AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ತ ಪತ್ನಿಗೆ ರೆಡ್ ನೋಟಿಸ್‌, ಇತ್ತ ನೀ. ಮೋದಿಯಿಂದ ಅಮೆರಿಕದಲ್ಲಿ 24 ಕೋಟಿ ವಸೂಲಿ

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ನೀರವ್‌ ಮೋದಿಯಿಂದ ಇದುವರೆಗೆ ಸುಮಾರು 24 ಕೋಟಿ ಹಣ ವಸೂಲಾಗಿದೆ ಎಂದು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ. ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ವಿದೇಶಗಳಲ್ಲಿ ನಡೆಯುತ್ತಿರುವ ವ್ಯಾಜ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮಿನಿಸ್ಟ್ರಿ ಆಫ್‌ ಕಾರ್ಪೋರೇಟ್‌ ಅಫೇರ್ಸ್‌ಗೆ ಈ ಸಂಬಂಧ ಪಿಎನ್‌ಬಿ ಮಾಹಿತಿ ನೀಡಿದೆ. ಅಮೆರಿಕದಲ್ಲಿ ನೀರವ್‌ ಮೋದಿಯ ಕಂಪನಿ ‘ಫೈರ್‌ಸ್ಟಾರ್‌ ಡೈಮಂಡ್‌’ ತಾನು ದಿವಾಳಿಯಾಗಿದ್ದೇನೆ ಎಂದು ಸಲ್ಲಿಸಿದ್ದ ಅರ್ಜಿಯ ಮಾಹಿತಿ ನಂತರ, ಕಾನೂನಿನ ಸಮರ ಸಾರಿದ್ದ […]

ಅತ್ತ ಪತ್ನಿಗೆ ರೆಡ್ ನೋಟಿಸ್‌, ಇತ್ತ ನೀ. ಮೋದಿಯಿಂದ ಅಮೆರಿಕದಲ್ಲಿ 24 ಕೋಟಿ ವಸೂಲಿ
Guru
Guru| Edited By: ಸಾಧು ಶ್ರೀನಾಥ್​|

Updated on:Aug 26, 2020 | 1:11 PM

Share

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ನೀರವ್‌ ಮೋದಿಯಿಂದ ಇದುವರೆಗೆ ಸುಮಾರು 24 ಕೋಟಿ ಹಣ ವಸೂಲಾಗಿದೆ ಎಂದು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ವಿದೇಶಗಳಲ್ಲಿ ನಡೆಯುತ್ತಿರುವ ವ್ಯಾಜ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮಿನಿಸ್ಟ್ರಿ ಆಫ್‌ ಕಾರ್ಪೋರೇಟ್‌ ಅಫೇರ್ಸ್‌ಗೆ ಈ ಸಂಬಂಧ ಪಿಎನ್‌ಬಿ ಮಾಹಿತಿ ನೀಡಿದೆ. ಅಮೆರಿಕದಲ್ಲಿ ನೀರವ್‌ ಮೋದಿಯ ಕಂಪನಿ ‘ಫೈರ್‌ಸ್ಟಾರ್‌ ಡೈಮಂಡ್‌’ ತಾನು ದಿವಾಳಿಯಾಗಿದ್ದೇನೆ ಎಂದು ಸಲ್ಲಿಸಿದ್ದ ಅರ್ಜಿಯ ಮಾಹಿತಿ ನಂತರ, ಕಾನೂನಿನ ಸಮರ ಸಾರಿದ್ದ ಪಿಎನ್‌ಬಿ ಮತ್ತು ಎಂಸಿಎಗೆ ಇದು ಮೊದಲ ಜಯವಾಗಿದೆ.

ಅಮೆರಿಕ ಕಾನೂನಿನ ಪ್ರಕಾರ ಕಂಪನಿ ದಿವಾಳಿಗೆ ಅರ್ಜಿ ಸಲ್ಲಿಸಿದ ನಂತರ ಅದರ ಸಾಲಗಾರರಿಗೆ ಕಂಪನಿಯ ಆಸ್ತಿಗಳನ್ನು ಮಾರಿ ಬಂದ ಹಣವನ್ನು ಸಾಲದ ಪ್ರಮಾಣದ ಮೇಲೆ ಹಂಚಿಕೆ ಮಾಡಲಾಗುತ್ತೆ. ಇದರಂತೆ ಈಗ ಮೊದಲ ಕಂತಾಗಿ 3.25 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 24.33 ಕೋಟಿ ರೂ ಪಿಎನ್‌ಬಿಗೆ ಸಂದಾಯವಾಗಿದೆ.

ಇಷ್ಟೇ ಅಲ್ಲ ನೀರವ್‌ ಮೋದಿಯ ಇನ್ನೂ ಇತರ ಆಸ್ತಿಗಳ ಬಿಕರಿ ಬಾಕಿಯಿದ್ದು, ಆ ಪ್ರಕ್ರಿಯೆ ಮುಗಿದ ನಂತರ ಬ್ಯಾಂಕ್‌ಗೆ ಇನ್ನೂ ಸುಮಾುರ 50 ಕೋಟಿ ರೂಗಳು ಬರುವ ಸಾಧ್ಯತೆ ಇದೆಯಂದು ಪಿಎನ್‌ಬಿ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

ಅಂದ ಹಾಗೆ ನೀರವ್‌ ಮೋದಿಯ ನಂತರ ಈಗ ಆತನ ಪತ್ನಿ ಌಮಿ ಮೋದಿ ವಿರುದ್ದ ಕೂಡಾ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಕಳಿಸಿದೆ. ಇದು ಬ್ಯಾಂಕ್‌ ಒಂದರಲ್ಲಿ 2 ಬಿಲಿಯನ್‌ ಡಾಲರ್‌ ಹಗರಣಕ್ಕೆ ಸಂಬಂಧಿಸಿದ್ದು. ಒಟ್ಟಿನಲ್ಲಿ ಚೋರ ಗಂಡ ಚಾಂಡಾಲ ಹೆಂಡತಿಯಂತಾಗಿದೆ ಮಿಸ್ಟರ್‌ ಌಂಡ್‌ ಮಿಸೆಸ್‌ ಮೋದಿ ದಂಪತಿ ಕತೆ.

Published On - 12:48 pm, Wed, 26 August 20

Follow Us
ಥಾಣೆಯಲ್ಲಿ ಕಟ್ಟಡದಿಂದ ವಾಹನಗಳ ಮೇಲೆ ಬಿದ್ದ ಕ್ರೇನ್, ಓರ್ವ ಸಾವು
ಥಾಣೆಯಲ್ಲಿ ಕಟ್ಟಡದಿಂದ ವಾಹನಗಳ ಮೇಲೆ ಬಿದ್ದ ಕ್ರೇನ್, ಓರ್ವ ಸಾವು
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್
ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್
ಸಚಿವ ಸಂಪುಟ ವಿಸ್ತರಣೆ ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ
ಸಚಿವ ಸಂಪುಟ ವಿಸ್ತರಣೆ ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ
ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಮಹತ್ವದ ಸಭೆ, ಯಾರಿಗೆಲ್ಲಾ ಮಂತ್ರಿ ಸ್ಥಾನ?
ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಮಹತ್ವದ ಸಭೆ, ಯಾರಿಗೆಲ್ಲಾ ಮಂತ್ರಿ ಸ್ಥಾನ?