Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ಸಂದರ್ಭದಲ್ಲಿ ವಿಶ್ವದ ಜನರು ಗೂಗಲ್​ನ್ನು ಕೇಳಿದ ಪ್ರಶ್ನೆಗಳನ್ನು ಹಂಚಿಕೊಂಡ ಗೂಗಲ್ ಸಿಇಒ ಸುಂದರ್ ಪಿಚೈ

ಗೂಗಲ್​ನ ಸಿಇಒ ಸುಂದರ್ ಪಿಚೈ ದೀಪಾವಳಿಗೆ ಶುಭಾಶಯ ಕೋರಿದ್ದಾರೆ. ಅದರ ಜತೆಗೆ ಗೂಗಲ್​ನಲ್ಲಿ ದೀಪಾವಳಿ ಸಂದರ್ಭದಲ್ಲಿ ಹೆಚ್ಚಿನ ಜನರು ಏನೇನು ಸರ್ಚ್​ ಮಾಡಿದ್ದಾರೆ ಎನ್ನುವ ಕುರಿತು ಕೂಡ ಮಾಹಿತಿ ನೀಡಿದ್ದಾರೆ. ದೀಪಾವಳಿಯ ಸಂದರ್ಭದಲ್ಲಿ ದೀಪವನ್ನು ಏಕೆ ಹಚ್ಚುತ್ತೇವೆ, ರಂಗೋಲಿಯನ್ನು ಏಕೆ ಹಾಕುತ್ತಾರೆ, ಭಾರತವು ದೀಪಾವಳಿಯನ್ನು ಏಕೆ ಆಚರಿಸುತ್ತಿದೆ, ಲಕ್ಷ್ಮೀ ಪೂಜೆಯನ್ನು ಏಕೆ ಮಾಡಬೇಕು ಇತ್ಯಾದಿ.

ದೀಪಾವಳಿ ಸಂದರ್ಭದಲ್ಲಿ ವಿಶ್ವದ ಜನರು ಗೂಗಲ್​ನ್ನು ಕೇಳಿದ ಪ್ರಶ್ನೆಗಳನ್ನು ಹಂಚಿಕೊಂಡ ಗೂಗಲ್ ಸಿಇಒ ಸುಂದರ್ ಪಿಚೈ
ಸುಂದರ್ ಪಿಚೈImage Credit source: India TV
Follow us
ನಯನಾ ರಾಜೀವ್
|

Updated on: Nov 13, 2023 | 11:41 AM

ಗೂಗಲ್​ನ ಸಿಇಒ ಸುಂದರ್ ಪಿಚೈ(Sundar Pichai) ದೀಪಾವಳಿಗೆ ಶುಭಾಶಯ ಕೋರಿದ್ದಾರೆ. ಅದರ ಜತೆಗೆ ಗೂಗಲ್​ನಲ್ಲಿ ದೀಪಾವಳಿ ಸಂದರ್ಭದಲ್ಲಿ ಹೆಚ್ಚಿನ ಜನರು ಏನೇನು ಸರ್ಚ್​ ಮಾಡಿದ್ದಾರೆ ಎನ್ನುವ ಕುರಿತು ಕೂಡ ಮಾಹಿತಿ ನೀಡಿದ್ದಾರೆ. ದೀಪಾವಳಿಯ ಸಂದರ್ಭದಲ್ಲಿ ದೀಪವನ್ನು ಏಕೆ ಹಚ್ಚುತ್ತೇವೆ, ರಂಗೋಲಿಯನ್ನು ಏಕೆ ಹಾಕುತ್ತಾರೆ, ಭಾರತವು ದೀಪಾವಳಿಯನ್ನು ಏಕೆ ಆಚರಿಸುತ್ತಿದೆ, ಲಕ್ಷ್ಮೀ ಪೂಜೆಯನ್ನು ಏಕೆ ಮಾಡಬೇಕು ಇತ್ಯಾದಿ.

ದೀಪಾವಳಿಯನ್ನು ಆಚರಿಸುವ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು, ಜನರು ದೀಪಾವಳಿ ಸಂಪ್ರದಾಯದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವುದನ್ನು ನಾವು ನೋಡುತ್ತಿದ್ದೇವೆ. ಪ್ರಪಂಚಾದ್ಯಂತ ದೀಪಾವಳಿಯ ಬಗ್ಗೆ ಗೂಗಲ್​ನಲ್ಲಿ ಸರ್ಚ್​ ಮಾಡಿರುವ ಟ್ರೆಂಡಿಂಗ್ ಪ್ರಶ್ನೆಗಳನ್ನು ಸುಂದರ್ ಪಿಚೈ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಅವರು GIF ಅನ್ನು ಹಂಚಿಕೊಂಡಿದ್ದಾರೆ, ಕ್ಲಿಕ್ ಮಾಡಿದಾಗ ಅದು ಹೊಸ ವಿಂಡೋ ತೆರೆದುಕೊಳ್ಳುತ್ತದೆ. ಇದು ದೀಪಾವಳಿಗೆ ಸಂಬಂಧಿಸಿದಂತೆ ಪ್ರಪಂಚದಾದ್ಯಂತದ ಜನರು ಕೇಳುತ್ತಿರುವ ಪ್ರಮುಖ ಐದು ಪ್ರಶ್ನೆಗಳನ್ನು ಪ್ರತಿನಿಧಿಸಲು ಐದು ಸಂಖ್ಯೆಗಳನ್ನು ಹೊಂದಿರುವ ದೀಪವನ್ನು ತೋರಿಸುತ್ತದೆ.

ಮತ್ತಷ್ಟು ಓದಿ: ಪ್ರಧಾನಿ ಮೋದಿ ಜೊತೆ ವರ್ಚುವಲ್ ಸಭೆ: ಭಾರತದ ಅಭಿವೃದ್ಧಿಗೆ ಗೂಗಲ್‌ ಬದ್ಧ ಎಂದು ಒತ್ತಿ ಹೇಳಿದ ಸುಂದರ್ ಪಿಚೈ, AI ಶೃಂಗಸಭೆಗೆ ಗೂಗಲ್​​ಗೆ ಆಹ್ವಾನ

ಗೂಗಲ್​ನಲ್ಲಿ ಹೆಚ್ಚು ಹುಡುಕಿದ ಪ್ರಶ್ನೆಗಳು -ಭಾರತದಲ್ಲಿ ದೀಪಾವಳಿಯನ್ನು ಏಕೆ ಆಚರಿಸುತ್ತಾರೆ ಎಂಬುದು ಪ್ರಮುಖ ಪ್ರಶ್ನೆಯಾಗಿತ್ತು -ನಾವು ದೀಪಾವಳಿಯಲ್ಲಿ ರಂಗೋಲಿ ಏಕೆ ಹಾಕುತ್ತೇವೆ? -ನಾವು ದೀಪಾವಳಿಯಂದು ದೀಪಗಳನ್ನು ಏಕೆ ಬೆಳಗಿಸುತ್ತೇವೆ? -ದೀಪಾವಳಿಯಂದು ಲಕ್ಷ್ಮಿ ಪೂಜೆಯನ್ನು ಏಕೆ ಮಾಡುತ್ತಾರೆ? -ದೀಪಾವಳಿಯಲ್ಲಿ ಎಣ್ಣೆ ಸ್ನಾನ ಏಕೆ? ಹೀಗೆ ಹಲವು ಪ್ರಶ್ನೆಗಳನ್ನು ಗೂಗಲ್​ಗೆ ಕೇಳಲಾಗಿದೆ.

ಕಳೆದ ತಿಂಗಳು (ಅಕ್ಟೋಬರ್ 2023 ರಲ್ಲಿ), ಪ್ರಧಾನಿ ನರೇಂದ್ರ ಮೋದಿ ಅವರು ಸುಂದರ್ ಪಿಚೈ ಅವರೊಂದಿಗೆ ಸಂವಾದ ನಡೆದಿದ್ದರು. ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವ ಕುರಿತು ಮಾತುಕತೆ ನಡೆದಿದ್ದರು. ಭಾರತದಲ್ಲಿ Chromebook ಗಳನ್ನು ತಯಾರಿಸಲು HP ಯೊಂದಿಗೆ Google ನ ಪಾಲುದಾರಿಕೆಗಾಗಿ ಪಿಚೈ ಅವರನ್ನು ಮೋದಿ ಮತ್ತಷ್ಟು ಶ್ಲಾಘಿಸಿದರು. ಅವರು Google ನ 100 ಭಾಷೆಗಳ ಉಪಕ್ರಮವನ್ನು ಒಪ್ಪಿಕೊಂಡರು ಮತ್ತು AI ಪರಿಕರಗಳನ್ನು ಭಾರತೀಯ ಭಾಷೆಗಳಲ್ಲಿಯೂ ಲಭ್ಯವಾಗುವಂತೆ ಮಾಡುವ ಪ್ರಯತ್ನವನ್ನು ಪ್ರೋತ್ಸಾಹಿಸಿದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು