AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ವೇತಭವನದ ಕ್ರಿಸ್​ಮಸ್ ಅಲಂಕಾರ ಅನಾವರಣಗೊಳಿಸಿದ ಮೆಲೆನಿಯಾ ಟ್ರಂಪ್

ಶ್ವೇತಭವನದ ಕ್ರಿಸ್​ಮಸ್ ಅಲಂಕಾರವನ್ನು ಅಮೆರಿಕಾದ ಮೊದಲ ಮಹಿಳೆ ಮೆಲೆನಿಯಾ ಟ್ರಂಪ್ ಅನಾವರಣಗೊಳಿಸಿದ್ದಾರೆ. ‘ಅಮೆರಿಕಾ ದಿ ಗ್ರೇಟ್’ ಎಂಬ ಥೀಮ್​ನಲ್ಲಿ ಶ್ವೇತಭವನ ಕಂಗೊಳಿಸುತ್ತಿದೆ.

ಶ್ವೇತಭವನದ ಕ್ರಿಸ್​ಮಸ್ ಅಲಂಕಾರ ಅನಾವರಣಗೊಳಿಸಿದ ಮೆಲೆನಿಯಾ ಟ್ರಂಪ್
ಶ್ವೇತಭವನದ ಅಲಂಕಾರ ವೀಕ್ಷಣೆಯಲ್ಲಿ ಮೆಲೆನಿಯಾ ಟ್ರಂಪ್
TV9 Web
| Updated By: ganapathi bhat|

Updated on:Apr 06, 2022 | 11:29 PM

Share

ವಾಷಿಂಗ್​ಟನ್: ಅಮೆರಿಕಾದ ಮೊದಲ ಮಹಿಳೆ ಮೆಲೆನಿಯಾ ಟ್ರಂಪ್, ಶ್ವೇತಭವನದ ಕ್ರಿಸ್​ಮಸ್ ಅಲಂಕಾರವನ್ನು ಸೋಮವಾರ ಅನಾವರಣಗೊಳಿಸಿದ್ದಾರೆ. ‘ಅಮೆರಿಕಾ ದಿ ಗ್ರೇಟ್’ ಎಂಬ ಥೀಮ್​ನಲ್ಲಿ ಶ್ವೇತಭವನವನ್ನು ಅಲಂಕರಿಸಲಾಗಿದ್ದು, ಈ ಮೂಲಕ ದೇಶದ ಸಾರ್ವಭೌತೆಗೆ ಗೌರವ ಸಮರ್ಪಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಹಲವಾರು ನೈಸರ್ಗಿಕ ಸಂಪನ್ಮೂಲಗಳಿಂದ ನಮ್ಮ ದೇಶ ಸೌಂದರ್ಯಭರಿತವಾಗಿದೆ. ಅಂಥಾ ಪ್ರಾಕೃತಿಕ ಸಂಪತ್ತಿನಿಂದ ದೇಶಪ್ರೇಮ ಹೆಚ್ಚಿದೆ ಎಂದೂ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿವರ್ಷದ ಸಂಪ್ರದಾಯದಂತೆ, ಶ್ವೇತಭವನದ ಪೂರ್ವಭಾಗದಲ್ಲಿ ಗೋಲ್ಡ್ ಸ್ಟಾರ್ ಫ್ಯಾಮಿಲಿ ಟ್ರೀಯನ್ನು ಇಡಲಾಗಿದ್ದು, ಪ್ರೇಕ್ಷಕರನ್ನು ಸ್ವಾಗತಿಸಲಿದೆ. ನ್ಯಾಯ ಮತ್ತು ಪರಿಶ್ರಮದ ಸಂಕೇತವಾಗಿರುವ ನೀಲಿ ಬಣ್ಣದಿಂದ ಕಂಗೊಳಿಸುವ ಮರವು, ಅಮೆರಿಕಾದ ನಾಯಕರು ಮತ್ತು ಅವರ ಕುಟುಂಬಗಳಿಗೆ ಗೌರವ ಸೂಚಿಸಲಿದೆ.

ಈ ಬಾರಿ ಮರವನ್ನು ಸಿಂಗರಿಸಿರುವ ಸದಸ್ಯರು, ತಮ್ಮ ಕುಟುಂಬದ ಹಿರಿಯ ಸದಸ್ಯರನ್ನು ನೆನಪಿಸಿಕೊಳ್ಳಲು ಅವರ ಹೆಸರಿರುವ ರಿಬ್ಬನ್​ಗಳನ್ನು ಮರದಲ್ಲಿ ತೂಗಿದ್ದಾರೆ. ಆ ಮೂಲಕ ಮರದ ಅಂದವನ್ನೂ ಹೆಚ್ಚಿಸಿದ್ದಾರೆ.

‘Be Best’ ಎಂಬ ಫಲಕವನ್ನು ಮರಕ್ಕೆ ಅಳವಡಿಸಲಾಗಿದ್ದು, ಆಸ್ಪತ್ರೆಯೊಂದರ ಪ್ರತಿಕೃತಿಯನ್ನೂ ತೂಗುಹಾಕಲಾಗಿದೆ. ಆ ಮೂಲಕ ಕೊರೊನಾ ವಿರುದ್ಧ ಶ್ರಮಿಸಿದ ಆರೋಗ್ಯ ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಿಸಲಾಗಿದೆ.

ಈ ಬಗ್ಗೆ ಮೆಲೆನಿಯಾ ಟ್ರಂಪ್ ಸರಣಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಕಾಲು ಮುರಿದುಕೊಂಡ ಅಮೆರಿಕದ ನಿಯೋಜಿತ ಅಧ್ಯಕ್ಷ ಬೈಡನ್: Speedy recovery ಎಂದ ಟ್ರಂಪ್

Published On - 2:52 pm, Tue, 1 December 20

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ