AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕೇವಲ ‘ಗಾಳಿಮಾತು’ ಎಂದು ನಂಬಿ ಸೋಂಕಿತನ ಪಾರ್ಟಿಗೆ ಹೋದ, ಸತ್ತ!

ಕೊರೊನಾ ಮಹಾಮಾರಿಯ ಮೃತ್ಯುಕೂಪದಲ್ಲಿ ಸಿಲುಕಿ ವಿಶ್ವದ ದೊಡ್ಡಣ್ಣ ಅಮೆರಿಕ ಅಕ್ಷರಶಃ ನಲುಗಿಹೋಗಿದ್ದಾನೆ. ಜಗತ್ತಿನಲ್ಲೇ ಅತಿ ಹೆಚ್ಚು ಸೋಂಕಿತರ ಮತ್ತು ಸಾವಿನ ಸಂಖ್ಯೆ ಹೊಂದಿರುವ ಅಮೆರಿಕಾದಲ್ಲಿ ಹೆಮ್ಮಾರಿಯ ರುದ್ರತಾಂಡವ ಬಲು ಭೀಕರ. ಆದರೆ, ಕೊರೊನಾ ವೈರಸ್​ ಅನ್ನೋದು ಬರೀ ಗಾಳಿಮಾತು. ಅದರಿಂದ ನಂಗೆ ಏನು ಆಗಲ್ಲ ಅಂತಾ ಭಾವಿಸಿ ಸೋಂಕಿತನೊಬ್ಬನ ಪಾರ್ಟಿಗೆ ಹೋದ ವ್ಯಕ್ತಿ ಕೊನೆಗೆ ವೈರಸ್​ಗೇ ಬಲಿಯಾಗಿರೋ ನಿಜ ಸಂಗತಿ ಅಮೆರಿಕಾದ ಟೆಕ್ಸಾಸ್​ನಲ್ಲಿ ಬೆಳಕಿಗೆ ಬಂದಿದೆ. ಹೌದು, ಕೇಳೋಕೆ ಆಶ್ಚರ್ಯ ಅನ್ನಿಸಿದ್ರೂ ಇದು ರಿಯಲ್​ ಸ್ಟೋರಿ. ಟೆಕ್ಸಾಸ್​ನ […]

ಕೊರೊನಾ ಕೇವಲ ‘ಗಾಳಿಮಾತು’ ಎಂದು ನಂಬಿ ಸೋಂಕಿತನ ಪಾರ್ಟಿಗೆ ಹೋದ, ಸತ್ತ!
KUSHAL V
|

Updated on: Jul 15, 2020 | 7:48 PM

Share

ಕೊರೊನಾ ಮಹಾಮಾರಿಯ ಮೃತ್ಯುಕೂಪದಲ್ಲಿ ಸಿಲುಕಿ ವಿಶ್ವದ ದೊಡ್ಡಣ್ಣ ಅಮೆರಿಕ ಅಕ್ಷರಶಃ ನಲುಗಿಹೋಗಿದ್ದಾನೆ. ಜಗತ್ತಿನಲ್ಲೇ ಅತಿ ಹೆಚ್ಚು ಸೋಂಕಿತರ ಮತ್ತು ಸಾವಿನ ಸಂಖ್ಯೆ ಹೊಂದಿರುವ ಅಮೆರಿಕಾದಲ್ಲಿ ಹೆಮ್ಮಾರಿಯ ರುದ್ರತಾಂಡವ ಬಲು ಭೀಕರ. ಆದರೆ, ಕೊರೊನಾ ವೈರಸ್​ ಅನ್ನೋದು ಬರೀ ಗಾಳಿಮಾತು. ಅದರಿಂದ ನಂಗೆ ಏನು ಆಗಲ್ಲ ಅಂತಾ ಭಾವಿಸಿ ಸೋಂಕಿತನೊಬ್ಬನ ಪಾರ್ಟಿಗೆ ಹೋದ ವ್ಯಕ್ತಿ ಕೊನೆಗೆ ವೈರಸ್​ಗೇ ಬಲಿಯಾಗಿರೋ ನಿಜ ಸಂಗತಿ ಅಮೆರಿಕಾದ ಟೆಕ್ಸಾಸ್​ನಲ್ಲಿ ಬೆಳಕಿಗೆ ಬಂದಿದೆ.

ಹೌದು, ಕೇಳೋಕೆ ಆಶ್ಚರ್ಯ ಅನ್ನಿಸಿದ್ರೂ ಇದು ರಿಯಲ್​ ಸ್ಟೋರಿ. ಟೆಕ್ಸಾಸ್​ನ ಸಾನ್​ ಌಂಟೋನಿಯೋದಲ್ಲಿರುವ ಮೆಥಾಡಿಸ್ಟ್​ ಆಸ್ಪತ್ರೆಗೆ ದಾಖಲಾದ ಮೃತ ಸೋಂಕಿತನೇ ಖುದ್ದು ಈ ವಿಷಯವನ್ನ ಅಲ್ಲಿನ ಸಿಬ್ಬಂದಿಗೆ ಹೇಳಿದ್ದಾನಂತೆ.

ಚಾಲೆಂಜ್​ ಒಪ್ಪಿಕೊಂಡಿದ್ದೇ ಮುಳುವಾಯ್ತಾ? ಈ ಬಗ್ಗೆ ಮಾತನಾಡಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಜೇನ್​ ಌಪಲ್​ಬೀ ಸೋಂಕಿತ ತಾನು ಇನ್ನು ಚಿಕ್ಕ ವಯಸ್ಸಿನವ. ಕೇವಲ ಮೂವತ್ತರ ಹರೆಯ ನನಗೆ. ಹೀಗಾಗಿ ಈ ವೈರಸ್​ ನಂಗೆ ಏನು ಮಾಡಲ್ಲ ಅಂತಾ ಹಾಯಾಗಿ ಇದ್ದನಂತೆ. ಈ ನಡುವೆ ಸೋಂಕಿಗೆ ತುತ್ತಾಗಿದ್ದ ತನ್ನ ಸ್ನೇಹಿತನೊಬ್ಬ ಈತನನ್ನ ನನ್ನ ಪಾರ್ಟಿಗೆ ಬಾ ಅಂತಾ ಕರೆದನಂತೆ. ನಂಗೆ ಸೋಂಕು ತಗಲಿದೆ. ಹೀಗಾಗಿ, ನೀನು ನನ್ನ ಪಾರ್ಟಿಗೆ ಬಂದ್ರೇ ನಿಂಗೂ ಕೊರೊನಾ ಬರುತ್ತೆ. ಆಗ ನೀನು ಸೋಂಕಿನಿಂದ ಬಚಾವ್ ಆಗ್ತಿಯೋ ಇಲ್ವೋ ಅಂತಾ ನೋಡೋಣ ಎಂದು ಚಾಲೆಂಜ್​ ಹಾಕಿದ್ದಾನಂತೆ. ಅದಕ್ಕೆ ಒಪ್ಪಿಕೊಂಡು ಈತ ಸ್ನೇಹಿತನ ಪಾರ್ಟಿಗೆ ಹೋಗೇ ಬಿಟ್ಟ.

‘ನಾನು ಆ ಪಾರ್ಟಿಗೆ ಹೋಗಿ ತಪ್ಪು ಮಾಡಿಬಿಟ್ಟೆ’ ಮುಂದೇನಾಗಿರುತ್ತೆ ಅಂತಾ ನಿಮಗೆ ವಿವರಿಸೋ ಅಗತ್ಯವಿಲ್ಲ. ಕೊನೆಗೂ ಸೋಂಕು ತಗಲಿಸಿಕೊಂಡವ ಆಸ್ಪತ್ರೆ ಪಾಲಾದ. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ. ವಿಪರ್ಯಾಸವೆಂದರೆ ಸಾಯುವ ಹಂತ ತಲುಪಿದ್ದ ಈ ಬಲಿಷ್ಠ 30ರ ಹರೆಯದವನು ನಾನು ಆ ಪಾರ್ಟಿಗೆ ಹೋಗಿ ತಪ್ಪು ಮಾಡಿಬಿಟ್ಟೆ ಅಂತಾ ಆಸ್ಪತ್ರೆಯ ನರ್ಸ್​ ಬಳಿ ಹೇಳಿಕೊಂಡನಂತೆ. ಆದರೆ, ಏನು ಪ್ರಯೋಜನ? ಕೊರೊನಾ ಎಂಬುದು ಗಾಳಿಮಾತಲ್ಲ. ಗಾಳಿಯಲ್ಲಿ ಹರಡುವ ಮಾರಕ ಮಹಾಮಾರಿ ಎಂದು ಈತ ಅರಿತುಕೊಳ್ಳಲೇ ಇಲ್ಲ.

Follow Us
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ