AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ವೇತಭವನದ ಕ್ರಿಸ್​ಮಸ್ ಅಲಂಕಾರ ಅನಾವರಣಗೊಳಿಸಿದ ಮೆಲೆನಿಯಾ ಟ್ರಂಪ್

ಶ್ವೇತಭವನದ ಕ್ರಿಸ್​ಮಸ್ ಅಲಂಕಾರವನ್ನು ಅಮೆರಿಕಾದ ಮೊದಲ ಮಹಿಳೆ ಮೆಲೆನಿಯಾ ಟ್ರಂಪ್ ಅನಾವರಣಗೊಳಿಸಿದ್ದಾರೆ. ‘ಅಮೆರಿಕಾ ದಿ ಗ್ರೇಟ್’ ಎಂಬ ಥೀಮ್​ನಲ್ಲಿ ಶ್ವೇತಭವನ ಕಂಗೊಳಿಸುತ್ತಿದೆ.

ಶ್ವೇತಭವನದ ಕ್ರಿಸ್​ಮಸ್ ಅಲಂಕಾರ ಅನಾವರಣಗೊಳಿಸಿದ ಮೆಲೆನಿಯಾ ಟ್ರಂಪ್
ಶ್ವೇತಭವನದ ಅಲಂಕಾರ ವೀಕ್ಷಣೆಯಲ್ಲಿ ಮೆಲೆನಿಯಾ ಟ್ರಂಪ್
TV9 Web
| Edited By: |

Updated on:Apr 06, 2022 | 11:29 PM

Share

ವಾಷಿಂಗ್​ಟನ್: ಅಮೆರಿಕಾದ ಮೊದಲ ಮಹಿಳೆ ಮೆಲೆನಿಯಾ ಟ್ರಂಪ್, ಶ್ವೇತಭವನದ ಕ್ರಿಸ್​ಮಸ್ ಅಲಂಕಾರವನ್ನು ಸೋಮವಾರ ಅನಾವರಣಗೊಳಿಸಿದ್ದಾರೆ. ‘ಅಮೆರಿಕಾ ದಿ ಗ್ರೇಟ್’ ಎಂಬ ಥೀಮ್​ನಲ್ಲಿ ಶ್ವೇತಭವನವನ್ನು ಅಲಂಕರಿಸಲಾಗಿದ್ದು, ಈ ಮೂಲಕ ದೇಶದ ಸಾರ್ವಭೌತೆಗೆ ಗೌರವ ಸಮರ್ಪಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಹಲವಾರು ನೈಸರ್ಗಿಕ ಸಂಪನ್ಮೂಲಗಳಿಂದ ನಮ್ಮ ದೇಶ ಸೌಂದರ್ಯಭರಿತವಾಗಿದೆ. ಅಂಥಾ ಪ್ರಾಕೃತಿಕ ಸಂಪತ್ತಿನಿಂದ ದೇಶಪ್ರೇಮ ಹೆಚ್ಚಿದೆ ಎಂದೂ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿವರ್ಷದ ಸಂಪ್ರದಾಯದಂತೆ, ಶ್ವೇತಭವನದ ಪೂರ್ವಭಾಗದಲ್ಲಿ ಗೋಲ್ಡ್ ಸ್ಟಾರ್ ಫ್ಯಾಮಿಲಿ ಟ್ರೀಯನ್ನು ಇಡಲಾಗಿದ್ದು, ಪ್ರೇಕ್ಷಕರನ್ನು ಸ್ವಾಗತಿಸಲಿದೆ. ನ್ಯಾಯ ಮತ್ತು ಪರಿಶ್ರಮದ ಸಂಕೇತವಾಗಿರುವ ನೀಲಿ ಬಣ್ಣದಿಂದ ಕಂಗೊಳಿಸುವ ಮರವು, ಅಮೆರಿಕಾದ ನಾಯಕರು ಮತ್ತು ಅವರ ಕುಟುಂಬಗಳಿಗೆ ಗೌರವ ಸೂಚಿಸಲಿದೆ.

ಈ ಬಾರಿ ಮರವನ್ನು ಸಿಂಗರಿಸಿರುವ ಸದಸ್ಯರು, ತಮ್ಮ ಕುಟುಂಬದ ಹಿರಿಯ ಸದಸ್ಯರನ್ನು ನೆನಪಿಸಿಕೊಳ್ಳಲು ಅವರ ಹೆಸರಿರುವ ರಿಬ್ಬನ್​ಗಳನ್ನು ಮರದಲ್ಲಿ ತೂಗಿದ್ದಾರೆ. ಆ ಮೂಲಕ ಮರದ ಅಂದವನ್ನೂ ಹೆಚ್ಚಿಸಿದ್ದಾರೆ.

‘Be Best’ ಎಂಬ ಫಲಕವನ್ನು ಮರಕ್ಕೆ ಅಳವಡಿಸಲಾಗಿದ್ದು, ಆಸ್ಪತ್ರೆಯೊಂದರ ಪ್ರತಿಕೃತಿಯನ್ನೂ ತೂಗುಹಾಕಲಾಗಿದೆ. ಆ ಮೂಲಕ ಕೊರೊನಾ ವಿರುದ್ಧ ಶ್ರಮಿಸಿದ ಆರೋಗ್ಯ ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಿಸಲಾಗಿದೆ.

ಈ ಬಗ್ಗೆ ಮೆಲೆನಿಯಾ ಟ್ರಂಪ್ ಸರಣಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಕಾಲು ಮುರಿದುಕೊಂಡ ಅಮೆರಿಕದ ನಿಯೋಜಿತ ಅಧ್ಯಕ್ಷ ಬೈಡನ್: Speedy recovery ಎಂದ ಟ್ರಂಪ್

Published On - 2:52 pm, Tue, 1 December 20

Follow Us
Web contact
Web contact

TV9 Kannada

Read More
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ