AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲೋ.. ಹೇಳಿ ಕೇಳಿಸ್ತಿದೆ.. 4G ಮೊಬೈಲ್​ ನೆಟ್​ವರ್ಕ್ ಈಗ ಚಂದ್ರನ ಮೇಲೂ ಸಿಗುತ್ತಾ?

ಹಲೋ.. ಹಲೋ.. ಸರಿಯಾಗಿ ಕೇಳಿಸ್ತಿಲ್ಲ. ನೆಟ್​ವರ್ಕ್​ ಕಟ್​ ಆಗ್ತಿದೆ. ಈ ಡೈಲಾಗ್​ನ ಹಲವಾರು ಬಾರಿ ಎಲ್ಲರೂ ಕೇಳಿರುತ್ತೇವೆ. ಆಗ, ಸಾರ್​ ಇಲ್ಲಿ ಟವರ್ ಸರಿಯಾಗಿ ಸಿಗಲ್ಲ…ಯಾವಾಗ್ಲೂ ಇದೇ ಪ್ರಾಬ್ಲಂ ಅಂತಾ ಕೆಲವರು ಹೇಳಿರೋದನ್ನು ಸಹ ಕೇಳಿರುತ್ತೇವೆ. ನಾವಿರೋ ಭೂಮಿ ಮೇಲೆ ಸರಿಯಾಗಿ ನೆಟ್​ವರ್ಕ್​ ಸಿಗದಿರೋವಾಗ ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ಚಂದ್ರನ ಮೇಲೆ ಮೊಬೈಲ್​ ನೆಟ್​ವರ್ಕ್​ ಸ್ಥಾಪಿಸೋಕೆ ಸಜ್ಜಾಗಿದೆ. ಹೌದು, ಇದು ಕೇಳಲು ತುಸು ಆಶ್ಚರ್ಯ ಅನ್ನಿಸಿದರೂ ನಿಜ ಸಂಗತಿ. ನಾಸಾ ಸಂಸ್ಥೆಯು ವಿಶ್ವದ ಪ್ರತಿಷ್ಠಿತ ದೂರಸಂಪರ್ಕ […]

ಹಲೋ.. ಹೇಳಿ ಕೇಳಿಸ್ತಿದೆ.. 4G ಮೊಬೈಲ್​ ನೆಟ್​ವರ್ಕ್ ಈಗ ಚಂದ್ರನ ಮೇಲೂ ಸಿಗುತ್ತಾ?
KUSHAL V
|

Updated on: Oct 19, 2020 | 6:52 PM

Share

ಹಲೋ.. ಹಲೋ.. ಸರಿಯಾಗಿ ಕೇಳಿಸ್ತಿಲ್ಲ. ನೆಟ್​ವರ್ಕ್​ ಕಟ್​ ಆಗ್ತಿದೆ. ಈ ಡೈಲಾಗ್​ನ ಹಲವಾರು ಬಾರಿ ಎಲ್ಲರೂ ಕೇಳಿರುತ್ತೇವೆ. ಆಗ, ಸಾರ್​ ಇಲ್ಲಿ ಟವರ್ ಸರಿಯಾಗಿ ಸಿಗಲ್ಲ…ಯಾವಾಗ್ಲೂ ಇದೇ ಪ್ರಾಬ್ಲಂ ಅಂತಾ ಕೆಲವರು ಹೇಳಿರೋದನ್ನು ಸಹ ಕೇಳಿರುತ್ತೇವೆ. ನಾವಿರೋ ಭೂಮಿ ಮೇಲೆ ಸರಿಯಾಗಿ ನೆಟ್​ವರ್ಕ್​ ಸಿಗದಿರೋವಾಗ ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ಚಂದ್ರನ ಮೇಲೆ ಮೊಬೈಲ್​ ನೆಟ್​ವರ್ಕ್​ ಸ್ಥಾಪಿಸೋಕೆ ಸಜ್ಜಾಗಿದೆ.

ಹೌದು, ಇದು ಕೇಳಲು ತುಸು ಆಶ್ಚರ್ಯ ಅನ್ನಿಸಿದರೂ ನಿಜ ಸಂಗತಿ. ನಾಸಾ ಸಂಸ್ಥೆಯು ವಿಶ್ವದ ಪ್ರತಿಷ್ಠಿತ ದೂರಸಂಪರ್ಕ ಕಂಪನಿಯಾದ ನೋಕಿಯಾಗೆ ಚಂದ್ರನ ಮೇಲೆ 4G ಮೊಬೈಲ್​ ನೆಟ್​ವರ್ಕ್​ ಸಜ್ಜುಗೊಳಿಸಲು ಆಯ್ಕೆ ಮಾಡಿದೆ. ಅದರಂತೆಯೇ, ನೋಕಿಯಾ 2022ರಷ್ಟೊತ್ತಿಗೆ ಚಂದ್ರನ ಮೇಲೆ ಸದೃಢ ಹಾಗೂ ವೈಪರೀತ್ಯಗಳನ್ನು ಎದುರಿಸುವಂಥ ಬಲಿಷ್ಠ 4G ನೆಟ್​ವರ್ಕ್​ ಸ್ಥಾಪಿಸಲಿದೆ.

ಅಂದ ಹಾಗೆ, ಚಂದ್ರನ ಮೇಲೆ ಮಾನವರು ತಿಂಗಳುಗಟ್ಟಲೇ ನೆಲೆಸಲು ನಾಸಾ ಸಂಸ್ಥೆಯು ವಸಾಹತುಗಳನ್ನು ನಿರ್ಮಿಸಲು ಮುಂದಾಗಿದೆ. ಅಲ್ಲಿ ನೆಲೆಸುವವರಿಗೆ ಸ್ಥಳೀಯವಾಗಿ ಮತ್ತು ಭೂಮಿಯೊಂದಿಗೆ ಸಂಪರ್ಕ ಕಲ್ಪಿಸಲು ಈ ನಾಸಾ ಈ ಕೆಲಸಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ನೋಕಿಯಾ ಕಂಪನಿ ಅಮೆರಿಕದ ಇನ್​ಟ್ಯೂಟಿವ್​ ಮೆಷೀನ್ಸ್​ ಎಂಬ ಗಗನನೌಕೆ ತಯಾರಿಕಾ ಕಂಪನಿಯ ಜೊತೆ ಕೈಜೋಡಿಸಿ ಚಂದ್ರನ ಮೇಲೆ ಮೊಬೈಲ್​ ನೆಟ್​ವರ್ಕ್ ಸ್ಥಾಪಿಸಲು ಬೇಕಾದ ದೂರಸಂಪರ್ಕ ಸಾಧನಗಳನ್ನು ರವಾನಿಸಲಿದೆ.

Follow Us
ಶ್ರೀರಾಮನವಮಿಯನ್ನು ಹೇಗೆ ಆಚರಿಸಬೇಕು? ಇಲ್ಲಿದೆ ಮಾಹಿತಿ
ಶ್ರೀರಾಮನವಮಿಯನ್ನು ಹೇಗೆ ಆಚರಿಸಬೇಕು? ಇಲ್ಲಿದೆ ಮಾಹಿತಿ
ಇಂದು ಈ ರಾಶಿಯವರು ತಮ್ಮ ಖರ್ಚುಗಳ ಬಗ್ಗೆ ಎಚ್ಚರ ವಹಿಸಿ!
ಇಂದು ಈ ರಾಶಿಯವರು ತಮ್ಮ ಖರ್ಚುಗಳ ಬಗ್ಗೆ ಎಚ್ಚರ ವಹಿಸಿ!
‘ಡೆವಿಲ್’ ಎದುರು ‘ಕರ್ನಾಟಕದ ಅಳಿಯ’ ತೆರೆ ಕಾಣಲಿಲ್ಲ: ಕಾರಣ ತಿಳಿಸಿದ ಪ್ರಥಮ್
‘ಡೆವಿಲ್’ ಎದುರು ‘ಕರ್ನಾಟಕದ ಅಳಿಯ’ ತೆರೆ ಕಾಣಲಿಲ್ಲ: ಕಾರಣ ತಿಳಿಸಿದ ಪ್ರಥಮ್
ದಾವಣಗೆರೆ: ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವಂತೆ ಶ್ರೀಶೈಲ ಜಗದ್ಗುರು ಕರೆ
ದಾವಣಗೆರೆ: ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವಂತೆ ಶ್ರೀಶೈಲ ಜಗದ್ಗುರು ಕರೆ
ಶಾಲಾ ಬಸ್ ನಿಲ್ಲಿಸಿ ಕಬ್ಬಿಣದ ರಾಡ್ ಹಿಡಿದು ಬೆದರಿಸಿದ ಯುವಕರು
ಶಾಲಾ ಬಸ್ ನಿಲ್ಲಿಸಿ ಕಬ್ಬಿಣದ ರಾಡ್ ಹಿಡಿದು ಬೆದರಿಸಿದ ಯುವಕರು
1ನೇ ತರಗತಿ ಪ್ರವೇಶ: ವಯಸ್ಸಿನ ಗೊಂದಲಕ್ಕೆ ಕೊನೆಗೂ ತೆರೆ ಎಳೆದ ರಾಜ್ಯ ಸರ್ಕಾರ
1ನೇ ತರಗತಿ ಪ್ರವೇಶ: ವಯಸ್ಸಿನ ಗೊಂದಲಕ್ಕೆ ಕೊನೆಗೂ ತೆರೆ ಎಳೆದ ರಾಜ್ಯ ಸರ್ಕಾರ
ಸುಬ್ಬ, ಸುಬ್ಬಿ ಕಥೆ ಅಂತ ಹೇಳಿದ್ದು ಯಾಕೆ? ಅನುಮಾನ ಪರಿಹರಿಸಿದ ಪ್ರಥಮ್
ಸುಬ್ಬ, ಸುಬ್ಬಿ ಕಥೆ ಅಂತ ಹೇಳಿದ್ದು ಯಾಕೆ? ಅನುಮಾನ ಪರಿಹರಿಸಿದ ಪ್ರಥಮ್
1000 ಲೀಟರ್ ಟ್ಯಾಂಕ್ ಹಿಡಿದು ಪೆಟ್ರೋಲ್​ ಬಂಕ್​ಗೆ ಬಂದ ‘ಬಾಹುಬಲಿ’
1000 ಲೀಟರ್ ಟ್ಯಾಂಕ್ ಹಿಡಿದು ಪೆಟ್ರೋಲ್​ ಬಂಕ್​ಗೆ ಬಂದ ‘ಬಾಹುಬಲಿ’
ಅಮ್ಮನ ಲವ್‌ ಮಾಡ್ತಿದ್ದ ವ್ಯಕ್ತಿಯ ಪತ್ನಿ, ತಮ್ಮನನ್ನ ಕೊಂದ ಬಾಲಕ!
ಅಮ್ಮನ ಲವ್‌ ಮಾಡ್ತಿದ್ದ ವ್ಯಕ್ತಿಯ ಪತ್ನಿ, ತಮ್ಮನನ್ನ ಕೊಂದ ಬಾಲಕ!
ಬಾಗಲಕೋಟೆ ಬೈ ಎಲೆಕ್ಷನ್: ಒಗ್ಗಟ್ಟು ಪ್ರದರ್ಶಿಸಿದ ಮುಸ್ಲಿಮರ ನಡೆ ಏನು?
ಬಾಗಲಕೋಟೆ ಬೈ ಎಲೆಕ್ಷನ್: ಒಗ್ಗಟ್ಟು ಪ್ರದರ್ಶಿಸಿದ ಮುಸ್ಲಿಮರ ನಡೆ ಏನು?