ ಓದಿ: Gold Silver Rate Today: ಆಭರಣ ಪ್ರಿಯರಿಗೆ ಮತ್ತೆ ನಿರಾಸೆ? ಹಾಗಾದರೆ ಚಿನ್ನ, ಬೆಳ್ಳಿ ದರ ಏರಿಕೆಯೇ?

Follow Us
Web contact
Web contact

TV9 Kannada

Read More
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ