AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ-ಅಮ್ಮನನ್ನು ಕೊಂದ ತಾಲಿಬಾನ್​ ಉಗ್ರರನ್ನೇ ಹೊಡೆದುರುಳಿಸಿದ ಈ ಪೋರಿ ಯಾರು ಗೊತ್ತಾ?

ಅಫ್ಘಾನಿಸ್ತಾನದ ಗಲ್ಲಿಗಲ್ಲಿ, ನಗರ-ಗ್ರಾಮದಲ್ಲಿ ಅಟ್ಟಹಾಸ ಮೆರೆದಿರುವ ತಾಲಿಬಾನ್​ ಉಗ್ರರ ದುಷ್ಕೃತ್ಯಗಳಿಗೆ ಕೊನೆಯೇ ಇಲ್ಲದಂತಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇಂದು ಬೆಳಗ್ಗೆ ಕೂಡ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ 8 ಅಫ್ಘಾನ್​ ಸೈನಿಕರನ್ನ ಕೊಂದಿದ್ದಾರೆ ಈ ರಕ್ತಪಿಪಾಸುಗಳು. ಹೀಗಾಗಿ, ಇವರನ್ನ ಕಂಡು ಇಡೀ ದೇಶವೇ ಗಡಗಡ ಅಂತಾ ನಡುಗುತ್ತದೆ. ಆದರೆ, ಇಷ್ಟು ಭೀತಿಯ ನಡುವೆಯೂ 16 ವರ್ಷದ ಪೋರಿಯೊಬ್ಬಳು ಇಬ್ಬರು ತಾಲಿಬಾನ್​ ಉಗ್ರರನ್ನು ಹೊಡೆದುರುಳಿಸಿದ್ದಾಳೆ ಅಂತಾ ಹೇಳಿದ್ರೆ ನೀವು ನಂಬ್ತೀರಾ? ನೀವು ನಂಬಲೇ ಬೇಕು. ಅಂದ ಹಾಗೆ, ಕಳೆದ ವಾರ ಅಫ್ಘಾನಿಸ್ತಾನದ […]

ಅಪ್ಪ-ಅಮ್ಮನನ್ನು ಕೊಂದ ತಾಲಿಬಾನ್​ ಉಗ್ರರನ್ನೇ ಹೊಡೆದುರುಳಿಸಿದ ಈ ಪೋರಿ ಯಾರು ಗೊತ್ತಾ?
KUSHAL V
| Edited By: |

Updated on:Jul 22, 2020 | 8:36 PM

Share

ಅಫ್ಘಾನಿಸ್ತಾನದ ಗಲ್ಲಿಗಲ್ಲಿ, ನಗರ-ಗ್ರಾಮದಲ್ಲಿ ಅಟ್ಟಹಾಸ ಮೆರೆದಿರುವ ತಾಲಿಬಾನ್​ ಉಗ್ರರ ದುಷ್ಕೃತ್ಯಗಳಿಗೆ ಕೊನೆಯೇ ಇಲ್ಲದಂತಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇಂದು ಬೆಳಗ್ಗೆ ಕೂಡ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ 8 ಅಫ್ಘಾನ್​ ಸೈನಿಕರನ್ನ ಕೊಂದಿದ್ದಾರೆ ಈ ರಕ್ತಪಿಪಾಸುಗಳು. ಹೀಗಾಗಿ, ಇವರನ್ನ ಕಂಡು ಇಡೀ ದೇಶವೇ ಗಡಗಡ ಅಂತಾ ನಡುಗುತ್ತದೆ. ಆದರೆ, ಇಷ್ಟು ಭೀತಿಯ ನಡುವೆಯೂ 16 ವರ್ಷದ ಪೋರಿಯೊಬ್ಬಳು ಇಬ್ಬರು ತಾಲಿಬಾನ್​ ಉಗ್ರರನ್ನು ಹೊಡೆದುರುಳಿಸಿದ್ದಾಳೆ ಅಂತಾ ಹೇಳಿದ್ರೆ ನೀವು ನಂಬ್ತೀರಾ? ನೀವು ನಂಬಲೇ ಬೇಕು.

ಅಂದ ಹಾಗೆ, ಕಳೆದ ವಾರ ಅಫ್ಘಾನಿಸ್ತಾನದ ಘೋರ್​ ಪ್ರಾಂತ್ಯದಲ್ಲಿ ನಡೆದಿರೋ ಈ ಘಟನೆ ಇದೀಗ ಬೆಳಕಿಗೆ ಬಂದಿದೆ. ಹೌದು, ಇದೇ ಪ್ರಾಂತ್ಯದ ಗ್ರಾಮವೊಂದರ ನಿವಾಸಿಯಾಗಿರುವ 16 ವರ್ಷದ ಖಮರ್​ ಗುಲ್​ ತನ್ನ ಪುಟ್ಟ ಕುಟುಂಬದೊಂದಿಗೆ ಸಂತೋಷವಾಗಿ ವಾಸವಿದ್ದಳು. ಗ್ರಾಮದ ಮುಖ್ಯಸ್ಥನಾಗಿದ್ದ ಖಮರ್​ ತಂದೆ ಸರ್ಕಾರದ ಅಭಿವೃದ್ಧಿಪರ ಚಿಂತನೆಯ ಬೆಂಬಲಿಗರಾಗಿದ್ದರು. ಹೀಗಾಗಿ, ಸರ್ಕಾರದ ಯೋಜನೆಗಳಿಗೆ ಅವರ ಪ್ರೋತ್ಸಾಹವಿತ್ತು.

ಖಮರ್​ ಗುಂಡಿನ ದಾಳಿಗೆ ಇಬ್ಬರು ಉಗ್ರರು ಮಟ್ಯಾಷ್! ಖಮರ್ ತಂದೆಯ ಆ​ ನಿಲುವು ಅಲ್ಲಿನ ತಾಲಿಬಾನ್​ ಉಗ್ರರಿಗೆ ಅರಗಿಸಿಕೋಳ್ಳೋಕೆ ಆಗಲಿಲ್ಲ. ಹಾಗಾಗಿ, ಖಮರ್​ ತಂದೆಗೆ ತಕ್ಕ ಶಾಸ್ತಿ ಮಾಡಬೇಕು ಅಂತಾ ಗ್ರಾಮಕ್ಕೆ ಬಂದ ಉಗ್ರರು ಖಮರ್​ ತಂದೆ ಮತ್ತು ತಾಯಿಯನ್ನ ಗುಂಡಿಕ್ಕಿ ಕೊಂದೇಬಿಟ್ಟರು. ಈ ವೇಳೆ, ತಂದೆ ತಾಯಿಯ ಕಳೆದುಕೊಂಡರೂ ಧೃತಿಗೆಡದ ಬಾಲಕಿ ಕೂಡಲೇ ತನ್ನ ಮನೆಯೊಳಗಿದ್ದ AK-47 ಗನ್​ ತಂದು ಉಗ್ರರ ಮೇಲೆ ಗುಂಡಿನ ಸುರಿಮಳೆಯನ್ನೇ ಸುರಿಸಿದಳು. ಹುಡುಗಿಯ ಗುಂಡೇಟಿಗೆ ನಲುಗಿಹೋದ ಇಬ್ಬರು ಉಗ್ರರು ಅಲ್ಲೇ ಮಟ್ಯಾಷ್​. ಉಳಿದವರು ಹಣ್ಣುಗಾಯಿ ನೀರುಗಾಯಿಯಾಗಿ ಪ್ರಾಣ ಉಳಿದರೇ ಹೆಚ್ಚು ಅಂತಾ ಅಲ್ಲಿಂದ ಕಾಲ್ಕಿತ್ತರಂತೆ.

ಇನ್ನು ಈ ಪ್ರಕರಣ ಸರ್ಕಾರದ ಗಮನಕ್ಕೆ ಬರುತ್ತಿದ್ದಂತೆ ಖಮರ್​ ಮತ್ತು ಅವಳ ತಮ್ಮನನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದ್ದಾರೆ. ಜೊತೆಗೆ, ಪುಟ್ಟ ಪೋರಿಯ ಸಾಹಸಕ್ಕೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ. ಹೆಣ್ಣುಮಗಳೆಂದರೆ ಹೀಗಿರಬೇಕು ಅಂತಾ ಹಾಡಿಹೊಗಳಿದ್ದಾರೆ.

Published On - 6:45 pm, Tue, 21 July 20

Follow Us
KUSHAL V
KUSHAL V
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ