AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಗೆದ್ದವನ ದೇಹಕ್ಕೆ ಮತ್ತೊಮ್ಮೆ ವಕ್ಕರಿಸಿದ ವೈರಸ್​!

ಕೊರೊನಾ ಅನ್ನೋದು ಕೇವಲ ಮಾಮೂಲಿ ಜ್ವರ ಇದ್ದಂಗೆ. ಮನುಷ್ಯನ ದೇಹವನ್ನು ಹೊಕ್ಕುವ ಈ ವೈರಸ್​ ಆತನಿಗೆ ಸ್ವಲ್ಪ ದಿನಗಳ ಕಾಲ ಕಾಟಕೊಟ್ಟು ನಂತರ ತನ್ನ ಪಾಡಿಗೆ ತಾನೇ ಹೊರಟುಹೋಗುತ್ತದೆ ಅಂತಾ ಯಾರಾದ್ರೂ ನಿಮಗೆ ಹೇಳಿದ್ರೇ ಈ ಸ್ಟೋರಿ ನೀವು ಓದಲೇ ಬೇಕು. ಕಳೆದ ಏಪ್ರಿಲ್​ನಲ್ಲಿ ಕೊರೊನಾ ವಿರುದ್ಧ ಹೋರಾಡಿ ಯಶಸ್ವಿಯಾಗಿ ಗುಣಮುಖನಾಗಿದ್ದೇನೆ ಎಂದು ಸಂಭ್ರಮಿಸುತ್ತಿದ್ದ ಚೀನಾದ ಹಾಂಗ್​ಕಾಂಗ್ ನಗರದ 33 ವರ್ಷದ ನಿವಾಸಿಗೆ ವೈರಸ್​ ಮತ್ತೊಮ್ಮೆ ದೊಡ್ಡ ಶಾಕ್​ ನೀಡಿದೆ. ಹೌದು, ಸೋಂಕಿನಿಂದ ಗುಣಮುಖನಾದ ಬಳಿಕ ಕೆಲಸದ […]

ಕೊರೊನಾ ಗೆದ್ದವನ ದೇಹಕ್ಕೆ ಮತ್ತೊಮ್ಮೆ ವಕ್ಕರಿಸಿದ ವೈರಸ್​!
ಕೊರೊನಾ ಟೆಸ್ಟ್
KUSHAL V
|

Updated on: Aug 25, 2020 | 7:18 PM

Share

ಕೊರೊನಾ ಅನ್ನೋದು ಕೇವಲ ಮಾಮೂಲಿ ಜ್ವರ ಇದ್ದಂಗೆ. ಮನುಷ್ಯನ ದೇಹವನ್ನು ಹೊಕ್ಕುವ ಈ ವೈರಸ್​ ಆತನಿಗೆ ಸ್ವಲ್ಪ ದಿನಗಳ ಕಾಲ ಕಾಟಕೊಟ್ಟು ನಂತರ ತನ್ನ ಪಾಡಿಗೆ ತಾನೇ ಹೊರಟುಹೋಗುತ್ತದೆ ಅಂತಾ ಯಾರಾದ್ರೂ ನಿಮಗೆ ಹೇಳಿದ್ರೇ ಈ ಸ್ಟೋರಿ ನೀವು ಓದಲೇ ಬೇಕು.

ಕಳೆದ ಏಪ್ರಿಲ್​ನಲ್ಲಿ ಕೊರೊನಾ ವಿರುದ್ಧ ಹೋರಾಡಿ ಯಶಸ್ವಿಯಾಗಿ ಗುಣಮುಖನಾಗಿದ್ದೇನೆ ಎಂದು ಸಂಭ್ರಮಿಸುತ್ತಿದ್ದ ಚೀನಾದ ಹಾಂಗ್​ಕಾಂಗ್ ನಗರದ 33 ವರ್ಷದ ನಿವಾಸಿಗೆ ವೈರಸ್​ ಮತ್ತೊಮ್ಮೆ ದೊಡ್ಡ ಶಾಕ್​ ನೀಡಿದೆ. ಹೌದು, ಸೋಂಕಿನಿಂದ ಗುಣಮುಖನಾದ ಬಳಿಕ ಕೆಲಸದ ನಿಮಿತ್ತ ಯೂರೋಪ್​ಗೆ ತೆರಳಿದ್ದ ಈ ಸಾಫ್ಟ್​ವೇರ್​ ಉದ್ಯೋಗಿ ತಾಯ್ನಾಡಿಗೆ ಮರಳಿಬಂದ ವೇಳೆ ಆತನಲ್ಲಿ ಮತ್ತೊಮ್ಮೆ ಸೋಂಕು ಪತ್ತೆಯಾಗಿದೆ ಎಂದು ಟೆಕ್ಕಿಯ ತಪಾಸಣೆ ನಡೆಸಿದ ಹಾಂಗ್​ಕಾಂಗ್ ವಿಶ್ವವಿದ್ಯಾಲಯದ ಸಂಶೋಧನಾಕಾರರು ಮಾಹಿತಿ ನೀಡಿದ್ದಾರೆ. ಇದರಿಂದ ಈ 33 ವರ್ಷದ ಸೋಂಕಿತ ಇಡೀ ಜಗತ್ತಿನಲ್ಲಿ ಕೊರೊನಾ ವೈರಸ್​ನಿಂದ ಮತ್ತೊಮ್ಮೆ ಅಟ್ಯಾಕ್​ ಆಗಿರೋ ಮೊದಲನೇ ದಾಖಲಿತ ಕೇಸ್​ ಎಂದು ತಿಳಿಸಿದ್ದಾರೆ.

ಎರಡನೇ ಬಾರಿ ಕೊರೊನಾ ಪಾಸಿಟಿವ್​ ಆದ ಸೋಂಕಿತನು ಕೊರೊನಾದ ಯಾವುದೇ ಗುಣಲಕ್ಷಣಗಳನ್ನ ಪ್ರದರ್ಶಿಸಿಲ್ಲವಂತೆ. ಈತನ ಮೇಲೆ ಪರೀಕ್ಷೆ ನಡೆಸಿದ ವೈದ್ಯರಿಗೆ ಟೆಕ್ಕಿಗೆ ಕೊರೊನಾದ ಎರಡು ಪ್ರಭೇದಗಳು ದಾಳಿ ಮಾಡಿದೆ ಎಂದು ತಿಳಿದುಬಂದಿದೆ. ಜೊತೆಗೆ, ಮನುಷ್ಯನನ್ನ ಪದೇ ಪದೇ ಕಾಡುವ ಸಾಮಾನ್ಯ ಶೀತದಂತೆ ಈ ಕೊರೊನಾ ವೈರಸ್ ಸಹ ಮತ್ತೊಮ್ಮೆ ತಗಲುವ ಸಾಧ್ಯತೆಯಿದೆ ಎಂಬ ಮಾಹಿತಿ ನೀಡಿದ್ದಾರೆ.

ಇದಲ್ಲದೆ, ಸೋಂಕಿತನು ಕೊರೊನಾದ ಗುಣಲಕ್ಷಣಗಳನ್ನ ತೋರಿಸದೆ ಇದ್ದರೂ ತನ್ನಿಂದ ಇತರರಿಗೆ ಸೋಂಕು ಹರಡುವ ಸಾಧ್ಯತೆಯಿದೆ ಎಂದು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ. ಜೊತೆಗೆ, ಕೊರೊನಾದಿಂದ ಗುಣಮುಖರಾದೋರಿಗೆ ಮತ್ತೊಮ್ಮೆ ವೈರಸ್​ ವಕ್ಕರಿಸುವ ಸಾಧ್ಯತೆ ಅವರವರ ರೋಗ ನಿರೋಧಕ ಶಕ್ತಿ ಮತ್ತು ಎರಡನೇ ಬಾರಿ ಅಟ್ಯಾಕ್​ ಮಾಡುವ ವೈರಸ್​ನ ಪ್ರಭೇದದ ಮೇಲೆ ನಿಶ್ಚಯವಾಗಲಿದೆ ಎಂದು ಅಮೆರಿಕಾದ ಸಾಂಕ್ರಾಮಿಕ ರೋಗ ತಜ್ಞ ಥಾಮಸ್​ ಫೈಲ್ ಅಭಿಪ್ರಾಯಪಟ್ಟಿದ್ದಾರೆ.

Follow Us
ಥಾಣೆಯಲ್ಲಿ ಕಟ್ಟಡದಿಂದ ವಾಹನಗಳ ಮೇಲೆ ಬಿದ್ದ ಕ್ರೇನ್, ಓರ್ವ ಸಾವು
ಥಾಣೆಯಲ್ಲಿ ಕಟ್ಟಡದಿಂದ ವಾಹನಗಳ ಮೇಲೆ ಬಿದ್ದ ಕ್ರೇನ್, ಓರ್ವ ಸಾವು
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್
ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್
ಸಚಿವ ಸಂಪುಟ ವಿಸ್ತರಣೆ ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ
ಸಚಿವ ಸಂಪುಟ ವಿಸ್ತರಣೆ ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ
ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಮಹತ್ವದ ಸಭೆ, ಯಾರಿಗೆಲ್ಲಾ ಮಂತ್ರಿ ಸ್ಥಾನ?
ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಮಹತ್ವದ ಸಭೆ, ಯಾರಿಗೆಲ್ಲಾ ಮಂತ್ರಿ ಸ್ಥಾನ?