AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Historic Hindu Diksha Din: ಅಮೆರಿಕದ ನೂತನ ಅಕ್ಷರಧಾಮದಲ್ಲಿ 30 ಯುವಕರಿಂದ ದೀಕ್ಷೆ ಸ್ವೀಕಾರ

ಅಮೆರಿಕದಲ್ಲಿ ಇತ್ತೀಚೆಗಷ್ಟೇ ನಿರ್ಮಾಣವಾಗಿರುವ ಐತಿಹಾಸಿಕ ಅಕ್ಷರಧಾಮದ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಅಮೆರಿಕದ 30ಕ್ಕೂ ಅಧಿಕ ಯುವಕರು ಧೀಕ್ಷೆ ಪಡೆದು ನಿಸ್ವಾರ್ಥವಾಗಿ ಬದುಕು ನಡೆಸುವ ಸಂಕಲ್ಪತೊಟ್ಟರು. ಇವರಲ್ಲಿ ಕೆನಡಾ, ಅಮೆರಿಕ ಹಾಗೂ ಭಾರತದ ಯುವಕರು ಇದ್ದಾರೆ. ಏಕತೆ, ಭಕ್ತಿ, ಶೈಕ್ಷಣಿಕ, ವೃತ್ತಿಪರ ಹಿನ್ನೆಲೆಯಿಂದ ಬಂದ ಯುವಕರು ಇವರಾಗಿದ್ದಾರೆ. ನಿಸ್ವಾರ್ಥ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ನಮ್ರತೆ ಹಾಗೂ ಸಹಾನುಭೂತಿ ಸೇರಿದಂತೆ ಹಲವು ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಮಹಂತಸ್ವಾಮಿ ಮಹಾರಾಜ್ ಆಶೀರ್ವಧಿಸಿದ್ದಾರೆ.

Historic Hindu Diksha Din: ಅಮೆರಿಕದ ನೂತನ ಅಕ್ಷರಧಾಮದಲ್ಲಿ 30 ಯುವಕರಿಂದ ದೀಕ್ಷೆ ಸ್ವೀಕಾರ
ಅಕ್ಷರಧಾಮ
ನಯನಾ ರಾಜೀವ್
| Edited By: |

Updated on:Oct 03, 2023 | 4:09 PM

Share

ಅಮೆರಿಕದಲ್ಲಿ ಇತ್ತೀಚೆಗಷ್ಟೇ ನಿರ್ಮಾಣವಾಗಿರುವ ಐತಿಹಾಸಿಕ ಅಕ್ಷರಧಾಮ(Akshardham)ದ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಅಮೆರಿಕದ 30ಕ್ಕೂ ಅಧಿಕ ಯುವಕರು ದೀಕ್ಷೆ(Diksha) ಪಡೆದು ನಿಸ್ವಾರ್ಥವಾಗಿ ಬದುಕು ನಡೆಸುವ ಸಂಕಲ್ಪತೊಟ್ಟರು. ಇವರಲ್ಲಿ ಕೆನಡಾ, ಅಮೆರಿಕ ಹಾಗೂ ಭಾರತದ ಯುವಕರು ಇದ್ದಾರೆ. ಏಕತೆ, ಭಕ್ತಿ, ಶೈಕ್ಷಣಿಕ, ವೃತ್ತಿಪರ ಹಿನ್ನೆಲೆಯಿಂದ ಬಂದ ಯುವಕರು ಇವರಾಗಿದ್ದಾರೆ. ನಿಸ್ವಾರ್ಥ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ನಮ್ರತೆ ಹಾಗೂ ಸಹಾನುಭೂತಿ ಸೇರಿದಂತೆ ಹಲವು ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಮಹಂತಸ್ವಾಮಿ ಮಹಾರಾಜ್ ಆಶೀರ್ವಧಿಸಿದ್ದಾರೆ.

ವ್ಯಕ್ತಿಯನ್ನು ಮೀರಿದ ಸಾಧನೆಗಳು ಸಮಾಜದ ಮೇಲೆ ಶಾಶ್ವತವಾದ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಮಹಂತಸ್ವಾಮಿಯವರು ಧೀಕ್ಷಾ ಮಂತ್ರವನ್ನು ಬೋಧಿಸಿದರು. ಸಮುದಾಯದ ಯೋಗಕ್ಷೇಮವು ಅವರ ಅತ್ಯುನ್ನತ ಆಯ್ಕೆಯಾಗಿದೆ. ನಿಮ್ಮ ದೇವೆಯ ಮೂಲಕ ದೇವರನ್ನು ಕಾಣುವ ನಿಮ್ಮ ಕನಸು ಯಶಸ್ವಿಯಾಗಲಿ ಎಂದು ಮಹಾರಾಜ್ ಹೇಳಿದ್ದಾರೆ.

ಅಮೆರಿಕದ ನ್ಯೂಜೆರ್ಸಿಯಲ್ಲಿ ತೆರೆಯಲಿರುವ ಅಕ್ಷರಧಾಮ ದೇಗುಲ ಭಾರತದಿಂದ ಹೊರಗಿರುವ ವಿಶ್ವದ ಎರಡನೇ ಅತಿ ದೊಡ್ಡ ಹಿಂದೂ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದಿಂದ ಹೊರಗಿರುವ ವಿಶ್ವದ ಎರಡನೇ ಅತಿದೊಡ್ಡ ಹಿಂದೂ ದೇವಾಲಯ ಎಂದು ಹೇಳಲಾಗುವ ಯುಎಸ್‌ಎಯ ನ್ಯೂಜೆರ್ಸಿಯ ರಾಬಿನ್ಸ್‌ವಿಲ್ಲೆಯಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯವು ತನ್ನ ಅದ್ಧೂರಿ ಉದ್ಘಾಟನೆಗೆ ಸಿದ್ಧವಾಗಿದೆ.

ಮತ್ತಷ್ಟು ಓದಿ: Akshardham: ಅಮೆರಿಕದಲ್ಲಿ ಅಕ್ಷರಧಾಮ ನಿರ್ಮಾಣ, ಶುಭಾಶಯ ಕೋರಿದ ಪ್ರಧಾನಿ ಮೋದಿ, ಬ್ರಿಟನ್ ಪ್ರಧಾನಿ ರಿಷಿ ಸುನಕ್

ಈ ದೇವಾಲಯವು ಅಕ್ಟೋಬರ್ 8 ರಂದು ಉದ್ಘಾಟನೆಯಾಗಲಿದ್ದು, ಸಾರ್ವಜನಿಕರಿಗೆ ಮುಕ್ತವಾಗಲಿದೆ. ಅಕ್ಷರಧಾಮ ದೇವಾಲಯದ ಸಮರ್ಪಣಾ ಸಮಾರಂಭವು ಸೆಪ್ಟೆಂಬರ್ 30 ರಿಂದ ಅವರ ಪವಿತ್ರ ಮಹಂತ್ ಸ್ವಾಮಿ ಮಹಾರಾಜರ ಸಮ್ಮುಖದಲ್ಲಿ ನಡೆಯುತ್ತಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದಾದ್ಯಂತದ ರಾಷ್ಟ್ರಗಳ ಮುಖ್ಯಸ್ಥರು ಮತ್ತು ನಾಯಕರು ಈ ಸಂದರ್ಭದಲ್ಲಿ ಶುಭ ಹಾರೈಸಿದ್ದಾರೆ. ಶ್ರೀ ಸ್ವಾಮಿನಾರಾಯಣ ಅಕ್ಷರಧಾಮ ದೇವಸ್ಥಾನವನ್ನು 12 ವರ್ಷಗಳಲ್ಲಿ 12,500 ಸ್ವಯಂಸೇವಕರು ಯುಎಸ್ಎ ನ್ಯೂಜೆರ್ಸಿಯಲ್ಲಿ ನಿರ್ಮಿಸಿದ್ದಾರೆ ಮತ್ತು ಅದರ ನಿರ್ಮಾಣ ಕಾರ್ಯವು 2011 ರಿಂದ 2023 ರವರೆಗೆ ನಡೆಯಿತು.

BAPS ಸ್ವಾಮಿನಾರಾಯಣ ಅಕ್ಷರಧಾಮದ 10 ದಿನಗಳ ಭವ್ಯ ಸಮರ್ಪಣಾ ಸಮಾರಂಭವು ಅಕ್ಟೋಬರ್ 8 ರಂದು ಮುಕ್ತಾಯಗೊಳ್ಳಲಿದೆ ಮತ್ತು ಈ ದಿನ ದೇವಾಲಯವನ್ನು ಔಪಚಾರಿಕವಾಗಿ ಉದ್ಘಾಟಿಸಲಾಗುವುದು.

2005 ರಲ್ಲಿ, ನವದೆಹಲಿಯಲ್ಲಿ ಬೃಹತ್ ಅಕ್ಷರಧಾಮ ದೇವಾಲಯವನ್ನು ನಿರ್ಮಿಸಲಾಯಿತು, ಇದನ್ನು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ನೋಡಲು ಬರುತ್ತಾರೆ. ಈ ವರ್ಷ, ಜಿ 20 ಶೃಂಗಸಭೆಯ ಸಂದರ್ಭದಲ್ಲಿ, ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಇಲ್ಲಿಗೆ ಬಂದಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:22 pm, Tue, 3 October 23

ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್