AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಲ ತೀರದಲ್ಲಿ ಸಿಕ್ಕಿತು ಊಹೆಗೂ ನಿಲುಕದಷ್ಟು ನಿಗೂಢ ಚಿನ್ನ

ಈ ಚಿನ್ನವನ್ನು ಗ್ರಾಮಸ್ಥರು ಆರ್ಥಿಕ ಸಂಕಷ್ಟವನ್ನು ದೂರ ಮಾಡಿಕೊಳ್ಳಲು ಬಳಸುತ್ತಿದ್ದಾರೆ. ಸಿಕ್ಕ ಚಿನ್ನದ ತುಣುಕುಗಳನ್ನು 1500 ಡಾಲರ್​ಗಳಿಗೆ ಮಾರಾಟ ಮಾಡಿ ಆಹಾರ ಖರೀದಿಸುತ್ತಿದ್ದಾರೆ.

ಕಡಲ ತೀರದಲ್ಲಿ ಸಿಕ್ಕಿತು ಊಹೆಗೂ ನಿಲುಕದಷ್ಟು ನಿಗೂಢ ಚಿನ್ನ
ಸಾಂದರ್ಭಿಕ ಚಿತ್ರ
preethi shettigar
| Edited By: |

Updated on: Dec 14, 2020 | 7:19 PM

Share

ಕಾರಕಸ್: ದೀರ್ಘಕಾಲದ ಆರ್ಥಿಕ ಬಿಕ್ಕಟ್ಟು ಮತ್ತು ಕೋವಿಡ್-19ರ ಪರಿಣಾಮಗಳಿಂದ ಬಳಲುತ್ತಿರುವ ವೆನುಜುವೆಲಾ ದೇಶಕ್ಕೆ ಅದೃಷ್ಟ ಒಲಿದಿದೆಸಮುದ್ರ ತೀರದಲ್ಲಿ ಮೀನುಗಳನ್ನು ಅರಸಿ ಹೋದವರಿಗೆ ಸಿಕ್ಕಿದ್ದು ನಿಗೂಢ ಚಿನ್ನ.

25ರ ಹರೆಯದ ಯೋಹನ್ ಲಾರೆಸ್ ಸೆಪ್ಟೆಂಬರ್​ನಲ್ಲಿ ಗುವಕಾದ ಕಡಲ ತೀರದಲ್ಲಿ ಮೀನು ಹಿಡಿಯಲು ಹೋದಾಗ ಏನೋ ಹೊಳೆಯುವ ಹಾಗೆ ಕಂಡಿದೆ. ಏನಿರಬಹುದು ಎಂಬ ಕುತೂಹಲದಿಂದ ಆತ ಹತ್ತಿರ ಹೋದಾಗ ಅವನ ಕಣ್ಣಿಗೆ ಚಿನ್ನದ ಪದಕ ಮತ್ತು ವರ್ಜಿನ್ ಮೇರಿಯ ಚಿತ್ರಗಳು ಕಂಡಿದೆ.

ಈ ಆವಿಷ್ಕಾರದ ಬಗ್ಗೆ ಮೊದಲು ತನ್ನ ಮಾವನಲ್ಲಿ ಲಾರೆಸ್ ಹೇಳಿಕೊಂಡಿದ್ದು. ಆ ಮೂಲಕ ಅಲ್ಲಿನ ಸುಮಾರು 2000 ಗ್ರಾಮಸ್ಥರಿಗೆ ಈ ವಿಷಯ ತಲುಪಿದೆ. ವಿಷಯ ತಿಳಿದ ದಿನದಿಂದ ಜನರು ನಿರಂತರವಾಗಿ ನಿಧಿಯ ಹುಡುಕಾಟದಲ್ಲಿದ್ದು, ಚಿನ್ನದ ಉಂಗುರಗಳನ್ನು ಹುಡುಕಿ ತೆಗೆಯುತ್ತಿದ್ದಾರೆ.

ಈ ಚಿನ್ನವನ್ನು ಗ್ರಾಮಸ್ಥರು ಆರ್ಥಿಕ ಸಂಕಷ್ಟವನ್ನು ದೂರ ಮಾಡಿಕೊಳ್ಳಲು ಬಳಸುತ್ತಿದ್ದಾರೆ. ಸಿಕ್ಕ ಚಿನ್ನದ ತುಣುಕುಗಳನ್ನು 1500 ಡಾಲರ್​ಗಳಿಗೆ ಮಾರಾಟ ಮಾಡಿ ಆಹಾರ ಖರೀದಿಸುತ್ತಿದ್ದಾರೆ.

ಈ ಚಿನ್ನ ಎಲ್ಲಿಂದ ಬರುತ್ತಿದೆ ಎಂಬ ಪ್ರಶ್ನೆಗೆ ಈವರೆಗೆ ಉತ್ತರ ಸಿಕ್ಕಿಲ್ಲ. ಕಡಲುಗಳ್ಳರ ಮುಳುಗಿದ ಹಡಗುಗಳಿಂದ ಈ ರೀತಿಯ ಚಿನ್ನಗಳು ಸಿಗುತ್ತಲಿದೆ ಎಂದು ಕೆಲವರು ಊಹಿಸಿದ್ದಾರೆ. ಆದರೆ ತಜ್ಞರು ಮಾತ್ರ, ಈ ಆಭರಣಗಳು ಅಷ್ಟು ಹಳೆಯವಲ್ಲ. ಯೂರೋಪ್ ಮೂಲದ ಈ ಚಿನ್ನ ಈಚಿನ ದಿನಗಳದ್ದು ಎಂದು ಹೇಳಿದ್ದಾರೆ.

‘ಚಿನ್ನ’ ತಂದ ನೀವಾರ್​ ಚಂಡಮಾರುತ; ಸಮುದ್ರ ತೀರಕ್ಕೆ ಮೀನುಗಾರರು ದೌಡು

ಮಣ್ಣಿನಲ್ಲಿ ಹೂತು ಹೋಗಿದ್ದ ಮಡಿಕೆಯಲ್ಲಿತ್ತು ಗತಕಾಲದ ನೂರಾರು ಚಿನ್ನದ ನಾಣ್ಯಗಳು

Follow Us
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು