AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಕಮಾಂಡರ್ ವಿಸ್ಸಾಮ್ ಹಸನ್ ತಾವಿಲ್​​ನ್ನು ಹತ್ಯೆ ಮಾಡಿದ ಇಸ್ರೇಲ್

ಎಸ್‌ಯುವಿಯ ಮೇಲೆ ದಾಳಿ ನಡೆಸಿ  ವಿಸ್ಸಮ್ ಹಸನ್ ತಾವಿಲ್​​ನ್ನು ಹತ್ಯೆಮಾಡಲಾಗಿದೆ. ಆತ ಗಡಿಯುದ್ದಕ್ಕೂ ಕಾರ್ಯನಿರ್ವಹಿಸುವ ರಹಸ್ಯ ಹಿಜ್ಬುಲ್ಲಾ ಪಡೆಗೆ ಕಮಾಂಡರ್ ಆಗಿದ್ದ ಎಂದು ಹಿಜ್ಬುಲ್ಲಾ ಹೇಳಿದೆ. ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ಗೆ ಹಮಾಸ್‌ನ ದಾಳಿಯು ಗಾಜಾದಲ್ಲಿ ಯುದ್ಧವನ್ನು ಪ್ರಚೋದಿಸಿದ ನಂತರ ಮತ್ತು ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಹೋರಾಟದ ನಂತರ ಕೊಲ್ಲಲ್ಪಟ್ಟ ಸಶಸ್ತ್ರ ಗುಂಪಿನ ಅತ್ಯಂತ ಹಿರಿಯ ಉಗ್ರಗಾಮಿ ಆಗಿದ್ದಾನೆ ವಿಸ್ಸಾಮ್ ಹಸನ್ ತಾವಿಲ್.

ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಕಮಾಂಡರ್ ವಿಸ್ಸಾಮ್ ಹಸನ್ ತಾವಿಲ್​​ನ್ನು ಹತ್ಯೆ ಮಾಡಿದ ಇಸ್ರೇಲ್
ವಿಸ್ಸಾಮ್ ಹಸನ್ ತಾವಿಲ್
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: Jan 08, 2024 | 7:56 PM

Share

ಲೆಬನಾನ್ ಜನವರಿ 08: ಗಾಜಾದಲ್ಲಿನ (Gaza) ಯುದ್ಧವು ಮಧ್ಯಪ್ರಾಚ್ಯದಲ್ಲಿ ಹರಡಬಹುದೆಂಬ ಭಯವು ಹೆಚ್ಚಾಗುತ್ತಿದ್ದಂತೆ ಇಸ್ರೇಲ್ (Israel) ದಕ್ಷಿಣ ಲೆಬನಾನ್‌ನಲ್ಲಿ ನಡೆದ ದಾಳಿಯಲ್ಲಿ ಹಿಜ್ಬುಲ್ಲಾ ಗುಂಪಿನ ಉನ್ನತ ಕಮಾಂಡರ್ ವಿಸ್ಸಾಮ್ ಹಸನ್ ತಾವಿಲ್ (Wissam Hassan Tawil) ಅನ್ನು ಹತ್ಯೆ ಮಾಡಿದೆ. ಇಸ್ರೇಲಿ ದಾಳಿಯು ಲೆಬನಾನ್ ಗಡಿಯಲ್ಲಿ ಗುಂಡಿನ ಚಕಮಕಿ ನಡುವೆ ಬಂದಿದೆ. ಇದಕ್ಕೂ ಮೊದಲು, ಉತ್ತರ ಇಸ್ರೇಲ್‌ನ ಸೂಕ್ಷ್ಮ ವಾಯು ಸಂಚಾರ ನೆಲೆಯನ್ನು ಹಿಜ್ಬುಲ್ಲಾ ರಾಕೆಟ್ ಬ್ಯಾರೇಜ್ ಹೊಡೆದಿದ್ದು ಮೂರು ತಿಂಗಳಲ್ಲಿ ಅತಿದೊಡ್ಡ ದಾಳಿಗಳಲ್ಲಿ ಒಂದಾಗಿದೆ. ಕಳೆದ ವಾರ ಬೈರುತ್‌ನಲ್ಲಿ ಹಿರಿಯ ಹಮಾಸ್ ನಾಯಕನನ್ನು ಕೊಂದ ನಂತರ ಪ್ರತಿದಾಳಿಗಳು ಉಲ್ಬಣಗೊಂಡಿವೆ. ದಾಳಿಯನ್ನು ಹಮಾಸ್‌ನ ಉಪ ರಾಜಕೀಯ ನಾಯಕ ಸಲೇಹ್ ಅರೋರಿಯ ಹತ್ಯೆಗೆ “ಆರಂಭಿಕ ಪ್ರತಿಕ್ರಿಯೆ” ಎಂದು ಹಿಜ್ಬುಲ್ಲಾ ಹೇಳಿದೆ.

ಇಸ್ರೇಲ್ ದಾಳಿ ಬಗ್ಗೆ

ಎಸ್‌ಯುವಿಯ ಮೇಲೆ ದಾಳಿ ನಡೆಸಿ  ವಿಸ್ಸಮ್ ಹಸನ್ ತಾವಿಲ್​​ನ್ನು ಹತ್ಯೆಮಾಡಲಾಗಿದೆ. ಆತ ಗಡಿಯುದ್ದಕ್ಕೂ ಕಾರ್ಯನಿರ್ವಹಿಸುವ ರಹಸ್ಯ ಹಿಜ್ಬುಲ್ಲಾ ಪಡೆಗೆ ಕಮಾಂಡರ್ ಆಗಿದ್ದ ಎಂದು ಹಿಜ್ಬುಲ್ಲಾ ಹೇಳಿದೆ. ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ಗೆ ಹಮಾಸ್‌ನ ದಾಳಿಯು ಗಾಜಾದಲ್ಲಿ ಯುದ್ಧವನ್ನು ಪ್ರಚೋದಿಸಿದ ನಂತರ ಮತ್ತು ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಹೋರಾಟದ ನಂತರ ಕೊಲ್ಲಲ್ಪಟ್ಟ ಸಶಸ್ತ್ರ ಗುಂಪಿನ ಅತ್ಯಂತ ಹಿರಿಯ ಉಗ್ರಗಾಮಿ ಆಗಿದ್ದಾನೆ ತಾವಿಲ್

ಗಾಜಾದಲ್ಲಿ ಏನಾಗುತ್ತಿದೆ?

ಉತ್ತರ ಗಾಜಾದಲ್ಲಿ ಕೇಂದ್ರ ಪ್ರದೇಶ ಮತ್ತು ದಕ್ಷಿಣದ ನಗರವಾದ ಖಾನ್ ಯೂನಿಸ್‌ನ ಮೇಲೆ ಕೇಂದ್ರೀಕರಿಸುವುದರಿಂದ ಅದು ಹೆಚ್ಚಾಗಿ ಪ್ರಮುಖ ಕಾರ್ಯಾಚರಣೆಗಳನ್ನು ನಡೆಸುತ್ತಿದೆ ಎಂದು ಇಸ್ರೇಲ್ ಹೇಳಿದೆ. ಟೆಲ್ ಅವಿವ್ ಹಮಾಸ್ ಅನ್ನು ಕೆಡವಲು ಮತ್ತು ಗುಂಪಿನ ಅಕ್ಟೋಬರ್ 7 ರ ದಾಳಿಯ ಸಮಯದಲ್ಲಿ ಒತ್ತೆಯಾಳುಗಳನ್ನು ಮರಳಿ ತರಲು ಪ್ರಯತ್ನಿಸುತ್ತಿರುವುದರಿಂದ ಇನ್ನೂ ಹಲವು ತಿಂಗಳುಗಳವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಜಾದಲ್ಲಿ ಇಸ್ರೇಲ್‌ನ ಬಾಂಬ್ ದಾಳಿಯು 23,000 ಪ್ಯಾಲೆಸ್ಟೀನಿಯಾದವರನ್ನು ಕೊಂದು, ಎನ್‌ಕ್ಲೇವ್ ಅನ್ನು ಧ್ವಂಸಗೊಳಿಸಿದೆ. ಅಲ್ಲಿನ 2.3 ಮಿಲಿಯನ್ ಜನಸಂಖ್ಯೆಯ ಸುಮಾರು 85 ಪ್ರತಿಶತವನ್ನು ಸ್ಥಳಾಂತರಿಸಿದೆ.

ಇದನ್ನೂ ಓದಿ: ಹಮಾಸ್ ಒತ್ತೆಯಾಳುಗಳಾಗಿದ್ದ ಐವರ ಶವ ಪತ್ತೆ ಮಾಡಿ ಇಸ್ರೇಲ್​​ ಸೇನೆ

ಯುಎಸ್ ವ್ಯಾಪಕ ಯುದ್ಧವನ್ನು ತಪ್ಪಿಸಲು ಪ್ರಯತ್ನಿಸುತ್ತಿದೆಯೇ?

ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಜೋರ್ಡಾನ್ ಮತ್ತು ಕತಾರ್ ನಾಯಕರನ್ನು ಭೇಟಿ ಮಾಡಿದ್ದು, ನಾಗರಿಕರಿಗೆ ಹಾನಿಯನ್ನು ಕಡಿಮೆ ಮಾಡಲು ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಗಳನ್ನು ಸರಿಹೊಂದಿಸುವ ಅಗತ್ಯವನ್ನು ಪುನರುಚ್ಚರಿಸಿದರು, ಆದರೆ ಉನ್ನತ ರಾಜತಾಂತ್ರಿಕರ ಗಮನವು ಯುದ್ಧವನ್ನು ಹರಡದಂತೆ ತಡೆಯುತ್ತಿದೆ.

Follow Us
Rashmi Kallakatta
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು