AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಕ್ಸಿಕೋ: ಪೊಲೀಸ್ ಮತ್ತು ಸಶಸ್ತ್ರ ನಾಗರಿಕರ ನಡುವಿನ ಗುಂಡಿನ ಕಾಳಗದಲ್ಲಿ ನಾಲ್ವರು ಪೊಲೀಸರು ಸೇರಿ 12 ಸಾವು

ಜಲಿಸ್ಕೊ ನ್ಯೂ ಜನರೇಶನ್ ಕಾರ್ಟೆಲ್ ಎಂದ ಕರೆಯಲ್ಪಡುವ ಈ ಸೈನಿಕರ ಪಡೆ 2010 ರಲ್ಲಿ ಅಸ್ತಿತ್ವಕ್ಕೆ ಬಂತು. ಇದರ ತುಕುಡಿಗಳು ಮೆಕ್ಸಿಕೋದ ಕನಿಷ್ಟ 7 ರಾಜ್ಯಗಳು ಮತ್ತು ಮೆಕ್ಸಿಕೋ ಸಿಟಿಯಲ್ಲೂ ಕಾಣಬಹುದು.

ಮೆಕ್ಸಿಕೋ: ಪೊಲೀಸ್ ಮತ್ತು ಸಶಸ್ತ್ರ ನಾಗರಿಕರ ನಡುವಿನ ಗುಂಡಿನ ಕಾಳಗದಲ್ಲಿ ನಾಲ್ವರು ಪೊಲೀಸರು ಸೇರಿ 12 ಸಾವು
ಈ ಪ್ರದೇಶದಲ್ಲೇ ದೊಂಬಿಗಳು ನಡೆಯುತ್ತಿವೆ
TV9 Web
| Edited By: |

Updated on: Jun 24, 2022 | 4:43 PM

Share

Mexico: ಉತ್ತರ ಅಮೆರಿಕಾದ ಮೆಕ್ಸಿಕೋ ರಾಷ್ಟ್ರದ ಪಶ್ಚಿಮ ಭಾಗಕ್ಕಿರುವ ಜಲಿಸ್ಕೋ (Jalisco) ರಾಜ್ಯದ ಎಲ್ ಸಾಲ್ಟೊ (El Salto) ಹೆಸರಿನ ಪಟ್ಟಣದಲ್ಲಿ ಪೊಲೀಸ್ ಮತ್ತು ಸಶಸ್ತ್ರ ನಾಗರಿಕರ ನಡುವೆ ನಡೆದ ಘರ್ಷಣೆಯು ಕನಿಷ್ಟ 12 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಆ ರಾಜ್ಯದ ಗವರ್ನರ್ ಎನ್ರಿಕ್ ಅಲ್ಫಾರೊ (Enrique Alfaro) ಗುರುವಾರದಂದು ಖಚಿತಪಡಿಸಿದ್ದಾರೆ. ಸತ್ತವರ ಪೈಕಿ ನಾಲ್ವರು ಪೊಲೀಸರು ಸಹ ಸೇರಿದ್ದಾರೆ ಎಂದು ಅಲ್ಫಾರೊ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

‘ಎಲ್ ಸಾಲ್ಟೊ ಪಟ್ಟಣದ ಪೊಲೀಸ್ ಮತ್ತು ರಾಜ್ಯ ಪೊಲೀಸ್ ನಿನ್ನೆ ಅಪರಾಧಿಗಳನ್ನು ಗುಂಡಿಟ್ಟು ಕೊಂದಿದ್ದಾರೆ ಮತ್ತು ಮೂರು ಜನ ಬಹಳ ಗಂಭೀರವಾಗಿ ಗಾಯಗೊಂಡಿದ್ದಾರೆ. ಸುರಕ್ಷಿತ ಮನೆಯೊಂದರಲ್ಲಿ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿರುವ ಬಗ್ಗೆ ಲಭ್ಯವಾದ ಖಚಿತ ಮಾಹಿತಿಯನ್ನಾಧರಿಸಿ ಪೊಲೀಸರು ದಾಳಿ ನಡೆಸಿದರು,’ ಎಂದು ಹೇಳಿರುವ ಅಲ್ಫಾರೊ, ದುರದೃಷ್ಟವಶಾತ್ ಕರ್ತವ್ಯ ಮೇಲಿದ್ದ ಎಲ ಸಾಲ್ಟೊ ಪಟ್ಟಣದ ನಾಲ್ವರು ಪೊಲೀಸರು ಸಹ ಗುಂಡಿನ ಕಾಳಗದಲ್ಲಿ ಪ್ರಾಣ ತೆತ್ತರು,’ ಎಂದಿದ್ದಾರೆ.

ದೊಂಬಿ ಮತ್ತು ಹಿಂಸಾಕೃತ್ಯಗಳಿಂದ ಕಂಗೆಟ್ಟಿದ್ದ ಜಲಿಸ್ಕೊ ರಾಜ್ಯದಲ್ಲಿ ಹತ್ಯೆಗಳು ಕೂಡ ಅವ್ಯಾಹತವಾಗಿ ನಡೆಯಲಾರಂಭಿಸಿದ ಬಳಿಕ ಅಪರಾಧಿ ಚಟುವಟಿಕೆಗಳನ್ನು ತಡೆಯಲು ಮೆಕ್ಸಿಕೋದ ಜಂಟಿ ಟಾಸ್ಕ್ಫೋರ್ಸ್ ಕಾರ್ಯಕ್ರಮದ ಭಾಗವಾಗಿ, ರಾಷ್ಟ್ರೀಯ ರಕ್ಷಣಾ ಸಚಿವಾಲಯವು (ಸೆಡೆನಾ) ಮಾರ್ಚ್ನಲ್ಲಿ ಸೈನಿಕರ ಗುಂಪೊಂದನ್ನು ಅ ಪ್ರದೇಶದಲ್ಲಿ ನಿಯೋಜಿಸಿತ್ತು.

ಜಲಿಸ್ಕೊ ನ್ಯೂ ಜನರೇಶನ್ ಕಾರ್ಟೆಲ್ ಎಂದ ಕರೆಯಲ್ಪಡುವ ಈ ಸೈನಿಕರ ಪಡೆ 2010 ರಲ್ಲಿ ಅಸ್ತಿತ್ವಕ್ಕೆ ಬಂತು. ಇದರ ತುಕುಡಿಗಳು ಮೆಕ್ಸಿಕೋದ ಕನಿಷ್ಟ 7 ರಾಜ್ಯಗಳು ಮತ್ತು ಮೆಕ್ಸಿಕೋ ಸಿಟಿಯಲ್ಲೂ ಕಾಣಬಹುದು.

ಇದನ್ನೂ ಓದಿ:   Pushpa 2 Story: ರಾಕಿ ಭಾಯ್​ ರೀತಿ ವಿದೇಶಕ್ಕೆ ಹೋಗ್ತಾನಾ ಪುಷ್ಪರಾಜ್​? ‘ಕೆಜಿಎಫ್​ 2’ ಚಿತ್ರಕ್ಕೆ ‘ಪುಷ್ಪ 2’ ಕಥೆ ಹೋಲಿಕೆ

Follow Us
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ