AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕೇವಲ ‘ಗಾಳಿಮಾತು’ ಎಂದು ನಂಬಿ ಸೋಂಕಿತನ ಪಾರ್ಟಿಗೆ ಹೋದ, ಸತ್ತ!

ಕೊರೊನಾ ಮಹಾಮಾರಿಯ ಮೃತ್ಯುಕೂಪದಲ್ಲಿ ಸಿಲುಕಿ ವಿಶ್ವದ ದೊಡ್ಡಣ್ಣ ಅಮೆರಿಕ ಅಕ್ಷರಶಃ ನಲುಗಿಹೋಗಿದ್ದಾನೆ. ಜಗತ್ತಿನಲ್ಲೇ ಅತಿ ಹೆಚ್ಚು ಸೋಂಕಿತರ ಮತ್ತು ಸಾವಿನ ಸಂಖ್ಯೆ ಹೊಂದಿರುವ ಅಮೆರಿಕಾದಲ್ಲಿ ಹೆಮ್ಮಾರಿಯ ರುದ್ರತಾಂಡವ ಬಲು ಭೀಕರ. ಆದರೆ, ಕೊರೊನಾ ವೈರಸ್​ ಅನ್ನೋದು ಬರೀ ಗಾಳಿಮಾತು. ಅದರಿಂದ ನಂಗೆ ಏನು ಆಗಲ್ಲ ಅಂತಾ ಭಾವಿಸಿ ಸೋಂಕಿತನೊಬ್ಬನ ಪಾರ್ಟಿಗೆ ಹೋದ ವ್ಯಕ್ತಿ ಕೊನೆಗೆ ವೈರಸ್​ಗೇ ಬಲಿಯಾಗಿರೋ ನಿಜ ಸಂಗತಿ ಅಮೆರಿಕಾದ ಟೆಕ್ಸಾಸ್​ನಲ್ಲಿ ಬೆಳಕಿಗೆ ಬಂದಿದೆ. ಹೌದು, ಕೇಳೋಕೆ ಆಶ್ಚರ್ಯ ಅನ್ನಿಸಿದ್ರೂ ಇದು ರಿಯಲ್​ ಸ್ಟೋರಿ. ಟೆಕ್ಸಾಸ್​ನ […]

ಕೊರೊನಾ ಕೇವಲ ‘ಗಾಳಿಮಾತು’ ಎಂದು ನಂಬಿ ಸೋಂಕಿತನ ಪಾರ್ಟಿಗೆ ಹೋದ, ಸತ್ತ!
KUSHAL V
|

Updated on: Jul 15, 2020 | 7:48 PM

Share

ಕೊರೊನಾ ಮಹಾಮಾರಿಯ ಮೃತ್ಯುಕೂಪದಲ್ಲಿ ಸಿಲುಕಿ ವಿಶ್ವದ ದೊಡ್ಡಣ್ಣ ಅಮೆರಿಕ ಅಕ್ಷರಶಃ ನಲುಗಿಹೋಗಿದ್ದಾನೆ. ಜಗತ್ತಿನಲ್ಲೇ ಅತಿ ಹೆಚ್ಚು ಸೋಂಕಿತರ ಮತ್ತು ಸಾವಿನ ಸಂಖ್ಯೆ ಹೊಂದಿರುವ ಅಮೆರಿಕಾದಲ್ಲಿ ಹೆಮ್ಮಾರಿಯ ರುದ್ರತಾಂಡವ ಬಲು ಭೀಕರ. ಆದರೆ, ಕೊರೊನಾ ವೈರಸ್​ ಅನ್ನೋದು ಬರೀ ಗಾಳಿಮಾತು. ಅದರಿಂದ ನಂಗೆ ಏನು ಆಗಲ್ಲ ಅಂತಾ ಭಾವಿಸಿ ಸೋಂಕಿತನೊಬ್ಬನ ಪಾರ್ಟಿಗೆ ಹೋದ ವ್ಯಕ್ತಿ ಕೊನೆಗೆ ವೈರಸ್​ಗೇ ಬಲಿಯಾಗಿರೋ ನಿಜ ಸಂಗತಿ ಅಮೆರಿಕಾದ ಟೆಕ್ಸಾಸ್​ನಲ್ಲಿ ಬೆಳಕಿಗೆ ಬಂದಿದೆ.

ಹೌದು, ಕೇಳೋಕೆ ಆಶ್ಚರ್ಯ ಅನ್ನಿಸಿದ್ರೂ ಇದು ರಿಯಲ್​ ಸ್ಟೋರಿ. ಟೆಕ್ಸಾಸ್​ನ ಸಾನ್​ ಌಂಟೋನಿಯೋದಲ್ಲಿರುವ ಮೆಥಾಡಿಸ್ಟ್​ ಆಸ್ಪತ್ರೆಗೆ ದಾಖಲಾದ ಮೃತ ಸೋಂಕಿತನೇ ಖುದ್ದು ಈ ವಿಷಯವನ್ನ ಅಲ್ಲಿನ ಸಿಬ್ಬಂದಿಗೆ ಹೇಳಿದ್ದಾನಂತೆ.

ಚಾಲೆಂಜ್​ ಒಪ್ಪಿಕೊಂಡಿದ್ದೇ ಮುಳುವಾಯ್ತಾ? ಈ ಬಗ್ಗೆ ಮಾತನಾಡಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಜೇನ್​ ಌಪಲ್​ಬೀ ಸೋಂಕಿತ ತಾನು ಇನ್ನು ಚಿಕ್ಕ ವಯಸ್ಸಿನವ. ಕೇವಲ ಮೂವತ್ತರ ಹರೆಯ ನನಗೆ. ಹೀಗಾಗಿ ಈ ವೈರಸ್​ ನಂಗೆ ಏನು ಮಾಡಲ್ಲ ಅಂತಾ ಹಾಯಾಗಿ ಇದ್ದನಂತೆ. ಈ ನಡುವೆ ಸೋಂಕಿಗೆ ತುತ್ತಾಗಿದ್ದ ತನ್ನ ಸ್ನೇಹಿತನೊಬ್ಬ ಈತನನ್ನ ನನ್ನ ಪಾರ್ಟಿಗೆ ಬಾ ಅಂತಾ ಕರೆದನಂತೆ. ನಂಗೆ ಸೋಂಕು ತಗಲಿದೆ. ಹೀಗಾಗಿ, ನೀನು ನನ್ನ ಪಾರ್ಟಿಗೆ ಬಂದ್ರೇ ನಿಂಗೂ ಕೊರೊನಾ ಬರುತ್ತೆ. ಆಗ ನೀನು ಸೋಂಕಿನಿಂದ ಬಚಾವ್ ಆಗ್ತಿಯೋ ಇಲ್ವೋ ಅಂತಾ ನೋಡೋಣ ಎಂದು ಚಾಲೆಂಜ್​ ಹಾಕಿದ್ದಾನಂತೆ. ಅದಕ್ಕೆ ಒಪ್ಪಿಕೊಂಡು ಈತ ಸ್ನೇಹಿತನ ಪಾರ್ಟಿಗೆ ಹೋಗೇ ಬಿಟ್ಟ.

‘ನಾನು ಆ ಪಾರ್ಟಿಗೆ ಹೋಗಿ ತಪ್ಪು ಮಾಡಿಬಿಟ್ಟೆ’ ಮುಂದೇನಾಗಿರುತ್ತೆ ಅಂತಾ ನಿಮಗೆ ವಿವರಿಸೋ ಅಗತ್ಯವಿಲ್ಲ. ಕೊನೆಗೂ ಸೋಂಕು ತಗಲಿಸಿಕೊಂಡವ ಆಸ್ಪತ್ರೆ ಪಾಲಾದ. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ. ವಿಪರ್ಯಾಸವೆಂದರೆ ಸಾಯುವ ಹಂತ ತಲುಪಿದ್ದ ಈ ಬಲಿಷ್ಠ 30ರ ಹರೆಯದವನು ನಾನು ಆ ಪಾರ್ಟಿಗೆ ಹೋಗಿ ತಪ್ಪು ಮಾಡಿಬಿಟ್ಟೆ ಅಂತಾ ಆಸ್ಪತ್ರೆಯ ನರ್ಸ್​ ಬಳಿ ಹೇಳಿಕೊಂಡನಂತೆ. ಆದರೆ, ಏನು ಪ್ರಯೋಜನ? ಕೊರೊನಾ ಎಂಬುದು ಗಾಳಿಮಾತಲ್ಲ. ಗಾಳಿಯಲ್ಲಿ ಹರಡುವ ಮಾರಕ ಮಹಾಮಾರಿ ಎಂದು ಈತ ಅರಿತುಕೊಳ್ಳಲೇ ಇಲ್ಲ.

Follow Us
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ