AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Inside Story: ಭಾರತದಲ್ಲಿ ಗಣ್ಯರನ್ನು ಗುರಿಯಾಗಿಸಿ ಆತ್ಮಾಹುತಿ ಸ್ಪೋಟಕ್ಕೆ ಸಂಚು :ರಷ್ಯಾದಲ್ಲಿ ಐಸಿಎಸ್ ಉಗ್ರನ ಬಂಧನ, ಏನಿದರ ಹಕೀಕತ್ತು?

2022 ರಲ್ಲಿ, ನಾನು ಭಾರತಕ್ಕೆ ಹೊರಡಬೇಕಾದ ಸ್ಥಳದಿಂದ ನಾನು ರಷ್ಯಾಕ್ಕೆ ಹಾರಿಹೋದೆ, ಭಾರತದಲ್ಲಿ, ಅವರು ನನ್ನನ್ನು ಭೇಟಿಯಾಗಬೇಕು ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ್ದಕ್ಕಾಗಿ ಇಸ್ಲಾಮಿಕ್ ಸ್ಟೇಟ್ ಆದೇಶದ ಮೇರೆಗೆ ಭಯೋತ್ಪಾದಕ ದಾಳಿ ನಡೆಸಲು ನನಗೆ ಬೇಕಾದ ಎಲ್ಲಾ ವಸ್ತುಗಳನ್ನು ನೀಡಲಾಗಿತ್ತು -ಐಸಿಎಸ್‌ ವೀಡಿಯೊ ಸಂದೇಶ

Inside Story: ಭಾರತದಲ್ಲಿ ಗಣ್ಯರನ್ನು ಗುರಿಯಾಗಿಸಿ ಆತ್ಮಾಹುತಿ ಸ್ಪೋಟಕ್ಕೆ ಸಂಚು :ರಷ್ಯಾದಲ್ಲಿ ಐಸಿಎಸ್ ಉಗ್ರನ ಬಂಧನ, ಏನಿದರ ಹಕೀಕತ್ತು?
ಭಾರತದಲ್ಲಿ ಗಣ್ಯರನ್ನು ಗುರಿಯಾಗಿಸಿ ಆತ್ಮಾಹುತಿ ಸ್ಪೋಟಕ್ಕೆ ಸಂಚು -ರಷ್ಯಾದಲ್ಲಿ ಐಸಿಎಸ್ ಉಗ್ರನ ಬಂಧನ, ಏನಿದರ ಹಕೀಕತ್ತು?
Follow us
S Chandramohan
| Updated By: ಸಾಧು ಶ್ರೀನಾಥ್​

Updated on: Aug 22, 2022 | 6:09 PM

ಭಾರತದಲ್ಲಿ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿದ ಐಸಿಎಸ್ ಉಗ್ರನೊಬ್ಬನನ್ನು ರಷ್ಯಾದಲ್ಲಿ ಬಂಧಿಸಲಾಗಿದೆ. ಭಾರತದಲ್ಲಿ ಪ್ರವಾದಿ ಮೊಹಮ್ಮದ್ ಗೆ ಅಪಮಾನ ಮಾಡಲಾಗಿದೆ. ಇದಕ್ಕೆ ಪ್ರತೀಕಾರವಾಗಿ ತಾನು ಭಾರತದಲ್ಲಿ ಆಡಳಿತರೂಢ ಬಿಜೆಪಿ ನಾಯಕರ ಮೇಲೆ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿದ್ದೆ ಎಂದು ಬಂಧಿತ ಐಸಿಎಸ್ ಉಗ್ರ ರಷ್ಯಾದ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಐಸಿಎಸ್ ಉಗ್ರನ ಬಂಧನದಿಂದಾಗಿ ಭಾರತದಲ್ಲಿ ನಡೆಯಬಹುದಾಗಿದ್ದ ಸಂಭಾವ್ಯ ದಾಳಿಯನ್ನು ತಪ್ಪಿಸಿದಂತೆ ಆಗಿದೆ.

ಭಾರತದಲ್ಲಿ ಗಣ್ಯರನ್ನು ಗುರಿಯಾಗಿಸಿ ಆತ್ಮಾಹುತಿ ಸ್ಪೋಟಕ್ಕೆ ಸಂಚು -ರಷ್ಯಾದಲ್ಲಿ ಓರ್ವ ಐಸಿಎಸ್ ಉಗ್ರನ ಬಂಧನ

ಭಾರತದ ಮೇಲೆ ಒಂದೆಡೆ ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆಗಳು ದಾಳಿಗೆ ಸಂಚು ರೂಪಿಸುತ್ತಲೇ ಇವೆ. ಮತ್ತೊಂದೆಡೆ ಐಎಸ್‌ಐಎಸ್ ಉಗ್ರರು ಭಾರತದಲ್ಲಿ ದಾಳಿಗೆ ಸಂಚು ರೂಪಿಸಿದ್ದಾರೆ. ಭಾರತದಲ್ಲಿ ಪ್ರವಾದಿ ಮೊಹ್ಮದ್‌ಗೆ ಅಪಮಾನ ಮಾಡಲಾಗಿದೆ. ಇದರ ಪ್ರತೀಕಾರ ತೀರಿಸಿಕೊಳ್ಳಲು ಭಾರತದಲ್ಲಿ ಆತ್ಮಾಹುತಿ ಸ್ಪೋಟ ನಡೆಸಲು ಐಸಿಎಸ್ ಸಂಘಟನೆಯ ಉಗ್ರನೊಬ್ಬ ಸಂಚು ರೂಪಿಸಿದ್ದ. ಆತ್ಮಾಹುತಿ ಸ್ಪೋಟಕ್ಕೆ ಸಂಚು ರೂಪಿಸಿದ್ದ ಐಸಿಎಸ್ ಉಗ್ರನನ್ನು ಭಾರತದ ಮಿತ್ರ ರಾಷ್ಟ್ರ ರಷ್ಯಾದಲ್ಲಿ ಬಂಧಿಸಲಾಗಿದೆ. ರಷ್ಯಾದ ಫೆಡರಲ್ ಸೆಕ್ಯೂರಿಟಿ ಸರ್ವೀಸ್‌ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಆತ್ಮಹತ್ಯಾ ಬಾಂಬರ್ ಭಾರತದಲ್ಲಿ ಸೇಡು ತೀರಿಸಿಕೊಳ್ಳಲು ದಾಳಿ ನಡೆಸಲು ಪ್ಲ್ಯಾನ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಬಂಧಿತ ಮಧ್ಯ ಏಷ್ಯಾದ ದೇಶವೊಂದರ ನಿವಾಸಿ. ರಷ್ಯಾ ಪ್ರಕಾರ, ಆರೋಪಿಯು ಈ ವರ್ಷದ ಏಪ್ರಿಲ್ ನಿಂದ ಜೂನ್ ವರೆಗೆ ಟರ್ಕಿಯಲ್ಲಿದ್ದ. ಅಲ್ಲಿ ಅವನನ್ನು ಐಸಿಎಸ್ ನಾಯಕನೊಬ್ಬ, ಐಸಿಎಸ್ ಭಯೋತ್ಪಾದನಾ ಸಂಘಟನೆಗೆ ಆತ್ಮಹತ್ಯಾ ಬಾಂಬರ್ ಆಗಿ ನೇಮಿಸಿಕೊಂಡಿದ್ದ. ಆರೋಪಿಯು ಟೆಲಿಗ್ರಾಮ್ ಮೂಲಕ ಐಸಿಎಸ್ ಸಭೆಗಳಲ್ಲಿ ಭಾಗವಹಿಸುತ್ತಿದ್ದ. ಜೊತೆಗೆ ಟರ್ಕಿ ದೇಶದ ಇಸ್ತಾನ್‌ಬುಲ್ ನಲ್ಲಿ ನಡೆದ ಐಸಿಎಸ್ ಸಭೆಗಳಲ್ಲೂ ಖುದ್ದಾಗಿ ಭಾಗವಹಿಸುತ್ತಿದ್ದ. ಭಾರತದಲ್ಲಿ ಬಿಜೆಪಿ ಪಕ್ಷ ಹಾಗೂ ಸರ್ಕಾರದ ಗಣ್ಯರನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಸ್ಪೋಟ ನಡೆಸಿ ಹತ್ಯೆಗೈಯುವ ಸಂಚು ರೂಪಿಸಿದ್ದ ಎಂದು ಈಗ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

“2022 ರಲ್ಲಿ, ನಾನು ಭಾರತಕ್ಕೆ ಹೊರಡಬೇಕಾದ ಸ್ಥಳದಿಂದ ನಾನು ರಷ್ಯಾಕ್ಕೆ ಹಾರಿಹೋದೆ, ಭಾರತದಲ್ಲಿ, ಅವರು ನನ್ನನ್ನು ಭೇಟಿಯಾಗಬೇಕು ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ್ದಕ್ಕಾಗಿ ಇಸ್ಲಾಮಿಕ್ ಸ್ಟೇಟ್ ಆದೇಶದ ಮೇರೆಗೆ ಭಯೋತ್ಪಾದಕ ದಾಳಿ ನಡೆಸಲು ನನಗೆ ಬೇಕಾದ ಎಲ್ಲಾ ವಸ್ತುಗಳನ್ನು ನೀಡಲಾಗಿತ್ತು. ,” ಎಂದು ಐಸಿಎಸ್‌ ವೀಡಿಯೊದಲ್ಲಿ ಹೇಳಿದ್ದಾರೆ.

ರಷ್ಯಾದ ಭದ್ರತಾ ಸಂಸ್ಥೆಯಾದ ಫೆಡರಲ್ ಸೆಕ್ಯೂರಿಟಿ ಸರ್ವೀಸ್ ಸಂಸ್ಥೆಯು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದೆ. ವಿಚಾರಣೆ ವೇಳೆ ಉಗ್ರನ ಭಾರತದ ದಾಳಿಯ ಸಂಚು ಬಯಲಾಗಿದೆ. ಉಗ್ರ ಟರ್ಕಿಯಿಂದ ರಷ್ಯಾಗೆ ಬಂದಿದ್ದಾನೆ. ಬಳಿಕ ಭಾರತಕ್ಕೆ ಹೋಗಲು ಸೂಚನೆ ನೀಡಲಾಗಿತ್ತು. ಭಾರತದಲ್ಲಿ ಹೈಪ್ರೊಫೈಲ್ ಭಯೋತ್ಪಾದನಾ ದಾಳಿ ನಡೆಸಲು ಉಗ್ರನಿಗೆ ಸೂಚನೆ ನೀಡಲಾಗಿತ್ತು ಎಂಬುದು ಈಗ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. ಉಗ್ರನ ಐಸಿಎಸ್ ನ ಅಮೀರ್‌ನಿಗೆ ನಿಷ್ಠೆಯಿಂದ ಇರುವುದಾಗಿ ಪ್ರಮಾಣ ಮಾಡಿದ್ದ. ರಷ್ಯಾಕ್ಕೆ ಹೋಗಿ, ಅಲ್ಲಿ, ಪೇಪರ್ ದಾಖಲೆಗಳನ್ನ ಸಿದ್ದಪಡಿಸಿಕೊಂಡು ಭಾರತಕ್ಕೆ ಹೋಗಬೇಕೆಂದು ಸೂಚನೆ ನೀಡಲಾಗಿತ್ತು. ಉಗ್ರ, ಭಾರತಕ್ಕೆ ಹೊರಡುವ ಮೊದಲೇ ರಷ್ಯಾದಲ್ಲಿ ಸಿಕ್ಕಿಬಿದಿದ್ದಾನೆ. ರಷ್ಯಾ, ಭಾರತದ ಮಿತ್ರ ರಾಷ್ಟ್ರ. ಜೊತೆಗೆ ರಷ್ಯಾ ಕೂಡ ಉಗ್ರ ಸಂಘಟನೆಗಳ ಮೇಲೆ ತೀವ್ರ ನಿಗಾ ಇಟ್ಟಿದೆ.

ಭಾರತ ಸರ್ಕಾರವು ಕೂಡ ಸೈಬರ್ ಲೋಕದ ಮೇಲೆ ತೀವ್ರ ನಿಗಾ ಇಟ್ಟಿದೆ. ಸೋಷಿಯಲ್ ಮೀಡಿಯಾ ಮೂಲಕವೂ ಐಸಿಎಸ್ ಸಿದ್ದಾಂತವನ್ನು ಹರಡುವ ಕೆಲಸ ಮಾಡಲಾಗುತ್ತಿದೆ.

ಗಣ್ಯರ ಜೊತೆ ಹಿಂಬಾಲಕರು ಬೇಡವೆಂದು ವಿನಂತಿಸಿಕೊಳ್ಳಲಾಗಿದೆ: ಸೀಮಾ ಲಾಟ್ಕರ್
ಗಣ್ಯರ ಜೊತೆ ಹಿಂಬಾಲಕರು ಬೇಡವೆಂದು ವಿನಂತಿಸಿಕೊಳ್ಳಲಾಗಿದೆ: ಸೀಮಾ ಲಾಟ್ಕರ್
ಕಾರು ಚಲಾಯಿಸುವಾಗ ನಿದ್ರೆಗೆ ಜಾರಿದ ಟೆಕ್ಕಿ, ನಡೆಯಿತು ಭಯಾನಕ ಘಟನೆ
ಕಾರು ಚಲಾಯಿಸುವಾಗ ನಿದ್ರೆಗೆ ಜಾರಿದ ಟೆಕ್ಕಿ, ನಡೆಯಿತು ಭಯಾನಕ ಘಟನೆ
ಗ್ಯಾಂಗ್​​ಸ್ಟರ್ ಜಗ್ಗು ಭಗವಾನ್​ಪುರಿಯಾ ತಾಯಿಯ ಗುಂಡಿಕ್ಕಿ ಹತ್ಯೆ
ಗ್ಯಾಂಗ್​​ಸ್ಟರ್ ಜಗ್ಗು ಭಗವಾನ್​ಪುರಿಯಾ ತಾಯಿಯ ಗುಂಡಿಕ್ಕಿ ಹತ್ಯೆ
ಆಷಾಢ ಮೊದಲ ಶುಕ್ರವಾರ: ಶಕ್ತಿ ದೇವತೆ ಆರಾಧನೆಯ ಪ್ರಯೋಜನಗಳೇನು ನೋಡಿ
ಆಷಾಢ ಮೊದಲ ಶುಕ್ರವಾರ: ಶಕ್ತಿ ದೇವತೆ ಆರಾಧನೆಯ ಪ್ರಯೋಜನಗಳೇನು ನೋಡಿ
ಜಮ್ಮು ಕಾಶ್ಮೀರದ ಪ್ರವಾಸಿ ರೆಸಾರ್ಟ್​ ಬಳಿ ಕರಡಿ ಪ್ರತ್ಯಕ್ಷ, ಹೆಚ್ಚಿದ ಆತಂಕ
ಜಮ್ಮು ಕಾಶ್ಮೀರದ ಪ್ರವಾಸಿ ರೆಸಾರ್ಟ್​ ಬಳಿ ಕರಡಿ ಪ್ರತ್ಯಕ್ಷ, ಹೆಚ್ಚಿದ ಆತಂಕ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್