AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಮಾಸ್‌ ವಿರುದ್ಧದ ಯುದ್ಧದಲ್ಲಿ ಇಸ್ರೇಲ್ ಬಳಸಲು ಯೋಚಿಸುತ್ತಿರುವ ‘ಐರನ್ ಬೀಮ್’ ಏನದು?

Iron Beam: ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ನಿರ್ಮಿಸಿದ ಐರನ್ ಬೀಮ್ ಅನ್ನು 2014 ರಲ್ಲಿ ಪ್ರಸ್ತುತಪಡಿಸಲಾಯಿತು. ಆದರೆ ಇಸ್ರೇಲ್‌ನಲ್ಲಿ ಯುದ್ಧದಲ್ಲಿ ಇದು ಬಳಕೆ ಆಗಿಲ್ಲ ಎಂದು ದಿ ಟೆಲಿಗ್ರಾಫ್ ಯುಕೆ ವರದಿ ಮಾಡಿದೆ. ಇದು ಆರಂಭದಲ್ಲಿ 2025 ರಲ್ಲಿ ಇದನ್ನು ಸೇವೆಗೆ ಸೇರಿಸಲು ಚಿಂತಿಸಲಾಗಿತ್ತು. ಇಸ್ರೇಲ್ ಮತ್ತು ಹಮಾಸ್ ನಡುವೆ ಗಾಜಾದಲ್ಲಿ ಈ ವಾರದ ಯುದ್ಧದ ಪ್ರಾರಂಭದ ನಂತರ, ಇಸ್ರೇಲಿ ರಕ್ಷಣಾ ಸಚಿವಾಲಯವು ಐರನ್ ಬೀಮ್‌ನ ನಿಯೋಜನೆಯನ್ನು ತ್ವರಿತಗೊಳಿಸುತ್ತಿದೆ.

ಹಮಾಸ್‌ ವಿರುದ್ಧದ ಯುದ್ಧದಲ್ಲಿ ಇಸ್ರೇಲ್ ಬಳಸಲು ಯೋಚಿಸುತ್ತಿರುವ 'ಐರನ್ ಬೀಮ್' ಏನದು?
ಐರನ್ ಬೀಮ್Image Credit source: rafael.co.il
Follow us
ರಶ್ಮಿ ಕಲ್ಲಕಟ್ಟ
|

Updated on: Oct 16, 2023 | 6:47 PM

ದೆಹಲಿ ಅಕ್ಟೋಬರ್ 16: ಹಮಾಸ್‌ನೊಂದಿಗೆ (Hamas) ನಡೆಯುತ್ತಿರುವ ಹೋರಾಟದ ನಡುವೆಯೇ, ಇಸ್ರೇಲ್ (Israel) ತನ್ನ ಬೆದರಿಕೆಗಳ ವಿರುದ್ಧ ವೈಮಾನಿಕ ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಸಲುವಾಗಿ ಮೊದಲ ಬಾರಿಗೆ ಸಕ್ರಿಯ ಯುದ್ಧ ಕ್ರಮಕ್ಕೆ ‘ಐರನ್ ಬೀಮ್’ (Iron Beam) ಎಂಬ ಕೋಡ್ ಹೆಸರು ಇಟ್ಟಿರುವ ತನ್ನ ಅತ್ಯಾಧುನಿಕ ಲೇಸರ್ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ನಿಯೋಜಿಸಲು ಸಿದ್ಧವಾಗಿದೆ. ಟ್ವಿಟರ್‌ನಲ್ಲಿನ ಓಪನ್ ಸೋರ್ಸ್ ಇಂಟೆಲಿಜೆನ್ಸ್ ಮಾನಿಟರ್ ಪ್ರಕಾರ, ಈ ವ್ಯವಸ್ಥೆಯು ಇಸ್ರೇಲಿ ಸಮಗ್ರ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಅಲ್ಪ-ಶ್ರೇಣಿಯ ಘಟಕವಾಗಿ ಕಾರ್ಯನಿರ್ವಹಿಸುತ್ತದೆ, ಇದು ಒಳಬರುವ ರಾಕೆಟ್‌ಗಳು, ಡ್ರೋನ್‌ಗಳು, ಫಿರಂಗಿ ಮತ್ತು ಮಾರ್ಟರ್ ಶೆಲ್‌ಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಇಂಟರೆಸ್ಟಿಂಗ್ ಇಂಜಿನಿಯರಿಂಗ್ ವರದಿ ಮಾಡಿದೆ.

ಐರನ್ ಬೀಮ್ ಎಂದರೇನು?

ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ನಿರ್ಮಿಸಿದ ಐರನ್ ಬೀಮ್ ಅನ್ನು 2014 ರಲ್ಲಿ ಪ್ರಸ್ತುತಪಡಿಸಲಾಯಿತು. ಆದರೆ ಇಸ್ರೇಲ್‌ನಲ್ಲಿ ಯುದ್ಧದಲ್ಲಿ ಇದು ಬಳಕೆ ಆಗಿಲ್ಲ ಎಂದು ದಿ ಟೆಲಿಗ್ರಾಫ್ ಯುಕೆ ವರದಿ ಮಾಡಿದೆ. ಇದು ಆರಂಭದಲ್ಲಿ 2025 ರಲ್ಲಿ ಇದನ್ನು ಸೇವೆಗೆ ಸೇರಿಸಲು ಚಿಂತಿಸಲಾಗಿತ್ತು. ಇಸ್ರೇಲ್ ಮತ್ತು ಹಮಾಸ್ ನಡುವೆ ಗಾಜಾದಲ್ಲಿ ಈ ವಾರದ ಯುದ್ಧದ ಪ್ರಾರಂಭದ ನಂತರ, ಇಸ್ರೇಲಿ ರಕ್ಷಣಾ ಸಚಿವಾಲಯವು ಐರನ್ ಬೀಮ್‌ನ ನಿಯೋಜನೆಯನ್ನು ತ್ವರಿತಗೊಳಿಸುತ್ತಿದೆ. ಅದನ್ನು ಸೇವೆಗೆ ಸೇರಿಸುವ ಸಲುವಾಗಿ ಪರೀಕ್ಷೆಗಳನ್ನು ಪ್ರಾರಂಭಿಸುತ್ತಿದೆ.

ಹೊಸ ಲೇಸರ್ ಕ್ಷಿಪಣಿ ವ್ಯವಸ್ಥೆ, ‘ಐರನ್ ಬೀಮ್’ ಎಂದು ಕರೆಯಲ್ಪಡುತ್ತದೆ, ಇದನ್ನು ಇಸ್ರೇಲ್ ನ ವಾಯು ರಕ್ಷಣೆಗಾಗಿ “ಗೇಮ್-ಚೇಂಜರ್” ಎಂದು ಪ್ರಶಂಸಿಸಲಾಗುತ್ತಿದೆ. ಇಸ್ರೇಲ್‌ನ ಪ್ರಧಾನ ಮಂತ್ರಿ, ನಫ್ತಾಲಿ ಬೆನೆಟ್ ಪ್ರಕಾರ, “ವಿಶ್ವದ ಏಕೈಕ ಶಕ್ತಿ ಆಧಾರಿತ ಶಸ್ತ್ರಾಸ್ತ್ರ ತಂತ್ರಜ್ಞಾನ” ಇದಾಗಿದ್ದು ಮುನ್ನುಗ್ಗಿಬರುವ UAV ಗಳು, ರಾಕೆಟ್‌ಗಳು ಮತ್ತು ಮಾರ್ಟರ್‌ಗಳನ್ನು ಶೂಟ್ ಮಾಡಲು ಪ್ರತಿ ಶಾಟ್‌ಗೆ $3.50 ರಂತೆ ಲೇಸರ್ ಅನ್ನು ಬಳಸುತ್ತದೆ.

ಇಸ್ರೇಲ್‌ನ ವೈಮಾನಿಕ ರಕ್ಷಣಾ ವ್ಯವಸ್ಥೆಯ ಭಾಗವಾಗಿರುವ ಐರನ್ ಬೀಮ್, ಆಧುನಿಕ ರಾಕೆಟ್-ಇಂಟರೆಸೆಪ್ಟಿಂಗ್ ಐರನ್ ಡೋಮ್ ಜೊತೆಗೆ ಬಳಸಲಾಗುತ್ತದೆ. ಇದು ಒಳಬರುವ UAVಗಳು, ರಾಕೆಟ್‌ಗಳು ಮತ್ತು ಮಾರ್ಟರ್‌ಗಳನ್ನು ನಾಶಮಾಡಲು ಲೇಸರ್ ಕಿರಣವನ್ನು ಬಳಸಿಕೊಂಡು ಇದು ವಿಶ್ವದ ಮೊದಲ ಶಕ್ತಿ ಆಧಾರಿತ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಎಂದು ಹೇಳಿಕೊಳ್ಳುತ್ತದೆ.

ಹೇಗೆ ಕಾರ್ಯನಿರ್ವಹಿಸುತ್ತದೆ?

ಇದು ಡೈರೆಕ್ಟೆಡ್-ಎನರ್ಜಿ (ಡಿಇ) ರಕ್ಷಣಾ ತಂತ್ರಜ್ಞಾನವನ್ನು ಬಳಸುತ್ತದೆ ಮತ್ತು ಅತ್ಯುತ್ತಮ ವೈಮಾನಿಕ ರಕ್ಷಣೆಯನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ.ಡಿಇ ಸಾಧನವು ನೇರವಾಗಿ ನಿಷ್ಕ್ರಿಯಗೊಳಿಸಲು, ಹಾನಿ ಮಾಡಲು ಅಥವಾ ಎದುರಾಳಿ ಉಪಕರಣಗಳು, ಕಟ್ಟಡಗಳು ಮತ್ತು ವ್ಯಕ್ತಿಗಳನ್ನು ನಾಶಮಾಡಲು ಡಿಇ ಅನ್ನು ಬಳಸುವ ಒಂದು ಪ್ರೋಗ್ರಾಂ ಆಗಿದೆ.

ಇದನ್ನೂ ಓದಿ:  ಹಮಾಸ್ ಉಗ್ರರು ಇಸ್ರೇಲ್​ನಲ್ಲಿ ಮನೆಗಳಿಗೆ ನುಗ್ಗಿ ಗುಂಡಿನ ದಾಳಿ ನಡೆಸಿರುವ ಆಘಾತಕಾರಿ ವಿಡಿಯೋ ವೈರಲ್

ಲೇಸರ್ ಸಿಸ್ಟಂನ ಪರಿಣಾಮಕಾರಿತ್ವದ ಬಗ್ಗೆ ಸ್ವಲ್ಪ ಮಾಹಿತಿಯಿಲ್ಲದಿದ್ದರೂ, ಸರ್ಕಾರವು ಭೂಮಿಯಲ್ಲಿ, ಗಾಳಿಯಲ್ಲಿ ಮತ್ತು ಸಮುದ್ರದಲ್ಲಿ ಅದನ್ನು ಬಳಸಿಕೊಳ್ಳಬೇಕೆಂದು ನಿರೀಕ್ಷಿಸುತ್ತದೆ. ಮುಂದಿನ ಕೆಲವು ವರ್ಷಗಳಲ್ಲಿ, ದಾಳಿಗಳ ವಿರುದ್ಧ ದೇಶವನ್ನು ರಕ್ಷಿಸಲು ಲೇಸರ್ ಸಾಧನಗಳನ್ನು ಇಸ್ರೇಲ್‌ನ ಗಡಿಗಳಲ್ಲಿ ಇರಿಸಲಾಗುತ್ತದೆ. ಪ್ಯಾಲೆಸ್ತೀನ್ ಮತ್ತು ಇರಾನ್‌ಗೆ ಸಂದೇಶಗಳನ್ನು ಕಳುಹಿಸುವ ಸಲುವಾಗಿ ಹೊಸ ತಂತ್ರಜ್ಞಾನವನ್ನು ಘೋಷಿಸಲಾಯಿತು. ವರದಿಗಳ ಪ್ರಕಾರ, ಅಸ್ತಿತ್ವದಲ್ಲಿರುವ ಎಲ್ಲಾ ಇತರ ಭದ್ರತಾ ಕ್ರಮಗಳನ್ನು ಮೀರಿಸುವಂತಹ ಕಡಿಮೆ-ವೆಚ್ಚದ, ನಿಖರವಾದ ಮತ್ತು ಬಳಕೆದಾರ ಸ್ನೇಹಿ ಪರಿಹಾರ ಇದು ಎಂದು ಭಾವಿಸಲಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು
ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು
ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?
ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?
ಮೋದಿ ನೇತೃತ್ವದ ಭಾರತದಲ್ಲಿ ಎಲ್ಲರೂ ಸಮಾನರು, ಸುರಕ್ಷಿತರು: ಕೇಂದ್ರ ಸಚಿವೆ
ಮೋದಿ ನೇತೃತ್ವದ ಭಾರತದಲ್ಲಿ ಎಲ್ಲರೂ ಸಮಾನರು, ಸುರಕ್ಷಿತರು: ಕೇಂದ್ರ ಸಚಿವೆ