AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀಜಿಂಗ್​ನಲ್ಲಿ ಹೆಚ್ಚುತ್ತಿದೆ ಕೊವಿಡ್​ 19; ಮಾಲ್​​, ವಸತಿ ಸಂಕೀರ್ಣಗಳೆಲ್ಲ ಸೀಲ್​ಡೌನ್

ಚಾಯಾಂಗ್ ಮತ್ತು ಹೈಡಿಯನ್​ ಜಿಲ್ಲೆಗಳಲ್ಲಿ ಕೊವಿಡ್​ 19 ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ 280 ಜನರನ್ನು ಗುರುತಿಸಲಾಗಿದೆ. ಹಾಗೇ. 12,000 ಜನರ ಮಾದರಿ ಪರೀಕ್ಷೆ ಮಾಡಲಾಗಿದೆ.

ಬೀಜಿಂಗ್​ನಲ್ಲಿ ಹೆಚ್ಚುತ್ತಿದೆ ಕೊವಿಡ್​ 19; ಮಾಲ್​​, ವಸತಿ ಸಂಕೀರ್ಣಗಳೆಲ್ಲ ಸೀಲ್​ಡೌನ್
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Nov 11, 2021 | 5:20 PM

Share

ಬೀಜಿಂಗ್​:  ಚೀನಾದಲ್ಲಿ ಇತ್ತೀಚೆಗೆ ಕೊವಿಡ್​ 19 ಸೋಂಕಿನ (Covid 19) ಪ್ರಮಾಣ ಹೆಚ್ಚಾಗಿದೆ. ಹಲವು ನಗರಗಳಲ್ಲಿ ಇತ್ತೀಚೆಗೆ ಲಾಕ್​ಡೌನ್​ (Lock Down) ಮಾಡಲಾಗಿದೆ. ಈ ಮಧ್ಯೆ ಬೀಜಿಂಗ್​​ನಲ್ಲೂ ಕೂಡ ಹಲವು ಮಾಲ್​, ವಸತಿ ಸಂಕೀರ್ಣಗಳನ್ನು ಸ್ಥಳೀಯ ಸರ್ಕಾರ ಲಾಕ್​ ಮಾಡುತ್ತಿದೆ. ಅದರಲ್ಲೂ ಬೀಜಿಂಗ್​ನ ಕೇಂದ್ರಭಾಗದಲ್ಲಿರುವ ಜಿಲ್ಲೆಗಳ್ಲಿ ಕೊರೊನಾ ವೈರಸ್​ ಹೆಚ್ಚಾಗಿ ಕಂಡುಬರುತ್ತಿದೆ.  ಕೊರೊನಾ ಸೋಂಕು ಮೊದಲು ಪ್ರಾರಂಭವಾಗಿದ್ದೇ ಚೀನಾದಲ್ಲಿ. ನಂತರ ಆ ದೇಶ ಲಾಕ್​ಡೌನ್​, ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳ ಮೂಲಕ ಅದನ್ನು ನಿಯಂತ್ರಿಸಿಕೊಂಡಿತ್ತು. ಆದರೆ ಈಗೀಗ ಮತ್ತೆ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ.

ಬೀಜಿಂಗ್‌ನ ಕೇಂದ್ರ ಜಿಲ್ಲೆಗಳಾದ ಚಾಯಾಂಗ್ ಮತ್ತು ಹೈಡಿಯನ್‌ನಲ್ಲಿ ಗುರುವಾರ ಬೆಳಿಗ್ಗೆ ಆರು ಹೊಸ ಪ್ರಕರಣಗಳು ಕಂಡುಬಂದಿವೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಕೊವಿಡ್​ 19 ಸೋಂಕಿತನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬ ಬೀಜಿಂಗ್​​ನ ಡಾಂಗ್​ಚೆಂಗ್​​ನಲ್ಲಿರುವ ರಾಫೆಲ್ಸ್​ ಸಿಟಿ ಮಾಲ್​​ಗೆ ಭೇಟಿ ನೀಡಿದ್ದ. ಹೀಗಾಗಿ ಆ ಸಿಟಿ ಮಾಲ್​​ನ್ನು ಬುಧವಾರ ಸಂಜೆಗೆ ಮುಚ್ಚಲಾಗಿದೆ. ಅಲ್ಲಿ ಸ್ಯಾನಿಟೈಸ್​ ಮಾಡುವ ಕಾರ್ಯವೂ ನಡೆಯುತ್ತಿದೆ. ಇನ್ನು ಆ ಮಾಲ್​​ನಲ್ಲಿದ್ದ ಯಾರನ್ನೂ ಹಾಗೇ ಹೊರಹೋಗಲು ಬಿಟ್ಟಿಲ್ಲ. ಪ್ರತಿಯೊಬ್ಬರಿಗೂ ಕೊವಿಡ್​ 19 ಟೆಸ್ಟ್​ ಮಾಡಿಸಿಯೇ ಹೊರಬಿಡಲಾಗಿದ್ದು, ವರದಿ ಬರುವವರೆಗೂ ಐಸೋಲೇಟ್​ ಆಗಲು ಸೂಚಿಸಲಾಗಿದೆ. ಇಂದೂ ಕೂಡ ಆ ಮಾಲ್​ ಮುಚ್ಚಿಕೊಂಡೇ ಇದೆ.

ಚಾಯಾಂಗ್ ಮತ್ತು ಹೈಡಿಯನ್​ ಜಿಲ್ಲೆಗಳಲ್ಲಿ ಕೊವಿಡ್​ 19 ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ 280 ಜನರನ್ನು ಗುರುತಿಸಲಾಗಿದೆ. ಹಾಗೇ. 12,000 ಜನರ ಮಾದರಿ ಪರೀಕ್ಷೆ ಮಾಡಲಾಗಿದೆ. ಸೋಂಕಿತರ ಮನೆಯನ್ನು ಮತ್ತೆ ಸೀಲ್​ಡೌನ್​ ಮಾಡಲಾಗುತ್ತಿದೆ.  ಇಂದು ಐದು ವಸತಿ ಸಂಕೀರ್ಣಗಳು, ಎರಡು ಪ್ರಾಥಮಿಕ ಶಾಲೆಗಳು ಮತ್ತು 2 ಕಚೇರಿಗಳನ್ನು ಲಾಕ್​ ಮಾಡಲಾಗಿದೆ.

ಇದನ್ನೂ ಓದಿ: ಬಿಜೆಪಿ ತೊರೆದ ಬಂಗಾಳಿ ನಟಿ; ಈ ಪಕ್ಷದಲ್ಲಿ ಪ್ರಾಮಾಣಿಕತೆಯೇ ಇಲ್ಲವೆಂದ ಶ್ರಬಂತಿ !

ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌