AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಂಜೋ ಅಬೆ ಹತ್ಯೆ ನಂತರ ನಡೆದ ಚುನಾವಣೆಯಲ್ಲಿ ಗೆದ್ದು ಬಹುಮತ ಉಳಿಸಿಕೊಂಡ ಎಲ್​​ಡಿಪಿ

ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ- ಕೆಮಿಟೊ ಒಕ್ಕೂಟ  76 ಸೀಟುಗಳನ್ನು ಗೆದ್ದಿದ್ದು ಮೇಲ್ಮನೆಯಲ್ಲಿ ಬಹುಮತ ಉಳಿಸಿಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಶಿಂಜೋ ಅಬೆ ಹತ್ಯೆ ನಂತರ ನಡೆದ ಚುನಾವಣೆಯಲ್ಲಿ ಗೆದ್ದು ಬಹುಮತ ಉಳಿಸಿಕೊಂಡ ಎಲ್​​ಡಿಪಿ
ಜಪಾನ್ ಪ್ರಧಾನಿ ಪುಮಿಯೊ ಕಿಶಿದಾImage Credit source: Reuters
TV9 Web
| Edited By: |

Updated on:Jul 11, 2022 | 12:51 PM

Share

ಟೊಕಿಯೊ(ಜಪಾನ್): ಜಪಾನ್​​ನ (Japan) ಮಾಜಿ ಮುಖ್ಯಮಂತ್ರಿ ಶಿಂಜೋ ಅಬೆ (Shinzo Abe) ಅವರ ಹತ್ಯೆ ನಡೆದ ಎರಡು ದಿನಗಳ ನಂತರ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ(LDP)- ಕೆಮಿಟೊ ಒಕ್ಕೂಟ  76 ಸೀಟುಗಳನ್ನು ಗೆದ್ದಿದ್ದು ಮೇಲ್ಮನೆಯಲ್ಲಿ ಬಹುಮತ ಉಳಿಸಿಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪಶ್ಚಿಮ ಜಪಾನ್​​ನ ನಾರಾ ಸಿಟಿಯಲ್ಲಿ ಶುಕ್ರವಾರ ಶಿಂಜೋ ಅಬೆ ಪ್ರಚಾರ ಭಾಷಣ ಮಾಡುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು.ಶಿಂಜೋ ಅಬೆ ಜಪಾನ್​​ನಲ್ಲಿ ಅತಿ ಹೆಚ್ಚು ಆಡಳಿತ ನಡೆಸಿರುವ ಪ್ರಧಾನಿ ಎಂಬ ಹೆಗ್ಗೆಳಿಕೆಗೆ ಪಾತ್ರರಾಗಿದ್ದರು. 2006-2007, 2012-2020ರವರೆಗೂ ಅವರು ಪ್ರಧಾನಿ ಆಗಿದ್ದರು. ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಮತ್ತು ಇತರ ಎಲ್​​ಡಿಪಿ ನಾಯಕರು ಭಾನುವಾರ ರಾತ್ರಿ ಕಪ್ಪು ಟೈ, ಕಪ್ಪು ಬಟ್ಟೆ ಮತ್ತು ರಿಬ್ಬನ್ ಧರಿಸಿ ಅಬೆ ಹತ್ಯೆಗೆ ಸಂತಾಪ ಸೂಚಿಸಿ ಮೌನಾಚರಣೆ ಮಾಡಿದರು ಎಂದು ದಿ ಜಪಾನ್ ಟೈಮ್ಸ್ ವರದಿ ಮಾಡಿದೆ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಪರವಾಗಿ ಕಿಶಿದಾ ಅವರು ಗುಲಾಬಿ ಬಣ್ಣದ ಹೂಗಳನ್ನಿರಿಸಿದರೂ ಅವರ ಮುಖದಲ್ಲಿ ನಗು ಇರಲಿಲ್ಲ.  ಆನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಪಾನ್ ಪಿಎಂ ನಮ್ಮ ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಚುನಾವಣೆ ಪ್ರಕ್ರಿಯೆಗೆ ಹಿಂಸೆಯ ಬೆದರಿಕೆ ಇತ್ತು. ಅದೇನೇ ಆಗಲಿ ನಾನು ಚುನಾವಣೆ ಮೂಲಕ ಮುಂದುವರಿಯುವುದಾಗಿ ನಿರ್ಧರಿಸಿದ್ದೆ ಎಂದು ಅವರು ಹೇಳಿದ್ದಾರೆ.

ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ನಂತರ ಮುಂದಿನ ಮೂರು ವರ್ಷಗಳಲ್ಲಿ ಕಿಶಿದಾ ಚುನಾವಣೆ ಎದುರಿಸಬೇಕಾಗಿಲ್ಲ. ನಾನು ನನ್ನ ಹೊಸ ಕ್ಯಾಪಿಟಲಿಸಂ ಎಕಾನಾಮಿಕ್ ಮಾಡೆಲ್ ಮೂಲಕ ಆರ್ಥಿಕತೆಯನ್ನು ಸುಧಾರಿಸಲು ಬಯಸಿದ್ದೇನೆ. ಅದೇ ವೇಳೆ ನಾನು ಹಂತ ಹಂತವಾಗಿ ರಾಜತಾಂತ್ರಿಕತೆ, ಸುರಕ್ಷೆ ಮತ್ತು ಸಂವಿಧಾನಿಕ ಅವಲೋಕನಗಳನ್ನು ಮಾಡಲಿದ್ದೇನೆ ಎಂದು ಅವರು ಹೇಳಿದ್ದಾರೆ.

ಒಮಿಕ್ರಾನ್, ಕೊವಿಡ್ 19 ಸಾಂಕ್ರಾಮಿಕ ರೋಗ, ಉಕ್ರೇನ್ ಯುದ್ಧ ಮೊದಲಾದ ಸವಾಲುಗಳನ್ನು ಎದುರಿಸಿದ ನಂತರ ಚುನಾವಣೆಯಲ್ಲಿನ ಈ ಗೆಲುವು ಕಿಶಿದಾ ಆಡಳಿತಕ್ಕೆ ಹೊಸ ಅಧ್ಯಾಯದ ಆರಂಭವಾಗಿದೆ ಎಂದು ದಿ ಜಪಾನ್ ಟೈಮ್ಸ್ ವರದಿ ಮಾಡಿದೆ. ಚುನಾವಣೆಯ ನಂತರ ಸಚಿವ ಸಂಪುಟ ಪುನರ್​​ರಚನೆ ಮಾಡುವುದಾಗಿ ಕಿಶಿದಾ ಹೇಳಿದ್ದು, ಇದು ಸೆಪ್ಟೆಂಬರ್ ಹೊತ್ತಲ್ಲಿ ನಡೆಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Published On - 12:32 pm, Mon, 11 July 22