AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಮ್ರಾನ್ ಹೇಳುತ್ತಾರೆ, ಜುನಾಗಢ್ ಪಾಕಿಸ್ತಾನಕ್ಕೆ ಸೇರಿದ್ದಂತೆ!

ಪಾಕಿಸ್ತಾನದ ಪ್ರಧಾನ ಮಂತ್ರಿ ಇಮಾನ್ ಖಾನ್ ಹೊಸ ಕ್ಯಾತೆ ಶುರು ಮಾಡಿದ್ದಾರೆ. ತಮ್ಮ ದೇಶದ ಹೊಸ ರಾಜಕೀಯ ನಕಾಶೆಯೊಂದನ್ನು ಬಿಡುಗಡೆ ಮಾಡಿರುವ ಖಾನ್ ಸಾಹೇಬರು ಭಾರತದ ವಶದಲ್ಲಿರುವ ಕಾಶ್ಮೀರ ಮತ್ತು ಜುನಾಗಢ್ ಪ್ರದೇಶವನ್ನು ಪಾಕಿಸ್ತಾನಕ್ಕೆ ಸೇರಿಸಿಕೊಂಡಿದ್ದಾರೆ! ಮತ್ತೂ ತಮಾಷೆಯ ಸಂಗತಿಯೆಂದರೆ, ಅವರ ಸಚಿಸ ಸಂಪುಟ ಆ ನಕಾಶೆಯನ್ನು ಅನುಮೋದಿಸಿದೆ!! ತಿಕ್ಕಲುತನ ಮತ್ತು ಮೂರ್ಖತನವೆಂದರೆ ಪ್ರಾಯಶಃ ಇದೇ ಇರಬೇಕು. ಇಮ್ರಾನ್ ಚೆನ್ನಾಗಿ ಓದಿಕೊಂಡಿರುವದರಿಂದ ಇಂಥ ಬಾಲಿಶ ಪ್ರಯತ್ನಕ್ಕೆ ಮುಂದಾಗಬಾರದಿತ್ತು. ಸೇನಾ ನಾಯಕರು ಮತ್ತು ಮೌಲ್ವಿಗಳನ್ನು ಮೆಚ್ಚಿಸಲು ಆ ದೇಶದ […]

ಇಮ್ರಾನ್ ಹೇಳುತ್ತಾರೆ, ಜುನಾಗಢ್ ಪಾಕಿಸ್ತಾನಕ್ಕೆ ಸೇರಿದ್ದಂತೆ!
ಅರುಣ್​ ಕುಮಾರ್​ ಬೆಳ್ಳಿ
|

Updated on: Aug 04, 2020 | 9:24 PM

Share

ಪಾಕಿಸ್ತಾನದ ಪ್ರಧಾನ ಮಂತ್ರಿ ಇಮಾನ್ ಖಾನ್ ಹೊಸ ಕ್ಯಾತೆ ಶುರು ಮಾಡಿದ್ದಾರೆ. ತಮ್ಮ ದೇಶದ ಹೊಸ ರಾಜಕೀಯ ನಕಾಶೆಯೊಂದನ್ನು ಬಿಡುಗಡೆ ಮಾಡಿರುವ ಖಾನ್ ಸಾಹೇಬರು ಭಾರತದ ವಶದಲ್ಲಿರುವ ಕಾಶ್ಮೀರ ಮತ್ತು ಜುನಾಗಢ್ ಪ್ರದೇಶವನ್ನು ಪಾಕಿಸ್ತಾನಕ್ಕೆ ಸೇರಿಸಿಕೊಂಡಿದ್ದಾರೆ! ಮತ್ತೂ ತಮಾಷೆಯ ಸಂಗತಿಯೆಂದರೆ, ಅವರ ಸಚಿಸ ಸಂಪುಟ ಆ ನಕಾಶೆಯನ್ನು ಅನುಮೋದಿಸಿದೆ!!

ತಿಕ್ಕಲುತನ ಮತ್ತು ಮೂರ್ಖತನವೆಂದರೆ ಪ್ರಾಯಶಃ ಇದೇ ಇರಬೇಕು. ಇಮ್ರಾನ್ ಚೆನ್ನಾಗಿ ಓದಿಕೊಂಡಿರುವದರಿಂದ ಇಂಥ ಬಾಲಿಶ ಪ್ರಯತ್ನಕ್ಕೆ ಮುಂದಾಗಬಾರದಿತ್ತು. ಸೇನಾ ನಾಯಕರು ಮತ್ತು ಮೌಲ್ವಿಗಳನ್ನು ಮೆಚ್ಚಿಸಲು ಆ ದೇಶದ ಪ್ರಧಾನ ಮಂತ್ರಿಗಳು, ಅಧ್ಯಕ್ಷರು ನಿರಂತರವಾಗಿ ಪ್ರಯತ್ನಿಸುತ್ತಿರುತ್ತಾರೆ, ಇದಕ್ಕೆ ಇಮ್ರಾನ್ ಖಾನ್ ಕೂಡ ಹೊರತಾದಂತಿಲ್ಲ.

ದೇಶ ಇಬ್ಭಾಗವಾದಲೂ ಪಾಕಿಸ್ತಾನಿ ನಾಯಕರು ವಿಶ್ವಸಂಸ್ಥೆಗೆ ಮನವಿಯೊಂದನ್ನು ಸಲ್ಲಿಸಿ ಜುನಾಗಢ್ ತಮಗೆ ಸೇರಿದ್ದೆಂದು ಅರುಹಿದ್ದರು. ವಿಶ್ವಸಂಸ್ಥೆಯು, ಕಾಶ್ಮೀರದಲ್ಲಿದ್ದ ತನ್ನ ಕಮೀಷನ್​ಗೆ ಪಾಕಿಸ್ತಾನದ ಮನವಿಯನ್ನು ಪರಿಶೀಲಿಸುವಂತೆ ಹೇಳಿತ್ತು. ಆ ವಿಷಯ ಅಷ್ಟಕ್ಕೇ ನಿಂತುಹೋಗಿದ್ದು ಬೇರೆ ವಿಚಾರ.

ಸೌರಾಷ್ಟ್ರ ಪ್ರಾಂತ್ಯದ ಭಾಗವಾಗಿರುವ ಜುನಾಗಢ್ ಒಂದು ಸುಂದರ ಬಂದರು ನಗರ. ಚಂದ್ರಗುಪ್ತ ಮೌರ್ಯ ಕ್ರಿ. ಪೂ 319ರಲ್ಲಿ ಕಟ್ಟಿದ ಇಲ್ಲಿನ ಕೋಟೆ, ಸಂಸ್ಕೃತಿ, ನೃತ್ಯ-ಹಾಡುಗಳ ಪರಂಪರೆ, ಮಸಾಲೆ ಪದಾರ್ಥಗಳು, ಮತ್ತು ಉಪ್ಪಿನಕಾಯಿ ಜನಜನಿತವಾಗಿವೆ.

ಇದುವರೆಗೆ ಜುನಾಗಢ್ ಬಗ್ಗೆ ಚಕಾರವೆತ್ತದ ಪಾಕಿಸ್ತಾನ ಈಗ ಮತ್ತೆ ಕಾಲು ಕೆದರಿ ಜಗಳಕ್ಕೆ ಬರುವ ಹುನ್ನಾರ ಮಾಡಿದಂತಿದೆ. ಭಾರತ ರಫೇಲ್ ಯುದ್ಧ ವಿಮಾನಗಳನ್ನು ತರಿಸಿಕೊಂಡರೂ ತಾನು ಹೆದರಿಲ್ಲ ಎಂದು ಸಾರುವ ಪ್ರಯತ್ನವೇನಾದರೂ ಇಮ್ರಾನ್ ಖಾನ್ ಮಾಡುತ್ತಿದ್ದರೆ ಅವರು ತಮ್ಮ ಯೋಚನಾಧಾಟಿಯನ್ನು ಬದಲಾಯಿಸಿಕೊಳ್ಳುವುದು ಅವರಿಗೂ ಮತ್ತು ಅವರ ದೇಶಕ್ಕೂ ಒಳ್ಳೆಯದೆಂದು ಭಾರತೀಯರು ಅಂದುಕೊಳ್ಳುತ್ತಿದ್ದಾರೆ. ಯಾಕೆಂದರೆ ರಫೇಲ್ ಇಲ್ಲದಾಗಲೂ ಭಾರತ, ಪಾಕಿಸ್ತಾನವನ್ನು ಮೂರ್ನಾಲ್ಕು ಬಾರಿ ಬಗ್ಗುಬಡಿದಿರುವುದು ವಿಶ್ವಕ್ಕೇ ಗೊತ್ತಿದೆ. ವಿಷಯ ಅಷ್ಟೇ.

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್