AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಗೆದ್ದವನ ದೇಹಕ್ಕೆ ಮತ್ತೊಮ್ಮೆ ವಕ್ಕರಿಸಿದ ವೈರಸ್​!

ಕೊರೊನಾ ಅನ್ನೋದು ಕೇವಲ ಮಾಮೂಲಿ ಜ್ವರ ಇದ್ದಂಗೆ. ಮನುಷ್ಯನ ದೇಹವನ್ನು ಹೊಕ್ಕುವ ಈ ವೈರಸ್​ ಆತನಿಗೆ ಸ್ವಲ್ಪ ದಿನಗಳ ಕಾಲ ಕಾಟಕೊಟ್ಟು ನಂತರ ತನ್ನ ಪಾಡಿಗೆ ತಾನೇ ಹೊರಟುಹೋಗುತ್ತದೆ ಅಂತಾ ಯಾರಾದ್ರೂ ನಿಮಗೆ ಹೇಳಿದ್ರೇ ಈ ಸ್ಟೋರಿ ನೀವು ಓದಲೇ ಬೇಕು. ಕಳೆದ ಏಪ್ರಿಲ್​ನಲ್ಲಿ ಕೊರೊನಾ ವಿರುದ್ಧ ಹೋರಾಡಿ ಯಶಸ್ವಿಯಾಗಿ ಗುಣಮುಖನಾಗಿದ್ದೇನೆ ಎಂದು ಸಂಭ್ರಮಿಸುತ್ತಿದ್ದ ಚೀನಾದ ಹಾಂಗ್​ಕಾಂಗ್ ನಗರದ 33 ವರ್ಷದ ನಿವಾಸಿಗೆ ವೈರಸ್​ ಮತ್ತೊಮ್ಮೆ ದೊಡ್ಡ ಶಾಕ್​ ನೀಡಿದೆ. ಹೌದು, ಸೋಂಕಿನಿಂದ ಗುಣಮುಖನಾದ ಬಳಿಕ ಕೆಲಸದ […]

ಕೊರೊನಾ ಗೆದ್ದವನ ದೇಹಕ್ಕೆ ಮತ್ತೊಮ್ಮೆ ವಕ್ಕರಿಸಿದ ವೈರಸ್​!
ಕೊರೊನಾ ಟೆಸ್ಟ್
KUSHAL V
|

Updated on: Aug 25, 2020 | 7:18 PM

Share

ಕೊರೊನಾ ಅನ್ನೋದು ಕೇವಲ ಮಾಮೂಲಿ ಜ್ವರ ಇದ್ದಂಗೆ. ಮನುಷ್ಯನ ದೇಹವನ್ನು ಹೊಕ್ಕುವ ಈ ವೈರಸ್​ ಆತನಿಗೆ ಸ್ವಲ್ಪ ದಿನಗಳ ಕಾಲ ಕಾಟಕೊಟ್ಟು ನಂತರ ತನ್ನ ಪಾಡಿಗೆ ತಾನೇ ಹೊರಟುಹೋಗುತ್ತದೆ ಅಂತಾ ಯಾರಾದ್ರೂ ನಿಮಗೆ ಹೇಳಿದ್ರೇ ಈ ಸ್ಟೋರಿ ನೀವು ಓದಲೇ ಬೇಕು.

ಕಳೆದ ಏಪ್ರಿಲ್​ನಲ್ಲಿ ಕೊರೊನಾ ವಿರುದ್ಧ ಹೋರಾಡಿ ಯಶಸ್ವಿಯಾಗಿ ಗುಣಮುಖನಾಗಿದ್ದೇನೆ ಎಂದು ಸಂಭ್ರಮಿಸುತ್ತಿದ್ದ ಚೀನಾದ ಹಾಂಗ್​ಕಾಂಗ್ ನಗರದ 33 ವರ್ಷದ ನಿವಾಸಿಗೆ ವೈರಸ್​ ಮತ್ತೊಮ್ಮೆ ದೊಡ್ಡ ಶಾಕ್​ ನೀಡಿದೆ. ಹೌದು, ಸೋಂಕಿನಿಂದ ಗುಣಮುಖನಾದ ಬಳಿಕ ಕೆಲಸದ ನಿಮಿತ್ತ ಯೂರೋಪ್​ಗೆ ತೆರಳಿದ್ದ ಈ ಸಾಫ್ಟ್​ವೇರ್​ ಉದ್ಯೋಗಿ ತಾಯ್ನಾಡಿಗೆ ಮರಳಿಬಂದ ವೇಳೆ ಆತನಲ್ಲಿ ಮತ್ತೊಮ್ಮೆ ಸೋಂಕು ಪತ್ತೆಯಾಗಿದೆ ಎಂದು ಟೆಕ್ಕಿಯ ತಪಾಸಣೆ ನಡೆಸಿದ ಹಾಂಗ್​ಕಾಂಗ್ ವಿಶ್ವವಿದ್ಯಾಲಯದ ಸಂಶೋಧನಾಕಾರರು ಮಾಹಿತಿ ನೀಡಿದ್ದಾರೆ. ಇದರಿಂದ ಈ 33 ವರ್ಷದ ಸೋಂಕಿತ ಇಡೀ ಜಗತ್ತಿನಲ್ಲಿ ಕೊರೊನಾ ವೈರಸ್​ನಿಂದ ಮತ್ತೊಮ್ಮೆ ಅಟ್ಯಾಕ್​ ಆಗಿರೋ ಮೊದಲನೇ ದಾಖಲಿತ ಕೇಸ್​ ಎಂದು ತಿಳಿಸಿದ್ದಾರೆ.

ಎರಡನೇ ಬಾರಿ ಕೊರೊನಾ ಪಾಸಿಟಿವ್​ ಆದ ಸೋಂಕಿತನು ಕೊರೊನಾದ ಯಾವುದೇ ಗುಣಲಕ್ಷಣಗಳನ್ನ ಪ್ರದರ್ಶಿಸಿಲ್ಲವಂತೆ. ಈತನ ಮೇಲೆ ಪರೀಕ್ಷೆ ನಡೆಸಿದ ವೈದ್ಯರಿಗೆ ಟೆಕ್ಕಿಗೆ ಕೊರೊನಾದ ಎರಡು ಪ್ರಭೇದಗಳು ದಾಳಿ ಮಾಡಿದೆ ಎಂದು ತಿಳಿದುಬಂದಿದೆ. ಜೊತೆಗೆ, ಮನುಷ್ಯನನ್ನ ಪದೇ ಪದೇ ಕಾಡುವ ಸಾಮಾನ್ಯ ಶೀತದಂತೆ ಈ ಕೊರೊನಾ ವೈರಸ್ ಸಹ ಮತ್ತೊಮ್ಮೆ ತಗಲುವ ಸಾಧ್ಯತೆಯಿದೆ ಎಂಬ ಮಾಹಿತಿ ನೀಡಿದ್ದಾರೆ.

ಇದಲ್ಲದೆ, ಸೋಂಕಿತನು ಕೊರೊನಾದ ಗುಣಲಕ್ಷಣಗಳನ್ನ ತೋರಿಸದೆ ಇದ್ದರೂ ತನ್ನಿಂದ ಇತರರಿಗೆ ಸೋಂಕು ಹರಡುವ ಸಾಧ್ಯತೆಯಿದೆ ಎಂದು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ. ಜೊತೆಗೆ, ಕೊರೊನಾದಿಂದ ಗುಣಮುಖರಾದೋರಿಗೆ ಮತ್ತೊಮ್ಮೆ ವೈರಸ್​ ವಕ್ಕರಿಸುವ ಸಾಧ್ಯತೆ ಅವರವರ ರೋಗ ನಿರೋಧಕ ಶಕ್ತಿ ಮತ್ತು ಎರಡನೇ ಬಾರಿ ಅಟ್ಯಾಕ್​ ಮಾಡುವ ವೈರಸ್​ನ ಪ್ರಭೇದದ ಮೇಲೆ ನಿಶ್ಚಯವಾಗಲಿದೆ ಎಂದು ಅಮೆರಿಕಾದ ಸಾಂಕ್ರಾಮಿಕ ರೋಗ ತಜ್ಞ ಥಾಮಸ್​ ಫೈಲ್ ಅಭಿಪ್ರಾಯಪಟ್ಟಿದ್ದಾರೆ.

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ