AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀಜಿಂಗ್​ನಲ್ಲಿ ಹೆಚ್ಚುತ್ತಿದೆ ಕೊವಿಡ್​ 19; ಮಾಲ್​​, ವಸತಿ ಸಂಕೀರ್ಣಗಳೆಲ್ಲ ಸೀಲ್​ಡೌನ್

ಚಾಯಾಂಗ್ ಮತ್ತು ಹೈಡಿಯನ್​ ಜಿಲ್ಲೆಗಳಲ್ಲಿ ಕೊವಿಡ್​ 19 ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ 280 ಜನರನ್ನು ಗುರುತಿಸಲಾಗಿದೆ. ಹಾಗೇ. 12,000 ಜನರ ಮಾದರಿ ಪರೀಕ್ಷೆ ಮಾಡಲಾಗಿದೆ.

ಬೀಜಿಂಗ್​ನಲ್ಲಿ ಹೆಚ್ಚುತ್ತಿದೆ ಕೊವಿಡ್​ 19; ಮಾಲ್​​, ವಸತಿ ಸಂಕೀರ್ಣಗಳೆಲ್ಲ ಸೀಲ್​ಡೌನ್
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Nov 11, 2021 | 5:20 PM

Share

ಬೀಜಿಂಗ್​:  ಚೀನಾದಲ್ಲಿ ಇತ್ತೀಚೆಗೆ ಕೊವಿಡ್​ 19 ಸೋಂಕಿನ (Covid 19) ಪ್ರಮಾಣ ಹೆಚ್ಚಾಗಿದೆ. ಹಲವು ನಗರಗಳಲ್ಲಿ ಇತ್ತೀಚೆಗೆ ಲಾಕ್​ಡೌನ್​ (Lock Down) ಮಾಡಲಾಗಿದೆ. ಈ ಮಧ್ಯೆ ಬೀಜಿಂಗ್​​ನಲ್ಲೂ ಕೂಡ ಹಲವು ಮಾಲ್​, ವಸತಿ ಸಂಕೀರ್ಣಗಳನ್ನು ಸ್ಥಳೀಯ ಸರ್ಕಾರ ಲಾಕ್​ ಮಾಡುತ್ತಿದೆ. ಅದರಲ್ಲೂ ಬೀಜಿಂಗ್​ನ ಕೇಂದ್ರಭಾಗದಲ್ಲಿರುವ ಜಿಲ್ಲೆಗಳ್ಲಿ ಕೊರೊನಾ ವೈರಸ್​ ಹೆಚ್ಚಾಗಿ ಕಂಡುಬರುತ್ತಿದೆ.  ಕೊರೊನಾ ಸೋಂಕು ಮೊದಲು ಪ್ರಾರಂಭವಾಗಿದ್ದೇ ಚೀನಾದಲ್ಲಿ. ನಂತರ ಆ ದೇಶ ಲಾಕ್​ಡೌನ್​, ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳ ಮೂಲಕ ಅದನ್ನು ನಿಯಂತ್ರಿಸಿಕೊಂಡಿತ್ತು. ಆದರೆ ಈಗೀಗ ಮತ್ತೆ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ.

ಬೀಜಿಂಗ್‌ನ ಕೇಂದ್ರ ಜಿಲ್ಲೆಗಳಾದ ಚಾಯಾಂಗ್ ಮತ್ತು ಹೈಡಿಯನ್‌ನಲ್ಲಿ ಗುರುವಾರ ಬೆಳಿಗ್ಗೆ ಆರು ಹೊಸ ಪ್ರಕರಣಗಳು ಕಂಡುಬಂದಿವೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಕೊವಿಡ್​ 19 ಸೋಂಕಿತನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬ ಬೀಜಿಂಗ್​​ನ ಡಾಂಗ್​ಚೆಂಗ್​​ನಲ್ಲಿರುವ ರಾಫೆಲ್ಸ್​ ಸಿಟಿ ಮಾಲ್​​ಗೆ ಭೇಟಿ ನೀಡಿದ್ದ. ಹೀಗಾಗಿ ಆ ಸಿಟಿ ಮಾಲ್​​ನ್ನು ಬುಧವಾರ ಸಂಜೆಗೆ ಮುಚ್ಚಲಾಗಿದೆ. ಅಲ್ಲಿ ಸ್ಯಾನಿಟೈಸ್​ ಮಾಡುವ ಕಾರ್ಯವೂ ನಡೆಯುತ್ತಿದೆ. ಇನ್ನು ಆ ಮಾಲ್​​ನಲ್ಲಿದ್ದ ಯಾರನ್ನೂ ಹಾಗೇ ಹೊರಹೋಗಲು ಬಿಟ್ಟಿಲ್ಲ. ಪ್ರತಿಯೊಬ್ಬರಿಗೂ ಕೊವಿಡ್​ 19 ಟೆಸ್ಟ್​ ಮಾಡಿಸಿಯೇ ಹೊರಬಿಡಲಾಗಿದ್ದು, ವರದಿ ಬರುವವರೆಗೂ ಐಸೋಲೇಟ್​ ಆಗಲು ಸೂಚಿಸಲಾಗಿದೆ. ಇಂದೂ ಕೂಡ ಆ ಮಾಲ್​ ಮುಚ್ಚಿಕೊಂಡೇ ಇದೆ.

ಚಾಯಾಂಗ್ ಮತ್ತು ಹೈಡಿಯನ್​ ಜಿಲ್ಲೆಗಳಲ್ಲಿ ಕೊವಿಡ್​ 19 ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ 280 ಜನರನ್ನು ಗುರುತಿಸಲಾಗಿದೆ. ಹಾಗೇ. 12,000 ಜನರ ಮಾದರಿ ಪರೀಕ್ಷೆ ಮಾಡಲಾಗಿದೆ. ಸೋಂಕಿತರ ಮನೆಯನ್ನು ಮತ್ತೆ ಸೀಲ್​ಡೌನ್​ ಮಾಡಲಾಗುತ್ತಿದೆ.  ಇಂದು ಐದು ವಸತಿ ಸಂಕೀರ್ಣಗಳು, ಎರಡು ಪ್ರಾಥಮಿಕ ಶಾಲೆಗಳು ಮತ್ತು 2 ಕಚೇರಿಗಳನ್ನು ಲಾಕ್​ ಮಾಡಲಾಗಿದೆ.

ಇದನ್ನೂ ಓದಿ: ಬಿಜೆಪಿ ತೊರೆದ ಬಂಗಾಳಿ ನಟಿ; ಈ ಪಕ್ಷದಲ್ಲಿ ಪ್ರಾಮಾಣಿಕತೆಯೇ ಇಲ್ಲವೆಂದ ಶ್ರಬಂತಿ !

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ