AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಮ್ರಾನ್ ಹೇಳುತ್ತಾರೆ, ಜುನಾಗಢ್ ಪಾಕಿಸ್ತಾನಕ್ಕೆ ಸೇರಿದ್ದಂತೆ!

ಪಾಕಿಸ್ತಾನದ ಪ್ರಧಾನ ಮಂತ್ರಿ ಇಮಾನ್ ಖಾನ್ ಹೊಸ ಕ್ಯಾತೆ ಶುರು ಮಾಡಿದ್ದಾರೆ. ತಮ್ಮ ದೇಶದ ಹೊಸ ರಾಜಕೀಯ ನಕಾಶೆಯೊಂದನ್ನು ಬಿಡುಗಡೆ ಮಾಡಿರುವ ಖಾನ್ ಸಾಹೇಬರು ಭಾರತದ ವಶದಲ್ಲಿರುವ ಕಾಶ್ಮೀರ ಮತ್ತು ಜುನಾಗಢ್ ಪ್ರದೇಶವನ್ನು ಪಾಕಿಸ್ತಾನಕ್ಕೆ ಸೇರಿಸಿಕೊಂಡಿದ್ದಾರೆ! ಮತ್ತೂ ತಮಾಷೆಯ ಸಂಗತಿಯೆಂದರೆ, ಅವರ ಸಚಿಸ ಸಂಪುಟ ಆ ನಕಾಶೆಯನ್ನು ಅನುಮೋದಿಸಿದೆ!! ತಿಕ್ಕಲುತನ ಮತ್ತು ಮೂರ್ಖತನವೆಂದರೆ ಪ್ರಾಯಶಃ ಇದೇ ಇರಬೇಕು. ಇಮ್ರಾನ್ ಚೆನ್ನಾಗಿ ಓದಿಕೊಂಡಿರುವದರಿಂದ ಇಂಥ ಬಾಲಿಶ ಪ್ರಯತ್ನಕ್ಕೆ ಮುಂದಾಗಬಾರದಿತ್ತು. ಸೇನಾ ನಾಯಕರು ಮತ್ತು ಮೌಲ್ವಿಗಳನ್ನು ಮೆಚ್ಚಿಸಲು ಆ ದೇಶದ […]

ಇಮ್ರಾನ್ ಹೇಳುತ್ತಾರೆ, ಜುನಾಗಢ್ ಪಾಕಿಸ್ತಾನಕ್ಕೆ ಸೇರಿದ್ದಂತೆ!
ಅರುಣ್​ ಕುಮಾರ್​ ಬೆಳ್ಳಿ
|

Updated on: Aug 04, 2020 | 9:24 PM

Share

ಪಾಕಿಸ್ತಾನದ ಪ್ರಧಾನ ಮಂತ್ರಿ ಇಮಾನ್ ಖಾನ್ ಹೊಸ ಕ್ಯಾತೆ ಶುರು ಮಾಡಿದ್ದಾರೆ. ತಮ್ಮ ದೇಶದ ಹೊಸ ರಾಜಕೀಯ ನಕಾಶೆಯೊಂದನ್ನು ಬಿಡುಗಡೆ ಮಾಡಿರುವ ಖಾನ್ ಸಾಹೇಬರು ಭಾರತದ ವಶದಲ್ಲಿರುವ ಕಾಶ್ಮೀರ ಮತ್ತು ಜುನಾಗಢ್ ಪ್ರದೇಶವನ್ನು ಪಾಕಿಸ್ತಾನಕ್ಕೆ ಸೇರಿಸಿಕೊಂಡಿದ್ದಾರೆ! ಮತ್ತೂ ತಮಾಷೆಯ ಸಂಗತಿಯೆಂದರೆ, ಅವರ ಸಚಿಸ ಸಂಪುಟ ಆ ನಕಾಶೆಯನ್ನು ಅನುಮೋದಿಸಿದೆ!!

ತಿಕ್ಕಲುತನ ಮತ್ತು ಮೂರ್ಖತನವೆಂದರೆ ಪ್ರಾಯಶಃ ಇದೇ ಇರಬೇಕು. ಇಮ್ರಾನ್ ಚೆನ್ನಾಗಿ ಓದಿಕೊಂಡಿರುವದರಿಂದ ಇಂಥ ಬಾಲಿಶ ಪ್ರಯತ್ನಕ್ಕೆ ಮುಂದಾಗಬಾರದಿತ್ತು. ಸೇನಾ ನಾಯಕರು ಮತ್ತು ಮೌಲ್ವಿಗಳನ್ನು ಮೆಚ್ಚಿಸಲು ಆ ದೇಶದ ಪ್ರಧಾನ ಮಂತ್ರಿಗಳು, ಅಧ್ಯಕ್ಷರು ನಿರಂತರವಾಗಿ ಪ್ರಯತ್ನಿಸುತ್ತಿರುತ್ತಾರೆ, ಇದಕ್ಕೆ ಇಮ್ರಾನ್ ಖಾನ್ ಕೂಡ ಹೊರತಾದಂತಿಲ್ಲ.

ದೇಶ ಇಬ್ಭಾಗವಾದಲೂ ಪಾಕಿಸ್ತಾನಿ ನಾಯಕರು ವಿಶ್ವಸಂಸ್ಥೆಗೆ ಮನವಿಯೊಂದನ್ನು ಸಲ್ಲಿಸಿ ಜುನಾಗಢ್ ತಮಗೆ ಸೇರಿದ್ದೆಂದು ಅರುಹಿದ್ದರು. ವಿಶ್ವಸಂಸ್ಥೆಯು, ಕಾಶ್ಮೀರದಲ್ಲಿದ್ದ ತನ್ನ ಕಮೀಷನ್​ಗೆ ಪಾಕಿಸ್ತಾನದ ಮನವಿಯನ್ನು ಪರಿಶೀಲಿಸುವಂತೆ ಹೇಳಿತ್ತು. ಆ ವಿಷಯ ಅಷ್ಟಕ್ಕೇ ನಿಂತುಹೋಗಿದ್ದು ಬೇರೆ ವಿಚಾರ.

ಸೌರಾಷ್ಟ್ರ ಪ್ರಾಂತ್ಯದ ಭಾಗವಾಗಿರುವ ಜುನಾಗಢ್ ಒಂದು ಸುಂದರ ಬಂದರು ನಗರ. ಚಂದ್ರಗುಪ್ತ ಮೌರ್ಯ ಕ್ರಿ. ಪೂ 319ರಲ್ಲಿ ಕಟ್ಟಿದ ಇಲ್ಲಿನ ಕೋಟೆ, ಸಂಸ್ಕೃತಿ, ನೃತ್ಯ-ಹಾಡುಗಳ ಪರಂಪರೆ, ಮಸಾಲೆ ಪದಾರ್ಥಗಳು, ಮತ್ತು ಉಪ್ಪಿನಕಾಯಿ ಜನಜನಿತವಾಗಿವೆ.

ಇದುವರೆಗೆ ಜುನಾಗಢ್ ಬಗ್ಗೆ ಚಕಾರವೆತ್ತದ ಪಾಕಿಸ್ತಾನ ಈಗ ಮತ್ತೆ ಕಾಲು ಕೆದರಿ ಜಗಳಕ್ಕೆ ಬರುವ ಹುನ್ನಾರ ಮಾಡಿದಂತಿದೆ. ಭಾರತ ರಫೇಲ್ ಯುದ್ಧ ವಿಮಾನಗಳನ್ನು ತರಿಸಿಕೊಂಡರೂ ತಾನು ಹೆದರಿಲ್ಲ ಎಂದು ಸಾರುವ ಪ್ರಯತ್ನವೇನಾದರೂ ಇಮ್ರಾನ್ ಖಾನ್ ಮಾಡುತ್ತಿದ್ದರೆ ಅವರು ತಮ್ಮ ಯೋಚನಾಧಾಟಿಯನ್ನು ಬದಲಾಯಿಸಿಕೊಳ್ಳುವುದು ಅವರಿಗೂ ಮತ್ತು ಅವರ ದೇಶಕ್ಕೂ ಒಳ್ಳೆಯದೆಂದು ಭಾರತೀಯರು ಅಂದುಕೊಳ್ಳುತ್ತಿದ್ದಾರೆ. ಯಾಕೆಂದರೆ ರಫೇಲ್ ಇಲ್ಲದಾಗಲೂ ಭಾರತ, ಪಾಕಿಸ್ತಾನವನ್ನು ಮೂರ್ನಾಲ್ಕು ಬಾರಿ ಬಗ್ಗುಬಡಿದಿರುವುದು ವಿಶ್ವಕ್ಕೇ ಗೊತ್ತಿದೆ. ವಿಷಯ ಅಷ್ಟೇ.

3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್
ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್