Nigeria: ಬಂಧೂಕುಧಾರಿಗಳಿಂದ ರೈಲ್ವೆ ನಿಲ್ದಾಣದ ಮೇಲೆ ದಾಳಿ, 30ಕ್ಕೂ ಹೆಚ್ಚು ಮಂದಿಯ ಅಪಹರಣ

ನೈಜೀರಿಯಾ(Nigeria) ದ ರೈಲು ನಿಲ್ದಾಣದ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಮೊದಲಿಗೆ ದಾಳಿಕೋರರು ಗುಂಡು ಹಾರಿಸಿದ್ದು, ಅನೇಕ ಜನರು ಗಾಯಗೊಂಡಿದ್ದು, 32 ಜನರನ್ನು ಅಪಹರಿಸಿರುವ ಮಾಹಿತಿ ಲಭ್ಯವಾಗಿದೆ.

Nigeria: ಬಂಧೂಕುಧಾರಿಗಳಿಂದ ರೈಲ್ವೆ ನಿಲ್ದಾಣದ ಮೇಲೆ ದಾಳಿ, 30ಕ್ಕೂ ಹೆಚ್ಚು ಮಂದಿಯ ಅಪಹರಣ
ನೈಜೀರಿಯಾ ರೈಲ್ವೆ ನಿಲ್ದಾಣ
Follow us
| Updated By: ನಯನಾ ರಾಜೀವ್

Updated on: Jan 09, 2023 | 8:14 AM

ನೈಜೀರಿಯಾ(Nigeria) ದ ರೈಲು ನಿಲ್ದಾಣದ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಮೊದಲಿಗೆ ದಾಳಿಕೋರರು ಗುಂಡು ಹಾರಿಸಿದ್ದು, ಅನೇಕ ಜನರು ಗಾಯಗೊಂಡಿದ್ದು, 32 ಜನರನ್ನು ಅಪಹರಿಸಿರುವ ಮಾಹಿತಿ ಲಭ್ಯವಾಗಿದೆ. ನೈಜೀರಿಯಾದ ದಕ್ಷಿಣ ಇಡೊ ರಾಜ್ಯದ ರೈಲು ನಿಲ್ದಾಣದಲ್ಲಿ ಈ ದಾಳಿ ನಡೆದಿದ್ದು, ಎಕೆ-47 ರೈಫಲ್‌ಗಳಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ.ಫೆಬ್ರವರಿಯಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೂ ಮುನ್ನ ನಡೆದಿರುವ ಈ ದಾಳಿ ಸರ್ಕಾರಕ್ಕೆ ನೇರ ಸವಾಲಾಗಿದೆ.

ಈ ದಾಳಿಯು ಆಫ್ರಿಕಾದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಅಭದ್ರತೆಯ ಹೊಸ ಉದಾಹರಣೆಯಾಗಿದೆ. ಸಂಜೆ 4 ಗಂಟೆಗೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಟಾಮ್ ಇಕಿಮಿ ನಿಲ್ದಾಣದ ಮೇಲೆ ದಾಳಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದಾಳಿ ನಡೆದಾಗ ವಾರಿಗೆ ರೈಲಿಗಾಗಿ ಜನರು ನಿಲ್ದಾಣದಲ್ಲಿ ಕಾಯುತ್ತಿದ್ದರು. ವಾರಿ ತೈಲ ಕೇಂದ್ರವಾಗಿದೆ. ಅದೇ ಸಮಯದಲ್ಲಿ, ಈ ನಿಲ್ದಾಣವು ರಾಜ್ಯದ ರಾಜಧಾನಿ ಬೆನಿನ್ ನಗರದ ಈಶಾನ್ಯಕ್ಕೆ ಸುಮಾರು 111 ಕಿಮೀ ದೂರದಲ್ಲಿದೆ ಮತ್ತು ಅನಂಬ್ರಾ ರಾಜ್ಯದ ಗಡಿಗೆ ಹತ್ತಿರದಲ್ಲಿದೆ. ಪೊಲೀಸರ ಪ್ರಕಾರ, ದಾಳಿಯಲ್ಲಿ ನಿಲ್ದಾಣದಲ್ಲಿದ್ದ ಕೆಲವರ ಮೇಲೂ ಗುಂಡು ಹಾರಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಹರಣಕಾರರು ತಮ್ಮೊಂದಿಗೆ 32 ಜನರನ್ನು ಕರೆದೊಯ್ದಿದ್ದಾರೆ, ಅವರಲ್ಲಿ ಒಬ್ಬರು ಈಗಾಗಲೇ ತಪ್ಪಿಸಿಕೊಂಡಿದ್ದಾರೆ ಎಂದು ಎಡೊ ರಾಜ್ಯ ಮಾಹಿತಿ ಅಧಿಕಾರಿ ಕ್ರಿಸ್ ಓಸಾ ನೆಹಿಖರೆ ಹೇಳಿದ್ದಾರೆ. ಸದ್ಯ ಅಪಹರಣಕ್ಕೊಳಗಾದವರನ್ನು ರಕ್ಷಿಸಲು ಸೇನೆ ಮತ್ತು ಪೊಲೀಸರ ತಂಡ ಕಾರ್ಯಾಚರಣೆ ಆರಂಭಿಸಿದೆ. ಇದರಲ್ಲಿ ವಿಜಿಲೆನ್ಸ್ ನೆಟ್‌ವರ್ಕ್‌ನ ಸಹಾಯವನ್ನೂ ಪಡೆಯಲಾಗುತ್ತಿದೆ.

ಮುಂದಿನ ಕೆಲವೇ ಗಂಟೆಗಳಲ್ಲಿ ಅಪಹರಣಕ್ಕೊಳಗಾದ ಎಲ್ಲರನ್ನು ರಕ್ಷಿಸಲಾಗುವುದು ಎಂದು ನಾವು ಭರವಸೆ ನೀಡುತ್ತೇವೆ ಎಂದು ಅವರು ಹೇಳಿದರು.

ನೈಜೀರಿಯನ್ ರೈಲ್ವೇಸ್ ಕಾರ್ಪೊರೇಷನ್ (ಎನ್‌ಆರ್‌ಸಿ) ಮುಂದಿನ ಸೂಚನೆ ಬರುವವರೆಗೆ ನಿಲ್ದಾಣವನ್ನು ಮುಚ್ಚಲಾಗುತ್ತದೆ ಎಂದು ಹೇಳಲಾಗಿದೆ. NRC ಕಳೆದ ತಿಂಗಳು ರಾಜಧಾನಿ ಅಬುಜಾವನ್ನು ಉತ್ತರ ಕಡುನಾ ರಾಜ್ಯಕ್ಕೆ ಸಂಪರ್ಕಿಸುವ ರೈಲು ಸೇವೆಯನ್ನು ಪುನಃ ತೆರೆಯಿತು, ಅದರ ಹಳಿಗಳನ್ನು ತಿಂಗಳ ಹಿಂದೆ ಬಂದೂಕುಧಾರಿಗಳು ಸ್ಫೋಟಿಸಿದ್ದರು. ಡಜನ್​ಗಟ್ಟಲೆ ಪ್ರಯಾಣಿಕರನ್ನು ಅಪಹರಿಸಿ ಆರು ಜನರನ್ನು ಕೊಂದಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು
ಪುತ್ತಿಗೆ ಮಠದ ಹಳೆಯ ಅನುಯಾಯಿಯೇನೋ ಎಂಬಂತಿತ್ತು ರತನ್ ಟಾಟಾರ ವರ್ತನೆ!
ಪುತ್ತಿಗೆ ಮಠದ ಹಳೆಯ ಅನುಯಾಯಿಯೇನೋ ಎಂಬಂತಿತ್ತು ರತನ್ ಟಾಟಾರ ವರ್ತನೆ!
ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದ ದರ್ಶನ್; ಜೈಲಿಂದ ದಾಸ ಕೊಟ್ಟ ಸಿಗ್ನಲ್ ಏನು?
ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದ ದರ್ಶನ್; ಜೈಲಿಂದ ದಾಸ ಕೊಟ್ಟ ಸಿಗ್ನಲ್ ಏನು?
ಮಗನನ್ನು ಪುನಃ ಲಾಂಚ್ ಮಾಡಲು ಹಟತೊಟ್ಟ ಹೆಚ್ಡಿಕೆ ಕ್ಷೇತ್ರ ಬಿಟ್ಟುಕೊಡುವರೇ?
ಮಗನನ್ನು ಪುನಃ ಲಾಂಚ್ ಮಾಡಲು ಹಟತೊಟ್ಟ ಹೆಚ್ಡಿಕೆ ಕ್ಷೇತ್ರ ಬಿಟ್ಟುಕೊಡುವರೇ?
ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಮಯ ಬೇಕು: ವಿಜಯೇಂದ್ರ
ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಮಯ ಬೇಕು: ವಿಜಯೇಂದ್ರ
ಪ್ರಧಾನಿ ನರೇಂದ್ರ ಮೋದಿ ಭೇಟಿ ಬಗ್ಗೆ ಸೋಮಣ್ಣ ಹೇಳಿದ್ದೇನು? ಇಲ್ಲಿದೆ ನೋಡಿ
ಪ್ರಧಾನಿ ನರೇಂದ್ರ ಮೋದಿ ಭೇಟಿ ಬಗ್ಗೆ ಸೋಮಣ್ಣ ಹೇಳಿದ್ದೇನು? ಇಲ್ಲಿದೆ ನೋಡಿ
ಕೋರ್ಟ್ ಆದೇಶದ ಮೇರೆಗೆ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಪ್ರದೋಶ್ ವಾಪಸ್
ಕೋರ್ಟ್ ಆದೇಶದ ಮೇರೆಗೆ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಪ್ರದೋಶ್ ವಾಪಸ್
ಜಗಳೂರು ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭ!
ಜಗಳೂರು ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭ!
ಭಾರತ ರತ್ನ ರತನ್ ಟಾಟಾ ನಿಧನಕ್ಕೆ ಮುಂಬೈನಲ್ಲಿ ಪ್ರಕೃತಿಯಿಂದಲೂ ಶೋಕಾಚರಣೆ
ಭಾರತ ರತ್ನ ರತನ್ ಟಾಟಾ ನಿಧನಕ್ಕೆ ಮುಂಬೈನಲ್ಲಿ ಪ್ರಕೃತಿಯಿಂದಲೂ ಶೋಕಾಚರಣೆ