AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯಾನ್ಮಾರ್ ಜೇಡ್ ಗಣಿಯಲ್ಲಿ ಭೂಕುಸಿತ; ಒಬ್ಬ ವ್ಯಕ್ತಿ ಸಾವು, 70 ಮಂದಿ ನಾಪತ್ತೆ

ಬುಧವಾರ (21:30 GMT ಮಂಗಳವಾರ) ಸ್ಥಳೀಯ ಕಾಲಮಾನ ಸುಮಾರು 04:00 ಗಂಟೆಗೆ ಕಚಿನ್ ರಾಜ್ಯದ ಹ್ಪಕಾಂಟ್​​ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.

ಮ್ಯಾನ್ಮಾರ್ ಜೇಡ್ ಗಣಿಯಲ್ಲಿ ಭೂಕುಸಿತ; ಒಬ್ಬ ವ್ಯಕ್ತಿ ಸಾವು, 70 ಮಂದಿ ನಾಪತ್ತೆ
ಮ್ಯಾನ್ಮಾರ್
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on:Dec 22, 2021 | 11:27 AM

Share

ಮ್ಯಾನ್ಮಾರ್: ಉತ್ತರ ಮ್ಯಾನ್ಮಾರ್‌ನ (northern Myanmar) ಜೇಡ್ ಗಣಿಗಾರಿಕೆ (jade mining)ಸ್ಥಳದಲ್ಲಿ ಭೂಕುಸಿತ  (landslide)ಸಂಭವಿಸಿದ್ದು ಒಬ್ಬ ವ್ಯಕ್ತಿಸಾವಿಗೀಡಾಗಿದ್ದಾರೆ, ಕನಿಷ್ಠ 70 ಜನರು ನಾಪತ್ತೆಯಾಗಿದ್ದಾರೆ. ಬುಧವಾರ (21:30 GMT ಮಂಗಳವಾರ) ಸ್ಥಳೀಯ ಕಾಲಮಾನ ಸುಮಾರು 04:00 ಗಂಟೆಗೆ ಕಚಿನ್ (Kachin) ರಾಜ್ಯದ ಹ್ಪಕಾಂಟ್(Hpakant) ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಸಂತ್ರಸ್ತರಲ್ಲಿ ಹೆಚ್ಚಿನವರು ಅಕ್ರಮ ಜೇಡ್ ಗಣಿಗಾರರೆಂದು ನಂಬಲಾಗಿದೆ. ಮ್ಯಾನ್ಮಾರ್ ವಿಶ್ವದ ಅತಿದೊಡ್ಡ ಜೇಡ್ ಮೂಲವಾಗಿದ್ದು ಅದರ ಗಣಿಗಳಲ್ಲಿ ಹಲವಾರು ಅಪಘಾತಗಳು ಸಂಭವಿಸುತ್ತಿರುತ್ತವೆ.ಹ್ಪಕಾಂಟ್​ನಲ್ಲಿ ಜೇಡ್ ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ. ಆದರೆ ಸ್ಥಳೀಯರು ಸಾಮಾನ್ಯವಾಗಿ ನಿಯಮಾವಳಿಗಳನ್ನು ಧಿಕ್ಕರಿಸುತ್ತಾರೆ. ಉದ್ಯೋಗದ ಕೊರತೆ ಮತ್ತು ಕೊವಿಡ್ -19 ಸಾಂಕ್ರಾಮಿಕದಿಂದ ಹದಗೆಟ್ಟಿರುವಾಗ ಜನರು ಜೀವನೋಪಾಯಕ್ಕೆ ಇದನ್ನು ಆಶ್ರಯಿಸುತ್ತಿದ್ದಾರೆ. ಹಲವಾರು ದಿನಗಳ ಹಿಂದೆ, ಹ್ಪಕಾಂಟ್ ಜೇಡ್ ಬ್ಲಾಕ್‌ನಲ್ಲಿ ಭೂಕುಸಿತದಲ್ಲಿ ಕನಿಷ್ಠ 10 ಕೌಶಲ್ಯರಹಿತ ಗಣಿಗಾರರು ನಾಪತ್ತೆಯಾಗಿದ್ದರು.

2020 ರಲ್ಲಿ160 ಕ್ಕೂ ಹೆಚ್ಚು ಜನರು ಗಣಿಗಾರಿಕೆ ತ್ಯಾಜ್ಯವು ಸರೋವರಕ್ಕೆ ಕುಸಿದ ನಂತರ ಹ್ಪಕಾಂಟ್​​ನಲ್ಲಿ ಸಂಭವಿಸಿದ ಭೀಕರ ದುರಂತಗಳಲ್ಲಿ ಸಾವಿಗೀಡಾಗಿದ್ದರು. ಇವರಲ್ಲಿ ಹೆಚ್ಚಿನವರು ವಲಸಿಗರಾಗಿದ್ದರು. ಹೊಸ ರತ್ನದ ಕಲ್ಲು ಗಣಿಗಾರಿಕೆ ಕಾನೂನನ್ನು 2018 ರಲ್ಲಿ ಅಂಗೀಕರಿಸಲಾಯಿತು. ಆದರೆ ಕಾನೂನುಬಾಹಿರ ಅಭ್ಯಾಸಗಳನ್ನು ನಿಲ್ಲಿಸಲು ಸೀಮಿತ ಅಧಿಕಾರವನ್ನು ಹೊಂದಿರುವ ಕೆಲವೇ ಕೆಲವು ಇನ್ಸ್‌ಪೆಕ್ಟರ್‌ಗಳನ್ನು ಹೊಂದಿದ್ದಾರೆ ಎಂದು ವಿಮರ್ಶಕರು ಹೇಳುತ್ತಾರೆ.

ಮ್ಯಾನ್ಮಾರ್‌ನ ಜೇಡ್ ವ್ಯಾಪಾರವು ವರ್ಷಕ್ಕೆ ₹3000 ಕೋಟಿಗಿಂತ (24 ಬಿಲಿಯನ್ ಪೌಂಡ್ ) ಹೆಚ್ಚು ಮೌಲ್ಯದ್ದಾಗಿದೆ ಎಂದು ವರದಿಯಾಗಿದೆ. ಹ್ಪಕಾಂಟ್ ವಿಶ್ವದ ಅತಿದೊಡ್ಡ ಜೇಡ್ ಗಣಿ ಸ್ಥಳವಾಗಿದೆ.

ದೇಶದ ಲಾಭದಾಯಕ ಆದರೆ ಕಳಪೆ ನಿಯಂತ್ರಿತ ಜೇಡ್ ವ್ಯಾಪಾರದಲ್ಲಿ ಕೆಲಸ ಮಾಡುವವರಲ್ಲಿ ಪ್ರತಿ ವರ್ಷ ಹಲವಾರು ಮಂದಿ ಸಾಯುತ್ತವೆ. ಇದು ನೆರೆಯ ಚೀನಾದಲ್ಲಿ ಹೆಚ್ಚು ಅಪೇಕ್ಷಿತ ರತ್ನವನ್ನು ಹೊರಹಾಕಲು ಕಡಿಮೆ ವೇತನದ ವಲಸೆ ಕಾರ್ಮಿಕರನ್ನು ಬಳಸುತ್ತದೆ.

ಕಚಿನ್ ರಾಜ್ಯದ ಚೀನಾದ ಗಡಿಗೆ ಸಮೀಪವಿರುವ ಹ್ಪಕಾಂಟ್ ಗಣಿಯಲ್ಲಿ ಪ್ರತಿ ವರ್ಷ ಶತಕೋಟಿ ಡಾಲರ್ ಜೇಡ್ ಅನ್ನು ಬರಿಯ ಬೆಟ್ಟಗಳಿಂದ ಸಂಗ್ರಹಿಸಲಾಗುತ್ತದೆ ಎಂದು ನಂಬಲಾಗಿದೆ.  ಮುಂಜಾನೆ 4:00 ರ ಸುಮಾರಿಗೆ (2130 GMT ಮಂಗಳವಾರ) ಸಂಭವಿಸಿದ ಭೂಕುಸಿತದ ನಂತರ “ಸುಮಾರು 70-100 ಜನರು ಕಾಣೆಯಾಗಿದ್ದಾರೆ” ಎಂದು ರಕ್ಷಣಾ ತಂಡದ ಸದಸ್ಯ ಕೊ ನೈ ಹೇಳಿದರು. ನಾವು 25 ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿದ್ದೇವೆ ಮತ್ತು ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಸುಮಾರು 200 ರಕ್ಷಣಾ ಕಾರ್ಯಕರ್ತರು  ಶವಗಳನ್ನು ಹುಡುಕುತ್ತಿದ್ದಾರೆ, ಕೆಲವರು ಹತ್ತಿರದ ಸರೋವರದಲ್ಲಿ ಸತ್ತವರನ್ನು ಹುಡುಕಲು ದೋಣಿಗಳನ್ನು ಬಳಸುತ್ತಿದ್ದಾರೆ ಎಂದು ಅವರು ಹೇಳಿದರು.

ಭೂಕುಸಿತದಲ್ಲಿ 20 ಗಣಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಔಟ್ಲೆಟ್ ಕಚಿನ್ ನ್ಯೂಸ್ ಗ್ರೂಪ್ ತಿಳಿಸಿದೆ. ಮ್ಯಾನ್ಮಾರ್‌ನ ಅಗ್ನಿಶಾಮಕ ಸೇವೆಗಳು ಹ್ಪಕಾಂಟ್ ಮತ್ತು ಹತ್ತಿರದ ಪಟ್ಟಣವಾದ ಲೋನ್ ಖಿನ್‌ನ ಸಿಬ್ಬಂದಿ ರಕ್ಷಣಾ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಮೃತರ ಅಥವಾ ಕಾಣೆಯಾದವರ ಅಂಕಿಅಂಶಗಳನ್ನು ನೀಡಿಲ್ಲ.

ಇದನ್ನೂ ಓದಿ:ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ, ನೋಯ್ಡಾದಲ್ಲಿ ಗಂಭೀರ

Published On - 11:08 am, Wed, 22 December 21

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ