Imran Khan: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿದ ಲಾಹೋರ್ ಹೈಕೋರ್ಟ್
ಭೂ ಹಗರಣ ಪ್ರಕರಣದಲ್ಲಿ ಖಾನ್ ಅವರ ಬಂಧನದ ನಂತರ ಪ್ರತಿಭಟನೆಗಳು ಹುಟ್ಟಿಕೊಂಡ ಹಿನ್ನೆಲೆಯಲ್ಲಿ, ಮಾಜಿ ಪ್ರಧಾನಿ ವಿರುದ್ಧ ಇತರ ಪ್ರಕರಣಗಳನ್ನು ಸಹ ದಾಖಲಿಸಲಾಯಿತು.

ಲಾಹೋರ್: ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (PTI) ಮುಖ್ಯಸ್ಥ ಇಮ್ರಾನ್ ಖಾನ್ (Imran Khan) ಸಲ್ಲಿಸಿದ ಅರ್ಜಿಯ ಮೇಲಿನ ತೀರ್ಪನ್ನು ಲಾಹೋರ್ ಹೈಕೋರ್ಟ್ (LHC) ಮಂಗಳವಾರ ಕಾಯ್ದಿರಿಸಿದೆ. ಅಲ್ ಖಾದಿರ್ ಟ್ರಸ್ಟ್ ಕೇಸ್ ಪ್ರಕರಣದಲ್ಲಿ ಬಂಧಿತರಾಗಿದ್ದಂದಿನಿಂದ ಅವರ ವಿರುದ್ಧ ದಾಖಲಾಗಿರುವ ಪ್ರತಿಯೊಂದು ಪ್ರಕರಣಕ್ಕೂ ಇದು ಅನ್ವಯಿಸುತ್ತದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಭೂ ಹಗರಣ ಪ್ರಕರಣದಲ್ಲಿ ಖಾನ್ ಅವರ ಬಂಧನದ ನಂತರ ಪ್ರತಿಭಟನೆಗಳು ಹುಟ್ಟಿಕೊಂಡ ಹಿನ್ನೆಲೆಯಲ್ಲಿ, ಮಾಜಿ ಪ್ರಧಾನಿ ವಿರುದ್ಧ ಇತರ ಪ್ರಕರಣಗಳನ್ನು ಸಹ ದಾಖಲಿಸಲಾಯಿತು. ಏತನ್ಮಧ್ಯೆ, ವಿಚಾರಣೆಯ ಆರಂಭದಲ್ಲಿ ಪಿಟಿಐ ಮುಖ್ಯಸ್ಥರ ಗೈರುಹಾಜರಿಯ ಬಗ್ಗೆ ನ್ಯಾಯಾಲಯವು ವಿಚಾರಿಸಿತು, ಖಾನ್ ಅವರ ವಕೀಲರು ತಮ್ಮ ಕಕ್ಷಿದಾರರು ಬೆಳಿಗ್ಗೆ 11 ಗಂಟೆಗೆ ನ್ಯಾಯಾಲಯಕ್ಕೆ ಹಾಜರಾಗುತ್ತಾರೆ ಎಂದು ಪ್ರತಿಕ್ರಿಯಿಸಿದರು.
ಪಂಜಾಬ್ನ ಹಂಗಾಮಿ ವಕೀಲರ ಮಧ್ಯಂತರ ಸರ್ಕಾರವು ಇಮ್ರಾನ್ ಖಾನ್ ಅವರ ಜಾಮೀನು ವಿನಂತಿಯನ್ನು ವಿರೋಧಿಸಿದ್ದು, ಇದು ಸ್ವೀಕಾರಾರ್ಹವಲ್ಲ ಎಂದು ಪ್ರತಿಪಾದಿಸಿತ್ತು. ಜಿಯೋ ನ್ಯೂಸ್ ಪ್ರಕಾರ, ಇಮ್ರಾನ್ ಖಾನ್ ಅವರು ನ್ಯಾಯಾಲಯಕ್ಕೆ ಹಾಜರಾಗಿಲ್ಲ ಮತ್ತು ರಕ್ಷಣಾತ್ಮಕ ಜಾಮೀನು ಕೋರಿಲ್ಲ ಎಂದು ವಕೀಲರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಖಾನ್ ಅವರ ವಕೀಲರು, ಪಿಟಿಐ ಮುಖ್ಯಸ್ಥರು ಬಂಧನ ಪೂರ್ವ ಜಾಮೀನು ಬಯಸುತ್ತಿದ್ದಾರೆಯೇ ಹೊರತು ರಕ್ಷಣಾತ್ಮಕ ಜಾಮೀನು ಅಲ್ಲ ಎಂದು ವಾದಿಸಿದರು. ಅದೇ ವೇಳೆ ಪ್ರಕರಣವನ್ನು ದೊಡ್ಡ ಪೀಠಕ್ಕೆ ಕಳುಹಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಖಾನ್ ತನ್ನ ವಿರುದ್ಧ ದಾಖಲಾದ ಎಲ್ಲಾ ಹೊಸ ಪ್ರಕರಣಗಳ ವಿರುದ್ಧ ಇಸ್ಲಾಮಾಬಾದ್ ಹೈಕೋರ್ಟ್ (IHC) ನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಒಂದು ದಿನದ ನಂತರ ಅಂದರೆ ಶನಿವಾರದಂದು ಅರ್ಜಿ ಸಲ್ಲಿಸಿದ್ದರು.
ಜಿಯೋ ನ್ಯೂಸ್ ಪ್ರಕಾರ, ನನ್ನನ್ನು ರಾಜಕೀಯವಾಗಿ ಬಲಿಪಶು ಮಾಡಲಾಗುತ್ತಿದೆ. ಪೊಲೀಸರು ನನ್ನನ್ನು ಹಲವಾರು ಪ್ರಕರಣಗಳಲ್ಲಿ ಹೆಸರಿಸಿದ್ದರಿಂದ ಬಂಧನದ ಅಪಾಯವಿದೆ ಎಂದು ಖಾನ್ ಮನವಿಯಲ್ಲಿ ಹೇಳಿದ್ದಾರೆ.
ಪಂಜಾಬ್ ಇನ್ಸ್ಪೆಕ್ಟರ್ ಜನರಲ್ ಮತ್ತು ಅಡ್ವೊಕೇಟ್ ಜನರಲ್ ಅವರು ಪ್ರಕರಣದಲ್ಲಿ ಪಿಟಿಐ ಮುಖ್ಯಸ್ಥರ ಪ್ರತಿವಾದಿಗಳಾಗಿದ್ದಾರೆ. ಕಳೆದ ವಾರ ಇಸ್ಲಾಮಾಬಾದ್ ಹೈಕೋರ್ಟ್ ನಲ್ಲಿ ಖಾನ್ ತನ್ನ ಬಯೋಮೆಟ್ರಿಕ್ಸ್ ಮಾಡಿಸಿಕೊಳ್ಳುತ್ತಿದ್ದಾಗ ಅವರನ್ನು ನಾಟಕೀಯ ಶೈಲಿಯಲ್ಲಿ ಬಂಧಿಸಲಾಯಿತು. ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (NAB) ಯ ಆದೇಶದ ಮೇರೆಗೆ, ಪಾಕಿಸ್ತಾನ ರೇಂಜರ್ಸ್ ಮಾಜಿ ಕ್ರಿಕೆಟ್ ತಾರೆಯನ್ನು ಬಲವಂತವಾಗಿ ಬಂಧಿಸಿ ಕಪ್ಪು ರಿವೋದಲ್ಲಿ ಕರೆದೊಯ್ದರು.
ಇದನ್ನೂ ಓದಿ: Rs 30 Down: ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್ಗೆ 30 ರೂವರೆಗೂ ಕಡಿತ; ಪಾಕಿಸ್ತಾನ ಜನತೆಗೆ ಬಂಪರ್ ಗಿಫ್ಟ್
ಸಾವಿರಾರು ಪಿಟಿಐ ಬೆಂಬಲಿಗರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಬೀದಿಗಿಳಿದಿದ್ದರಿಂದ, ಘಟನೆಯ ಪರಿಣಾಮವಾಗಿ ಹಿಂಸಾಚಾರ ಭುಗಿಲೆದ್ದಿತು, ಇದು ರಾಷ್ಟ್ರದ ಪ್ರಕ್ಷುಬ್ಧ ರಾಜಕೀಯದಲ್ಲಿ ಮಹತ್ವದ ತಿರುವು ಎಂದು ಸಾಬೀತಾಯಿತು. ರಾಷ್ಟ್ರವ್ಯಾಪಿ ಪ್ರತಿಭಟನೆಯ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಪೊಲೀಸರು ಘರ್ಷಣೆ ನಡೆದಿದ್ದು ಜನರಲ್ ಹೆಡ್ಕ್ವಾರ್ಟರ್ಸ್ ಮತ್ತು ಲಾಹೋರ್ ಕಾರ್ಪ್ಸ್ ಕಮಾಂಡರ್ ಹೌಸ್ ಸೇರಿದಂತೆ ಪ್ರಮುಖ ಕಚೇರಿಗಳ ಮೇಲೆ ದಾಳಿ ಪಿಟಿಐ ಬೆಂಬಲಿಗರು ದಾಳಿ ನಡೆಸಿದ್ದರು.
ಗಲಭೆಗೆ ಪ್ರಚೋದನೆ ನೀಡುವಲ್ಲಿ ಶಂಕಿತ ಪಾತ್ರಕ್ಕಾಗಿ ಪಿಟಿಐ ನಾಯಕ ಮತ್ತು ಇತರ ಪಕ್ಷದ ನಾಯಕರ ವಿರುದ್ಧ ಅನೇಕ ಪ್ರಕರಣಗಳನ್ನು ದಾಖಲಿಸಿದ್ದರಿಂದ ಖಾನ್ ಮತ್ತು ಪ್ರಸ್ತುತ ಸರ್ಕಾರದ ನಡುವಿನ ಉದ್ವಿಗ್ನತೆಯೂ ಹೆಚ್ಚಾಯಿತು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:09 pm, Tue, 16 May 23