AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ತ ಪತ್ನಿಗೆ ರೆಡ್ ನೋಟಿಸ್‌, ಇತ್ತ ನೀ. ಮೋದಿಯಿಂದ ಅಮೆರಿಕದಲ್ಲಿ 24 ಕೋಟಿ ವಸೂಲಿ

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ನೀರವ್‌ ಮೋದಿಯಿಂದ ಇದುವರೆಗೆ ಸುಮಾರು 24 ಕೋಟಿ ಹಣ ವಸೂಲಾಗಿದೆ ಎಂದು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ. ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ವಿದೇಶಗಳಲ್ಲಿ ನಡೆಯುತ್ತಿರುವ ವ್ಯಾಜ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮಿನಿಸ್ಟ್ರಿ ಆಫ್‌ ಕಾರ್ಪೋರೇಟ್‌ ಅಫೇರ್ಸ್‌ಗೆ ಈ ಸಂಬಂಧ ಪಿಎನ್‌ಬಿ ಮಾಹಿತಿ ನೀಡಿದೆ. ಅಮೆರಿಕದಲ್ಲಿ ನೀರವ್‌ ಮೋದಿಯ ಕಂಪನಿ ‘ಫೈರ್‌ಸ್ಟಾರ್‌ ಡೈಮಂಡ್‌’ ತಾನು ದಿವಾಳಿಯಾಗಿದ್ದೇನೆ ಎಂದು ಸಲ್ಲಿಸಿದ್ದ ಅರ್ಜಿಯ ಮಾಹಿತಿ ನಂತರ, ಕಾನೂನಿನ ಸಮರ ಸಾರಿದ್ದ […]

ಅತ್ತ ಪತ್ನಿಗೆ ರೆಡ್ ನೋಟಿಸ್‌, ಇತ್ತ ನೀ. ಮೋದಿಯಿಂದ ಅಮೆರಿಕದಲ್ಲಿ 24 ಕೋಟಿ ವಸೂಲಿ
Guru
| Edited By: |

Updated on:Aug 26, 2020 | 1:11 PM

Share

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ನೀರವ್‌ ಮೋದಿಯಿಂದ ಇದುವರೆಗೆ ಸುಮಾರು 24 ಕೋಟಿ ಹಣ ವಸೂಲಾಗಿದೆ ಎಂದು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ವಿದೇಶಗಳಲ್ಲಿ ನಡೆಯುತ್ತಿರುವ ವ್ಯಾಜ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮಿನಿಸ್ಟ್ರಿ ಆಫ್‌ ಕಾರ್ಪೋರೇಟ್‌ ಅಫೇರ್ಸ್‌ಗೆ ಈ ಸಂಬಂಧ ಪಿಎನ್‌ಬಿ ಮಾಹಿತಿ ನೀಡಿದೆ. ಅಮೆರಿಕದಲ್ಲಿ ನೀರವ್‌ ಮೋದಿಯ ಕಂಪನಿ ‘ಫೈರ್‌ಸ್ಟಾರ್‌ ಡೈಮಂಡ್‌’ ತಾನು ದಿವಾಳಿಯಾಗಿದ್ದೇನೆ ಎಂದು ಸಲ್ಲಿಸಿದ್ದ ಅರ್ಜಿಯ ಮಾಹಿತಿ ನಂತರ, ಕಾನೂನಿನ ಸಮರ ಸಾರಿದ್ದ ಪಿಎನ್‌ಬಿ ಮತ್ತು ಎಂಸಿಎಗೆ ಇದು ಮೊದಲ ಜಯವಾಗಿದೆ.

ಅಮೆರಿಕ ಕಾನೂನಿನ ಪ್ರಕಾರ ಕಂಪನಿ ದಿವಾಳಿಗೆ ಅರ್ಜಿ ಸಲ್ಲಿಸಿದ ನಂತರ ಅದರ ಸಾಲಗಾರರಿಗೆ ಕಂಪನಿಯ ಆಸ್ತಿಗಳನ್ನು ಮಾರಿ ಬಂದ ಹಣವನ್ನು ಸಾಲದ ಪ್ರಮಾಣದ ಮೇಲೆ ಹಂಚಿಕೆ ಮಾಡಲಾಗುತ್ತೆ. ಇದರಂತೆ ಈಗ ಮೊದಲ ಕಂತಾಗಿ 3.25 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 24.33 ಕೋಟಿ ರೂ ಪಿಎನ್‌ಬಿಗೆ ಸಂದಾಯವಾಗಿದೆ.

ಇಷ್ಟೇ ಅಲ್ಲ ನೀರವ್‌ ಮೋದಿಯ ಇನ್ನೂ ಇತರ ಆಸ್ತಿಗಳ ಬಿಕರಿ ಬಾಕಿಯಿದ್ದು, ಆ ಪ್ರಕ್ರಿಯೆ ಮುಗಿದ ನಂತರ ಬ್ಯಾಂಕ್‌ಗೆ ಇನ್ನೂ ಸುಮಾುರ 50 ಕೋಟಿ ರೂಗಳು ಬರುವ ಸಾಧ್ಯತೆ ಇದೆಯಂದು ಪಿಎನ್‌ಬಿ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

ಅಂದ ಹಾಗೆ ನೀರವ್‌ ಮೋದಿಯ ನಂತರ ಈಗ ಆತನ ಪತ್ನಿ ಌಮಿ ಮೋದಿ ವಿರುದ್ದ ಕೂಡಾ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಕಳಿಸಿದೆ. ಇದು ಬ್ಯಾಂಕ್‌ ಒಂದರಲ್ಲಿ 2 ಬಿಲಿಯನ್‌ ಡಾಲರ್‌ ಹಗರಣಕ್ಕೆ ಸಂಬಂಧಿಸಿದ್ದು. ಒಟ್ಟಿನಲ್ಲಿ ಚೋರ ಗಂಡ ಚಾಂಡಾಲ ಹೆಂಡತಿಯಂತಾಗಿದೆ ಮಿಸ್ಟರ್‌ ಌಂಡ್‌ ಮಿಸೆಸ್‌ ಮೋದಿ ದಂಪತಿ ಕತೆ.

Published On - 12:48 pm, Wed, 26 August 20

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ