AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕೇವಲ ‘ಗಾಳಿಮಾತು’ ಎಂದು ನಂಬಿ ಸೋಂಕಿತನ ಪಾರ್ಟಿಗೆ ಹೋದ, ಸತ್ತ!

ಕೊರೊನಾ ಮಹಾಮಾರಿಯ ಮೃತ್ಯುಕೂಪದಲ್ಲಿ ಸಿಲುಕಿ ವಿಶ್ವದ ದೊಡ್ಡಣ್ಣ ಅಮೆರಿಕ ಅಕ್ಷರಶಃ ನಲುಗಿಹೋಗಿದ್ದಾನೆ. ಜಗತ್ತಿನಲ್ಲೇ ಅತಿ ಹೆಚ್ಚು ಸೋಂಕಿತರ ಮತ್ತು ಸಾವಿನ ಸಂಖ್ಯೆ ಹೊಂದಿರುವ ಅಮೆರಿಕಾದಲ್ಲಿ ಹೆಮ್ಮಾರಿಯ ರುದ್ರತಾಂಡವ ಬಲು ಭೀಕರ. ಆದರೆ, ಕೊರೊನಾ ವೈರಸ್​ ಅನ್ನೋದು ಬರೀ ಗಾಳಿಮಾತು. ಅದರಿಂದ ನಂಗೆ ಏನು ಆಗಲ್ಲ ಅಂತಾ ಭಾವಿಸಿ ಸೋಂಕಿತನೊಬ್ಬನ ಪಾರ್ಟಿಗೆ ಹೋದ ವ್ಯಕ್ತಿ ಕೊನೆಗೆ ವೈರಸ್​ಗೇ ಬಲಿಯಾಗಿರೋ ನಿಜ ಸಂಗತಿ ಅಮೆರಿಕಾದ ಟೆಕ್ಸಾಸ್​ನಲ್ಲಿ ಬೆಳಕಿಗೆ ಬಂದಿದೆ. ಹೌದು, ಕೇಳೋಕೆ ಆಶ್ಚರ್ಯ ಅನ್ನಿಸಿದ್ರೂ ಇದು ರಿಯಲ್​ ಸ್ಟೋರಿ. ಟೆಕ್ಸಾಸ್​ನ […]

ಕೊರೊನಾ ಕೇವಲ ‘ಗಾಳಿಮಾತು’ ಎಂದು ನಂಬಿ ಸೋಂಕಿತನ ಪಾರ್ಟಿಗೆ ಹೋದ, ಸತ್ತ!
Follow us
KUSHAL V
|

Updated on: Jul 15, 2020 | 7:48 PM

ಕೊರೊನಾ ಮಹಾಮಾರಿಯ ಮೃತ್ಯುಕೂಪದಲ್ಲಿ ಸಿಲುಕಿ ವಿಶ್ವದ ದೊಡ್ಡಣ್ಣ ಅಮೆರಿಕ ಅಕ್ಷರಶಃ ನಲುಗಿಹೋಗಿದ್ದಾನೆ. ಜಗತ್ತಿನಲ್ಲೇ ಅತಿ ಹೆಚ್ಚು ಸೋಂಕಿತರ ಮತ್ತು ಸಾವಿನ ಸಂಖ್ಯೆ ಹೊಂದಿರುವ ಅಮೆರಿಕಾದಲ್ಲಿ ಹೆಮ್ಮಾರಿಯ ರುದ್ರತಾಂಡವ ಬಲು ಭೀಕರ. ಆದರೆ, ಕೊರೊನಾ ವೈರಸ್​ ಅನ್ನೋದು ಬರೀ ಗಾಳಿಮಾತು. ಅದರಿಂದ ನಂಗೆ ಏನು ಆಗಲ್ಲ ಅಂತಾ ಭಾವಿಸಿ ಸೋಂಕಿತನೊಬ್ಬನ ಪಾರ್ಟಿಗೆ ಹೋದ ವ್ಯಕ್ತಿ ಕೊನೆಗೆ ವೈರಸ್​ಗೇ ಬಲಿಯಾಗಿರೋ ನಿಜ ಸಂಗತಿ ಅಮೆರಿಕಾದ ಟೆಕ್ಸಾಸ್​ನಲ್ಲಿ ಬೆಳಕಿಗೆ ಬಂದಿದೆ.

ಹೌದು, ಕೇಳೋಕೆ ಆಶ್ಚರ್ಯ ಅನ್ನಿಸಿದ್ರೂ ಇದು ರಿಯಲ್​ ಸ್ಟೋರಿ. ಟೆಕ್ಸಾಸ್​ನ ಸಾನ್​ ಌಂಟೋನಿಯೋದಲ್ಲಿರುವ ಮೆಥಾಡಿಸ್ಟ್​ ಆಸ್ಪತ್ರೆಗೆ ದಾಖಲಾದ ಮೃತ ಸೋಂಕಿತನೇ ಖುದ್ದು ಈ ವಿಷಯವನ್ನ ಅಲ್ಲಿನ ಸಿಬ್ಬಂದಿಗೆ ಹೇಳಿದ್ದಾನಂತೆ.

ಚಾಲೆಂಜ್​ ಒಪ್ಪಿಕೊಂಡಿದ್ದೇ ಮುಳುವಾಯ್ತಾ? ಈ ಬಗ್ಗೆ ಮಾತನಾಡಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಜೇನ್​ ಌಪಲ್​ಬೀ ಸೋಂಕಿತ ತಾನು ಇನ್ನು ಚಿಕ್ಕ ವಯಸ್ಸಿನವ. ಕೇವಲ ಮೂವತ್ತರ ಹರೆಯ ನನಗೆ. ಹೀಗಾಗಿ ಈ ವೈರಸ್​ ನಂಗೆ ಏನು ಮಾಡಲ್ಲ ಅಂತಾ ಹಾಯಾಗಿ ಇದ್ದನಂತೆ. ಈ ನಡುವೆ ಸೋಂಕಿಗೆ ತುತ್ತಾಗಿದ್ದ ತನ್ನ ಸ್ನೇಹಿತನೊಬ್ಬ ಈತನನ್ನ ನನ್ನ ಪಾರ್ಟಿಗೆ ಬಾ ಅಂತಾ ಕರೆದನಂತೆ. ನಂಗೆ ಸೋಂಕು ತಗಲಿದೆ. ಹೀಗಾಗಿ, ನೀನು ನನ್ನ ಪಾರ್ಟಿಗೆ ಬಂದ್ರೇ ನಿಂಗೂ ಕೊರೊನಾ ಬರುತ್ತೆ. ಆಗ ನೀನು ಸೋಂಕಿನಿಂದ ಬಚಾವ್ ಆಗ್ತಿಯೋ ಇಲ್ವೋ ಅಂತಾ ನೋಡೋಣ ಎಂದು ಚಾಲೆಂಜ್​ ಹಾಕಿದ್ದಾನಂತೆ. ಅದಕ್ಕೆ ಒಪ್ಪಿಕೊಂಡು ಈತ ಸ್ನೇಹಿತನ ಪಾರ್ಟಿಗೆ ಹೋಗೇ ಬಿಟ್ಟ.

‘ನಾನು ಆ ಪಾರ್ಟಿಗೆ ಹೋಗಿ ತಪ್ಪು ಮಾಡಿಬಿಟ್ಟೆ’ ಮುಂದೇನಾಗಿರುತ್ತೆ ಅಂತಾ ನಿಮಗೆ ವಿವರಿಸೋ ಅಗತ್ಯವಿಲ್ಲ. ಕೊನೆಗೂ ಸೋಂಕು ತಗಲಿಸಿಕೊಂಡವ ಆಸ್ಪತ್ರೆ ಪಾಲಾದ. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ. ವಿಪರ್ಯಾಸವೆಂದರೆ ಸಾಯುವ ಹಂತ ತಲುಪಿದ್ದ ಈ ಬಲಿಷ್ಠ 30ರ ಹರೆಯದವನು ನಾನು ಆ ಪಾರ್ಟಿಗೆ ಹೋಗಿ ತಪ್ಪು ಮಾಡಿಬಿಟ್ಟೆ ಅಂತಾ ಆಸ್ಪತ್ರೆಯ ನರ್ಸ್​ ಬಳಿ ಹೇಳಿಕೊಂಡನಂತೆ. ಆದರೆ, ಏನು ಪ್ರಯೋಜನ? ಕೊರೊನಾ ಎಂಬುದು ಗಾಳಿಮಾತಲ್ಲ. ಗಾಳಿಯಲ್ಲಿ ಹರಡುವ ಮಾರಕ ಮಹಾಮಾರಿ ಎಂದು ಈತ ಅರಿತುಕೊಳ್ಳಲೇ ಇಲ್ಲ.

ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ