AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಮಾಸ್​​ನ್ನು ಇಸ್ಲಾಮಿಕ್ ಸ್ಟೇಟ್​​ಗೆ ಹೋಲಿಸಿದ ನೆತನ್ಯಾಹು, ಶೀಘ್ರದಲ್ಲೇ ಅದನ್ನು ನಿರ್ನಾಮ ಮಾಡುತ್ತೇವೆ ಎಂದು ಎಚ್ಚರಿಕೆ

ಹಮಾಸ್ ತನ್ನನ್ನು ನಾಗರಿಕತೆಯ ಶತ್ರು ಎಂದು ತೋರಿಸಿದೆ. ಆದರೆ ನಾಗರಿಕತೆಯ ಶಕ್ತಿಗಳು ಸಂಪೂರ್ಣ ದುಷ್ಟತನವನ್ನು ಗೆಲ್ಲುತ್ತವೆ ಎಂದು ಅವರು ಹೇಳಿದರು. "ಆಂಟೋನಿ, ನನ್ನ ಸ್ನೇಹಿತ, ನಾನು ನಿಮಗೆ ಹೇಳುತ್ತೇನೆ, ನಾನು ನಮ್ಮೆಲ್ಲರಿಗೂ ಹೇಳುತ್ತೇನೆ. ಮುಂದೆ ಅನೇಕ ಕಷ್ಟದ ದಿನಗಳು ಬರುತ್ತವೆ. ಆದರೆ ನಾಗರಿಕತೆಯ ಶಕ್ತಿಗಳು ಗೆಲ್ಲುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ

ಹಮಾಸ್​​ನ್ನು ಇಸ್ಲಾಮಿಕ್ ಸ್ಟೇಟ್​​ಗೆ ಹೋಲಿಸಿದ ನೆತನ್ಯಾಹು, ಶೀಘ್ರದಲ್ಲೇ ಅದನ್ನು ನಿರ್ನಾಮ ಮಾಡುತ್ತೇವೆ ಎಂದು ಎಚ್ಚರಿಕೆ
ಬೆಂಜಮಿನ್ ನೆತನ್ಯಾಹು
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on:Oct 12, 2023 | 8:32 PM

Share

ಟೆಲ್ ಅವಿವ್‌ ಅಕ್ಟೋಬರ್ 12: ಭಯೋತ್ಪಾದಕ ಗುಂಪು ಹಮಾಸ್ (Hamas) ವಿರುದ್ಧದ ಯುದ್ಧದಲ್ಲಿ ದೇಶಕ್ಕೆ ಯುನೈಟೆಡ್ ಸ್ಟೇಟ್ಸ್ ನೀಡಿದ ಬೆಂಬಲಕ್ಕಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಗುರುವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ (Antony Blinken) ಅವರಿಗೆ ಧನ್ಯವಾದ ಹೇಳಿದ್ದಾರೆ. ಈ ಸಮಯದಲ್ಲಿ ಅವರ ಭೇಟಿಯು ಅಮೆರಿಕದ ನಿಸ್ಸಂದಿಗ್ಧವಾದ ಬೆಂಬಲದ ಸ್ಪಷ್ಟ ಉದಾಹರಣೆಯಾಗಿದೆ ಇಸ್ರೇಲ್ ಪ್ರಧಾನಿ ಹೇಳಿದ್ದಾರೆ.

ಹಮಾಸ್‌ನ ಅನಾಗರಿಕರ ವಿರುದ್ಧದ ನಮ್ಮ ಯುದ್ಧದಲ್ಲಿ ಇಸ್ರೇಲ್‌ಗೆ ನೀವು ನೀಡಿದ ಬೆಂಬಲಕ್ಕಾಗಿ ಅಮೆರಿಕದ ಜನರಿಗೆ ಧನ್ಯವಾದಗಳು. ಮಿಸ್ಟರ್ ಸೆಕ್ರೆಟರಿ, ನಿಮ್ಮ ಭೇಟಿಯು ಇಸ್ರೇಲ್‌ಗೆ ಅಮೆರಿಕದ ನಿಸ್ಸಂದಿಗ್ಧವಾದ ಬೆಂಬಲಕ್ಕೆ ಮತ್ತೊಂದು ಸ್ಪಷ್ಟವಾದ ಉದಾಹರಣೆಯಾಗಿದೆ ಎಂದು ಟೆಲ್ ಅವೀವ್‌ನಲ್ಲಿರುವ ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ಕಿರಿಯಾ ಪ್ರಧಾನ ಕಚೇರಿಯಲ್ಲಿ ಬ್ಲಿಂಕನ್ ಅವರೊಂದಿಗಿನ ಸಭೆಯ ನಂತರ ಜಂಟಿ ಹೇಳಿಕೆಯಲ್ಲಿ ನೆತನ್ಯಾಹು ಹೇಳಿದ್ದಾರೆ.

ಹಮಾಸ್ ತನ್ನನ್ನು ನಾಗರಿಕತೆಯ ಶತ್ರು ಎಂದು ತೋರಿಸಿದೆ. ಆದರೆ ನಾಗರಿಕತೆಯ ಶಕ್ತಿಗಳು ಸಂಪೂರ್ಣ ದುಷ್ಟತನವನ್ನು ಗೆಲ್ಲುತ್ತವೆ ಎಂದು ಅವರು ಹೇಳಿದರು. “ಆಂಟೋನಿ, ನನ್ನ ಸ್ನೇಹಿತ, ನಾನು ನಿಮಗೆ ಹೇಳುತ್ತೇನೆ, ನಾನು ನಮ್ಮೆಲ್ಲರಿಗೂ ಹೇಳುತ್ತೇನೆ. ಮುಂದೆ ಅನೇಕ ಕಷ್ಟದ ದಿನಗಳು ಬರುತ್ತವೆ. ಆದರೆ ನಾಗರಿಕತೆಯ ಶಕ್ತಿಗಳು ಗೆಲ್ಲುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ.ಅದು ನಿಜವಾಗಲು ಕಾರಣವೆಂದರೆ ವಿಜಯದ ಮೊದಲ ಪೂರ್ವಾಪೇಕ್ಷಿತ  ನೈತಿಕ ಸ್ಪಷ್ಟತೆ ಏನೆಂದು ನಾವು ಅರ್ಥಮಾಡಿಕೊಂಡಿದ್ದೇವೆ. ದುಷ್ಟರ ವಿರುದ್ಧ ನಾವು ಗಟ್ಟಿಯಾಗಿ, ಹೆಮ್ಮೆಯಿಂದ ಮತ್ತು ಒಗ್ಗಟ್ಟಿನಿಂದ ನಿಲ್ಲಬೇಕಾದ ಸಮಯ ಇದು ಎಂದು ಅವರು ಹೇಳಿದ್ದಾರೆ.

ನೆತನ್ಯಾಹು ಹಮಾಸ್ ಅನ್ನು ಐಸಿಸ್ ಜೊತೆ ಹೋಲಿಸಿದ್ದು, ಭಯೋತ್ಪಾದಕ ಗುಂಪನ್ನು ಇಸ್ಲಾಮಿಕ್ ಸ್ಟೇಟ್‌ನಂತೆ ಹತ್ತಿಕ್ಕಲಾಗುವುದು ಎಂದು ಪ್ರತಿಜ್ಞೆ ಮಾಡಿದರು. ಹಮಾಸ್ ಐಸಿಸ್ ಮತ್ತು ಐಸಿಸ್ ಅನ್ನು ನಿರ್ನಾಮ ಮಾಡಿದಂತೆಯೇ ಹಮಾಸ್ ಅನ್ನು ಕೂಡ ನಿರ್ನಾಮ ಮಾಡಲಾಗುವುದು,. ಹಮಾಸ್ ಅನ್ನು ಐಸಿಸ್ ನಡೆಸಿಕೊಂಡ ರೀತಿಯಲ್ಲಿಯೇ ನಡೆಸಬೇಕು. ಅವರನ್ನು ರಾಷ್ಟ್ರಗಳ ಸಮುದಾಯದಿಂದ ಹೊರದಬ್ಬಬೇಕು. ಯಾವುದೇ ನಾಯಕ ಅವರನ್ನು ಭೇಟಿಯಾಗಬಾರದು, ಯಾವುದೇ ದೇಶವು ಅವರಿಗೆ ಬೆಂಬಲ ನೀಡಬಾರದು ಎಂದು ಇಸ್ರೇಲ್ ಪಿಎಂ ಹೇಳಿದ್ದಾರೆ.

ಇದನ್ನೂ ಓದಿ: Israel-Palestine conflict: ಭಾರತ ನಮ್ಮ ಜನರ ಎರಡನೇ ಮನೆ.. ಹಮಾಸ್ ಉಗ್ರರನ್ನು ಹಿಮ್ಮಟ್ಟಿಸುವವರೆಗೆ ಇಸ್ರೇಲ್ ಅನ್ನು ಯಾರಿಂದಲೂ ತಡೆಯುವುದು ಸಾಧ್ಯವಿಲ್ಲ!’ ನ್ಯೂಸ್9 ಜೊತೆ ಇಸ್ರೇಲ್ ರಾಯಭಾರಿ ನಾರ್ ಗಿಲೋನ್ ಸಂದರ್ಶನ..

ಅಮೆರಿಕ “ಯಾವಾಗಲೂ” ಇಸ್ರೇಲ್ ಅನ್ನು ಬೆಂಬಲಿಸುತ್ತದೆ ಎಂದು ಬ್ಲಿಂಕನ್ ಹೇಳಿದ್ದು, ಪ್ಯಾಲೆಸ್ತೀನಿಯಾದವರು ಹಮಾಸ್ ಪ್ರತಿನಿಧಿಸದ “ಕಾನೂನುಬದ್ಧ ಆಕಾಂಕ್ಷೆಗಳನ್ನು” ಹೊಂದಿದ್ದಾರೆ ಎಂದು ಹೇಳಿದರು. “ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಸಾಕಷ್ಟು ಬಲಶಾಲಿಯಾಗಿರಬಹುದು. ಆದರೆ ಅಮೆರಿಕಾ ಇರುವವರೆಗೂ ನೀವು ಎಂದಿಗೂ ಚಿಂತಿಸಬೇಕಾಗಿಲ್ಲ. ನಾವು ಯಾವಾಗಲೂ ನಿಮ್ಮ  ಜತೆಯಲ್ಲಿರುತ್ತೇವೆ ಎಂದು ಜಂಟಿ ಹೇಳಿಕೆಯಲ್ಲಿ ಬ್ಲಿಂಕನ್ ಹೇಳಿದ್ದಾರೆ.

ಇಸ್ರೇಲ್‌ನಲ್ಲಿ 1,200 ಜನರನ್ನು ಕೊಂದ ವಾರಾಂತ್ಯದ ದಾಳಿಯ ಮೇಲೆ ಇಸ್ರೇಲ್‌ನ ಸೇನೆಯು ಹಮಾಸ್‌ನ ಮೇಲೆ ದಾಳಿ ನಡೆಸುತ್ತಿದ್ದಂತೆ ಬೆಂಬಲದ  ಭೇಟಿಗಾಗಿ ಅಧಿಕಾರಿಗಳ ತಂಡದೊಂದಿಗೆ ಟೆಲ್ ಅವಿವ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಬ್ಲಿಂಕನ್ ಇಂದು ಬೆಳಗ್ಗೆ ಬಂದು ತಲುಪಿದ್ದಾರೆ. ದಾಳಿಯಲ್ಲಿ ಕನಿಷ್ಠ 25 ಯುಎಸ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಬ್ಲಿಂಕನ್ ಮಾಹಿತಿ ನೀಡಿದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:28 pm, Thu, 12 October 23

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು